ಕವಿಯಾದೆ ನಾನು ಕಂಡಿದ್ದು ಬರೆಯಲಾಗಲಿಲ್ಲ:
ಭಾರತೀಯನಾದೆ ನಾನು ಕಣ್ಣಿದ್ದು ಕುರುಡನಾದೆನಲ್ಲ!
ರೈತನಾದೆ ನಾನು ಸಾಲವಿಲ್ಲದೆ ಬದುಕಲಾಗಲಿಲ್ಲ,
ಸ್ನೇಹ ಜೀವಿಯಾಗುವ ಬದಲು, ಅವಕಾಶವಾದಿಗಳಾದೆವಲ್ಲ.
ಮಾದ್ಯಮಿಕ ಶಾಲೆಯ ಮದ್ಯಮ ವರ್ಗದ ಜನರಾಗಿ ಬದುಕಲಾಗಲಿಲ್ಲ,
ಮಾನವರಾಗಿ ಮಾನವೀಯತೆಯ ನೆಲೆಯಲ್ಲಿ
ಬದುಕಲಾಗಲಿಲ್ಲ!
ಕಾಲಚಕ್ರದ ದಾಸರಾಗಿ ಜೀವಿಸುವುದು ಮರೆತೆವಲ್ಲ.
ಬುದ್ದಿಜೀವಿಗಳಾಗಿ ಬದುಕಿನ ಅರ್ಥ ತಿಳಿದು ಕೊಳ್ಳಲಾಗಲಿಲ್ಲ.
ಮಹಜರು ಮಾಡಲು ಜನರ ಸಂತೆಯೆ ಬಂದಿದೆ,
ಅವರವರ ಬಾಯಲ್ಲಿ ಅವರಿಗೆ ತಿಳಿದಂತೆ
ಅಂತೆ ಕಂತೆ…
ಸತ್ತಿದ್ದು ಒಬ್ಬ - ಹುಟ್ಟಿ ಹಬ್ಬಿದ್ದು
ನೂರು ಕತೆ…
ಸಾವಿನ ನಂತರವೂ ಬದುಕಿಸಿಟ್ಟರು,
ನಿಂತರೂ ಉಸಿರು ಆಂಬೋಣಗಳಿಗೆ
ಕೊರತೆಯಿಲ್ಲ…
ನನಗೇಕೋ ಊರವರ ಮೇಲೆಲ್ಲ ಗುಮಾನಿ,
ಮಾತುಗಳಲ್ಲಿ - ಊಹೆಗಳಲ್ಲಿ
ಪದೇ ಪದೇ ಸಾಯಿಸಿದ್ದಾರೆ
ತಮಗೆ ಬೇಕಾದಂತೆಲ್ಲ…
ಮರಣೋತ್ತರ ಪರಿಕ್ಷೆಯಲ್ಲಿ
ಕಳೇಬರವ ಅಡ್ಡುದ್ದ ಕೊಯ್ದುದಕಿಂತ ಕ್ರೂರ
ಈ ಜನರ ಯೋಚನಾ ಲಹರಿ…
ಸತ್ತವನ ಆತ್ಮ ನಗುತ್ತಿತ್ತು,
ಕಂಡು ಜಗದ ಮುಖವಾಡಗಳ ಪರಿ…
ಒಂಟಿಯಾಗಿರುವನೊಬ್ಬನ ಮನಸೊಂದು
ಮೂಲೆಯಲೆಲ್ಲೋ ಇರುವ ಕಸದ ಬುಟ್ಟಿಯಂತೆ…
ಆತ ತಾನೇ ಮೂಟೆಕಟ್ಟಿ ಎಸೆದ ಭಾವನೆಗಳ ರಾಶಿಯನು
ಆಗಾಗ ತಡಕಾಡುತ್ತಾನೆ …
ಸ್ವಚ್ಛ ಮನದಲ್ಲಿ ಹುಡುಕಲು
ಹಳೆಯದೇನೂ ಇಲ್ಲ,
ಹುಡುಕಿದರೆ ಕಸದಡಬ್ಬಿಗೆ
ಕೈಯಾಡಿಸಬೇಕು ತಾನೇ…?
ಈ ಮನೆ-ಮನಗಳರೆಡೂ
ಸ್ವಲ್ಪವಾದರೂ ಧೂಳಾಗುತ್ತಿರಬೇಕು,
ಬದುಕೆಂಬ ಬಕೇಟಿಗೆ ಸಾಂತ್ವನದ ನೀರುತುಂಬಿ
ಮನದ ನೆಲವನೊರೆಸುವ ಮಜವೇ ಬೇರೆ…
ಹರಕು ಬಟ್ಟೆಗೂ ಕರ್ಮ ಸಂತೃಪ್ತಿ ಸಿಗುವುದು…
ಗೆಳತಿ,
ಹಾಗಾಗಿ ನಾನು ಗಲೀಜು…