Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಒಲವೇ

ಓ ಒಲವೇ ನನ್ನ ಒಲವೇ ಎಲ್ಲಿರುವೆ ಹೆಗೀರುವೆ
ಈ ಹೃದಯ ಪ್ರತಿ ಕ್ಷಣವೂ ನೀನನ್ನ ನೆನೆಯುತ್ತಿದೆ
ಕತ್ತಲೆಯಾ ದಾರಿಯಲ್ಲಿ ನಾ ನಡೆಯುವಾಗ ನೀ ಬಾರೆ ಚಂದ್ರನಾಗಿ
ಬೀಸಿಲಲ್ಲಿ ನಾ ಇರುವಾಗ ನೀ ಬಾರೆ ನೆರಳಾಗಿ....
ಪ್ರತಿ ದಿನ ಪ್ರತಿ ಕ್ಷಣ ಈ ಮನವು ನೀ ಬರುವೆ ಎಂದು ಕಾಯುತ್ತಿದೆ....

- Rajbhumi.doddamani

30 Oct 2016, 11:32 am

"ಗುಂಡರಗೋವಿ" ಗುಂಡ

ಗುಂಡರಗೋವಿ ಗುಂಡ;
ಹುಡುಗಿಯ ಸೊಗಸು ಕಂಡ,
ಹಿಂದೆ ಬಿದ್ದು ವದ್ದಾಡಿಕೊಂಡ:

ಹುಡುಗಿ ಸ್ವಲ್ಪ ಮಂದ ಅನ್ಕೊಂಡ,
ಅದು ಮೇಕಪ್ಪು ಅಂತ ತಿಳ್ಕೊಂಡು!
ಮೈಯಲ್ಲಾ ಪರಚಿಕೊಂಡ?

ಮದುವೆಯಾಗಿ ತಲೆ ಚಚ್ಚಿಕೊಂಡು!
ಹೊಗೆ ಹಾಕಿಕೊಂಡ.

- ವೇಣು ಆರ್ ಚಿನ್ನದೂರು

30 Oct 2016, 12:26 am

ಓ ಸೈನಿಕ?

ಓ ಸೈನಿಕ ದೇಶ ಸೇವೆಯೆ ನಿನ್ನ ಕಾಯಕ,
ವೈರಿನಾಶಕ,ಪ್ರಜಾಪಾಲಕ ನೀನು ನಮ್ಮ ಸೈನಿಕ;
ನೀನು ಅಮರ ಜ್ಯೋತಕ ಧೈರ್ಯ ರ್ವದಕ.
ನಿನ್ನನ್ನು ನೆನೆದು ಗೌರವಿಸುವುದು ನಮಗೆ ಶುಭಸೂಚಕ.

- ವೇಣು ಆರ್ ಚಿನ್ನದೂರು

30 Oct 2016, 12:14 am

ವಿಧಿ ವಿಜ್ಞಾನ!

ಕುಣಿದಾಡಿದೆ ತನುಮನ :
ನಲಿದಾಡಿದೆ ಜೀವನ ,
ಕಾಣದ ದಾರಿಗೆ ಈ ಪಯಣ!

ತಾಯಿಯಿಂದ ಜನನ;
ಪಾಪ ಪುಣ್ಯಗಳ ಮನನ,
ನಿಗೂಡ ಸತ್ಯಗಳ ಯಾನ.

ಯಾರು ಬಲ್ಲರು ನಮ್ಮ ವಿಧಿ ವಿಜ್ಞಾನ .

- ವೇಣು ಆರ್ ಚಿನ್ನದೂರು

30 Oct 2016, 12:00 am

ದೀಪಾವಳಿಯ ನೆನೆದು..

ಕೈಯಲ್ಲಿ ಎಣ್ಣೆ ಕ್ಯಾನ್ ಹಿಡಿದು
ಅಮ್ಮ ಇಟ್ಟ ದೀಪಗಳ ಕಡೆಗೆ ನಡೆದು
ಬತ್ತಿ ಸರಿಮಾಡಿ ಎಣ್ಣೆ ಸುರಿದು
ದೀಪ ಹಚ್ಚಿದ ನೆನಪು…

ಅಪ್ಪ ಮನೆಯ ಹೊರಗೆ
ಬಲ್ಬಿನ ದೀಪದ ಮಾಲೆಯ ಹಚ್ಚಿ
‘ನೋಡೋ ಹೆಂಗೆ‘ ಅಂದಾಕ್ಷಣ
‘ಎಲ್ಲ ಸೂಪರ್, ಆದರೆ ಇನ್ನೊಂದು
ಲೈನ್ ಹಾಕಬೇಕಿತ್ತು‘ ಅಂತಿದ್ದೆ
ಅಪ್ಪನ ಬಳಿ ಹತ್ತು ರೂಪಾಯಿ
ಅಮ್ಮನ ಹತ್ತಿರ ಐದು ರೂಪಾಯಿ
ಅತ್ತು ಕರೆದು ಪೀಕುತ್ತಿದ್ದೆ
ಎದ್ದು ಬಿದ್ದು ಅಂಗಡಿಗೆ
ಓಡಿದ ನೆನಪು

ಕೈಯಲ್ಲಿ ತರಚಿದ ಗಾಯದ ಕುರುಹು…
ಚಿನಕುರುಳಿ, ರಾಕೆಟ್ ಹಿಡಿದು ಆಡಿದ ನೆನಪು
ತಮ್ಮನ ರಾಕೆಟ್ ಎಗರಿಸಿ ಹಾರಿಸಿದ್ದು
ಅದು ಯಾರದೋ ಬೆನ್ನಿಗೆ ಗುದ್ದಿದ್ದು
ನಂತರ ಹೊಡೆದಾಟ…

ಇಂದು ತರಹೇವರಿ ಪಟಾಕಿಯುಂಟು
ಹಬ್ಬಕೆ ಹೋಗುವ ಆಸೆಯೂ ಉಂಟು
ಹಣಕ್ಕೆ ಅಪ್ಪನ ಕೇಳುವ ಹಾಗಿಲ್ಲ
ಬೇಡುತಲಿರುವೆನು ದೇವರ, ಕಂಪನಿ ನನಗೆ
ನಾಲ್ಕು ದಿನ ರಜೆ ನೀಡಲಿ ಎಂದು...

- Halesh S

29 Oct 2016, 09:41 pm

ಇಂತೀ ನೀನ್ನಾ ಸದಾ ಪ್ರೀತ್ಸೋನ

ನೀನಿಲ್ಲದಿದ್ದರೂ ನಿನ್ನ ಪ್ರೀತಿ ಜೊತೆಗೆ ಇರಬೇಕು ಎಂದು ಆಶಿಸುವೆ....
ನಾನು ಎಲ್ಲಿದ್ದರು ಹೇಗಿದ್ದರು ಎಂದಿಗೂ ನಿನ್ನ ಪ್ರೀತಿಯು ಜೊತೆಗಿರಬೆಕೆಂದು ಬಯಸುವೆ..

ಈ ಜನ್ಮದಲ್ಲಿ ನೀನು ಸಿಗದಿದ್ದರೂ ಆ ನಿನ್ನ ಸುಂದರ ನೆನಪುಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಸವಿಯುವೆ..
ಈ ಲೋಕ ನಿನ್ನ ಕಳೆದುಕೊಂಡರು
ಈ ಲೋಕ ನಿನ್ನ ಮರೆತರೂ
ಈ ಲೋಕ ನಿನ್ನ ತೂರೆದರೂ
ನನ್ನ ಹೃದಯದಲ್ಲಿ ನೀನು ಇನ್ನೂ ಬದುಕಿರುವೆ.... ಇಂತೀ ನಿನ್ನ ಸದಾ ಪ್ರೀತ್ಸೋನು -ರಾಜ್.ಭೂಮಿ

- Rajbhumi.doddamani

29 Oct 2016, 09:26 pm

ಹೇಳೇ ಹುಡುಗಿ ನೀ ಯಾರು?

ಹೇಳೇ ಹುಡುಗಿ ನೀ ಯಾರು?
ನಿನ್ನ ನಯನ ಕಂಡು ನಾನು ಮಾರು ಹೋದೆನು
ನಿನ್ನ ತುಂಟಾಟ ಕಂಡು ಮೌನಿ ಯಾದೆನು
ಎಂದೂ ಕಾಣದ ನಗೆಯ ಇಂದು ಕಂಡೆನು
ನಿನ್ನ ಹೃದಯ ಜೈಲಿನಲ್ಲಿ ಬಂದಿಯಾದೆನು
ಹೇಳೇ ಹುಡುಗಿ ನೀ ಯಾರು?
ಸೂರ್ಯನ ನಗುವಿನಲ್ಲಿ ನಿನ್ನ ನಾ ಕಂಡೆನು
ಚಂದ್ರನ ಬಿಂಬದಲ್ಲಿ ನಿನ್ನ ಕಂಡೆನು
ದೇವರ ತೆರಿನಲ್ಲೂ ನಿನ್ನ ನಾ ಕಂಡೆನು
ನೀರಿನ ಅಲೆಯಲ್ಲೂ ಕಂಡೆ ನಿನ್ನನು
ಹೇಳೇ ಹುಡುಗಿ ನೀ ಯಾರು?
ನವಿಲಿನ ನಾಟ್ಯದಲ್ಲಿ ನಿನ್ನ ನಾ ಕಂಡೆನು
ಹಂಸದ ನಡುಗೆಯಲ್ಲಿ ನಿನ್ನ ಕಂಡೆನು
ಜಿಂಕೆಯ ಓಟದಲ್ಲಿ ನಿನ್ನ ನಾ ಕಂಡೆನು
ಮೊಲದ ಮುಗ್ದತೆಯಲ್ಲಿ ನಿನ್ನ ಕಂಡೆನು
ಹೇಳೇ ಹುಡುಗಿ ನೀ ಯಾರು?

- ಅರೆಯೂರು ಚಿ. ಸುರೇಶ್

29 Oct 2016, 02:58 pm

ಗೆಳೆಯರಿಗೆ ದೀಪಾವಳಿಯ ಶುಭಾಶಯ

ದೀಪದಿಂದ ದೀಪಾವಳಿ ಆಚರಿಸಿ.
ಸ್ವದೇಶಿ ವಸ್ತುಗಳ ಉಳಿಸಿ.
ನಗರದ ಪಟಾಕಿಯ ಸದ್ದು ಅಡಗಲು ಕಾರಣ ಹೀಗಿರಿಸಿ,
ಒಂದು ಬ್ರಹ್ಮಪುತ್ರ, ಇನ್ನೊಂದು ಕಾವೇರಿಯ
ಗುರಿಯಾಗಿಸಿ.

- ವೇಣು ಆರ್ ಚಿನ್ನದೂರು

28 Oct 2016, 09:48 pm

ಕದನ

ಮೊದಲನೆಯ ಕವನ
ಪ್ರೀತಿಯು ನವೀನ!!
ಮನಸಿನಲಿ ತನನ
ಮಾತಿರದ ಮೌನ!!

ನೂಟದಲಿ ನಯನ
ಸೆಳೆದಿಹುದು ಗಮನ!!
ಹರೆಯದಾ ಯವ್ವನ
ಪ್ರೇಮದಾ ಮನನ!!

ಒಲವಿನ ಮಿಲನ
ಜೀವನ ಪಾವನ!!
ಪ್ರೇಮಿಗಳ ಕದನ
ಪ್ರೀತಿಯ ವದನ!!

- ಪಿ.ಜಿ.ಜ್ಯೋತಿ

28 Oct 2016, 04:01 pm

ಬರದ ಸಿಡಿಲು!

ಬರದ ಸಿಡಿಲು ಬಡಿದ ಜಿಲ್ಲೆಗೆ
ಮಾರಿಯಂತೆ ಬಡಿದಿತ್ತು ಕ್ಷಾಮ
ಬರದ ಸಿಡಿಲಿಗೆ ಬೇಸತ್ತ ರೈತಮಾಮ

ರಾಜಕೀಯ ಪುಡಾರಿಗಳ ಅನ್ಯಾಯದ ನಾಮ,
ನೀರಿನ ಬವಣೆಯ ಹೇಳ ತೀರದು ರಾಮ ರಾಮ!
ನೀರಾವರಿ ಹೋರಾಟದ ಕಿಚ್ಚು ಹಚ್ಚೆಂದ ಹನುಮ,

- ವೇಣು ಆರ್ ಚಿನ್ನದೂರು

27 Oct 2016, 11:33 pm