ಜಗನ್ಮಾತೆಯ ಜೇಷ್ಟ ಪುತ್ರನೇ,
ಸೃಷ್ಟಿ ಕ್ರಿಯೆಯ ಕ್ಲಿಷ್ಟ ಕರ್ಣನೇ,
ಹಗಲಿರುಳು ಮಾಡುವೆ ನಿನ್ನ ಸ್ಮರಣೆ,
ತೋರಿಪು ನಿನ್ನ ಅಘಾದ ಶಕ್ತಿಯನ್ನೇ.
ನಿನ್ನ ಕೆಡವಲು ಬಂದವರನ್ನು ಬೆದರಿಸು,
ನಿನ್ನ ಬೇಡಲು ಬಂದವರನ್ನು ರಕ್ಷಿಸು,
ನಿನ್ನ ವಿಕ್ರಿಯ ಮಾಡಲು ಬಂದವರನ್ನು ಶಿಕ್ಷಿಸು,
ನಿನ್ನ ನೋಡಲು ಬಂದವರನ್ನು ರಂಜಿಸು,
ನಿನ್ನ ಒಲವಿಗೆ ಬಂದವರನ್ನು ಮುದ್ದಿಸು,
ನಿನ್ನ ತಂಟೆಗೆ ಬಂದವರನ್ನು ಕಡೆಗಾಣಿಸು.
ಕತ್ತಲು ಕಗ್ಗತಲ ಕಾಡು,
ಹಗಲಿರುಳು ಎನ್ನ ಕಾಡು.
ಕೋಟಿ ಜೀವಿಗಳ ಜನನಿ,
ಕಟ್ಟಲೆ ಜನಗಳ ಗುಪ್ತಗಾಮಿನಿ,
ಕವಿಗಳ ಪ್ರಥಮ ಸ್ಫೂರ್ತಿ ನೀ,
ರಸಿಕರ ಅಪ್ರತಿಮ ಪ್ರೇಯಸಿ ನೀ.
ಮನುಗಳ ದೃಷ್ಟಿಯ ಹೊನ್ನಿನ ಸಿರಿ,
ಕಲೆಗಳ ಸೃಷ್ಟಿಯ ನಯನ ಪರಿ,
ಮನುಗಳ ಸ್ವಾರ್ಥಕ್ಕೆ ಬಲಿಯಾಗಬೇಡ,
ಕಲೆಗಳ ನಯನಗಳಿಗೆ ಕೊನೆಯಾಗಬೇಡ.
ಅವಳೊಂದಿಗೆ ರಾತ್ರಿ ಕಳೆಯುವುದೆಂದರೆ
ಅವಳೆ ನನ್ನ ಕೈ ಹಿಡಿದು
ಆಗಸದ ಚುಕ್ಕಿಗಳ ಮಧ್ಯೆ ರಂಗೋಲಿ ಹಾಕುತ್ತಾಳೆ
ಚಂದ್ರನ ನೋಡೋ ಮನಸ್ಸೇ ಬಾರದು
ಮಡಿಲಲ್ಲಿ ಮಲಗಿಸಿದ ಅವಳು
ತಂಗಾಳಿಯ ಜೊತೆ ಇಂಪಾಗಿ ಹಾಡುತ್ತ
ಮೌನರಾಗವು ಅವಳ ಮೂಗಿನ ಮೂಗುತಿಯಲ್ಲು
ಪಳ ಪಳ ಹೊಳೆಯುವುದು.
ಅದೊಂದೇ ಸಾಕು ಮುತ್ತುಗಳಿಗೆ ಬರ ಎಂದು ಬಾರದು...
ಸುತ್ತಲು ಕತ್ತಲು ಮುಗಿಲಲ್ಲಿ ಕಾರ್ಮೋಡಗಳು,
ಮುಗಿಲ ಕಾಣಲು ಮುಚ್ಚಿದೆ ಕಾಡುಮರಗಳು,
ಉತ್ತರ ಕನ್ನಡ ದಕ್ಷಿಣ ದಿಕ್ಕಿನ ಘಟ್ಟದ ಮೇಲಿನ ಅಡವಿಯಿದು,
ಹಾಗಲಲಿ ಕಾಣದ ಇರುಳಲಿ ಬರಲಾಗದ,
ದಟ್ಟನೆ ಹಸುರಿನ ಕತ್ತಲೆ ಕಾನನವಿದು.
ಅಡವಿಯ ಅಡಿಯಲಿ ಇಳಿದು ಹೋದರಲಿ
ಶರಾವತಿಯು ಹರಿಯುತ್ತಿರುವಳು.
ನೀಲಿ ನಭದ ರಂಗನು ಅವಳ ಒಡಲಲಿ ಹರಿಸಿ,
ರಂಗಿನ ಸುಂದರಿ ನೀಲಿ ರಂಗಿನಲಿ ಝಗಝಗನೆ ಹೊಳೆಯುತ್ತಿರುವಳು.
ಕಣಿವೆಯ ಸೃಷ್ಟಿಸಿ ನಯನಗಳನು ರಂಜಿಸಿ,
ತನ್ನ ವೈಭವವನ್ನು ತೋರುತ್ತಿರುವಳು,
ಶರಾವತಿ ಕರುನಾಡ ಮನೆಮಗಳು.
ಪ್ರಿಯ!
ನಿನ್ನ ನಗುವಿನ ಕ್ಷಣಗಳನ್ನು !
ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ
ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !