Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಯಿ.

ತಾಯಿ ನಾನು ನಿನ್ನ ತೃಣಕೆ
ಸಮಾನಾಗಿರುವೆ ನಿನ್ನ ಪಾದಗಳಿಗೆ.

ತಾಯಿ ನಾನು ನಿನ್ನ ರೆಪೆಗಳಾಗಿರುವೆ
ನಿನ್ನ ಕಣ್ಣುಗಳಿಗೆ..

ತಾಯಿ ನಾನು ನಿನ್ನ ಕೂಸಾಗಿರುವೆ
ನಿನ್ನೆಲ್ಲಾ ಕನಸುಗಳಿಗೆ..

ತಾಯಿ ನಾನು ವೀರನಾಗುವೆ
ನಿನ್ನ ಮಡಲಿಗೆ..

ತಾಯಿ ನಾನು ನಿನಗೆ ಮಗನಾಗಿರುವೆ
ಈ ಜನ್ಮದವರಿಗೆ..

ತಾಯಿ ನೀನಾಗು ನನಗೆ ಮಾತೃದೇವತೆ
ಏಳೇಳು ಜನ್ಮದವರೆಗೆ..!

- ವಲ್ಲಭ..

26 Jul 2016, 09:52 am

ಚಂದು

ಚಂದನದ ಬಾಳು
ಸುಂದರದಿಂದ ಬಾಳು
ಹಸಿರಾದ ಬಾಳನ್ನು
ಕೊಸರಿಗೆ ನೊಕ ಬೇಡ ಗೆಳತಿ
ಕೊಸರು ಕೊಸಾರಾಗಿ ಇರಲಿ
ಹಸಿರು ಹಸಿರಾಗಿ ಅರಳಲಿ......

- chandu

25 Jul 2016, 06:50 pm

ಶುಭ ಸಂಜೆ

ಮನಸ್ಸು,ಇರಬೇಕು ಇದ್ದಂತೆ ಹಲಸು
ಇದ್ದರೂ, ಮೇಲ್ನೋಟಕ್ಕೆ ಮುನಿಸು,
ಒಳ ಹೋದಂತೆ ಕಾಣಸಿಗಬೇಕು ಸೊಗಸು,
ಅನುಭವಕ್ಕೆ ಬಂದಂತೆ ತಿಂದಾಗ, ಸಿಹಿಯಾದ ತಿನಿಸು

- raj

25 Jul 2016, 04:51 pm

ಮುಗ್ದ ಮನಸ್ಸು

ನನ್ನ ಸುತ್ತ ಮುತ್ತಲು ಸುತ್ತುತಿಹದು ನಿನ್ನಯ ನೆನಪುಗಳು......

ನಾನು ಕಡು ಬಡವ ......ಗೆಳತಿ
ನಿನಗೆ ಕೊಡಲು ....

ನನ್ನ ಬಳಿ ಏನು ಇಲ್ಲಾ......ಆದರೆ
ನಿನಗೊಂದು....

ಮಾತು ಕೊಡಬಲ್ಲೆ ನನ್ನ ದೇಹದಲ್ಲಿ...... ಉಸಿರು
ಇರೋವರೆಗೂ....

ನಿನ್ನ ನೋಡಿಕೊಳ್ಳುವೆ ಯಾವುದೇ ಕೊರತೆ..
ಬಾರದ ಹಾಗೆ

ನಿನಗೆ ಸರಿ ಅನಿಸಿದರೆ ಬಾ ಈ ಬಡವನ....
ಅರಮನೆಗೆ....

- ಉಮೇಶ ಶಿವಪ್ಪ ಲಮಾಣಿ

25 Jul 2016, 01:12 pm

ಹಚ್ಚು ಬೆಂಕಿ

ಹಚ್ಚು ಬೆಂಕಿ ಬಿಡಬೇಡ ನಾಡಿಗೆ
ಹೊತ್ತಿ ಉರಿಯಲಿ ಬೆಂಕಿ
ಬಿದ್ದಂತೆ ಕಾಡಿಗೆ.

ಕಂಡಲ್ಲಿ ಬಸ್ಸು, ಇನ್ಯಾರದೋ ಕಾರು
ಬೆಂಕಿ ಇಡಲು ಇನ್ನೆಷ್ಟು ಹೊತ್ತು
ಉರಿದು ಹೋಗಲಿ ಯಾರಪ್ಪನ ಸೊತ್ತು?

ಹಚ್ಚು ಬೆಂಕಿ, ಮೂರು ಬಿಟ್ಟ ರಾಜಕಾರಣಿ
ಅಪ್ಪಿ ತಪ್ಪಿ ಜೈಲು ಸೇರಿದಾಗ,
ಯಾವನೋ ಅಧಿಕಾರಿ ತಲೆಕೆಟ್ಟು
ಪ್ರಾಮಾಣಿಕವಾಗಿ ನಡೆದುಕೊಂಡಾಗ.

ಹಚ್ಚು ಬೆಂಕಿ ಪ್ರಜಾ ಪ್ರಭುತ್ವದ ಬುಡಕ್ಕೆ
ಇದು ಧರ್ಮ ಸಾಮ್ರಾಜ್ಯ
ಕೇಳಬಾರದು ಯಾರೂ ನಮ್ಮ ನಡೆಯ
ಕೊಳೆತ ಧರ್ಮ ಗ್ರಂಥವೇ ನಮ್ಮ ಒಡೆಯ.

ಹಚ್ಚು ಬೆಂಕಿ, ಪಬ್ಬಲಿ ಕುಂತ ಹುಡುಗಿಗೆ
ದನ ಕಡಿದು ತಿಂದ ದಲಿತಗೆ
ಮೈ ಮರೆತ ಪ್ರೇಮಿಗೆ,
ಯಾರೂ ಸಿಗದಿದ್ದರೆ ಬಾ
ನಾನೇ ಹಚ್ಚುವೆ ನಿನಗೆ !

- ಶ್ರೀಗೋ.

25 Jul 2016, 08:41 am

ಆಸೆ ಆರುವ ಮುನ್ನ

ಬಂದು ಬಿಡು ಗೆಳತಿ
ಆಸೆ ಆರುವ ಮುನ್ನ
ತೀರದಿರಲಿ ಬಯಕೆ ಮೋಹ,
ಕಾಯುತಿರುವೆ ಕನಸಿನೊಡನೆ
ಕಾರ್ಮೋಡದ ನೆರಳಿನಲ್ಲಿ
ಕರಗದಿರಲಿ ಕಾಮ ದಾಹ !

ನಿನ್ನ ನೆನಪ ಬಿಸಿ ತಾಕಿ
ತುರುಸಲಿ ಬಿರಿದು ಬೊಬ್ಭಿರಿದು
ಮೆರೆಯುತಿಹುದು ಮರುಳ ಮನಸು
ಹತ್ತಿರ ಬಂದರೇನೇ ಕೆರಳಬಹುದು
ಬಿಗಿದಪ್ಪಿ ತಬ್ಬಿ ಬಯಕೆ ಹಬ್ಬಿ
ಕೊಬ್ಬಿ ಕೊನರಬಹುದು
ಸತ್ತು ಮಲಗಿಹ ಈ ಸುಪ್ತ ಮನಸು !

- ಶ್ರೀಗೋ.

24 Jul 2016, 10:17 am

ಓ ಜೀವ

ಮೌನದಲ್ಲು ಮನ ಕರಗುವ ಮಾತಿದೆ ಎಂದುತಿಳಿದದ್ದು ನಿನ್ನ ಕಣ್ಣ ಕಂಬನಿ ಕಂಡಾಗ.
ಹಗಲಲೂ ಮನದಲಿ ಕತ್ತಲೆ ಮೂಡಿತು,
ನಿನ್ನ ಪ್ರಜ್ವಲಿಸುವ ಮುಖ ಕಾಣದಾಗ.
ಬಾಡಿ ಹೋದ ಗಿಡದಂತಿಹ ಈ ಜೀವಕ್ಕೆ,
ಮಳೆ ಹನಿಯಾಗಿ ಬರಬಾರದೆ ನೀನು.

- ಅಕ್ಷತ

24 Jul 2016, 09:27 am

ಕನಸು.

ಕನಸುಗಳ ಲೋಕದಲಿ ಬಿಡದೆ ಸೆಳೆಯುತಿರೋ ನಿನ್ನ ಹುಚ್ಚು ಭ್ರಮೆಯಲಿ ಕೆಸರಿಗಿಳಿದು ನಡೆಯುತಿರಲು ರವಿಯ ರಶ್ಮಿ ನಯನಗಳಿಗೆ ರಾಚಿ ವಾಸ್ತವದ ಬೆಳಕಿಗೆ ಕಣ್ಣು ತೆರೆದಿರುವೆ.

- rashmi

23 Jul 2016, 01:15 pm

ಚೈತ್ರ ಸಂಭ್ರಮ

ವರ್ಷಧಾರೆ 
ಹೊರಗಷ್ಟೆಯಲ್ಲ
ಅಂತರಂಗದಲ್ಲೂ !

ಕನಸು ಕಾಮನಬಿಲ್ಲು
ಕಣ್ಣಿಗಷ್ಟೆಯಲ್ಲ
ಹೃನ್ಮನಕೂ !

ಚಿಗುರು ಹಸಿರು
ಭೂರಮೆಗಷ್ಟೆಯಲ್ಲ
ಸಂಗಾತಿ ಒಲುಮೆಗೂ !

ಚೈತ್ರ ಸಂಭ್ರಮ
ಕೋಗಿಲೆಗಷ್ಟೆಯಲ್ಲ
ನನ್ನೊಳಗಿನ ಕವಿಗೂ !!

- ashfaq peerzade

22 Jul 2016, 09:35 am

ಸಮ್ಮತಿ

ಸಮ್ಮತಿಯೇ ಕೇಳದೆ ಜಾರುತಿದೆ ಕಂಬನಿ
ಮಾತೆನೆ ಬಾರದೇ ಮುಖಾಗಿದೆ ಈ ಧನಿ

- ಶಿವು

21 Jul 2016, 10:15 pm