Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮತ್ತು ಬರಿಸುವ ಮುತ್ತು ಸುರಿಯಲೆ
ಮತ್ತೇ ಬರಿಸದಿರುವ ಮುತ್ತು ಪೋಣಿಸಲೆ
ಮತ್ತು ಮುತ್ತಿಲ್ಲದ ಮಾತು ನುಡಿಯಲೆ
ಮೆಲ್ಲನೆ ಏದುಸಿರಿನ ಗಮ್ಮತ್ತು ತೋರಿಸಲೆ
ಮಾತಿಲ್ಲದ ಮುತ್ತಿನ ಮಳೆಯಿಂದ ಮನ ತಣಿಸಲೆ
ಮೋಡಿಯ ಪಿಸುಮಾತಿನ ಸವಿ ನುಡಿಯಲೆ
ಮಧು ಇಂಗದ ಮುತ್ತಿನ ಮಾಯೆ ಕಲಿಸಲೆ
ಮುತ್ತಿನ ಮಂದಿರದಲಿ ಮತ್ತೇರಿಸುವ ಮುತ್ತು ಜೋಡಿಸಲೆ
ಮನವನ್ನು ನವಿರಾದ ಮುತ್ತಿನಿಂದ ಮುದಗೊಳಿಸಲೆ
ಮನೋಹರ ಕಂಗಳಲಿ ಮುತ್ತಿನ ಮಿಂಚು ಬರಿಸಲೆ
ಮುತ್ತಿನಿಂದ ಮತ್ತೇರಿಸುವ ಮುಖರವಿಂದವ ಹೆಚ್ಚಿಸಲೆ
ಮುತ್ತಿನ ಮನೆಯಲಿ ಮತ್ತಿಳಿಯದಂತೆ ಮುತ್ತಿಕ್ಕಿ ಮಲಗಿಸಲೆ
- ಆನಂದ್ ಕುಮಾರ
05 Feb 2016, 01:11 pm
ಮಾತಲ್ಲಿ ವೈರಾಗ್ಯ ಸರಿಯಲ್ಲ..
ಮನಸಲ್ಲಿ ಇರುವುದು ಹೇಳುವುದು ತಪ್ಪಲ್ಲ...
ನಿನ್ ಹಾಗೆ ಇರೋಕೆ ನಾನು ನೀನಲ್ಲ ...
- ಕೀರ್ಥನ್ ಗೌಡ
03 Feb 2016, 06:06 am
ಅರಿಯದಿರುವ ನನಗೆ ನೀನು
ಮೋಡಿ ಮಾಡಿ ಮರುಳನಾಗಿಸಿ
ಕದ್ದೆ ನನ್ನ ಮನಸ್ಸನ್ನು
ಗೆದ್ದೆ ನನ್ನ ಹೃದಯವನ್ನು
ಮೊದ ಮೊದಲು ಮಾತು ಇಲ್ಲ
ಮೌನವೆ ಕೂಡಿತಲ್ಲ
ಕಣ್ಣಾರೆ ಕಂಡೆ ನಾನು ನಿನ್ನ ತಳುಕು ಬಳುಕನು
ಸೋತು ಹೋದೆ ನಾನು ನಿನ್ನ ಅಂದಕೆ
ನೋಡುವ ನೋಟಕ್ಕಿಂತ ಆಡುವ ಮಾತಿಗಿಂತ
ನನ್ನನು ಕಾಡಿತು ನಿನ್ನ ಕನಸದು
ಕಣ್ಣಲ್ಲಿ ತುಂಬಿಕೊಂಡೆ ಮನಸ್ಸಲ್ಲಿ ಬಚ್ಚಿಕೊಂಡೆ
ಹೇಳಲಾಗದೆ ಪ್ರೀತಿ ಮಾತು
ಓಡಿ ಬಂದೆ ನೀನು ಹೃದಯದಲ್ಲಿ
ಜಿಂಕೆಯಂತೆ ಜಿಗಿದು ಜಿಗಿದು
ಮುತ್ತಿನ ಮದ್ದು ನೀಡಿ ನಿನ್ನಲಿ ನಾನಾಗಿ
ಸಿಲುಕಿದೆ ನಾ ಪ್ರೀತಿ ಸುಳಿಗೆ....
- Irayya Mathad
03 Feb 2016, 01:42 am
ಕನಸನು ಸುಟ್ಟಳು
ಹೃದಯದ ಒಡತಿ...
ಕಮಾನು ಕಟ್ಟಲು ಇತ್ತು
ಅವಳದೇ ಆಣತಿ...
- ಗಾಯಾಳು
29 Jan 2016, 10:14 am
ಕಣ್ಣು ಕಂಬನಿ ಇಡುವುದು ಸಹಜ,
ಸೇರದೆ ಇದ್ದರೆ
ರೆಪ್ಪೆಗಳು ತುಸು ಹೊತ್ತು ....
ಮನಸ್ಸು ಅಳುವುದಾದರು ಏಕೆ!,
ನೀ ನನ್ನ ಸೇರುವುದೇ ಇಲ್ಲ
ಎಂದು ಅದಕ್ಕೂ ಗೊತ್ತು ....
- ಗಾಯಾಳು
29 Jan 2016, 10:11 am
ಹೊತ್ತಿಲ್ಲ ಗೊತ್ತಿಲ್ಲ,
ಕಣ್ಣೆದುರು ಬಂದು ನೀ ಕಾಡುವೆ...
ಕಣ್ರೆಪ್ಪೆ ಅಂತು ಮುಚ್ಚಿಲ್ಲ,
ನೀ ಜೊತೆಗಿರುವ ಹಗಲು
ಕನಸ ನಾ ಕಾಣುವೆ...
- ಗಾಯಾಳು
29 Jan 2016, 10:05 am
ನನಗೇ ಇರಲಿ ಬಿಡು
ನೀನಿಲ್ಲದ ನೋವು...
ಪ್ರೀತಿಸುವೆ ನಿನ್ನ ಎಂದೂ,
ಬಂದರೂ ಕೂಡ ಸಾವು...
- ಗಾಯಾಳು
29 Jan 2016, 10:00 am
ಅರಿವೇಕೆ ಬಣ್ಣಿಸಲು ಪ್ರೀತಿಯ ಪರಿಯ....
ಅರಿತಿರಲು ಮನಸ್ಸು ನಿನ್ನೋಲುಮೆ ಸಿರಿಯ...
- ಗಾಯಾಳು
28 Jan 2016, 06:37 pm
ನಗು ನಲಿಯುತ ನಗು
ಜೀವನವೆಲ್ಲ ನೀ ನಗುತಾಯಿರು
ಸ್ನೇಹ ಪ್ರೀತಿಗೆ ನೀನು ಆಧಾರ ದೀಪವಾದೆ
ನನ್ನ ಹೃದಯಕ್ಕೆ ಹತ್ತಿರವೇ ಹರಿದಾಡಿದೆ ನೀ
ರಕ್ತ ಕಣವೆಲ್ಲ ಸೇರಿ ಕುಣಿದಾಡಿತು
ಸೋಲು ಗೆಲುವನು ಮೀರಿ
ಗೆಳೆತನ ಕೂಡಿ ಗೆಲುವಾಯಿತು
ಹಾಸ್ಯ ಸೊಗಸಾಗಿ ನೆಲೆನಿಂತು ನಲಿದಾಡಿತು
ನಮ್ಮ ಬಾಳಲ್ಲಿ ಹೊಸ ಶೃತಿಯು ಶುರುವಾಯಿತು
ಅರಿಯದ ಈ ಸಂಬಂಧ ಸ್ನೇಹವಾಗಿ ಮನೆಮಾಡಿತು
ನಮ್ಮ ಉಸಿರಲ್ಲಿ ಉಸಿರಾಗಿ ಉಸಿರಾಡಿತು
ಗೆಳೆಯ ನಿನ್ನನ್ನು ಕಾಣದೆ ಹಲುಬಿದೆ ನಾ
ರಕ್ತ ಸಂಬಂಧಗಳಾಚೆ ನನಗಾಗಿ ಧರೆಗಿಳಿದು ಬಂದೆ
ನಿನ್ನ ಒಂದೊಂದು ಮಾತುಗಳು ನೆನಪಾಯಿತು
ಇಂದು ಕಣ್ಣಲ್ಲಿ ಕಂಬನಿಯು ನಿನ್ನದಾಯಿತು...
- Irayya Mathad
28 Jan 2016, 01:45 pm
ನಾವು ೪ಲ್ವರು ಮಾರಾಯ್ರೆ
ನಮ್ಮ ಕತೆ ಕೇಳಿ ರಾಯರೇ
ಮೊದಲು ನಾನು , ಇಲ್ಲ ಮೊದಲು ನಾನು, ಅಲ್ಲಲ್ಲ ನಾನು
ಎಲ್ಲರ ಜಗಳದಲ್ಲಿ ಬಡವಾದವನು ಇವನು
ಅದೇ ಮಾರಾಯ್ರೆ ನಾನು ೧ನೇಯವನು, ಇನ್ನೇನು ಪೂಜೆಗೆ ನೈವೇದ್ಯ ಮಾಡಿ ಕೊಡಿಸುವಷ್ಟರಲ್ಲಿ
ಪೂಜಾರಿಯಲ್ಲದವನು, ಮೈಲಿಗೆ ಮನಸ್ಸಿನವನು ಮಾಡುವ ವಾದ ನಿಮ್ಮ ಖಾದ್ಯ ನಮ್ಮ ದೇವರಿಗೆ ಖೇದ್ಯ
ಅದೇ ಮಾರಾಯ್ರೆ ನಾನು ೨ನೇಯವನು, ಅಲ್ಲಾ, ಗುಡಿಗೋಪುರ ನನ್ನದು ನೈವೇದ್ಯ ನನ್ನಿಷ್ಟದ್ದು
ಅವನ್ಯಾರು ನಡುವಿನವನು ಇಷ್ಟವಿಲ್ಲದ ನೈವೇದ್ಯ ಮಾಡುವವನು, ಖಂಡಿಸುವ ಹಕ್ಕು ನನದು
ದಿನಂಪ್ರತಿ ಇವರ ಮಧ್ಯೆ ನೈವೆದ್ಯವಿಲ್ಲದೆ ಬರಿ ಢೊಳ್ಳು ಘಂಟೆ ನಾದ
ಹುಚ್ಚಪ್ಪಗಳಿರ ಅರೆಪಾವು ಮನಿಸ್ಸಿನವರಾ ಬೇಡುವುದಿಲ್ಲ ನಾ ನಿಮ್ಮ ಗುಡಿಗೋಪುರವ
ನಿಮ್ಮಿಷ್ಟದ ಖಾದ್ಯವ
ನಾನಿಲ್ಲಿ ಬರುವುದು ಭಕ್ತಿಗೆ, ಸಿಗದು ಇಲ್ಲಿ ಅದು ಇನ್ನೆಂದಿಗೆ
ಬಡವಾಗುವುದು ಖಚಿತ ಎಂದು ಹೊರಟೆನಿಲ್ಲಿಂದ ಬಾರದೆ ಇನ್ನೆಂದಿಗೆ
- ಆನಂದ್ ಕುಮಾರ
28 Jan 2016, 12:29 pm