Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಾ ನೆಟ್ಟ ಬಳ್ಳಿಗೆ
ಹೂವೊಂದು ಆಗದೇ
ಬಿಸಿಲಿನ ಬೇಗೆಗೆ
ಆ ಬಳ್ಳಿ ಬಾಡಿದೆ!!
ಮಳೆಯಂತೆ ನಾನಿಂದು
ಕಣ್ಣೀರ ಸುರಿಸಿದರೂ
ಚಿಗುರೊಡೆದು ಬಾರದು
ಆ ಪ್ರೀತಿ ಬಳ್ಳಿಯು!!
ಕನಸುಗಳ ನಾ ಹೆಣೆದು
ನನ್ನ ನೆರಳ ಕರೆತಂದು
ತಂಪೆರೆದು ಬಿಸಿಲ ತಡೆವೆ
ಹಿಂತಿರುಗಬಾರದೇ!!
ನಿನಗಾಗಿ ಸೊಂಪು ಗಾಳಿ
ನನ್ನುಸಿರಿನಿಂದ ಕೊಡುವೆ
ನನಗೂನೂ ನಿನ್ನ ಉಸಿರ ಗಾಳಿ
ನೀಡೆಂದು ಕಾಯುವೆ!!
- ಪಿ.ಜಿ.ಜ್ಯೋತಿ
07 Sep 2016, 06:59 pm
ನೀನಿರದ ನೋಟಗಳು,
ನೊಂದಿಹವು ಕಣ್ಣುಗಳು,
ಬೇಸರವೆ ನಿದಿರೆ ಕನಸುಗಳು.
ಬದುಕು ಕನಸಾಗಿಸದೆ,
ಕನಸು ಬರಿದಾಗಿಸದೆ,
ಬಾರೆಯ ಎನ್ನ ಕಣ್ಣ ಮುಂದೆ
- mariswami bp
07 Sep 2016, 06:15 pm
ಹೊಗುಮೆ ಎಂಗಾರ ಹೊಗುಮೆ...
ನೊಡ್ಬೀಡು ವಯ್ಸ್ ನಮ್ಮದು...
ಕಾಡ್ಬುಡೊ ನ್ವಾಟ ನಿಮೊದ್....
ಪರಪಂಚ ಎಲಾ ನಿಂದಿ ಕಣಮ...
- Gopalsrushtiarts
06 Sep 2016, 06:45 pm
ಮೊದಲ ಪೂಜೆಯು ನಿನಗೆ ಗಣನಾಯಕ
ನಮ್ಮನ್ನು ಕಾಪಾಡುವ ನಿಜ ಪಾಲಕ
ವಿದ್ಯೆ ಬುದ್ದಿಯನು ಕೊಡುವ ಸಿದ್ಧಿ ವಿನಾಯಕ
ಅಂಧರ ಕಣ್ಣಲಿ ಬೆಳಕು ಮೂಡಿಸೋ
ದೃಷ್ಠಿ ವಿನಾಯಕ
ಗೌರಿಶಂಕರರ ಪ್ರೇಮದ ಪುತ್ರ
ಜಪಿಸಿದರು ಭಕುತರು ನಿನ್ನ ಸಾವಿರ ಮಂತ್ರ
ಗಣನಾಯಕ ಗಣನಾಯಕ
ಮಾತಪಿತರೇ ದೇವರೆಂದು
ಸುತ್ತಿದೆ ಅವರನು ನೀ ಅಂದು
ಗಣನಾಯಕ ಗಣನಾಯಕ
ವೇಗದಲಿ ನೀ ಬರೆದೆ ಮಹಾಭಾರತ
ರಾಗಗಳ ಗುನುಗಿದ ಮಹಾಮಾಂತ್ರಿಕ
ಗಣನಾಯಕ ಗಣನಾಯಕ
ದೇವಗಣಗಳ ನಾಯಕನಾಗಿ
ಸಲಹಿದೆ ಸರ್ವರ ಪಾಲಕನಾಗಿ
ಗಣನಾಯಕ ಗಣನಾಯಕ
- ಆನಂದ್
05 Sep 2016, 09:40 am
ಚಂದ್ರನ ಸೋದರಿ ನನ್ನವಳು
ಹುಣ್ಣಿಮೆ ಬೆಳಕಿನ ಕಣ್ಣವಳು
ಹೇಗೆ ಹೋಗಳಲಿ ಅವಳ ಮುಂಗುರುಳು
ಸರಿಸುತಲಿ ಮನವ ಕದ್ದಿಹಳು
- CHETHAN S KUMAR
05 Sep 2016, 07:28 am
ಹುದುಗಿಟ್ಟ ನಿಧಿಯು ನೀನು
ಅಗೆಯುತ್ತಿರುವ ಹಾರೆ ನಾನು
ಸಿಕ್ಕರೆ ನನಗೆ ಪ್ರೇಮಗಂಟು
ಸಿಗದಿರೆ ನನ್ನ ಪ್ರೇಮಸಮಾಧಿ
- ಶೋಧನ
04 Sep 2016, 11:05 pm
ಓ ಪ್ರೀತಿಯೇ
ನಿನಗೆ ಅನಂತ ಸಲಾಮು
ಚುಚ್ಚದಿರು
ದೇವರಾಣೆ ಕಂಡಿಲ್ಲ ಮುಲಾಮು
- ಶೋಧನ
04 Sep 2016, 10:17 pm
ಏಕಾಂಗಿ ನಾನಾದೆ
ನಿ ತೊರೆದ ಆ ಸಂಜೆ
ಎಂದಿನಂತೆ ನಾ ಸರಿದಿದ್ದೆ ನನ್ನ ಮನೆಯ ಬಿಟ್ಟು ತುಸು ಹಿಂದೆ
ಭರವಸೆಯ ಅಲೆಗಳು ತೀರಕ್ಕೆ ಬಡಿದು ಬಡಿದು
ಒದ್ದೆಮರಳ ಮೇಲೆ ನಡೆದೆ ದಿಕ್ಕುತೋಚದೆ
ಹೆಜ್ಜೆ ಹೆಜ್ಜೆಯೂ ಭಾರ ನಿನ್ನ ಹುಸಿಕರೆಯೋಲೆಗಳು ಜಾಸ್ತಿಯಾದಂತೆ
ಹಿಂದಿರುಗಿ ನೋಡಿದೆ...ನೀನಿಲ್ಲ
ಅಲೆಗಳು ಬಡಿದರೂ ಮಾಸದೆ ಹೋದ ಹೆಜ್ಜೆಗಳ ಅಚ್ಚೆಯಷ್ಟೆ ಅಲ್ಲಿ
ಬೇಕುಬೇಡವೆನ್ನುತ ತ್ಯಜಿಸಿದೆ ನಿನ್ನ ನನ್ನ ಮನ
ತ್ಸುನಾಮಿ ನಂತರದ ನೀರಸ ಮೌನ
ನಿನ್ನ ಜೊತೆ ಕಳೆದ ಸಿಹಿಕ್ಷಣಗಳು ನೀನಿತ್ತ ಕಿತ್ತುಬಿಸಾಕುವ ಹುಸಿಗನಸುಗಳು
ಮೆಲುಕುಹಾಕುತ್ತ ಮುಂದೆ ನಡೆದೆ...ಐದೇ ನಿಮಿಷ
ಅಚ್ಚರಿ ಎಂಬಂತೆ ನಾ ನಿಂತಿದ್ದೆ ನಿನ್ನ ಮನೆಯ ಮುಂದೆ
ಈ ಪ್ರೀತಿ ಎಂಥಾ ಹುಚ್ಚು ರೀ...
- ಶೋಧನ
04 Sep 2016, 09:20 pm
ಬಹುಶಃ ಎಲ್ಲರಿಗೂ
ಪುಕ್ಕಟೆ ಸಿಗುವ
ಆ-ದೇಶ,ಅದುವೇ
ಉಪದೇಶ.
- ಸಾ.ರಾ.ಜ್ಞಾ
04 Sep 2016, 09:40 am
ಸಾಯುತ್ತಿದ್ದಾನೆ
ನೇಗಿಲು ಯೋಗಿ
ಅದರಲ್ಲೇ ಬಿಲ
ಮಾಡುತ್ತಿದ್ದಾನೆ
ಇನ್ನೊಬ್ಬ ಹೋಗಿ.
- ಸಾ.ರಾ.ಜ್ಞಾ
04 Sep 2016, 09:39 am