Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀ ಬಂದೆ ಕತ್ತಾಲಾದ ಜೀವನದಲ್ಲಿ
ಪ್ರೀತಿಯಾ ಬೆಳಕು ಚೆಲ್ಲಿ
ನಿನ್ನ ನಗೆಯ ಹೊಳಪು
ತಂದಿದೆ ನನ್ನಗೆ ಹೊರುಪು
ಸಾಧಿಸಲು ನಿರ್ಧರಿಸಿರುವೆ ನಾ
ಪ್ರೀತಿಯ ಬಾಳ್ವೆನಾ ನಡೆಸೋಣಾ
ಪ್ರೀತಿಯಿಂದ ಗೆಲ್ಲೂಣ ಜಗವ
- Shriram
01 Nov 2015, 06:38 am
ಸಾಲ ಸೊಲ ಮಾಡಿ
ತಿರಿಸಲಾಗದೆ
ಆತ್ಮಹತ್ಯೆಗೆ ರೈತ ಶರಣಾದ!?
ಪರಿಹಾರ ಪಡೆಯಲು
ಆತನ ಕುಟುಂಬದವರು
ಅಲೆದು ಅಲೆದು
ಸುಸ್ತಾಗಿ ಹೈರಾಣದ್ರು!?.
- Satyasagar
30 Oct 2015, 04:38 pm
ಕವಿತೆಯ ಒಳಗೊಂದು ಕವಿತೆ
ಕನಸ ಒಳಗೊಂದು ಕನಸು
ಮೌನದೊಳಗೊಂದು ಮೌನ
ಏಕಾಂಗಿಯ ಬದುಕಲೊಂದು ಏಕಾಂಗಿಯ ಜೊತೆಗಾರ
ಕವಿತೆಗೆ ಸಾವಿರ ಪದಗಳ ಮಾಲೆ
ಕನಸಿಗೆ ಸುಂದರ ಕ್ಷಣಗಳ ಬಣ್ಣ
ಮೌನಕ್ಕೆ ಮಾತಿಲ್ಲದೆ ಸಾಗಿದೆ ಹೃದಯದೊಳಗಿನ ಹೃದಯ
ಮೌನ
- ರವಿಕುಮಾರ
30 Oct 2015, 11:07 am
ಓ ತಳ್ಕಂಬಳ್ಕ ನೋಡೋ ಮಗಾ
ಹೇಳೊರಿಲ್ಲ ಕೇಳೊರಿಲ್ಲ ಮಾಡ್ತಾರಲ್ಲ ಮೋಡಿಯನ್ನ
ಅರೆಬರೆ ಚಡ್ಡಿ ಹಾಕ್ತಾರಲ್ಲ ಹಾಳಾಗೊಯ್ತು ಸಂಸ್ಕೃತಿಯಲ್ಲ ಯಾಕೋ ಮಗಾ ಕುರಿಯಂಗೆ ಮಾಡ್ಬಟ್ರಲ್ಲ
ಮೈತುಂಬ ಮೇಕಪ್ ಹಾಕಿ ನನ್ನೆ ನೋಡು ಅಂತಾರಲ್ಲ
ಕಣ್ಣಿನ ತುಂಬ ಕಾಡ್ಗೆ ಹಚ್ಚಿ ದೃಷ್ಟಿ ಬೊಟ್ಟು ಇಡ್ತಾರಲ್ಲ
ಹುಡುಗುರ ಮನಸ್ಸು ಸೆಳೆಯೊಕಿನ್ನು ಏನೇನೋ ಮಾಡ್ತಾರಲ್ಲ
ರಾತ್ರಿಯಾದ್ರು ಕಣ್ಮುಚ್ಚಲ್ಲ ಮೋಬೈಲ್ ಲೈಟು ಆಪಾಗೊಲ್ಲ
ಅಪ್ಪ ಅಮ್ಮಗೆ ಹೇಳ್ತಾರಲ್ಲ ಕಾಗೆ ಹಾರಿಸೊ ಮಾತುಗಳನ್ನ
ದಿನಾವೆಲ್ಲಾ ಕೊಲ್ತಾರಲ್ಲ ವಾಟ್ಸಪ್ ಅನ್ನೋ ಚಾಟ್ ಬೂತಿಂದ
ಗೆಜ್ಜೆ ಇಲ್ಲದ ಹೆಜ್ಜೆ ಇಟ್ಟು ಡೇಟಿಂಗ್ ಅಂತಾ ಹೋಗ್ತಾರಲ್ಲ
ಪಾಕೆಟ್ ಮನಿಗೆ ಕನ್ನ ಹಾಕಿ ಕೈಯಲ್ಲಿ ಚಂಬು ಇಡ್ತಾರಲ್ಲ
ಖಾಲಿಯಾದ ಪಾಕೆಟ್ ನೋಡಿ ಪಕ್ಕದ ಕುರಿಗೆ ಕಾಳಾಕ್ತಾರೆ
ಯಾಕೋ ಮಾಗಾ ಕುರಿಯಂಗೆ ಮಾಡ್ಬಿಟ್ರಲ್ಲ
- Irayya Mathad
29 Oct 2015, 06:32 am
ಮಿರಿ ಮಿರಿ ಮಿಂಚುತ ತಂಗಾಳಿ ಚಿಮ್ಮುತ
ನನ್ನೆದೆ ತೋಟಕೆ ನೀ ಬಂದೆ
ನೂರೊಂದು ಆಸೆ ಚಿಗುರುತಿದೆ ಈಗ
ತೋಳಲ್ಲಿ ನೀ ನನ್ನ ಸೋಕಿದಾಗ
ಮನಸುಗಳ ತುಡಿತ ಹೃದಯಗಳ ಬಡಿತ
ಒಂದಾಗಿ ಗೀಚಿದೆ ಹೊಸ ಕವಿತೆಯ
ಇರುಳಿನ ಇಬ್ಬನಿ ತಾಕುತ ಮನಕೆ
ಅರಳುತಿದೆ ತಾವರೆ ಮೊಗದಲ್ಲಿ ಕಾಣೆ
ಗಂಧದ ನಾಡಲ್ಲಿ ಗಿರಿ ಕನ್ಯೆ ನೀನಾಗಿ
ಮಲೆನಾಡ ಮುಡಿಗೆ ಮಲ್ಲಿಗೆ ಹೂವಾದೆ
ಚೆಲುವಿನ ಲೋಕಕೆ ಚಿನ್ನದ ಗೊಂಬೆಯಾಗಿ
ಲಗ್ಗೆ ಇಟ್ಟೆಯಾ ನನ್ನ ಬಾಳ ಸಂಗಾತಿ ನೀನಾಗಿ....
- Irayya Mathad
27 Oct 2015, 05:07 pm
ಕಾಡಬೇಡ ಗೆಳತಿ ನನ್ನ
ಕನಸಲ್ಲೂ ಇನ್ನು
ನಾ ಕಾಣಬೇಕು
ಗುರಿ ಮುಟ್ಟುವ ಕನಸನ್ನು
- shiva
25 Oct 2015, 05:50 pm
ಕಳೆದು ಹೋದ ಪ್ರೀತಿಯು
ಹತ್ತಿರ ಬಂದಿದೆ ಇಂದು
ಅಳಲು ಆಗದೆ ನಗಲು ಆಗದೆ
ಬೆಂದು ಹೋದೆನು ಇಂದು
ಬಹಳ ಖುಷಿಯಿತ್ತು ಅಂದು
ನೀನು ಪ್ರೀತಿ ಮಾಡಿದೆ ಎಂದು
ಮತ್ತೆ ಬಂದಿದೆ ಸತ್ತ ಪ್ರೀತಿಯು
ಒಪ್ಪಿಕೊಳ್ಳುವ ಮನಸಿಲ್ಲ
ನಿನ್ನ ನೆನಪಲ್ಲೆ ಕಳೆಯುವೆ ಎಂದೆಂದೂ ಎಂದೆಂದೂ
- shiva
24 Oct 2015, 01:58 pm
ದೇವರ ವರವೋ ಪೂರ್ವದ ಪುಣ್ಯವೋ
ತಣಿದಾ ಮನವು ಮಳೆಯಲ್ಲಿ ನೆನೆದು !! ಪ !!
ಕಾನನದಂಚಿಗೆ ಮಿಂಚಿನ ಓಟವೋ
ಸಿಡಿಲಿನ ಆರ್ಭಟವೋ ನನ್ನೆದೆ ಗೂಡಿನಲ್ಲಿ
ಪುಟಿದಾ ಮಳೆ ಹನಿಯು ನನ್ನನೆ ಸೋಕಲು
ಧಾವಿಸಿ ಬರುತಿಹ ಗುಡುಗಿನ ಸರಮಾಲೆ
ಚಾಮರ ಬೀಸುತ ತಣ್ಣೀರೆರೆಚುತ
ನಾಚಿದೆ ತಂಗಾಳಿ ನಸು ನಗೆ ಬೀರುತ
ವನ್ಯಕುಲ ಜೀವಿಯೋ ಹಕ್ಕಿಯ ರಾಗವೋ
ಮೇಘದ ಸಂದೇಶ ತಂದಿದೆ ಸಂತೋಷ
ಪುಳಕಿತ ನನ್ನ ಮನವು ಕುಣಿದಾಡಿದೆ ಈಗ
ಬೊಂಬೆಯಾಟ ಆಡಿಸುವ ಸೂತ್ರಧಾರಿ ನೀನಾದೆ
ನಟಿಸುವ ಪಾತ್ರಧಾರಿ ನಾನಾಗಿಹೆನು
ಕಳೆದು ಹೋದೆ ನಾನು ಕಲ್ಪನೆಯ ಲೋಕದಲ್ಲಿ.....
- Irayya Mathad
24 Oct 2015, 09:21 am
ಹಿಂದು -ಮುಸ್ಲಿಂ ಕಲಹವೇತಕೆ
ಹೊಂದಿ ಬಾಳಬಾರದೇ
ಮೇಲು -ಕೀಳು ಜಗಳವೇತಕೆ
ಮನುಜನಾಗಿರಬಾರದೇ
ರಕ್ತ ಹರಿಸುತ ದ್ವೇಷ ಬೆಳೆಸುತ
ಧರ್ಮ ರಕ್ಷಣೆ ನ್ಯಾಯವೇ
ಮತಾಂಧತೆಯ ಗುಲಾಮನಾಗದೆ
ಮಾನವತೆಯ ಸಾರಬಾರದೇ
ಸರ್ವ ಧರ್ಮದ ಶಾಂತಿಯ ಸಾರಿದ
ಸರ್ವ ಶ್ರೇಷ್ಠ ಭೂಮಿ ನಮ್ಮದು
ಹಸಿರು -ಕೇಸರಿ ಭೇದವೇತಕೆ
ಉಸಿರು ಭಾರತವೆನ್ನಲಿ
ಪುಣ್ಯ ಮಣ್ಣಿನ ಪ್ರಜೆಗಳಾಗುತ
ಬಾ ..ಬೆರೆತು ಬಾಳುವ ಗೆಳೆಯನೆ ..!!
✒ಸಿರಾಜ್ ಗಡಿಯಾರ್
- ಸಿರಾಜ್
23 Oct 2015, 07:51 pm
ಎಲ್ಲರಂತಲ್ಲ ಎನ್ನ ಜನಕ,
ಅರಿತಿರಲಿಲ್ಲ ಇಲ್ಲಿಯ ತನಕ,
ಹೆಮ್ಮೆ ಇದೆ ಮಗನಾಗಿರಲು,
ಪಣ ತೊಡುವೆ ಋಣಿಯಾಗಿದೆ.
~ಸಚೇತನ
- ಚೇತನ ಸಾಸನೂರ
23 Oct 2015, 12:18 pm