Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾದು ಕುಂತಿನಲ್ಲೋ

ಬರುವಿ ಎಂದಿಯಲ್ಲೋ ನೀನು
ಬರದಿ ಹೋದಿ ಯಾಕ
ಕಾದು ಕುಂತಿನಲ್ಲೋ ನಾನು
ಬರಂಗಿಲ್ಲ ನೀನು!!

ನನ್ನ ಪಿರುತಿ ತಿಳಿಯಂಗಿಲ್ಲ
ಬಿಟ್ಟು ದೂರ ಹೊಂಟಿ
ಬ್ಯಾರಿ ಹೆಣ್ಣು ಸಿಕ್ಕವಳೇನು
ಅದಕಾ ನನ್ನ ತೊರೆದಿ!!

ಹುಚ್ಚು ಮನಸು ಹೇಳ್ತಾದಂತ
ಬಿಟ್ಟು ಹೊಂಟಿಯಲ್ಲೋ
ಕೆಟ್ಟ ಜನ್ರ ಸಾವಾಸ ನಿನ್ನ
ಮೆಟ್ಟಿ ಕುಂತೈತಲ್ಲೋ!!

ಬಿಟ್ಟು ಬಾರ ನನ್ನ ರಾಜಾ
ನಾ ಕಾದು ಕುಂತಿನಲ್ಲೋ
ನೆಚ್ಚಿ ಬಾರ ನನ್ನ ಧೀರ
ನಾ ನಿನ್ನ ತೊರೆಯಂಗಿಲ್ಲ!!

- ಪಿ.ಜಿ.ಜ್ಯೋತಿ

22 Oct 2016, 02:56 pm

ಸ್ನೇಹನಾ???ಪ್ರೀತಿನಾ???

ಕಂಡಾಗ ಕಣ್ಣಲ್ಲಿ ಕರೆದು
ಕಾಣದೆ ಇದ್ದಾಗ ಮನದಲ್ಲಿ ನೆನೆದು
ಕಂಡರು ಕರೆಯದೆ ಇರುವ
ನಾಚುವ ಈ ನಿನ್ನ ವರ್ತನೆ
ಗೋತ್ತಿದ್ದು ಗೋತ್ತಿಲ್ಲದ ಹಾಗೆ
ನಟಿಸುವ ಈ ನಿನ್ನ ಗುಣ
ಸ್ನೇಹಾನಾ???? ಪ್ರೀತಿನಾ????

ಶ್ರೀವತ್ಸ ಪಾಟೀಲ್

- srivatsa patil

22 Oct 2016, 02:43 pm

ಬಾಂದಳದ ಚೆಲುವು

ಬಾಂದಳದ ಚೆಲುವಲ್ಲಿ
ನೂರು ಆಸೆಯ ಚೆಲ್ಲಿ
ಕವಲುಗಳ ಕಡೆಗೋಲ
ಕವನ ಬರೆದೆ !!

ಬಾರದಿರೋ ನೆನಪಲ್ಲಿ
ಬರುತಿರುವ ಕನಸಲ್ಲಿ
ನಿನ್ನ ಹುಡುಕುವ ದಾರಿ
ನಾನು ಕಂಡೆ !!

ಕೋಗಿಲೆಯ ಧನಿ ಕೇಳಿ
ಕೋಮಲದ ಮನ ಹೇಳಿ
ನಿನ್ನ ನೆನೆಯದ ಕ್ಷಣವು
ಇನ್ನು ಉಂಟೆ !!

ಆ ನೀಲಿ ಬಾನಿನಲಿ
ಮಿನುಗು ನಕ್ಷತ್ರಗಳ
ಮಧ್ಯ ಹೊಳೆಯುವ
ಚಂದ್ರ ಎಲ್ಲಿಗೆ ಹೊಂಟೆ!!

ಓ ಹೂವೆ ನಿನ್ನ ನಗುವೆ
ನನ್ನ ಮುದ್ದು ಗೆಳೆತನವೆ
ನಿನ್ನ ಸ್ಪರ್ಷಕೆ
ನಾನು ಮನಸೋತೆ !!

- ಪಿ.ಜಿ.ಜ್ಯೋತಿ

22 Oct 2016, 09:23 am

ಜಗದಲ್ಲಿ ನೆಲೆಸಲಿ ಶಾಂತಿ

ಈ ಜಗದಲ್ಲಿ ನೆಲೆಸಲಿ ಶಾಂತಿ
ಬಾ ಕರುಣೆಯನು ತೋರಿಸು ದೇವಾ!!
ಭೂವಿ ನಡುಗೋ ಹೊತ್ತು
ಜಗ ಮುಳುಗೋ ಹೊತ್ತು !!

ಇಲ್ಲಿ ಹಸಿ ಹಸಿರು ಬೆಳೆಗಳ ನಾಶ
ಹಿಡಿದಿಹುದು ನಮ್ಮನ್ನು ಪಾಶ!!
ಇಲ್ಲಿ ವಿಧ ವಿಧದಿ ಬೆಳೆದಂತ ಕ್ರಾಂತಿ
ನಮ್ಮ ಬದುಕಲ್ಲಿ ದಿನವೂ ಅಶಾಂತಿ!!

ಕಡು ಬಡವರಿಗೆ ಇಲ್ಲ ನೆಲೆಯು
ಸಿರಿವಂತರಿಗೇನಲ್ಲ ಬೆಲೆಯು!!
ಬೀಡು ಬಿಟ್ಟಿರುವ ಜಾತಿ ವಿಜಾತಿ
ದ್ವೇಷ ಬೆಳೆಸಿಹುದು ನೀತಿಯ ಅಳಿಸಿ!!

ಭೇದ ಭಾವಕ್ಕೆ ಯಾಕಿಲ್ಲ ಕೊನೆಯು
ಪ್ರೀತಿ ಮಮತೆಗಾಗಿರಬೇಕು ಮನೆಯು!!
ಹೊತ್ತ ಭೂ ತಾಯಿಗೆ ತಕ್ಕ ಮಗನಾಗಿ ಬಾ
ಸಲಹೋ ಈ ನಾಡಿಗೆ ತಕ್ಕ ಪ್ರಜೆಯಾಗಿ ಬಾ!!

- ಪಿ.ಜಿ.ಜ್ಯೋತಿ

22 Oct 2016, 09:02 am

ಹೃದಯ ಗೀತೆ

ಎದೆಯ ತಾಣದಿ ಮಿಡಿದ ನಾದವು
ಹೃದಯ ಗೀತೆಯ ಹಾಡಿದೆ!!

ಉದಯ ರಾಗದ ರವಿಯ ಬೆಳಕಲಿ
ಒಲವು ಮೈ ಮನ ಮರೆತಿದೆ!!

ನೂರು ಕನಸನು ಹಾಡುತ
ನೂರು ನೆನಪದು ಮೂಡಿದೆ!!

ಒಲಿಯ ಬೇಕಿದೆ ಒಲವ ಹೂ ನಗೆ
ಕಂಡು ನನ್ನ ನಲಿಯುತ!!

ರಾಗದಲ್ಲಿ ತಾಳ‌ ಮೇಳ
ಶೃತಿಯ ನಾದವ ಹರಿಸುತ!!

ಬಂದು ನನ್ನ ಸೇರುತ
ಹೃದಯ ಗೀತೆಯ ಹಾಡುತ!!

- ಪಿ.ಜಿ.ಜ್ಯೋತಿ

21 Oct 2016, 01:38 pm

ಪ್ರೀತಿಯೆಂಬುದು ಕಾಯಿಲೆ?

ಪ್ರೀತಿಯೆಂಬುದು ಹುಡುಗರಿಗೆ ಕಾಯಿಲೆ,
ಕೆಲವರಿಗೆ ಅದು ದುರಾಹಂಕಾರದ ಛಾಯೆ!
ಹುಡುಗರ ಎದೆಯಲಿ ಗೋರಿ ಕಟ್ಟುವ ಮಾಯೆ;
ನಂಬಿ ಕೆಟ್ಟೆನಲ್ಲಾ ಎನ್ನುವ ಹುಡುಗರ ಕಣ್ಣೀರ ಸಾಲೆ..
ಈ ಪ್ರೀತಿ ಮಾತಿಗೆ ಮರುಳಾಗುತ್ತಾಳೆ ಈ ಕವನ ಓದುವ ಬಾಲೆ!

- ವೇಣು ಆರ್ ಚಿನ್ನದೂರು

20 Oct 2016, 11:16 pm

ಜೀವನ- !

ಒತ್ತಡವಿಲ್ಲದ ಉದ್ಯೋಗವಿಲ್ಲವಯ್ಯ,
ನಷ್ಟವಿಲ್ಲದ ವ್ಯಾಪಾರವಿಲ್ಲವಯ್ಯ,
ಕಷ್ಟವಿಲ್ಲದ ವ್ಯವಸಾಯವಿಲ್ಲವಯ್ಯ,
ನೋವಿಲ್ಲದ ಸಂಸಾರವಿಲ್ಲವಯ್ಯ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲವಯ್ಯ,
ಇವೆಲ್ಲವನ್ನು ಜಯಿಸಿದರೆನೇ
"ಜೀವನ".ಕಣಯ್ಯ!

- ವೇಣು ಆರ್ ಚಿನ್ನದೂರು

20 Oct 2016, 10:49 pm

ಕಣ್ಣಲ್ಲೇ ಬಿಡಿಸು..

ಕನಸಿನ ಕಂತೆ
ಮನಸಲ್ಲೇ ನಡೆಸು
ನೆನಪಿನ ಸಂತೆ..

ಈ ಜೀವಕ್ಕೀಗ
ಬರೀ ನಿನ್ನದೆ ಚಿಂತೆ
ನಿನ್ನಲ್ಲಿಯೂ ಈಗ
ಸವಿಭಾವ ಬಂತೆ.

ಅನುರಾಗ ಬಂದಿದೆ
ಅಲೆಮಾರಿ ಹೃದಯಕೆ
ಅನುವಾದ ಬೇಕಿದೆ
ಅನುಭಂಧದ ಅನುಭವಕೆ..

ನಗುವ ಹೂವಿಗೊಂದು
ನಿನ್ನ ಹೆಸರಿಡಬೇಕಿದೆ
ಕರೆವ ಕೊರಳಿಗೊಂದು
ನಿನ್ನ ಉಸಿರುಬೇಕಿದೆ..

- Halesh S

20 Oct 2016, 06:50 pm

ನಾ ಹೋಗುತಿದ್ದ ರಸ್ತೆಯಲ್ಲಿ ನ

ನಾ ಹೋಗುತಿದ್ದ ರಸ್ತೆಯಲ್ಲಿ ನೀನೇಕೆ ಬಂದೆ.....
**********************************

ನನ್ನ ಹಿಂದೆ ಮುಂದೆ ನಾ ಬೇಡವೆಂದರೂಬಂದೆ

ಅವಸರವಸರವಾಗಿದ್ದರುನೂ ನೀ ನನ್ನ ಬಿಡದೆ ಬಂದೆ

ಬರಬೇಡೆನ್ನ ಜೊತೆಗೂಡಿ ಎಂದರು ಓಡೋಡಿ ಬಂದೆ

ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....


ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ

ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ

ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ

ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......


ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...

ನಂಬುವೆನುನ ಎನ್ನ ನೆರಳೆಂದು

ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..

ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...

- Halesh S

20 Oct 2016, 06:17 pm

ಪರಾಗ ಸ್ಪರ್ಷ

ಹೂವೊಂದು ನುಡಿಸಿತು ವೀಣೆ
ಮಕರಂದ ಚಿಮ್ಮುತ ತಾನೆ
ಮೃದಂಗ ನುಡಿಸಿ ಪತಂಗ
ಮಧು ಹೀರಿ ನಲಿಯಿತು ಆಗ
ಆಗ ಪರಾಗ ಸ್ಪರ್ಷ ರಾಗ !!

ಚಿಗುರೊಡೆವ ಹೂವಿನ ಗಿಡಕೆ
ತಂದಂತೆ ಚಿಗುರ ವಸಂತ
ಸೂಸಿ ಎಲ್ಲೆಲ್ಲೂ ಹಸಿರ ನಗೆ
ಚೈತ್ರ ನವ ಚೈತ್ರ ವನಸಿರಿಗೆ
ಹಸಿರ ಈ ಬಸಿರ ವಲವ ನಗೆ !!

ರತಿ ದೇವಿ ಕಾದಿರುವಾಗ
ತಂದಂತ ಮನ್ಮತ ರಾಗ
ರಾಗ ಅನುರಾಗ ತನುಗೀಗ
ತನುವೆರಡು ಬೆಸೆದಿರಲು ನವರಾಗ
ನವಮಾಸ ಕಳೆದಾಗ ಶುಭಯೋಗ!!

- ಪಿ.ಜಿ.ಜ್ಯೋತಿ

20 Oct 2016, 04:13 pm