Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಡೆಯುತಿರುವೆ ಬೆಳಕಿನೆಡೆಗೆ
ಅನಂತವನು ಮೀರಿ..
ಯೋಚಿಸುತಿರುವೆ ದಿನವು
ಎಲ್ಲೆಯನು ಮೀರಿ..
ತಿಳಿಯದ ಆಲೋಚನೆಗೆ ಜೀವ ನಿಂತಂತಾಗಿದೆ..
ಎಂದೂ ಕ್ಷಮಿಸದ ಭಾವನೆ
ಇಂದು ಶರಣಾಗಿದೆ.
-ನವೀನ
- Naveen
19 Apr 2016, 05:59 am
ಯಾರೇನು ಹೇಳಿದರೇನು
ನನ್ನ ಹೃದಯ ಮೌನವಾಗಿದೆ
ಅಳಲು ತೋಡಲು ಇನ್ನೂ ಏಕಾಂಗಿಯಾಗಿಹೆನು ||ಪ||
ಯಾವ ಪಡುವಣ ಗಾಳಿಯು
ತೂರಿ ಬರುತಿದೆ ಕಾಣೆನು
ಮನದೊಳಗಿನ ಆಸೆಯು ಕಮರುತಿದೆ ನನ್ನಲಿ
ಹಾರು ಹಕ್ಕಿಗೆ ರೆಕ್ಕೆ ಬೇಡವೆ
ಗುಬ್ಬಚ್ಚಿಗೆ ಗೂಡು ಬೇಡವೆ
ಕನಸು ಕಾಣುವ ಮನಸ್ಸಿಗೆ
ಕಲ್ಪನೆಯ ಲೋಕ ಬೇಡವೆ
ಮರೆಯಲಾರದ ಪ್ರೀತಿಗೆ
ಅಳಿಯಲಾರದ ಸಹಿ ಹಾಕಿದೆ
ನನ್ನ ಪ್ರೇಮ ಕಾವ್ಯಕೆ
ಇತಿಹಾಸ ಬರೆಯುವ ಚಿನ್ನದಕ್ಷರ ನೀನಾದೆ
ಯಾವ ಒಲವಿನ ನೋಟಕೆ
ಕಳೆದು ಹೋದೆ ನಿನ್ನಲಿ
ನಿನ್ನ ಕೋಪದ ಬಿಸಿ ಗಾಳಿಯು
ದೂರ ಮಾಡಿತು ನನ್ನನು
ನಿನ್ನ ಹೆಜ್ಜೆಗೆ ತಾಳ ಹಾಕದೆ
ಗೆಜ್ಜೆ ಪೂಜೆ ಮಾಡಲೇನು
ಯಾಕೋ ಈ ಮನಸ್ಸಿನ್ನೂ
ನಿನ್ನ ಜಪಿಸಿ ಸೊರಗುತಿದೆ....
- Irayya Mathad
17 Apr 2016, 08:55 am
ಒಲವಿನ ಗೆಳತಿಗೆ ತಂಗಾಳಿಯಲ್ಲಿ ತೇಲಾಡುವಾಸೆ
ತನ್ನ ಇನಿಯನ ಜೊತೆ ಸವಿಸಂಜೆಯಲಿ ಕನಸ ಬಿಡಿಸುವ ಆಸೆ
ರಾತ್ರಿಯ ಬೆಳದಿಂಗಳಲ್ಲಿ ಚಂದ್ರಮೊಗವ ಅವನ ಎದೆಗೆ ಹೊರಗುವ ಆಸೆ
ಆಗಸದ ಚುಕ್ಕೆಗಳಿಗೆ ಗೆರೆ ಎಳೆಯುವ ಆಸೆ
- ರವಿಕುಮಾರ
14 Apr 2016, 01:39 pm
ಪ್ರೀತಿಸುವ ನಿನ್ನ ಕಂಗಳ
ನನ್ನ ಕಟ್ಟಿದೆ ಬಿಗಿದಪ್ಪಿದೆ
ದಾರಿ ಕಾಯುತಲಿರುವಾಗ
ನೀ ಬಂದೆಯಾ ಮೆಲ್ಲ ಮೆಲ್ಲನೆ
ಮಾತನಾಡುವ ಬಯಕೆ ಹೊಮ್ಮಿ
ಮೌನಿಯಾದೆ ನಿನ್ನ ಕಂಡೊಡನೆ
ತುಟಿಯಂಚಿನ ನಿನ್ನ ಮಾತುಗಳು
ಹೊರಬರಲಾರದೆ ತಡವರಿಸಿತು
ಸಾವಿರ ದಿನಗಳ ವಿರಹವು
ನಿನ್ನ ನೋಡಿದಾಗ ಮರೆಯಾಯಿತು
ನಿನ್ನ ಮೊಗದಲಿ ಪ್ರೀತಿ ಅರಳಿ
ಅದು ನಗುವಾಗಿ ನನ್ನ ಸೋಕಿತು
ಅಪ್ಪುವ ನಿನ್ನಪ್ಪುವ ಸಮಯದಿ
ಮತ್ತೆ ವಿರಹದ ಗಾಳಿ ಬೀಸಿತು
ಮನದಲ್ಲಿ ನೂರಾರು ಆಸೆ
ಹಸಿರಾಗುವ ಮುನ್ನ ಹುಸಿಯಾಯಿತು....
- Irayya Mathad
14 Apr 2016, 02:08 am
ನಾನು ಹೋಟೆಲ್ ನಲ್ಲಿ ತೊಳೆವೆನು
ಊಟದ ಪ್ಲೇಟು
ಎಕೆಂದರೆ ನಾನು ಶಾಲೆಗೆ ಹೋಗಿ ಹಿಡಿಯಲಿಲ್ಲ
ಬರೆಯಲ್ಲಿಕೆ ಸ್ಲೇಟು
ನನಗೆ ಓದಬೇಕೆಂಬ ಯೋಚನೆ ಬಂದಿದ್ದೆ ಲೇಟು
ಅದರೆ ನನ್ನ ಪಾಲಿಗೆ ಶಾಶ್ವತ ವಾಗಿ ಮುಚ್ಚಿ ಹೋಗಿತ್ತು
ನಮ್ಮೋರ ಶಾಲೆಯ ಗೇಟು !
- Sachins
13 Apr 2016, 04:39 am
ಮನಸನು ಮೆರೆಸಿದೆ ಪ್ರೇಮದ ಹೂನಗೆ ನೀನೆ..
ಹೃದಯವ ಕಸಿದಿದೆ ರಾಗದ ಸರಪಳಿ ನೀನೆ..
ಉಸಿರಲ್ಲೇ ಹಸಿರಾಗಿದೆ ನಲ್ಲೆ..
ಹೆಸರಲ್ಲೆ ಹಸಿವಾಗಿದೆ ಬಾಲೆ...
ಅನುರಾಗದ ಸ್ಪರ್ಷವು ನೀನೆ..
ಅಲೆಮಾರಿಯ ತವಕವು ನೀನೆ..
ಹುಸಿನಗೆಯ ಭಾವವು ನೀನೆ..
ಹದಿಹರೆಯದ ಅಲೆಗಳು ನೀನೆ...
ಕಾರ್ಮೋಡದ ನಾಚಿಕೆ ನೀನೆ..
ಕಣ್ಣಂಚಿನ ಬೆಳಕಲ್ಲು ನೀನೆ..
ಮಳೆಹನಿಯ ಇಬ್ಬನಿಯು ನೀನೆ..
ತಿಳಿನೀರಿನ ಸ್ಪರ್ಶವು ನೀನೆ...
ಸನಿಹದ ಬಯಕೆಯ ಮೋಹದ ತವಕವು ನೀನೆ..
ಪ್ರಣಯದ ಮನಸಿಗೆ ಮೌನದ ಚಿಲುಮೆಯು ನೀನೆ..
ಕನಸಲ್ಲೆ ನಿನ್ನ ಬಚ್ಚಿಡುವಂತೆ..
ಮುಗಿಲಲ್ಲೆ ನಿನ್ನ ಹಿಡಿದಿರುವಂತೆ..
ನೆನಪೋ ಬಯಕೆಯೋ ತಿಳಿಯದೆ ಮೌನದಿ ನಾ...
- Shreepadh
12 Apr 2016, 08:39 pm
ಏನು ಮಾಡಲಿ ಹರಿಯೆ
ಭವದೊಳು ಬೆಂದು ನಿನ್ನ ಕಾಣಲಿಲ್ಲ
ಏತಕೆ ಈ ಜನುಮ ನಿನ್ನ ನೋಡದೆ || ಪ||
ಸಪ್ತ ಸಾಗರಗವ ದಾಟಲಾದೆ
ಸಪ್ತ ಶೃಂಗವ ಏರಲಾದೆ
ಸಪ್ತ ಲೋಕವೆ ಬೇಡವಾಗಿಹೆ
ನಿನ್ನ ನೋಡುವ ಆಸೆಯು ಇನ್ನೂ
ಮೊಳಕೆಯೊಡೆದು ಕಾಯುತಿದೆ ನಿನ್ನ
ಹನುಮನ ಹಾಗೆ ಶಕ್ತಿಯು ಇಲ್ಲ
ಅವನ ರೂಪದ ಭಕ್ತಿಯು ಮೂಡಲಿಲ್ಲ
ಅಜ್ಞಾನ ಅಂಧಕಾರ ತುಂಬಿದ ಈ ಗಡಿಗೆ
ಸೋರುವ ಮುನ್ನ ಸೋಸಲೆ ಇಲ್ಲ
ನಾನು ಎನ್ನುವ ಭೂತ ಬಡಿಯಿತಲ್ಲ
ನನ್ನದೆನ್ನುವ ಸ್ವಾರ್ಥ ತುಂಬಿತಲ್ಲ
ನಿನ್ನನರಿಯುವ ಪರಿಯ ಹುಡಕಲಿಲ್ಲ
ಹೋಗುವ ಮುನ್ನ ಏನನ್ನು ತರಲಿಲ್ಲ
ಭಕ್ತನಾಗಿಸು ಶಕ್ತನಾಗಿಸು
ಮರುಜನ್ಮ ನೀನು ಕರುಣಿಸೆನಗೆ
ನಿನ್ನ ಸೇವೆ ಮಾಡುತ ಮುಕ್ತಿಯ ಪಡೆವೆನು
ಬೇಡೆನು ಇನ್ನೂ ಬೇರೆ ವರವನ್ನು....
- Irayya Mathad
10 Apr 2016, 04:33 pm
ಕಡಿಯದಿರಿ ವೃಕ್ಷರಾಶಿ
ಸಕಲ ಜೀವರಾಶಿಗೆ
ಕಂಪು!
ನೆತ್ತರು ಇದ್ದಿದ್ದರೆ
ಆಗಿರುತ್ತಿತ್ತು ಇಳೆಯೆಲ್ಲ
ಕೆಂಪು!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Apr 2016, 05:23 am
ಗಾಳಿಮಳೆ ತಾಗದ
ಬೊಳು ಮರಕ್ಕೆ
ಆಕಾರ ಕೊಟ್ಟು ಬಣ್ಣಲೇಪಿಸಿದ್ದಾನೆ
ಕಲೆಗಾರ!!
ದೇವರೆಂದು ನಂಬಿ
ಕೈ ಮುಗಿದು ಜನ ಕಾಸಿಟ್ಟು
ಹೋಗ್ತಾರ!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
10 Apr 2016, 05:15 am
ಜನ್ಮದಿನ
ಏನ್ನ ದಿನ
ಎಂದು ಬೀಗ ಬಾರದು!
ಕೊಡುಗೆ ನೀಡು
ಅನುದಿನ
ನಾಡು ಮರೆಯಬಾರದು!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
05 Apr 2016, 02:08 am