Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಮ್ಮನೆಯಂಗಳ

ಹಂಚು ಮಾತ್ರ ಪರಿಚಯವಿದ್ದ (ನಾನು)
ಅಂದೊಮ್ಮೆ ಹೊರಗಿಳಿದಿದ್ದೆ
ಹಸಿರು ಗೂಟಗಳ (ಮರ-ಗಿಡ) ಕಂಡು ಪ್ರಶ್ನಿಸಿದ್ದೆ

ಹಂಚಿನ ಬಣ್ಣದ ಊರು
ಕಣ್ಣಿಗೆ ಹಂಚಿನಷ್ಟೇ ತಂಪಾಗಿತ್ತು
ಅದರ ಸುತ್ತಿದ ಅಚ್ಚ-ಹಸುರು
ಬಟ್ರ ಹೋಟೆಲಿನ ಊಟದಂತಿತ್ತು

ಗಾಳಿ ಬೀಸಿ, ಹಾಡುತ್ತಾ
ನನ್ನ ನಿದ್ರಿಸುತ್ತಿದ್ದ
ಮಾವು, ತೆಂಗು
ನೇತ್ರದೊಂದಿಗೆ ಪರಿಚಯಭಾವ ತೋರುತ್ತಿತ್ತು.
ನೋಡಲು ಬಲು ಚಂದ
ಮಾತನಾಡಬೇಕೆನಿಸುತ್ತಿತ್ತು.

ಹೊರಗಿಳಿದ ನಾನು
ಹಾರಾಡಬೇಕು, ಕುಣಿದಾಡಬೇಕು
ನಡೆ(ಲಿ)ದಾಡಬೇಕೆಂದೆನಿಸಿದಾಗ
ತಾತೆ-ತಾತೆ ಎಂಬ ಧ್ವನಿ
ನನ್ನ ಸ್ವಾಗತಿಸುತ್ತಿತ್ತು

ಚಿಕ್ಕ ಚೆಂಡು, ಪುಟ್ಟ ಕಾರು
ಗಿಜಿ-ಗಿಜಿ ಬ್ಯಾಟು
ನನಗಿಂತ ಮುಂಚೆಯೇ
ಅಂಗಳ ತಲುಪುವವರು.
ಕುಟ್ಟಿ-ದೊಣ್ಣೆ, ಬ್ಯಾಟ್-ಬಾಲ್ ಆಡುವಷ್ಟಾಗುವಾಗ
ಅಂಗಳ ಪೂರ್ತಿ ವಿಕೆಟಿನದ್ದೇ ತೂತು...

(ದಣಿವಾದಾಗ ಮಾವಿನ ಮಡಿಲು
ಹಾಯಾಗಿಸುತ್ತಿತ್ತು)

ಪರ್ಯಾಯ ದ್ವೀಪದಂತೆ
ಸುತ್ತುವರಿದ ಮನೆ
ಅಂಗಳವ ತಡೆವ (ಕಿರಣಗಳಿಂದ)
ಕಾವಲುಗಾರನಾಗಿತ್ತು

ಗೋಳಿಯಾಟ, ತಂದೆ-ತಾಯಿಯಾಟ
ಅದರೊಂದಿಗೆ ಊಟ - (ಹೀಗಿರುವಾಗ)
ಅಡುಗೆ ಬಿಸಲಿಯೂ
ಅಂಗಳದಲ್ಲಿ ಮೂರು ಕಲ್ಲುಗಳ ಮೇಲಿತ್ತು.

ನೆಲಪೂಚೆಯ ಹುಡುಕುವ ಭರದಲ್ಲಿ
ಮೂಲೆಯಲ್ಲಿ ಕೂತ ಇಡುಸೂಡಿ
ಸೋಮಾಲಿಯನ್ನರಂತೆ ತೆಳ್ಳಗಾಗುತ್ತಿತ್ತು..

"ಹೇ ರಹೀಮ್" ಎಂದು ಕರೆಯುತ್ತಾ
ನೆರೆಯ ರಾಮನೂ -ಆಡಲೆಂದು
ಥೋಮಸ್'ನೊಂದಿಗೆ ಬರುವಾಗ
ವಾರಕ್ಕೊಮ್ಮೆ ತರುವ ಚಾಕಲೇಟು‌ ಚೀಲ
ತೂತಾದ ಮಡಕೆಯಂತೆ ಅಂಗಳದಲ್ಲಿ ಎಸೆಯಲ್ಪಡುತ್ತಿತ್ತು.

ನಿದ್ದೆಗೆ ಮಾತ್ರ ಮೀಸಲಾದ ಮನೆ
ಊಟ, ಆಟ, ಮನೆಪಾಠ
ಎಲ್ಲದಕ್ಕೂ ವೇದಿಕೆಯಾಗಿದ್ದ ಅಂಗಳವು
ಅಜ್ಜಿಯಿಂದ ವರ್ಷಕ್ಕೆ 365
ದಿನಗಳೆಂಬ ಪಾಠ ಕಲಿಸಿತ್ತು...

ಇತೀ
ಶಾಹಿದ್, ಉಪ್ಪಿನಂಗಡಿ

- ಶಾಹಿದ್ ಉಪ್ಪಿನಂಗಡಿ

26 Oct 2016, 03:10 pm

ಮನ ಬಿಚ್ಚಿದ ಕವಿ

ಬಯಕೆಗಳು
ಚಿಗುರೊಡೆಯಲು
ಹಾತೊರೆವ ಮನಸ್ಸುಗಳು

ನಿದ್ದೆಯಲ್ಲೂ
ಬಯಕೆಗಳ
ಬಡಿದೇಳಿಸುವ ಕನಸುಗಳು

ಸಫಲತೆಯ
ಸೂಚನೆಗೆ
ಕಾದುಕುಳಿತ ಸಮಯಗಳು

ಈಡೇರುವ
ತವಕದಲಿ
ಮರೆತುಬಿಟ್ಟ ಪರಿಸರಗಳು

ನೆನೆಯುತ್ತಾ
ಸವಿಯುತ್ತಾ
ಊಟ ಬಿಟ್ಟ ರಾತ್ರಿಗಳು

ನನಸಾಗದ
ನಯನದಿಂದ
ಉದುರಿ ಬಿದ್ದ ಹನಿಗಳು

ಬಚ್ಚಿಟ್ಟ
ಮನದಾಳವ
ಬಿಚ್ಚಿಟ್ಟ ಕವಿಗಳು

ಇತೀ
ಶಾಹಿದ್ ಉಪ್ಪಿನಂಗಡಿ

- ಶಾಹಿದ್ ಉಪ್ಪಿನಂಗಡಿ

26 Oct 2016, 11:34 am

ಕಾದು ಕುಂತಿನಲ್ಲೋ

ಬರುವಿ ಎಂದಿಯಲ್ಲೋ ನೀನು
ಬರದಿ ಹೋದಿ ಯಾಕ
ಕಾದು ಕುಂತಿನಲ್ಲೋ ನಾನು
ಬರಂಗಿಲ್ಲ ನೀನು!!

ನನ್ನ ಪಿರುತಿ ತಿಳಿಯಂಗಿಲ್ಲ
ಬಿಟ್ಟು ದೂರ ಹೊಂಟಿ
ಬ್ಯಾರಿ ಹೆಣ್ಣು ಸಿಕ್ಕವಳೇನು
ಅದಕಾ ನನ್ನ ತೊರೆದಿ!!

ಹುಚ್ಚು ಮನಸು ಹೇಳ್ತಾದಂತ
ಬಿಟ್ಟು ಹೊಂಟಿಯಲ್ಲೋ
ಕೆಟ್ಟ ಜನ್ರ ಸಾವಾಸ ನಿನ್ನ
ಮೆಟ್ಟಿ ಕುಂತೈತಲ್ಲೋ!!

ಬಿಟ್ಟು ಬಾರ ನನ್ನ ರಾಜಾ
ನಾ ಕಾದು ಕುಂತಿನಲ್ಲೋ
ನೆಚ್ಚಿ ಬಾರ ನನ್ನ ಧೀರ
ನಾ ನಿನ್ನ ತೊರೆಯಂಗಿಲ್ಲ!!

- ಪಿ.ಜಿ.ಜ್ಯೋತಿ

22 Oct 2016, 02:56 pm

ಸ್ನೇಹನಾ???ಪ್ರೀತಿನಾ???

ಕಂಡಾಗ ಕಣ್ಣಲ್ಲಿ ಕರೆದು
ಕಾಣದೆ ಇದ್ದಾಗ ಮನದಲ್ಲಿ ನೆನೆದು
ಕಂಡರು ಕರೆಯದೆ ಇರುವ
ನಾಚುವ ಈ ನಿನ್ನ ವರ್ತನೆ
ಗೋತ್ತಿದ್ದು ಗೋತ್ತಿಲ್ಲದ ಹಾಗೆ
ನಟಿಸುವ ಈ ನಿನ್ನ ಗುಣ
ಸ್ನೇಹಾನಾ???? ಪ್ರೀತಿನಾ????

ಶ್ರೀವತ್ಸ ಪಾಟೀಲ್

- srivatsa patil

22 Oct 2016, 02:43 pm

ಬಾಂದಳದ ಚೆಲುವು

ಬಾಂದಳದ ಚೆಲುವಲ್ಲಿ
ನೂರು ಆಸೆಯ ಚೆಲ್ಲಿ
ಕವಲುಗಳ ಕಡೆಗೋಲ
ಕವನ ಬರೆದೆ !!

ಬಾರದಿರೋ ನೆನಪಲ್ಲಿ
ಬರುತಿರುವ ಕನಸಲ್ಲಿ
ನಿನ್ನ ಹುಡುಕುವ ದಾರಿ
ನಾನು ಕಂಡೆ !!

ಕೋಗಿಲೆಯ ಧನಿ ಕೇಳಿ
ಕೋಮಲದ ಮನ ಹೇಳಿ
ನಿನ್ನ ನೆನೆಯದ ಕ್ಷಣವು
ಇನ್ನು ಉಂಟೆ !!

ಆ ನೀಲಿ ಬಾನಿನಲಿ
ಮಿನುಗು ನಕ್ಷತ್ರಗಳ
ಮಧ್ಯ ಹೊಳೆಯುವ
ಚಂದ್ರ ಎಲ್ಲಿಗೆ ಹೊಂಟೆ!!

ಓ ಹೂವೆ ನಿನ್ನ ನಗುವೆ
ನನ್ನ ಮುದ್ದು ಗೆಳೆತನವೆ
ನಿನ್ನ ಸ್ಪರ್ಷಕೆ
ನಾನು ಮನಸೋತೆ !!

- ಪಿ.ಜಿ.ಜ್ಯೋತಿ

22 Oct 2016, 09:23 am

ಜಗದಲ್ಲಿ ನೆಲೆಸಲಿ ಶಾಂತಿ

ಈ ಜಗದಲ್ಲಿ ನೆಲೆಸಲಿ ಶಾಂತಿ
ಬಾ ಕರುಣೆಯನು ತೋರಿಸು ದೇವಾ!!
ಭೂವಿ ನಡುಗೋ ಹೊತ್ತು
ಜಗ ಮುಳುಗೋ ಹೊತ್ತು !!

ಇಲ್ಲಿ ಹಸಿ ಹಸಿರು ಬೆಳೆಗಳ ನಾಶ
ಹಿಡಿದಿಹುದು ನಮ್ಮನ್ನು ಪಾಶ!!
ಇಲ್ಲಿ ವಿಧ ವಿಧದಿ ಬೆಳೆದಂತ ಕ್ರಾಂತಿ
ನಮ್ಮ ಬದುಕಲ್ಲಿ ದಿನವೂ ಅಶಾಂತಿ!!

ಕಡು ಬಡವರಿಗೆ ಇಲ್ಲ ನೆಲೆಯು
ಸಿರಿವಂತರಿಗೇನಲ್ಲ ಬೆಲೆಯು!!
ಬೀಡು ಬಿಟ್ಟಿರುವ ಜಾತಿ ವಿಜಾತಿ
ದ್ವೇಷ ಬೆಳೆಸಿಹುದು ನೀತಿಯ ಅಳಿಸಿ!!

ಭೇದ ಭಾವಕ್ಕೆ ಯಾಕಿಲ್ಲ ಕೊನೆಯು
ಪ್ರೀತಿ ಮಮತೆಗಾಗಿರಬೇಕು ಮನೆಯು!!
ಹೊತ್ತ ಭೂ ತಾಯಿಗೆ ತಕ್ಕ ಮಗನಾಗಿ ಬಾ
ಸಲಹೋ ಈ ನಾಡಿಗೆ ತಕ್ಕ ಪ್ರಜೆಯಾಗಿ ಬಾ!!

- ಪಿ.ಜಿ.ಜ್ಯೋತಿ

22 Oct 2016, 09:02 am

ಹೃದಯ ಗೀತೆ

ಎದೆಯ ತಾಣದಿ ಮಿಡಿದ ನಾದವು
ಹೃದಯ ಗೀತೆಯ ಹಾಡಿದೆ!!

ಉದಯ ರಾಗದ ರವಿಯ ಬೆಳಕಲಿ
ಒಲವು ಮೈ ಮನ ಮರೆತಿದೆ!!

ನೂರು ಕನಸನು ಹಾಡುತ
ನೂರು ನೆನಪದು ಮೂಡಿದೆ!!

ಒಲಿಯ ಬೇಕಿದೆ ಒಲವ ಹೂ ನಗೆ
ಕಂಡು ನನ್ನ ನಲಿಯುತ!!

ರಾಗದಲ್ಲಿ ತಾಳ‌ ಮೇಳ
ಶೃತಿಯ ನಾದವ ಹರಿಸುತ!!

ಬಂದು ನನ್ನ ಸೇರುತ
ಹೃದಯ ಗೀತೆಯ ಹಾಡುತ!!

- ಪಿ.ಜಿ.ಜ್ಯೋತಿ

21 Oct 2016, 01:38 pm

ಪ್ರೀತಿಯೆಂಬುದು ಕಾಯಿಲೆ?

ಪ್ರೀತಿಯೆಂಬುದು ಹುಡುಗರಿಗೆ ಕಾಯಿಲೆ,
ಕೆಲವರಿಗೆ ಅದು ದುರಾಹಂಕಾರದ ಛಾಯೆ!
ಹುಡುಗರ ಎದೆಯಲಿ ಗೋರಿ ಕಟ್ಟುವ ಮಾಯೆ;
ನಂಬಿ ಕೆಟ್ಟೆನಲ್ಲಾ ಎನ್ನುವ ಹುಡುಗರ ಕಣ್ಣೀರ ಸಾಲೆ..
ಈ ಪ್ರೀತಿ ಮಾತಿಗೆ ಮರುಳಾಗುತ್ತಾಳೆ ಈ ಕವನ ಓದುವ ಬಾಲೆ!

- ವೇಣು ಆರ್ ಚಿನ್ನದೂರು

20 Oct 2016, 11:16 pm

ಜೀವನ- !

ಒತ್ತಡವಿಲ್ಲದ ಉದ್ಯೋಗವಿಲ್ಲವಯ್ಯ,
ನಷ್ಟವಿಲ್ಲದ ವ್ಯಾಪಾರವಿಲ್ಲವಯ್ಯ,
ಕಷ್ಟವಿಲ್ಲದ ವ್ಯವಸಾಯವಿಲ್ಲವಯ್ಯ,
ನೋವಿಲ್ಲದ ಸಂಸಾರವಿಲ್ಲವಯ್ಯ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲವಯ್ಯ,
ಇವೆಲ್ಲವನ್ನು ಜಯಿಸಿದರೆನೇ
"ಜೀವನ".ಕಣಯ್ಯ!

- ವೇಣು ಆರ್ ಚಿನ್ನದೂರು

20 Oct 2016, 10:49 pm

ಕಣ್ಣಲ್ಲೇ ಬಿಡಿಸು..

ಕನಸಿನ ಕಂತೆ
ಮನಸಲ್ಲೇ ನಡೆಸು
ನೆನಪಿನ ಸಂತೆ..

ಈ ಜೀವಕ್ಕೀಗ
ಬರೀ ನಿನ್ನದೆ ಚಿಂತೆ
ನಿನ್ನಲ್ಲಿಯೂ ಈಗ
ಸವಿಭಾವ ಬಂತೆ.

ಅನುರಾಗ ಬಂದಿದೆ
ಅಲೆಮಾರಿ ಹೃದಯಕೆ
ಅನುವಾದ ಬೇಕಿದೆ
ಅನುಭಂಧದ ಅನುಭವಕೆ..

ನಗುವ ಹೂವಿಗೊಂದು
ನಿನ್ನ ಹೆಸರಿಡಬೇಕಿದೆ
ಕರೆವ ಕೊರಳಿಗೊಂದು
ನಿನ್ನ ಉಸಿರುಬೇಕಿದೆ..

- Halesh S

20 Oct 2016, 06:50 pm