ನಮಸ್ತೆ ಅಬಿಮಾನಿಗಳೇ ವಂದನೆ ಒಡನಾಡಿಗಳೇ
ನಾ ನಿಮ್ಮ ಸ್ನೇಹಿತನು ಸಿರಿ ಕನ್ನಡ ಸೇವಕನು
ಕರುನಾಡ ಸ್ನೇಹಿತರೆ ನನ್ನ ಬೆಳೆಸಿದ ದೇವರು
ಸಿರಿ ಕನ್ನಡ ತಾಯಿಯು ಬೆಳೆಸಿ ಹರಸಿದಳು
ನಾ ನಿಮ್ಮ ಮನಸಲ್ಲಿ ಮನೆಮಾಡಿ ಹಾರುವೆ
ನಾ ನಿಮ್ಮ ಹೆಸರಲ್ಲಿ ದ್ವನಿಮಾಡಿ ಹಾಡುವೆ
ಕರ ಎತ್ತಿಕೈಮುಗಿವೆ ನಾ ಕರುನಾಡ ಸೇವಕ
ಕಷ್ಟವನ್ನು ದೂರ ಮಾಡಿ ಒಗ್ಗಟ್ಟಿನಿಂದ ದುಡಿಯುವ
ಸುಖವನ್ನು ಹಂಚಿಕೊಂಡು ನಕ್ಕು ನಲಿದು ಬಾಳುವ
ಜಾತಿ ದರ್ಮವೆಲ್ಲ ಮರೆತು ಕರುನಾಡ ಕಟ್ಟುವ
ನ್ಯಾಯ ನೀತಿ ಸತ್ಯ ಎಂಬ ನಾಡಕಟ್ಟಿ ಮೆರೆಯುವ
ವಸಂತ ಮಾಸದಲ್ಲಿ ನಮ್ಮಿಬ್ಬರ ಭೇಟಿ
ನೀ ತಂದು ಕೊಟ್ಟಿಯಲ್ಲೆ ಆ
ಮೊದಲ ಪ್ರೇಮ ಚೀಟಿ...
ಇರಲಿಲ್ಲ ಹುಡುಗಿ ನಂದು
ಮನಸ್ಸು ತುಂಬ ಗಟ್ಟಿ...
ಜೋತೆ ಇರುವೆ ಎಂದು ನೀನು
ನನಗೆ ಮಾತು ಕೊಟ್ಟಿ....
ಇನ್ನೊಂದು ಜನ್ಮದಲ್ಲಿಯೂ ನಾ
ಬರುವೆ ನೀನಗಾಗಿ ಮತ್ತೆ ಹುಟ್ಟಿ...
ಜನರ ಪಾಲಿಗೆ ಜಗದ ಸೃಷ್ಟಿಗೆ ಪ್ರೀತಿ
ಮರೆತೆನೆಂದರು ಮರೆಯಲಾಗದ ರೀತಿ
ಮರೆತು ನಿಂತರು ಬದುಕಲಾಗದ ಸ್ಥಿತಿ
ಸಿರಿತನ ಇದ್ದರು ಬಡವನಾದರು ಪ್ರೀತಿಗೆ ಇಲ್ಲ ಜಾತಿ
ಜಗದ ಸೃಷ್ಟಿಗೆ ಶಾಶ್ವತ ಈ ಪ್ರೀತಿ
ಪ್ರತಿ ಹಾಳೆಯಲ್ಲು ಬರೆದೆ ನಿನ್ನ ಪುಟ
ಪ್ರತಿ ಗಳಿಗೆಯಲ್ಲು ನಿನ್ನದೆ ನೋಟ
ಪ್ರತಿ ಉಸಿರಿನಲ್ಲು ನಿನ್ನದೆ ಮಿಡಿತ
ನನ್ನ ಹೃದಯದಲ್ಲು ನಿನ್ನದೆ ಓಟ
ನಿ ನನಗೆ ಒಲ್ಲ್ಯೆ ಎಂದಾಗ ನ ಕಲಿತೆ ಕುಡಿವ ಚಟ