ಕತ್ತಲಿನ ಭಯವ
ಕತ್ತಲಲೆ ಕಳೆದು
ಮತ್ತೆ ಹೊತ್ತಗೆಯ
ಜ್ಞಾನವನೆ ಮುಡಿದು
ಕಾಳರಾತ್ರಿಯ ಕೆಟ್ಟ ನೋವಿನ ನೆನಪು
ಭಿತ್ತಿಯಲಿ ಚಿತ್ರಿಸಿದ ಋಣವನ್ನು ಸುಟ್ಟು
ಮಂತ್ರದ ಜ್ಞಾನರಸ ತಂತ್ರದ ಗಾಯತ್ರಿನೀನು
ಕತ್ತಲಿನ ನಶೆಯಿಂದ ಎತ್ತರಕೆ ಬೆಳೆದ ದಿಡ್ಡೆಗಳನೊಡೆದು
ಸತ್ತವನ ಸತ್ಯವನು ಮರೆತು
ಬೆಳೆದ ಕಳೆಯನು ಕಿತ್ತು
ಮಧುರ ಕಾವ್ಯ ದ
ಸು೦ದರಿ ಅವಳು...
ಚ೦ದಿರನ ಬೆಳದಿ೦ಗಳು
ಅವಳ ಮೊಗದ ಮು೦ಗುರಳು...
ಇನ್ನೂ ಅವಳನ್ನು ಪ್ರತಕ್ಷ ಕ೦ಡ
ನನಗೆ ಆಗಾದಿರುವುದೇ ಅರಳು ಮರಳು...
ಸಾಗದಿರುವುದೇ ಅವಳ ಜೋತೆ
ನನ್ನ ಜೀವನದ ಉರಳು?...
ನೀನು ನನ್ನ ಬಿಟ್ಟು ಹೋದ ದಿನವೇ ನಿ ಕೊಟ್ಟ ನವಿಲುಗರಿ,
ಶುಭಾಶಯದ ಕಾಗದ ,ಒಲವಿನ ಪತ್ರ ,ಉಡುಗೊರೆಗಳನ್ನೆಲ್ಲ ಹೂತು ಹಾಕಿ ಬಂದೆ
ನಮ್ಮ ಪ್ರೀತಿ ಸಮಾಧಿಯ ಹತ್ತಿರ...!!
ಗೆಳತಿ...ನೆನಪು ಮತ್ತು ಕಣ್ಣಿರು ಬಿಟ್ಟರೆ ನಮ್ಮ ಸತ್ತು ಹೋದ ಪ್ರೀತಿ ಸಂಬಂದಕ್ಕೆ
ಉಳಿದಿಲ್ಲ ಯಾವುದೇ ಲೆಕ್ಕಪತ್ರ ...!! ಆದರೂ...
ನಿನ್ನ ನೆನಪಲ್ಲಿ ಅಳೋದು ನಂಗೆ ತುಂಬಾ ಇಷ್ಟ ಕಣೇ ಹುಡುಗೀ...!
ಮನವು ನೋಯುತಿದೆ
ಮನಸ್ಸನ್ನೇ ಯಾರೋ
ಮುಷ್ಟಿಯೊಳಗಾಗಿಸಿದ ಅನುಭವ
ಬಯಸಿದ್ದು ಸಿಗದಾಗಲೂ
ಸಿಗುವಂತದ್ದು ವಿರಳವಾದರೂ
ಮನಸ್ಸಿಗೆ ಅರ್ಥವಾಗುವುದೇ ಇಲ್ಲ
ಹಂಬಲಿಸುತ್ತಿದೆ
ಹಾತೊರೆಯುತ್ತಿದೆ
ತನ್ನ ನೋವನ್ನು ಯಾರೊಂದಿಗೆ
ಹಂಚಲಿ ?
ಮರುಗುವ ಮನವ
ಸಂತೈಸಿ
ತಂಗಾಳಿಯ ಸಂದೇಶ ಹರಡಿ ಸಾಂತ್ವವನ್ನೀಯಲು ಯಾರಿಗೆಲ್ಲ ಸಾಧ್ಯವಿದೆ ?
ದುಃಖಗಳ ಸಾಮ್ರಾಜ್ಯವ
ಭೇದಿಸಿ
ಸಂತೋಷರಾಜ್ಯ ನಿರ್ಮಾಣ ಮಾಡಿ
ಜಯಗಳಿಸುವವರೇ ನೈಜ
ಜಯಶಾಲಿಗಳು
ಅದಕ್ಕೆ ದೊರಕುವ ಪರಿಸರವೇ "ವರ"
ವರವಿಲ್ಲದ ಪಯಣದ
ಕಾರ್ಯ ಸಾಧನೆಯು ಅಸಾಧ್ಯ...