Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಿಂದಿನ ದಿನಗಳಲ್ಲೇ

ಹಿಂದಿನ ದಿನಗಳಲ್ಲೇ ಇರುವುದೇಕೆ? ಪ್ರತಿ ದಿನವೂ ಹೊಸ ಅಧ್ಯಾಯವೇ.ಅಧ್ಯಯನ ಮಾಡುತ್ತಲೇ ಅಂದಿನ ಕೆಲಸ ಅಂದೇ ಪಯೂರೈಸೋಣ.

- Kanakareddy

30 Aug 2015, 03:56 am

ಕ್ಷಣ ಕ್ಷಣ ಪ್ರೀತಿ

೧+೧=೨ ನಿನ್ನ ನೋಡುವ ಕಣ್ಣುಗಳು,
೩+೩=೬ ಅರ್ಥದಲ್ಲಿ ಭಾವನೆ ನೀವು,
೧೨+೧೨=೨೪ ಗಂಟೆಗಳು ನಿಮ್ಮ ಸಂದೇಶಕ್ಕಾಗಿ ಕಾಯುವುದು,
೫೦%+೫೦%=೧೦೦% ನಿಮ್ಮ ಬಗ್ಗೆ ಚಿಂತೆ,
೧೮೨.೫+೧೮೨.೫=೩೬೫ ದಿನಗಳು ನಿಮ್ಮನ್ನ
ತಂಬಾ ಮಿಸ್
ಮಾಡ್ಕೊತಿದ್ದೀನಿ ಅಂತಾ ಅನ್ನಿಸ್ತಿದೆ ಕಣ್ರೀ.

ಇಂತಿ
ಲಾಹುಕುಮಾರ

- Lahukumar

29 Aug 2015, 03:06 pm

ಸಂದೇಶ

ಪೇಟೆಯಲ್ಲಿದ್ದ ಅಪ್ಪನಿಗೆ
ಮನೆಯಿಂದ. ಫೊನು
"ಏನಮ್ಮಾ, ಏನು ತರಲಿ?
ಪಪ್ಪಾ ಮರೆಯದೆ ಬರುವಾಗ ತನ್ನಿ
ಪಿ.ಪಿ(ಪಾನಿ ಪೂರಿ) ಸಾಧ್ಯವಾದರೆ
ಜೊತೆಯಲ್ಲಿ ಜಿ.ಎಮ್.(ಗೋಬಿ ಮಂಚೂರಿ)!!.

- Satyasagar

29 Aug 2015, 10:46 am

ಪಯಣ

ಹರಿಯುವ ನೀರಿನ
ಜುಳು ಜುಳು ನಾದದ ಬೆನ್ನೆರಿ
ಮಿರಿ ಮಿರಿ ಮಿಂಚುವ ಮೀನುಗಳು
ಬಳ. ಬಳ. ನುಗ್ಗಲು ಸಾಲಾಗಿ
ಸೇರಿದವು ರೆ್ಷಮೆಯ. ಬಲೆಯೊಳಗೆ!!

- Satyasagar

29 Aug 2015, 10:36 am

ಹರಕೆ

ರೇಟು ಗಗನಕ್ಕೆ ಏರಿದರಿಂದ
ಇಬ್ಬರು ಸೇರಿ ಮಾಡಿದರು ಉಪಾಯ!!
ಹಣ್ಣು ಒಬ್ಬರದು -ಕಾಯಿ ಒಬ್ಬರದು!
ದೇವರಿಗೆ ಆಯಿತು ನೆಯ ವೇದ್ಯ!!

- Satyasagar

29 Aug 2015, 08:54 am

ಆಯ್ಕೆ

ಚೆಲುವ ಚೆನ್ನಿಗ ರಾಯನನ್ನು
ಹುಡುಕಿ ಮಾಡಿದರು ಮದುವೆ!!
ಅವನ ಬೇಡಿಕೆ ಪೂರೈ್ಸಿದಾಗ ಗೊತ್ತಾಯಿತು
ಆತ ಚಪಲ ಚೆನ್ನಿಗರಾಯ ಅಂತ!!

- Satyasagar

29 Aug 2015, 08:45 am

ಎಚ್ಚರಿಕೆ !!

ವಿಜ್ಞಾನಿಗಳ ಎಚ್ಚರಿಕೆ :
"ಸಮುದ್ರದ ಮಟ್ಟದಲ್ಲಿ ಭಾರೀ ಏರಿಕೆ."
ಚಿಂತೆ ಯಾಕೆ ?
ಜ್ಯೋತಿಷಿ, ಪೂಜಾರಿಗಳಿಗೆ ಹೆಚ್ಚಲಿದೆ ಬೇಡಿಕೆ !

- ಶ್ರೀಗೋ.

29 Aug 2015, 02:19 am

ಮಧುರ ಕ್ಷಣಗಳು

ಪ್ರೀತಿ ಹ್ರದಯದ ಆಸ್ತಿ
ಸಂಬಂಧ ಮನಸ್ಸಿನ ಆಸ್ತಿ
ಜೀವನದ ಆಸ್ತಿ ಭೂಮಿ ಮೇಲೆ
ಪವಿತ್ರವಾದ ಬಡತನ - ಸಿರಿತನ
ಜಾತಿ -ಧರ್ಮಗಳ ಭೇದವಿಲ್ಲದೆ
ಕಷ್ಟ -ಸುಖಗಳಲ್ಲಿ ಜೊತೆಯಾಗಿರುವ
ಒಂದೇ ಒಂದು ಸಂಬಂಧ -ಪ್ರೀತಿ.
ನಾವಿಬ್ಬರೂ ಕೂಡಿ ಕಳೆದ ದಿನಗಳು
ನಾನು ಇಂದಿಗೂ ಮರೆಯಲಾರೆ
ನೀ ನನ್ನ ಕೊನೆಯುಸಿರಿರೋವರೆಗೂ
ನನ್ನೊಂದಿಗೆ ಇರುವಂತೆ ಆ ದೇವರಲ್ಲಿ
ಬೇಡಿಕೊಳ್ಳುತ್ತೇನೆ.

ಇಂತಿ
ಲಾಹುಕುಮಾರ

- Lahukumar

28 Aug 2015, 01:35 pm

ಹೊರಿಸದಿರು ತಪ್ಪು

ಇನ್ನಾವ ತಪ್ಪು ಹೊರಿಸದಿರು ಎನಗೆ
ನಿನ್ನ ನಾ ಬಯಸಿದ್ದೆ
ಇದೊಂದೇ ತಪ್ಪು ಸಾಕೆನಗೆ.

(ಸಿರಾಜ್ ಗಡಿಯಾರ್.

- ಸಿರಾಜ್

28 Aug 2015, 10:15 am

ಕಾರಣ......

ಕಾರಣ....


ಕಾರಣದ ಉದಾಹರಣೆ ಉದ್ದವಾದಾಗ
ಸಾಂಬಾರಿಗೆ ವಗ್ಗರಣೆ ಜಾಸ್ತಿ ಅದಾಂಗೆ.
ಕಾರಣದ ಕಣ್ಣು ಮನಸ್ಸಿನಲ್ಲಿ ಇದ್ದಾಗ,
ಕಂಡಿದ್ದೇಲ್ಲ ಕುರುವು ಕಾರಣವಾದಂಗೆ.

ಕಾರಣದ ಕಾಲು ನಡೆಯಾದಾಗ,
ಕಲ್ಲು ಮುಳ್ಳಿನ ದಾರಿಯಾದಂಗೆ.
ಕಾರಣದ ಬಾಗಿಲು ತೆರೆದಾಗ,
ಖಾರ ಉಪ್ಪು ಕೆರೆದಂಗೆ.

ಕಾರಣದ ಪ್ರೀತಿ ಪ್ರಿಯೆಯಾದಾಗ,
ಹೃದಯದ ಬಡಿತ ಸತ್ತಂಗೆ.
ಕಾರಣದ ಕೋಲು ಉರುಗೋಲದಾಗ,
ಯವ್ವನದಕಾಂತಿ ಮುಪ್ಪಿನಂಗೆ.

ಕಾರಣ ಉಕ್ಕುವ ಹಾಲದಾಗ,
ಮದಿರೆಯ ರಕ್ತದ ದೇಹದಂಗೆ.
ಕಾರಣ ಕನಸಿನ ದೃಶ್ಯವಾದಾಗ,
ದುರಂತ ಸಿನಿಮಾ ನಾಯಕನಂಗೆ.


---ಈಶ,ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

28 Aug 2015, 06:09 am