Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀವು

ಯಾರದೋ ಭಾವಚಿತ್ರ ಅರಸಿ ಹೊರಟ ನನ್ನ ಕಣ್ಣಿಗೆ ಕಂಡವರು ನೀವು,
ಆಗ ನನ್ನ ಮನ ಪಿಸುಗುಟ್ಟಿದ್ದು ಒಂದೇ, ಆಗಿರಬಾರದೇಕೆ ಅವರೇ ನೀವು.

ಅವರೇ ನೀವೆಂದು ಅರಸಿಬಂತು ನನ್ನ
ಈ ಮನ ನೀವಿದ್ಧಲ್ಲಿಗೆ ,
ಬಿಡದೇ ಕಾಡಿರುವಿರಿ ನೀವು ನನ್ನೀ ಮನವ ಅರೆಕ್ಷಣ ಹಾಗೆಯೇ ತುಂಬಿರುವಿರಿ ಈ ನನ್ನ ತನು ಮನ.

ಪದೇ ಪದೇ ಹೇಳುತಿಹುದು ನನ್ನೀ ಮನ
ಅವರೇ ನೀವು - ನೀವು ನನ್ನವರು,
ಎಲ್ಲವೂ ನಾ ಬಯಸಿದಂತಾದರೆ ಬಾಳಿನಲಿ ಒಂದಾಗುವೆವು ನಾನು ನೀವು .

- ಕೃಷ್ಣ

04 Nov 2016, 09:43 pm

ಯಾರು ನಾವೆಲ್ಲಾ?

ಕವಿಯಾದೆ ನಾನು ಕಂಡಿದ್ದು ಬರೆಯಲಾಗಲಿಲ್ಲ:
ಭಾರತೀಯನಾದೆ ನಾನು ಕಣ್ಣಿದ್ದು ಕುರುಡನಾದೆನಲ್ಲ!
ರೈತನಾದೆ ನಾನು ಸಾಲವಿಲ್ಲದೆ ಬದುಕಲಾಗಲಿಲ್ಲ,
ಸ್ನೇಹ ಜೀವಿಯಾಗುವ ಬದಲು, ಅವಕಾಶವಾದಿಗಳಾದೆವಲ್ಲ.

ಮಾದ್ಯಮಿಕ ಶಾಲೆಯ ಮದ್ಯಮ ವರ್ಗದ ಜನರಾಗಿ ಬದುಕಲಾಗಲಿಲ್ಲ,
ಮಾನವರಾಗಿ ಮಾನವೀಯತೆಯ ನೆಲೆಯಲ್ಲಿ
ಬದುಕಲಾಗಲಿಲ್ಲ!
ಕಾಲಚಕ್ರದ ದಾಸರಾಗಿ ಜೀವಿಸುವುದು ಮರೆತೆವಲ್ಲ.
ಬುದ್ದಿಜೀವಿಗಳಾಗಿ ಬದುಕಿನ ಅರ್ಥ ತಿಳಿದು ಕೊಳ್ಳಲಾಗಲಿಲ್ಲ.

ಯಾರು ನಾವೆಲ್ಲಾ ? ಯಾರು ನಾವೆಲ್ಲಾ?

- ವೇಣು ಆರ್ ಚಿನ್ನದೂರು

04 Nov 2016, 08:53 pm

ಮಸಣದ ದಾರಿ

ಹುಟ್ಟಿ ಬಂದಿರೊ ಈ
ಅಪರೂಪದ ಜನ್ಮದೊಳಗ
ನಾನು ನನ್ನದು ಎಂದು
ಪರದಾಡುವೆ ಏಕೋ !

ಜನಿಸಿರೊ ನಿನಗೆ
ಸಾವು ಬರೋ ಕ್ಷಣ ತಿಳಿಯದು
ಸತ್ತ ಮೇಲೆ ನಿನ್ನ ಬಂಧುಗಳು
ಅತ್ತು ಕರೆಯುವರು ಒಂದೇ ದಿನ

ಜಗದ ನಿಯಮದೊಳು
ನಡೆಯುವ ಕಥೆ ಇಷ್ಟೇ
ಜೊತೆಗೆ ಹುಟ್ಟಿದ ಸಲುವಾಗಿ
ಹೊತ್ತೊಯುವರು ನಿನ್ನ ಮಸಣಕ್ಕೆ

ತಿಳಿಯದೆ ನಿನಗೆ ಮಂಕೆ
ಇದ್ದು ಸತ್ತಿರುವವರು ಮುಕ್ಕಾಲು ಜನ
ಸತ್ತು ಬದುಕಿರುವವರು ಬರಿ ಕಾಲು ಜನ
ನಿನ್ನ ಸ್ವಂತ ಮನೆಯೆ ಈ ಮಸಣ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

04 Nov 2016, 06:32 pm

ಪ್ರೇಮ್ ಕಹಾನಿ

ಎ ಮಳೆ ಹನಿಯೇ
ನೀ ಭೂಮಿಗೆ ಬಿದ್ದ ಆಕ್ಷಣವೇ
ನನ್ನ ಎದೆಯಲಿ ತುಂಬಿತು
ಪ್ರೀತಿಯ ಪನ್ನಿರಾ...

ಹನಿಗಳ ಹವಳಗಳು
ನನ್ನ ಮೊಗದ ಮೆಲೊಂದು
ರಂಗೊಲಿಯ ಬಿಡಿಸುತಲಿ
ಮನದಲ್ಲಿ ಪ್ರೀತಿಯ ಪಾರಿವಾಳಕ್ಕೆ
ಜೀವವ ನೀಡಿದವು...

ಆ ಪ್ರೀತಿಯ ಜೀವಕ್ಕೆ
ಜೀವನವ ಮುಡಿಪಾಗಿರಲೆಂದು
ನಾನ್ ಹೊರಟೆ ಅದರ ನೆನಪಲ್ಲೆ

ನಿನ್ನಯ ನೆನಪಿನಲಿ
ನಾ ಮರೆತೆ ನನ್ನನ್ನೆ....
'ನೀನೆ ನನ್ನ ಜೀವಾ' ಎನ್ನುತಲಿ
ನಾ ಬಂದೆ ನಿನ್ನಾ ಹಿಂಬದಿಯಲಿ..

ನನ್ನ ಆತರಹದ ಬರುವಿಕೆಯಾ
ನೀನ್ ಕಂಡು ಕಾಣದಂತೆ
ಹೊಗುತಿರುವದ ಕಂಡ ನನ್ನ ಕಣ್ಣುಗಳು
ಹರಿಸಿತು ಕಂಬನಿಯಾ..........

-p.m

- pm

04 Nov 2016, 11:08 am

ಮದರಂಗಿ

ಚೆಲುವೆಯರ ಚದರಂಗಿ
ಚಾಚುವ ಕೈಗೆ ಮದರಂಗಿ

ಕೆಂಪು ರೇಖೆಯಲಿ
ಕಗ್ಗತ್ತಲೆಯನು ಬೆಳಗಿಸುವಲಿ
ಕೋಪಾರುಣ ನೇತ್ರದಲಿ
ಕೋಮಲವಾಗಿಸುವ ಮದರಂಗಿ

ಕೈಗೆಟುಕುವ ಕಾಸಿನಲಿ
ಕಂಪಿನ ಶೃಂಗಾರದಲಿ
ಕಂಕಣ ಭಾಗ್ಯದಲಿ
ಕನಸಿನ ಮನೆಗೊಯುವ ಮದರಂಗಿ

ಕಣ್ಣು ಕಣ್ಣಿಗೆ ಸೊಬಗಿನಲಿ
ಕೈಲಾಸದ ಕುವರೆಯರಲ್ಲಿ
ಕಣ್ಮನ ಸೆಳೆಯುವಲಿ
ಕಲ್ಪತರುವಿನಂತಿರೊ ಮದರಂಗಿ
ಇದು ಹೆಣ್ಣು ಜನುಮದ ಒಂದಂಗಿ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

04 Nov 2016, 10:28 am

ಪರವಶ

ನಾ ಮೊದಲೇ ಬರೆದಿಡಬೇಕಿತ್ತು ಬಿಡು !!

ನೀ ಸೋಕಿ ಹಣ್ಣಾದ ಹೃದಯದ,
ಬಣ್ಣವ ಬರೆದಿಡಬೇಕಿತ್ತು !!

ಸಂಜೆ ಮೊಬ್ಬಾಗುವವರೆಗೂ,
ಹುಬ್ಬೇರಿಸಿ ಹುಡುಕಿದ, ಕ್ಷಣಗಳ
ಕವಿತೆಯಲಿ ಬರೆದಿಡಬೇಕಿತ್ತು !!

ದೂರದ ಆ ತಿರುವಿನಲ್ಲಿ ,
ನೀ ಮರೆಯಾದಾಗ ಆನಂದಕ್ಕಿಟ್ಟ
ಅಲ್ಪವಿರಾಮವ ಬರೆದಿಡಬೇಕಿತ್ತು !!

ಯಾಕೆಂದರೆ, ನಿನ್ನ ಕಣ್ಣು ನೋಡುತ,
ವಿವರಿಸಲಾಗದ ವಿಪರ್ಯಾಸ !!

- Narendra

04 Nov 2016, 09:44 am

ಇದು ನಿಜಾನಾ!!!

ಆಸೆಗೆ ಮಿತಿಯಿಲ್ಲ
ಅಹಿಂಸೆ ಉಳಿಯುತ್ತಿಲ್ಲ
ಅಸಂಖ್ಯಾತ ಜನರಲ್ಲಿ
ಅಹಿತಕರ ಜೀವನ ನಂದಾಯಿತಲ್ಲ

ಅಂದು ಕೊಂಡದ್ದು ಸಿಗುತ್ತಿಲ್ಲ
ಅರಮನೆ ಕನಸಾಯಿತಲ್ಲ
ಅವರಿವರ ನಡುವೆಯೆಲ್ಲ
ಅಂಜುವವ ನಾನಾದೆನಲ್ಲ

ಆಸೆಯಲಿ ಅರವತ್ತಾಯಿತಲ್ಲ
ಅವಧಿ ಮುಗಿಯುತ ಬಂದಿತಲ್ಲ
ಅಂಬರದ ಅಂಚಿನಲಿ
ಅಳಿದುಳಿದ ಕಣ ನಾನಾದೆನಲ್ಲ
ಇದು ಅದೇನಾ ಇದು ನಿಜಾನಾ...!!!!!

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ{9743216235}

- ನಾಗರಾಜ ಬಾಕೆ೯ರ್

04 Nov 2016, 08:40 am

ಶಿಲಾ ಬಾಲೆ

ನತ೯ನದ ಭಂಗಿಯಲಿ
ನಾನಾಥ೯ ನೀಡಿದರು
ನಲ್ಮೆಯ ನಟಿಯಂತೆ
ನೀ ನಾಟ್ಯ ಶೃಂಗಾರಿ

ವೈಭವಕ್ಕೊಂದು ಮೆರಗನ್ನೀಡಿ
ಇತಿಗೊಂದು ಸಾಕ್ಷಿ ಮಾಡಿ
ನಾಟ್ಯ ಮಣಿಯೊಡಗೂಡಿ
ಎಲ್ಲ ಯುಗಕ್ಕು ನೀ ಜನಮನದ ಗುಡಿ

ಕಲ್ಲಿನೊಳು ಕಲೆಕಂಡು
ಕೆಲವು ಶಿಲಾ ಮೂತಿ೯ಗಳಾಗಿ
ನೆಲೆ ನಿಂತ ಶಿಲಾ ಬಾಲೆ
ನೀನೊಂದು ಅದ್ಬುತವೇ
ನೀನೆಂದು ಅಜರಾಮರವೇ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

03 Nov 2016, 05:41 pm

ಒಂದು ಸಾವಿನ ಸುತ್ತ

ಮಹಜರು ಮಾಡಲು ಜನರ ಸಂತೆಯೆ ಬಂದಿದೆ,
ಅವರವರ ಬಾಯಲ್ಲಿ ಅವರಿಗೆ ತಿಳಿದಂತೆ
ಅಂತೆ ಕಂತೆ…
ಸತ್ತಿದ್ದು ಒಬ್ಬ - ಹುಟ್ಟಿ ಹಬ್ಬಿದ್ದು
ನೂರು ಕತೆ…

ಸಾವಿನ ನಂತರವೂ ಬದುಕಿಸಿಟ್ಟರು,
ನಿಂತರೂ ಉಸಿರು ಆಂಬೋಣಗಳಿಗೆ
ಕೊರತೆಯಿಲ್ಲ…
ನನಗೇಕೋ ಊರವರ ಮೇಲೆಲ್ಲ ಗುಮಾನಿ,
ಮಾತುಗಳಲ್ಲಿ - ಊಹೆಗಳಲ್ಲಿ
ಪದೇ ಪದೇ ಸಾಯಿಸಿದ್ದಾರೆ
ತಮಗೆ ಬೇಕಾದಂತೆಲ್ಲ…

ಮರಣೋತ್ತರ ಪರಿಕ್ಷೆಯಲ್ಲಿ
ಕಳೇಬರವ ಅಡ್ಡುದ್ದ ಕೊಯ್ದುದಕಿಂತ ಕ್ರೂರ
ಈ ಜನರ ಯೋಚನಾ ಲಹರಿ…
ಸತ್ತವನ ಆತ್ಮ ನಗುತ್ತಿತ್ತು,
ಕಂಡು ಜಗದ ಮುಖವಾಡಗಳ ಪರಿ…

- ಒಂಟಿತೋಳ

03 Nov 2016, 12:00 pm

ನಾನು ಗಲೀಜು

ಒಂಟಿಯಾಗಿರುವನೊಬ್ಬನ ಮನಸೊಂದು
ಮೂಲೆಯಲೆಲ್ಲೋ ಇರುವ ಕಸದ ಬುಟ್ಟಿಯಂತೆ…
ಆತ ತಾನೇ ಮೂಟೆಕಟ್ಟಿ ಎಸೆದ ಭಾವನೆಗಳ ರಾಶಿಯನು
ಆಗಾಗ ತಡಕಾಡುತ್ತಾನೆ …
ಸ್ವಚ್ಛ ಮನದಲ್ಲಿ ಹುಡುಕಲು
ಹಳೆಯದೇನೂ ಇಲ್ಲ,
ಹುಡುಕಿದರೆ ಕಸದಡಬ್ಬಿಗೆ
ಕೈಯಾಡಿಸಬೇಕು ತಾನೇ…?
ಈ ಮನೆ-ಮನಗಳರೆಡೂ
ಸ್ವಲ್ಪವಾದರೂ ಧೂಳಾಗುತ್ತಿರಬೇಕು,
ಬದುಕೆಂಬ ಬಕೇಟಿಗೆ ಸಾಂತ್ವನದ ನೀರುತುಂಬಿ
ಮನದ ನೆಲವನೊರೆಸುವ ಮಜವೇ ಬೇರೆ…
ಹರಕು ಬಟ್ಟೆಗೂ ಕರ್ಮ ಸಂತೃಪ್ತಿ ಸಿಗುವುದು…
ಗೆಳತಿ,
ಹಾಗಾಗಿ ನಾನು ಗಲೀಜು…

- ಒಂಟಿತೋಳ

03 Nov 2016, 11:29 am