Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಡು

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಜಗನ್ಮಾತೆಯ ಜೇಷ್ಟ ಪುತ್ರನೇ,
ಸೃಷ್ಟಿ ಕ್ರಿಯೆಯ ಕ್ಲಿಷ್ಟ ಕರ್ಣನೇ,
ಹಗಲಿರುಳು ಮಾಡುವೆ ನಿನ್ನ ಸ್ಮರಣೆ,
ತೋರಿಪು ನಿನ್ನ ಅಘಾದ ಶಕ್ತಿಯನ್ನೇ.

ನಿನ್ನ ಕೆಡವಲು ಬಂದವರನ್ನು ಬೆದರಿಸು,
ನಿನ್ನ ಬೇಡಲು ಬಂದವರನ್ನು ರಕ್ಷಿಸು,
ನಿನ್ನ ವಿಕ್ರಿಯ ಮಾಡಲು ಬಂದವರನ್ನು ಶಿಕ್ಷಿಸು,
ನಿನ್ನ ನೋಡಲು ಬಂದವರನ್ನು ರಂಜಿಸು,
ನಿನ್ನ ಒಲವಿಗೆ ಬಂದವರನ್ನು ಮುದ್ದಿಸು,
ನಿನ್ನ ತಂಟೆಗೆ ಬಂದವರನ್ನು ಕಡೆಗಾಣಿಸು.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

ಕೋಟಿ ಜೀವಿಗಳ ಜನನಿ,
ಕಟ್ಟಲೆ ಜನಗಳ ಗುಪ್ತಗಾಮಿನಿ,
ಕವಿಗಳ ಪ್ರಥಮ ಸ್ಫೂರ್ತಿ ನೀ,
ರಸಿಕರ ಅಪ್ರತಿಮ ಪ್ರೇಯಸಿ ನೀ.

ಮನುಗಳ ದೃಷ್ಟಿಯ ಹೊನ್ನಿನ ಸಿರಿ,
ಕಲೆಗಳ ಸೃಷ್ಟಿಯ ನಯನ ಪರಿ,
ಮನುಗಳ ಸ್ವಾರ್ಥಕ್ಕೆ ಬಲಿಯಾಗಬೇಡ,
ಕಲೆಗಳ ನಯನಗಳಿಗೆ ಕೊನೆಯಾಗಬೇಡ.

ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.

- ಅನಿಕೇತನ

30 Mar 2016, 10:29 am

ತಂಪಿನ ರಾತ್ರಿ

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದಿರ ಸೊಬಗಿನ ಮಲೆನಾಡ ಮೈತ್ರಿ,
ನೋಡುಬಾ ನನ್ನರಸಿ,
ಸುಂದರ ರಾತ್ರಿಯೊಳು ಒಡಲನು ಸೊಂಕಿಸಿ.

ಇಲ್ಲಿ ಬಂದು ಎನ್ನ ತಬ್ಬಿ ಕೂರು,
ತಂಗಾಳಿಯ ತಂಪಿನೊಳು ನಿನ್ನ ಪ್ರೀತಿ ಸಾರು,
ಸುತ್ತಲು ಸವರಲಿಬಿಡು ತಣ್ಣನೆ ಚಳಿಯು,
ನೀ ಎನ್ನ ಬಿಟ್ಟು ಸರಿಯದಿರೆಲ್ಲಿಯು.

ನಿನ್ನ ನವನಿತ ಸಾರದ ಕೆನ್ನೆಯ ತೋರಿಪು,
ನನ್ನ ತಣ್ಣಣೆ ತುಟಿಯದನು ಮುಟ್ಟಲು ಬಿಡು,
ನಿನ್ನ ತಣ್ಣಣೆಯ ತುಟಿಯನನಗೆ ತೋರಿಪು,
ನನ್ನ ತುಟಿಯದನು ಚುಂಬಲಿ ಬಿಡು.

ತಿಂಗಳ ಬೆಣಕಿನ ತಂಪಿನ ರಾತ್ರಿ,
ಚಂದ್ರಿಕೆ ಬಾ ಆಗಿಲಿ ನಮಗೆ ಮಲೆನಾಡಿನಲ್ಲಿ ಮೈತ್ರಿ.

- ಅನಿಕೇತನ

29 Mar 2016, 02:12 pm

ಗುರುಗಳ ಆಶೀರ್ವಾದ

ಬಯಲುಸೀಮೆಯಿಂದ ಮಲೆನಾಡಿಗೆ,
ಬಿಸಿಲಬೇಗೆಯಿಂದ ಮಳೆಕಾಡಿಗೆ,
ಕೆಲಸದ ಓಟದಿಂದ ಮರಸು ಬೇಟೆಗೆ,
ಯಂತ್ರಗಳಿಂದ ಶಾಂತಿ ಮಂತ್ರಕ್ಕೆ,
ಕತ್ತಲಿಂದ ಬೆಳಕಿಗೆ,
ಕವಿಶೈಲದ ಸಗ್ಗವೀಡಿಗೆ,
ಕ್ಷಣ ಮಾತ್ರದಲ್ಲೆ ಸಂಚರಿಸುವ ಗೋಜಿಗೆ,
ನಡೀ ನೀ ಉದಯರವಿ ಪ್ರಕಾಶನಕ್ಕೆ,
ಹಿಡೀ ನೀ ಕವಿಯ ಕಿರುಬೆರಳು ಮುಂದಕ್ಕೆ,
ಮತ್ತೆಂದು ಬಾರದಿರು ಹಿಂದಕ್ಕೆ,
ನಡೆಯುತ್ತಿರು ವಿಶ್ವಮಾನವನ ಪಥಕ್ಕೆ,
ತಲೆಬಾಗು ಗುರುಗಳ ಆಶೀರ್ವಾದಕ್ಕೆ.

- ಅನಿಕೇತನ

28 Mar 2016, 06:38 pm

ಇದು ರಾತ್ರಿ

ಅವಳೊಂದಿಗೆ ರಾತ್ರಿ ಕಳೆಯುವುದೆಂದರೆ
ಅವಳೆ ನನ್ನ ಕೈ ಹಿಡಿದು
ಆಗಸದ ಚುಕ್ಕಿಗಳ ಮಧ್ಯೆ ರಂಗೋಲಿ ಹಾಕುತ್ತಾಳೆ
ಚಂದ್ರನ ನೋಡೋ ಮನಸ್ಸೇ ಬಾರದು
ಮಡಿಲಲ್ಲಿ ಮಲಗಿಸಿದ ಅವಳು
ತಂಗಾಳಿಯ ಜೊತೆ ಇಂಪಾಗಿ ಹಾಡುತ್ತ
ಮೌನರಾಗವು ಅವಳ ಮೂಗಿನ ಮೂಗುತಿಯಲ್ಲು
ಪಳ ಪಳ ಹೊಳೆಯುವುದು.
ಅದೊಂದೇ ಸಾಕು ಮುತ್ತುಗಳಿಗೆ ಬರ ಎಂದು ಬಾರದು...

- ರವಿಕುಮಾರ

28 Mar 2016, 02:31 pm

ಮಲೆನಾಡಿನ ಮೌನ

ಕೂಗದಿರು ಕರೆಯದಿರು,
ಕುತೂಹಲದಿಂದ ಅತ್ತಿತ್ತ ಹೋಗದಿರು,
ಕುಂತವನು ನಿಲ್ಲದಿರು,
ಪಿಸುಮಾತಿನ ಸದ್ದು ಮಾಡದಿರು.

ಕಣಿವೆಯ ಕಂಡರು ಸುಮ್ಮನಿರು,
ಕಾನನದೊಳು ನೀ ಒಂದಾಗಿರು,
ಮಳೆಯಲಿ ಮಿಂದರು ನಡುಗದಿರು,
ಸುತ್ತ ಹಸುರನು ಕಂಡು ಕುಣಿಯದಿರು.

ನೀ ಏನೇ ಮಾಡಿದರು,
ಮನುಜನ ಮನದ ಮೈಲಿಗೆಯ ತಗಲಿಸದಿರು,
ಮಲೆನಾಡ ಕಾನನದ ಕಮರಿಯೊಳಿಲಿಯಲು,
ಮಲೆನಾಡ ಮೌನದಲಿ ನೀ ಒಂದಾಗಿರು.

- ಅನಿಕೇತನ

28 Mar 2016, 10:04 am

ಬೈಗು

ಮೇಘವು ಮರಳಿ ಬಂದಿದೆ,
ಹರುಷವು ಮನದಿ ತುಂಬಿಸಿದೆ,
ನದಿಯ ತಡಿಯಲಿ ನಿಂತಿರುವ ನನ್ನ,
ತನ್ನ ಅಂದ ಚಂದದಿ ಸೆಳೆದಿದೆ.

ನದಿಯು ಎಲ್ಲೋ ಜನಿಸಿದೆ,
ಬೆಟ್ಟದಡಿಯ ಕಮರಿನಲ್ಲಿ ಜಲಪಾತವ ಸೃಷ್ಟಿಸಿ
ಕಾನನದೊಳು ಹರಿದು ಬಂದಿದೆ.
ತನ್ನ ಅಂದ ಚಂದದಿ ನನ್ನ ಮನವ ಗೆದ್ದಿದೆ.

ಪಡುವಣದೊಳು ದಿನೇಶನು ಬಂದಿಹನು,
ಗಗನದಿ ಕುಂಕುಮ ಕೇಸರಿಯನ್ನು ಚಲ್ಲಿಹನು,
ಕಾರ್ಮೋಡದ ನಡುವೆ ತನ್ನ ಮುಪ್ಪು ಬೆಳಕನು ಸಾರುತಿಹನು.
ತನ್ನ ಅಂದ ಚಂದದಿ ನನ್ನ ಮನಸ ರಂಜಿಸಿಹನು.

ನಭದಿ ಮೇಘ ಕಾರ್ಮೂಡದಡಿಗೆ,
ದಡದಿ ನದಿಯ ವೈಯಾರದತಡಿಗೆ,
ಸಂಜೆ ಸೂರ್ಯನ ಸರಿಗೆ ನಿಂತುನಾ,
ಈ ಹಾಡ ಹಾಡಿ ಹರುಷ ಪಡುತಿಹನು.

- ಅನಿಕೇತನ

27 Mar 2016, 04:01 pm

ಕತ್ತಲೆ ಕಾನು

ಸುತ್ತಲು ಕತ್ತಲು ಮುಗಿಲಲ್ಲಿ ಕಾರ್ಮೋಡಗಳು,
ಮುಗಿಲ ಕಾಣಲು ಮುಚ್ಚಿದೆ ಕಾಡುಮರಗಳು,
ಉತ್ತರ ಕನ್ನಡ ದಕ್ಷಿಣ ದಿಕ್ಕಿನ ಘಟ್ಟದ ಮೇಲಿನ ಅಡವಿಯಿದು,
ಹಾಗಲಲಿ ಕಾಣದ ಇರುಳಲಿ ಬರಲಾಗದ,
ದಟ್ಟನೆ ಹಸುರಿನ ಕತ್ತಲೆ ಕಾನನವಿದು.

ಅಡವಿಯ ಅಡಿಯಲಿ ಇಳಿದು ಹೋದರಲಿ
ಶರಾವತಿಯು ಹರಿಯುತ್ತಿರುವಳು.
ನೀಲಿ ನಭದ ರಂಗನು ಅವಳ ಒಡಲಲಿ ಹರಿಸಿ,
ರಂಗಿನ ಸುಂದರಿ ನೀಲಿ ರಂಗಿನಲಿ ಝಗಝಗನೆ ಹೊಳೆಯುತ್ತಿರುವಳು.
ಕಣಿವೆಯ ಸೃಷ್ಟಿಸಿ ನಯನಗಳನು ರಂಜಿಸಿ,
ತನ್ನ ವೈಭವವನ್ನು ತೋರುತ್ತಿರುವಳು,
ಶರಾವತಿ ಕರುನಾಡ ಮನೆಮಗಳು.

ಹೋದರೆ ಚಾರಣ ಮಾಡಬೇಕೆನಿಸುವ ಕತ್ತಲೆಕಾನನವಿದು,
ಹೋದರೆ ಚಾರಣ ಮಾಡದೆಬಂದರೆ ಕತ್ತಲೆಕಾನು ಕತ್ತಲಾಗೆ ಉಳಿದುಬಿಡುವುದು.

- ಅನಿಕೇತನ.

- ಅನಿಕೇತನ

26 Mar 2016, 07:57 pm

ಅವಳು

ಅವಳ ಒಂದು ಕಿರುನಗೆ ಸಾಕು
ನಾ ಜಗವನ್ನೆ ಜಯಿಸಿಬಿಡುವೆನು.
ಅವಳ ಕೈತುತ್ತಿಟ್ಟರೆ ಸಾಕು ರಾಗಿ ಅಂಬ್ಲಿ ನನಗೆ ಮೃಷ್ಟಾನ್ನ ಭೋಜನ.
ಅವಳು ಜೊತೆಗಿದ್ದರೆ ಸಾಕು ಗರಿಮನೆ ನನಗದು ಅರಮನೆ..

- ರವಿಕುಮಾರ

26 Mar 2016, 12:14 pm

ನಿನ್ನ ನಗುವಿನ ಕ್ಷಣಗಳನ್ನು!

ಪ್ರಿಯ!
ನಿನ್ನ ನಗುವಿನ ಕ್ಷಣಗಳನ್ನು !
ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ
ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !

- ವಿನುತ ಕಿರಣ್ ಗೌಡ

25 Mar 2016, 02:19 am

ಹೋಳಿ ಬಣ್ಣ

ಹಳೆಯ ನೆನಪು ಮರೆತು
ಹೊಸ ರೀತಿಯ ನೆನಪೊದಿಗೆ
ಬಣ್ಣದ ಹಚ್ಚಿವುದೇ ಹೋಳಿ....

- Basayya Hiremath

23 Mar 2016, 05:08 pm