Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೈಕು

ನಲ್ಮೆಯ ಹೂವ
ಮಂದಸ್ಮಿತ ಮೊಗಕೆ
ಪ್ರೀತಿ ಕಾರಣ.!

- ಸಾ.ರಾ.ಜ್ಞಾ

27 Aug 2016, 08:17 am

ವೃಧ್ಧಾಶ್ರಮ

ಬೆಳೆಯುತಿದೆ ನಗರದಲಿ
ಬಹುಬೇಗವಾಗಿ
ಖಾಸಗಿ ವೃದ್ಧಾಶ್ರಮ...
ಕಷ್ಟವಾಗುತ್ತಿದೆ ಹೆತ್ತು-ಹೊತ್ತ
ಬಡಜೀವಿಗಳೊಂದಿಗೆ
ಮಾಡಲು ಆತನ ಜೀವನಕ್ರಮ ...

ಅತಿಯಾಯಿತೆಂದನಿಸುತ್ತದೆ ಆತನಿಗೆ
ಬುದ್ಧಿ,ಅರಿವು,ಅಧಿಕಾರ ಬಲ...
ಆತನಿಗೇನು ಗೊತ್ತು
ಹೆತ್ತವರ ಚಾಕರಿಗೆ
ಸಿಗುವ ಪ್ರತಿಫಲ ....

ಉತ್ತರಿಸುವನು ಕೇಳಿದರೆ
ಅತ್ಯಾಧುನಿಕ,ಸಕಲ ಸೌಲಭ್ಯ
ಗಳಿರುವ ಉತ್ತಮ ಆಶ್ರಮ...
ಸ್ವಾರ್ಥಕ್ಕಾಗಿ ಮರೆತು ಬಿಟ್ಟನು
ಆ ತಾಯಿ ನಿದ್ದೆ ಊಟ
ಬಿಟ್ಟು ಮಾಡಿದ ಆ-ಶ್ರಮ...

- AsiddeeqN

27 Aug 2016, 12:02 am

ಪ್ರಾರ್ಥನೆ

ಮನನೊಂದು ಬೇಡುವ
ಕೆಲವೊಂದು ಹೃದಯಗಳು
ಉತ್ತರವ ನಿರೀಕ್ಷಿಸುವ
ಕೆಲವೊಂದು ಮನಸ್ಸುಗಳು
ಫಲಿತಾಂಶ ವೀಕ್ಷಿಸುವ
ಕೆಲವೊಂದು ನಯನಗಳು
ಅದಕ್ಕಾಗಿಯೇ ಆಯ್ಕೆ ಮಾಡಲ್ಪಟ್ಟ
ಕೆಲವೊಂದು ವನಗಳು
ದೇವ ಸ್ಮರಣೆಯಲ್ಲೇ ಕಳೆದ
ಕೆಲವೊಂದು ಮುನಿಗಳು
ಅವರಿಗೆ ಆಹಾರವನ್ನಿತ್ತ
ಕೆಲವೊಂದು ದನಗಳು
ಸಮಾಜದ ಕ್ಷೇಮಕ್ಕೆ
ಎತ್ತಲ್ಪಟ್ಟ ಹಸ್ತಗಳು
ಎಲ್ಲವನ್ನೂ ಸ್ಪಷ್ಟಿಸಿದ
ದೇವನಿಗೆ ಸ್ತೋತ್ರಗಳು...

- ಶಾಹಿದ್ ಉಪ್ಪಿನಂಗಡಿ

26 Aug 2016, 04:45 pm

ರುಮಾಲು

ನೋಡಲು ಬಾರೀ ಚಂದ
ಕೆಲವೊಂದು ರುಮಾಲು
ನಾವೂ ಧರಿಸಿದರೇನಂತೆ ?
ನಮ್ಮೊಳಗೆ ಸವಾಲು

ಕಟ್ಟುವರು ಸುಂದರವಾಗಿ
ಕಾಣಲು ರಿಂಗು - ರಿಂಗು
ಎಲ್ಲಿಂದ ಕೊಂಡರೋ
ಬಣ್ಣಗಳು ರಂಗು - ರಂಗು

ಪರಂಪರೆ ಇರುವ
ಕೆಲವೊಂದು ರುಮಾಲು
ನೋಡುಗರ ಕಣ್ಣಿಗೆ
ಎಷ್ಟೊಂದು ಜಮಾಲು (1)

ಕಟ್ಟಲು ಕೆಲವರು
ಪಟ್ಟಿದ್ದರಂತೆ ಕಷ್ಟ
ಕಷ್ಟಪಟ್ಟರೇನಂತೆ
ಜನರಿಗದೇ ಇಷ್ಟ

ಪದದ ಅರ್ಥ
(1) ಜಮಾಲು = ಚಂದವಾದ

- ಶಾಹಿದ್ ಉಪ್ಪಿನಂಗಡಿ

26 Aug 2016, 04:30 pm

ರಾಜಕಾರಣಿಗಳು



ನೇತಾರರೆಂದರೆ
ಬಲಿಷ್ಟರು..
ಸಂದಿಗ್ಧ ಪರಿಸರವನ್ನೂ
ನಿಯಂತ್ರಿಸುವವರು,
ಹತೋಟಿಯಲ್ಲಿಡುವವರು
ಜನರ ಬೇಡಿಕೆಗಳಿಗೆ
ಸ್ಪಂದಿಸಬೇಕಾದವರು
ಸಮಾಜ ಸೇವಕರವರು,
ಸ್ವಯಂ ಸೇವಕರು..
ಅಂಡಲೆಯುವರು,,,,,
ವೋಟಿಗಾಗಿ
ಶಿರಬಾಗುವರು
ಕೆಲವೊಮ್ಮೆ
ಕಾಲನ್ನೂ ಹಿಡಿಯುವರು.
ಜೇಬು ತುಂಬುವುದರಲ್ಲೇ
ಮಗ್ನರಾದವರು
ಲಕ್ಮಿಯನ್ನೊಲಿಸುವ
ತಂತ್ರಜ್ಞರವರು
ಕೋಟಿಗಳ ಬಜೆಟ್ಟು
ಪಾಸು ಮಾಡುವರು,
ಯಾರಿಗೂ ಅಂಜದೆ
ಗೋಣಿ ತುಂಬುವರು..

- ಶಾಹಿದ್ ಉಪ್ಪಿನಂಗಡಿ

26 Aug 2016, 04:09 pm

ಅನಿಸಿಕೆ

ಮರದಲ್ಲಿಯ ಟಿಸಿಲುಗಳು
ಮರದ ಒಲವಿಗೆ
ಸಾಕ್ಷಿಯಾದಂತೆ
ನನ್ನಯ ಕನವರಿಕೆಗಳು
ನಿನ್ನಯ ಸೇರುವಿಕೆಗೆ
ವೇದಿಕೆಯಂತೆ.

- ಸಾ.ರಾ.ಜ್ಞಾ

26 Aug 2016, 09:16 pm

ಭರವಸೆ.

ನಿನ್ನ ಇರುವಿಕೆಯ ಸುಳಿವೊಂದು
ಸಾಕೆನಗೆ
ಬದುಕಲು ಭರವಸೆ
ನಿನ್ನ ನಗುವಿನ ಸೆಲೆಯೊಂದು ಸಾಕು
ಸಾಧಿಸಲು ಎಲ್ಲ ಗುರಿ...

- ಶಿಖರಸೂರ್ಯ

26 Aug 2016, 07:32 pm

ತಳ-ಮಳ


ಮನಸ್ಸೆಂದರೆ ಹಾಗೇನೇ..
ಒಂದನ್ನು ಬಯಸುತ್ತೆ,
ಕೆಲವೊಮ್ಮೆ ತೊರೆಯುತ್ತೆ.
ಬಯಸಿದ್ದು ಸಿಗದಿದ್ದರೆ...
ಮರುಗುತ್ತಿರುತ್ತೆ.
ಬಯಸದ್ದು ಬಂದು
ಸಂತೋಷವೆನಿಸಿದರೂ
ಬಯಸಿದ್ದು ಬಂದಷ್ಟು
ಸಂತೋಷಪಡಲಾರದು.
ಇನ್ನೊಂದು ಮನದಿಂದ
ಲಭಿಸಿದ ಮೆಸೇಜು
ಕರಗತವಾಗದಾಗ
ಅಷ್ಟೊಂದು ಮರುಗದಿದ್ದರೂ
ಸ್ವತಃ ಬಯಸಿದ್ದು
ಸಿಕ್ಕೇ ಸಿಗಬೇಕೆಂಬ
ಹಠವಿರುವುದು
ಒಮ್ಮೆ ಆ ಕಡೆ
ಇನ್ನೊಮ್ಮೆ ಈ ಕಡೆ
ವಾಲುತಿರುವುದು
ಸಂತೋಷಕ್ಕಂತೂ
ಹಂಬಲಿಸುತಿರುವುದು...

- ಶಾಹಿದ್ ಉಪ್ಪಿನಂಗಡಿ

26 Aug 2016, 11:14 am

ಮುಂಜಾನೆ ಕವನ

ಇರುಳು ತುಂಬಿದ ಲೋಕದಲ್ಲಿ
ಆ ರವಿಯ ಆಗಮನ!!
ಮುಂಜಾವಿನ ಉಷೆ ಕಿರಣ
ಬೆಳ್ಳಕ್ಕಿ ಬರೆದ ಕವನ!!

ಉದಯಿಸುವ ರವಿಯ
ಉದರದಲಿ ಉರಿವ
ಆ ಜ್ವಾಲೆ ತಂದ ಕಿರಣ
ಪ್ರಕೃತಿಯು ಅಂದ ನಮನ!!

ನಾಚುತ್ತ ನಿಂತ ಆ ಸೂರ್ಯಕಾಂತಿ
ಸ್ಪರ್ಶಿಸಿದ ಸೂರ್ಯ ಕಿರಣ!!
ಹೊಳೆಯುತ್ತ ನಿಂತ ಇಬ್ಬನಿಯ ಸಾಲು
ಸೆಳೆದಿತ್ತು ನನ್ನ ಗಮನ!!

ಕೆರೆ ಏರಿ ಮೇಲೆ ಎಳೆ ಹುಲ್ಲು ಹಾಸಿ
ಚಿಗುರೊಡೆದ ಹಸಿರು ಪ್ರೀತಿ!!
ಓದುತ್ತ ಕುಳಿತೆ ನೀ ನನ್ನ ಪಯಣ
ಮುಗಿದೋಯ್ತು ಈ ಕವನ!!

- ಪಿ.ಜಿ.ಜ್ಯೋತಿ

26 Aug 2016, 08:26 am

ಹಬ್ಬ


ಎಲ್ಲೆಲ್ಲೂ ರಂಗು-ರಂಗು
ಬಟ್ಟೆ-ಬರೆಗಳು
ಉಡುಗೆ-ತೊಡುಗೆಗಳು
ಆಹಾರ-ಪದಾರ್ಥಗಳು
ಪಾಯಸ-ಪಾನೀಯಗಳು
ರಂಗು-ರಂಗಿಗೆ (ಜನ)
ಮಂಕು-ಮರುಳಾಗಿ
ಮನವ ಕೆರೆಯುವದು
ಕಣ್ಣ ಮೆರೆಯುವದು
ತಂಪನ್ನೀಯುವುದು

- ಶಾಹಿದ್ ಉಪ್ಪಿನಂಗಡಿ

25 Aug 2016, 05:22 pm