Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ರಾತ್ರಿಯಾದರೆ ಅವಳು ಕನಸಲಿ
ಮೋಹಗೊಂಡೆನು ನಾನು ಇರುಳಲಿ!!
ಕಣ್ಣ ಬಿಟ್ಟರೆ ನನ್ನ ಎದುರಲಿ
ಬೆಳಕ ಚೆಲ್ಲುವ ಹಣತೆ ಕೈಯಲಿ!!
ಬೆಚ್ಚಿ ಕುಳಿತರೆ ಭ್ರಮೆಯು ನನ್ನಲಿ
ಮೆಚ್ಚಿದಾಕೆಯ ನೆನಪು ಮನದಲಿ!!
ರೆಪ್ಪೆ ಮುಚ್ಚಲು ಕಣ್ಣ ಒಳಗಡೆ
ಬಂದೆ ಬಿಟ್ಟಳು ಮತ್ತೆ ಕನಸಲಿ!!
ದೂರದಲ್ಲಿ ಯಾರೋ ನಿಂತು
ಕೈಯ ಬೀಸಿ ಕರೆದು ಸೊಗಸಲಿ!!
ಇರಿಸು ಮುರಿಸು ಮತ್ತೆ ಮನಸಲಿ
ಕಂಡೆ ಕನಸ ನಾನು ಹಗಲಲಿ !!
ಎದೆಯ ಒಳಗೆ ಮಿಡಿವ ಹೃದಯವು
ನೆಗೆದು ಹಾರಿದೆ ಹುಚ್ಚು ಕನಸಲಿ!!
ಸದ್ದು ಮಾಡದೆ ಎದ್ದು ಓಡಿದೆ
ಎತ್ತ ತಿಳಿಯದೆ ಮತ್ತೆ ಕನಸಲಿ!!
- ಪಿ.ಜಿ.ಜ್ಯೋತಿ
20 Oct 2016, 03:35 pm
ನಗರೀಕರಣದ ನೆಪದಲ್ಲಿ ಅರಣ್ಯನಾಶ
ಪ್ರಾಣಿ ಪಕ್ಷಿಗಳು ಆಗುತ್ತಿವೆ ಸರ್ವನಾಶ
ಜಾಗತೀಕರಣದ ನೆಪದಲ್ಲಿ ಲೋಕನಾಶ
ಪ್ರಮುಖ ಕಾರಣವೇ ಮಾನವನ ಸಂತೋಷ
ಇನ್ನೇನು ಉಳಿದೀತು ಈ ಪರಪಂಚ
ಎಲ್ಲವೂ ಸೇರುತಿವೆ ಅಳಿವಿನ ಅಂಚ
ಏರಲಾರೆವು ಉಳಿಗಾಲದ ಮಂಚ
ಏರುತಿವೆ ಸುನಾಮಿ,ಬೀಸುತಿವೆ ಚಂಡಮಾರುತ
ಕಾಡುತಿದೆ ಬರಗಾಲ, ನಮಗಿಲ್ಲ ಇನ್ನು ಉಳಿಗಾಲ
ಸಾಕು ಸಾಕು ಹೇಳಲಿ ಏನಂತ, ಇವು ಸಾರುತಿವೆ ಮನುಕುಲದ ಅಂತ್ಯ.
- ಮನ್ವಂತರಿ
- sarpa
20 Oct 2016, 12:13 pm
ಕಣ್ಣಿನಲ್ಲಿ ಜನಿಸಿ
ರೆಪ್ಪೆಯಿಂದ ಜಿನುಗಿ
ಕೆನ್ನೆ ಮೇಲೆ ಹರಿವ ಕಂಬನಿ
ಮರಳಿ ಕಣ್ಣ ಸೇರದು!!
ರೆಪ್ಪೆ ಮುಚ್ಚಿಕೊಂಡರೂನು
ಮನದ ನೋವ ಮರೆಯದು
ಕಣ್ಣಿನಿಂದ ಹರಿವುದು
ಮರಳಿ ಕಣ್ಣ ಸೇರದು!!
ಬಾರಿ ಬಾರಿ ಜಾರಿ ಜಾರಿ
ಸಾಲು ಸಾಲು ಹನಿಗಳು
ಉಸಿರುಗಟ್ಟ ಅತ್ತ ಮೇಲು
ತೀರದಂತಾ ಮಣಿಗಳು!!
ಕಣ್ಣ ಬಿಂದು ಜಾರಿ ಬಂದು
ಮೂಡಿದಂತ ಇಬ್ಬನಿ!!
ಕಣ್ಣ ಕೊಳದಲಿ ಉಕ್ಕಿ ಹರಿವ
ಭಾವಗಂಗೆ ಈ ಕಂಬನಿ!!
- ಪಿ.ಜಿ.ಜ್ಯೋತಿ
19 Oct 2016, 01:49 pm
ಹೇಳದೇ ನೀನು ಹೋಗುವುದೆಲ್ಲಿ
ಕೇಳಿದ ಮೇಲೂ ಹೇಳಲು ಒಲ್ಲೆ!!
ಕಾಣದೇ ನೀನು ಹೋದರೆ ನಲ್ಲೆ
ಹುಡುಕಲು ನಾನು ಹೋಗುವುದೆಲ್ಲಿ!!
ಹೂವಿನ ಗಿಡಕೆ ಮುಳ್ಳಿನ ಬೇಲಿ
ಇಲ್ಲದೇ ಹೋದರೆ ವೈರಿಯ ದಾಳಿ!!
ಹೆಣ್ಣಿನ ಜನುಮಕೆ ಗಂಡಿನ ಆಸರೆ
ಇಲ್ಲದೇ ಹೋದರೆ ಬದುಕಲಿ ಗೇಲಿ!!
ಪ್ರೇಮದಿ ನಾನು ಕಾದಿರುವಾಗ
ಬಿಂಕದಿ ನೀನು ಸಾಗುವುದೇಕೆ!!
ಮನಸಿನ ಮಾತು ಹೇಳಿದ ಮೇಲು
ಮೌನದ ಉತ್ತರ ನೀಡುವುದೇಕೆ!!
ಕಂಡರು ಕಾಣದ ದೂರವು ಸಾಕು
ಬಂದರು ಬಾರದ ವಿರಹವು ಸಾಕು!!
ಬಳ್ಳಿಗೆ ಆಸರೆ ಮರವಾದಂತೆ
ನಿನ್ನೊಲವಿಗೆ ಆಸರೆ ನಾನಾಗಿರುವೆ!!
- ಪಿ.ಜಿ.ಜ್ಯೋತಿ
19 Oct 2016, 11:19 am
ಕಪ್ಪು ಕಾಡಿಗೆ ಅವಳ ಕಣ್ಣಿಗೆ
ಮೆತ್ತಿ ತೀಡಿದ ಅಂದ ಕಾಡಿದೆ!!
ಒರೆ ನೋಟದ ಚಂದ್ರ ಸುಂದರಿ
ಕಾಡುತಿರುವಳು ಏಕೆ ಈ ಪರಿ!!
ಹವಳ ಕಾಂತಿಯ ಅದರ ತೊದಲುವ
ಮೆಲ್ಲ ಮಾತಿನ ದನಿಯು ಕಾಡಿದೆ!!
ಅವಳ ಉಸಿರಿನ ಗಾಳ ಸೋಕಿಲು
ನನ್ನ ತನುವಿನ ಕಾವು ಏರಿದೆ!!
ಬಳುಕಿ ನಿಂತಿದೆ ಬಳ್ಳಿ ಮೈ ಸಿರಿ
ಧುಮುಕಿ ಹರಿಯುತ ಯವ್ವನ ಜರಿ!!
ಸೊಕ್ಕಿ ನಡೆಯುವ ನಡುವ ಬಳಸಲು
ಹಿಗ್ಗಿ ಹೆಚ್ಚಿದೆ ಮನದ ತವಕವು!!
ರೂಪ ರಾಶಿಯ ದೇವ ಕನ್ನಿಕೆ
ಸೋತು ಹೋದೆನು ಅವಳ ಅಂದಕೆ!!
ಪುಳಕವಾಗಿದೆ ನನ್ನ ಈ ಮನ
ಮೆಚ್ಚಿ ಬಯಸುತ ಅವಳ ತನು ಮನ!!
- ಪಿ.ಜಿ.ಜ್ಯೋತಿ
19 Oct 2016, 11:18 am
ಸಾಕು ಅನ್ನಿಸುತ್ತಿದೆ ಈ ನನ್ನ ಮೌನ
ಆದರೂ ಬರೆದೆ ನಾ ನನ್ನ ಕವನ ..
ನಿನ್ನ ಮೊಗದ ಮುಗ್ದತೆಯಲ್ಲಿ ಏಕೀತು ಆ ಮೌನ
ಕಾರಣವೇ ತಿಳಿಯದೆ ಕಳೆದು ಹೋದೆ ನಾ....
ಹುಡುಕುವ ಪ್ರಯತ್ನದಲ್ಲಿ ಅರಿಯದೆ ಹೊರಟೆ ನಾ
ತಿಳಿಯದೆ ಹೋಯ್ತು ಆ ನಿನ್ನ ಮೌನ ....
ಏನೆಂದು ಬರೆಯಲ್ಲಿ ನಾ ನನ್ನ ಕವನ
ನೆನಪಿಗೆ ಬರುತಿಲ್ಲ ನಿನ್ನ ಮುಗ್ದತೆಯ ಮೌನ ....
- ಆನಂದ.ಎಮ್.ಹೆಚ್
18 Oct 2016, 11:34 am
ಬಾಲ್ಯದ ಜೀವನ
ಈಗಿನ ಆಗು ಹೋಗು
ಮುಂದಿನ ಭವಿಷ್ಯ
ಎಲ್ಲವನ್ನೂ ಚಿಂತಿಸುವಾಗ
ತೀರ ತಲುಪದ ಹಡಗಿನಂತೆ...
ಆಸೆ ಬತ್ತಿ ಹೋಗಿದೆ..
ಕನಸು ಗೋರಿಯಾಗಿದೆ
ಮನಸ್ಸು ನಿಧಾನವಾಗಿದೆ
ಜೀವನ ಭೀಕರ ಹಿಡಿತದಲ್ಲಿದೆ
ತಾಕತ್ತು ಬೂದಿಯಾಗಿದೆ
ಮನಸ್ಸು ಅಲ್ಲೋಲ - ಕಲ್ಲೋಲವಾಗಿದೆ...
ಯಾವುದೂ ಬೇಡವೆನಿಸುತ್ತದೆ..
ಎಲ್ಲರೂ ಶತ್ತುಗಳಂತೆ ಗೋಚರವಾಗುತ್ತಾರೆ..
ಎಲ್ಲರೂ ನನ್ನನ್ನು ತೊರೆದಂತೆ ಭಾಸವಾಗುತ್ತಿದೆ..
ಕನಸು ಹುಸಿಯಾಗಿದೆ..
ಈ ಜೀವನ ಬೋರಾಗಿದೆ.
ಸಾವು ಹತ್ತಿರವಾಗುತಿದೆ.
ಸಾಯಲು ಮನಸಾಗುತಿದೆ.
ಸಾವು ಇಷ್ಟವಾಗಿದೆ..
ಜೀವನ ಬೋರಾಗಿದೆ
ಮರಣ ಗೆಲ್ಲುತಿದೆ.
ಅದು ಹತ್ತಿರವಾಗುತಿದೆ..
- ಶಾಹಿದ್ ಉಪ್ಪಿನಂಗಡಿ
18 Oct 2016, 07:53 am
ನೀನಿದ್ದೆ ಜೊತೆಯಲ್ಲಿ
ಬಾಲ್ಯದ ಗೆಳತಿಯಾಗಿ
ಮೊದಲನೆ ಪ್ರೀತಿಯಾಗಿ
ಜನನಿಯ ಪ್ರತಿರೂಪವಾಗಿ
ಜಗತ್ತಿನಲ್ಲೆಲ್ಲೂ ಸಿಗದ ಪ್ರೇಯಸಿಯಾಗಿ
ಬೆಳಕಿನಲಿ ಹಿಂಬಾಲಿಸುವ ನೆರಳಾಗಿ
ಕತ್ತಲೆಯನು ಕಳೆಯುವ ಬೆಳದಿಂಗಳಾಗಿ
ಸೋಲನು ಮರೆಸುವ ಗೆಲುವಾಗಿ
ದುಃಖವನು ಬದಲಿಸುವ ನಲಿವಾಗಿ
ಮನಸನು ಹಿತಗೂಳಿಸುವ ತಂಗಾಳಿಯಾಗಿ
ನೀನಿರುವೆ ಜೊತೆಯಲಿ
ನನ್ನೀ ಹೃದಯ ಬಡಿತವಾಗಿ
ಬೆಚ್ಚನೆಯ ಉಸಿರಾಗಿ
ನನ್ನೂಳು ಎಂದೆಂದಿಗೂ ಇರುವೇ ನೀ
'ಅನುಕಂಪವಾಗಿ
'ಅನು'ರಾಗವಾಗಿ
'ಅನು'ಬಂಧವಾಗಿ
ಎಂದೂ ನನಸಾಗದ ಕನಸುಗಳಾಗಿ
ಅಳಿಸಲಾಗದ ನೆನಪುಗಳಾಗಿ......
- ಹರೀ
18 Oct 2016, 12:04 am
.....
ಮನದಲ್ಲಿ ಅವಿತು ಹೋದ
ಮೌನಿ ನಾನೂ ......
ನಿದ್ರೆಯ ತುಕಡಿಕೆಗೆ ಮಾರುಹೋದ
ನಯನ ನಾನೂ ......
ಕಣ್ಣ ರೆಪ್ಪೆಯಲ್ಲಿ ಕಲೆತು ಹೋದ
ಕಾಡಿಗೆ ನಾನೂ ......
ಕೊನೆಗೆ ಅವಳ ಕಣ್ಣಿಂದ ಜಾರಿದ
ಕಂಬನಿ ನಾನೂ ......
- ಆನಂದ.ಎಮ್.ಹೆಚ್
17 Oct 2016, 10:07 pm
ನಿನ್ನ ಮಧುರ ಪಿಸುಮಾತ ಕೇಳಿ
ನನ್ನೆಲ್ಲಾ ಭಾವನೆಗಳಿಗೆ
ನವ ಮಾಸ ತು೦ಬಿ
ಪ್ರೀತಿಯ ಜನನಕ್ಕೆ ಕಾರಣವಾಯಿತು!
ದಿನೇಶ್ ಉಳ್ತೂರು.
- ದಿನೇಶ್ ಉಳ್ತೂರು
17 Oct 2016, 08:35 pm