ಗಿಡದಲ್ಲಿ ಇರುತ್ತದೇ ಹೂವು
ಮರದಲ್ಲಿ ಇರುತ್ತದೇ ಮಾವು
ಇವೆಲ್ಲವನ್ನೂ ನೋಡುತ್ತೆವೆ ನಾವು
ಸಮುದ್ರದಲ್ಲಿ ಸಿಗುತ್ತೆ ಮುತ್ತು
ನಮ್ಮ ಶರೀರಕ್ಕೆ ಸಾಕು ತಾಯಿಯ ಕೈ ತುತ್ತು
ಅದುವೇ ನಮ್ಮಯ ತಾಕತ್ತು
ನಮಗೇ ಗೊತ್ತಿತ್ತು ತಾಯಿಯ ಪ್ರೀತಿ
ಆದರೆ ಅವರಲ್ಲಿತ್ತು ಕೋಪಕ್ಕೆ ಮಿತಿ
ನೆರೆಮನೆಯ ಜೀತದಲ್ಲಿ ಸವೆಯುತ ಅಪ್ಪ,
ಮಕ್ಕಳನ್ನು ಶಾಲೆಗೆ ಸೇರಿಸಿದರು.
ಹಿಂದೆ ಅನ್ನವಿರದ ದಿನಗಳಲ್ಲಿ ಅಪ್ಪ,
ನಮಗೆ ಗಂಜಿ ಕುಡಿಸಿ ಬೆಳೆಸಿದರು.
ಸೌಮ್ಯ ಸ್ವಭಾವದ ನಮ್ಮ ಅಪ್ಪನ ನಿರಂತರ ದುಡಿಮೆ,
ಕಲಿಸಿತು ನಮಗೆ ಜವಾಬ್ದಾರಿಯುತ ಬದುಕಿನ ನಿರ್ವಹಣೆ.
ಚಿಕ್ಕವಳಾಗಿ ನಾನು ಅಪ್ಪನ ಮಮತೆಯಲ್ಲಿ ಅರಳುವ ಮುನ್ನವೇ,
ಅವರು ನರಳತೊಡಗಿದರು ತಮ್ಮ ಕಾಯಿಲೆ ಏನೆಂದು ತಿಳಿಯದೆ.
ನನ್ನಮ್ಮ ಅಪ್ಪನಿಗಾಗಿ ತಿರುಗದ ಆಸ್ಪತ್ರೆಗಳಿಲ್ಲ,
ದೀರ್ಘಕಾಲ ನೋವಿನಿಂದ ನರಳಿದ ಅಪ್ಪ ನಮಗಾಗಿ ಉಳಿಯಲಿಲ್ಲ.
ನನ್ನ ಬದುಕಿಗೆ ಚುಕ್ಕಿಯ ಚಂದ್ರಮನಾಗಬೇಕಿದ್ದ ಅಪ್ಪ ಇಂದು ನೆನಪು ಮಾತ್ರ.
ಅಪ್ಪನಾಗಿ ನನ್ನ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಅಮ್ಮನ ತ್ಯಾಗ ಶ್ಲಾಘನೀಯ,
ಅಪ್ಪನಿದ್ದರೆ ನನ್ನ ಜೀವನ ಇನ್ನೂ ಹೇಗಿರುತಿತ್ತೋ,
ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಕ್ಕಳ ಸನ್ಮಾರ್ಗದ ಹಾದಿಯ ಸುಗಮಗೊಳಿಸಲು ಬೇಕು ಅಪ್ಪ,
ಕಣ್ಮರೆಯಲ್ಲೆ ನಮ್ಮ ಬಯಕೆಗಳ ಅರಿತು ಸಂತೃಪ್ತಿಗೊಳಿಸುವ ಭೂಪ.
ಕುಟುಂಬದ ಸಾರಥಿಯಾಗಿರೋ ಅಪ್ಪನ ನಾವ್ ಗೌರವಿಸಬೇಕು,
ನಮ್ಮ ಸೇವೆ ಅಪ್ಪನ ಹೆಸರ ಗುರುತಿಸುವಂತೆ ಇರಬೇಕು,
ಮಕ್ಕಳ ಸರ್ವಾಂಗೀನ ಪ್ರಗತಿಗೆ ಅಪ್ಪ ಜೊತೆಗಿದ್ದರೆ ಸಾಕು.
ಕಾದು ಕಾದು ಸೋತಿಹೆನು
ಸನಿಹ ನೀನು ಬರಬಾರದೆ..
ದೂರ ಏಕೆ ನೀ ನಿಲ್ಲುವೆ..?
ಕರುಣೆ ತೋರಿ ಬರಬಾರದೆ..
ನಿನ್ನ ಅಗಲಿ ನಾ ಇರಲಾರೆನು..
ಪ್ರಾಣವೇ ನೀನು ಜೊತೆಗಾರನು..
ಮರೆಯಾದೆಯಾ ಒಲವೇ...
ಮರೆಯಾದೆಯಾ ...
ಮಾತುಗಳು ನಿಂತರೇನು
ಮನಸು ಕಾದಿದೆ ಇನ್ನು...
ತಿರುಗಿ ನೋಡು ಒಮ್ಮೆ ನೀನು
ನೆರಳಂತೆ ಹಿಂಬಾಲಿಸಿರುವೆ ನಾನು..
ಜನ್ಮ ಜನ್ಮ ನೀನೆ ಬೇಕು..
ನಿನ್ನ ಪ್ರೀತಿಯೊಂದೆ ಸಾಕು...
ಬಾರೋ ಬೇಗ ಗೆಳೆಯ
ನೀನೇ ಒಲವ ಇನಿಯ...
ನೂರಾರು ಆಸೆಗಳು ಮನದಲ್ಲಿ...
ಬರಿ ನೋವುಗಳೇ ತುಂಬಿವೆ ನನ್ನಲ್ಲಿ...
ಯಾಕೆ ಬೇಕಿತ್ತು ನನಗೆ ಈ ಜೀವನ..
ನೋವುಂಡ ಜೀವಕೆ, ಮತ್ತದೇ ನೋವಿನ ಔತಣ..
ಎಲ್ಲಿ ಹೋಯಿತು ಆ ನಿನ್ನ ಸ್ನೇಹ ಇಂದು..
ಕಾಣುತ್ತಿಲ್ಲವೆ ಅಂಗಲಾಚಿ ಬೇಡುತ್ತಿರುವುದು..
ಅಂದು ಪ್ರೀತಿಗೂ ಕವನವೇ ಜೊತೆಗಾರ..
ಇಂದು ದೂರಾದ ಸ್ನೇಹಕ್ಕೂ ಕವನವೇ ಆಧಾರ..