Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಗಾಯದ ಮೇಲೆ ಮತ್ತೆ ಮತ್ತೆ ಬರೆಗಳ ಓಡನಾಟ.....
ನಲುಗಿದ ಹೃದಯದ ಜೊತೆ ಒಣ ಜಂಭದ ಜಗಳಾಟ......
ಸೋತ ಮನಸಿಗಿಲ್ಲ ಕಿಂತ್ಥಿಚ್ಚು ಸಮಾಧಾನಗಳ ಸಹಪಾಠ....
ತಿಳಿ ನೀ ವಿಧೀಗೆ ಕಾಡುವುದೊಂದೇ ದೈನಂದಿನ ಪರಿಪಾಠ.....
-ಬಂಗಾರದ ಗಿಣಿ
- shashidhar
06 Nov 2016, 12:38 pm
ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಮನ ತುಡಿಯುವುದು
ಕನ್ನಡತನವನು ಉಳಿಸುವ ಸಲು
ಕನ್ನಡಿಯೋಳು ಕನ್ನಡ ಸರಿ ಕಾಣುವುದು.......
ಕನ್ನಡತನವೊಂದಿದ್ದರೆ ಸಾಕು
ಕಲಿಯಲು ಸಾವಿರ ಭಾಷೆಯನು
ಕನ್ನಡತನದಲಿ ಉಸಿರೇ ಸಾಕು
ಮೆಟ್ಟುವೆ ನೀ ಬದುಕಿನ ಬಂಡಿಯನು
... ಕನಸು ಕನ್ನಡ.. ಮನಸು ಕನ್ನಡ
ಬಳಿಯಿರಲು ಕನ್ನಡದ ಮಲ್ಲಿಗೆ
ಕಂಡವರ ತೋಟದ ಹೂ ಬೇಕೆ
ಬೀಸುವ ಕಂಪು ಕನ್ನಡವಾದರೆ
ಪರಭಾಷೆಯ ವ್ಯಾಮೋಹವೇಕೆ
..... ನೆವೆಂಬರ್ *ಕನ್ನಡಿಗನಲ್ಲ*...
......ನಂಬರ್ ಒನ್ *ಕನ್ನಡಿಗ*...
..... *ಕನ್ನಡಿಗ*ಹಂಸರವಿ ನಿತ್ಯಾ
- Kannadiga Nithyananda
06 Nov 2016, 10:42 am
ಮನಸಿನಾ ಪುಸ್ತಕದಿ
ಮರೆಯಾದ ಪುಟ ನೀನು
ಮತ್ತೆ ತೆರೆಯಲು ಬಹುದೆ
ಮುಗಿಸಿರುವ ಅಧ್ಯಾಯ..
ಮನದಿ ಕಟ್ಟಿಹ ಗುಡಿಯ
ಕೆಡವಿ ಹೋಗಿಹೆ ನೀನು
ಮತ್ತೆ ಪೂಜೆಯು ಏಕೆ
ಕಲಶವಿರದಾ ಗುಡಿಗೆ..
ಮನವು ಕೂಡಿದ ಕನಸ
ಅರಿತು ಅಳಿಸಿಹೆ ನೀನು
ನೆನಪಿಸುವ ಮನಸೇಕೆ
ಮತ್ತೆ ಕೂಡದ ಕನಸ..
ಮನದಿ ನೀಡಿದ ನೆಲೆಯ
ತೊರೆದು ಸಾಗಿಹೆ ನೀನು
ಬಲಿಯಾದ ಮನಕೀಗ
ಭಾವನೆಯ ಹಂಗೇನು..?
ಬೆಸೆದಿರುವ ಬಂಧವನೆ
ಭೇದಿಸಿರುವೆಯ ನೀನು
ನಿನ್ನ ಒಲವಿನ ಸೆರೆಯ
ಬಂಧಮುಕ್ತಳು ನಾನು..
©CRB
- ಭಾವ ಮೃದಂಗ
05 Nov 2016, 11:16 pm
ನಿನ್ನ ನೋಡಿದ
ಮೊದಲ ನೋಟದಿ
ಹೃದಯದೊಳಗೊಂದು
ಸಡಗರ ಸಂಭ್ರಮಿಸುತ್ತಿದೆ
ಒಂದು ನಿಮಿಷದ
ಮೊದಲ ನೇರ ನೋಟದಿ
ಸ್ವಗ೯ದ ಸಾಮ್ರಾಜ್ಯ ಗೆದ್ದಂತಾಗಿದೆ
ನಿನ್ನಲಿ ನಾ ಬಿದ್ದಂತಾಗಿದೆ
ಮುಗಿಲ ಅಂಚಿನಲ್ಲಿರುವ
ಬೆಳ್ಳಿ ಚುಕ್ಕೆಯಂತೆ ನಿನ್ನ ನಗು.
ಕಣ್ಣ ಸನ್ನೆಯಲಿ ಮಿನುಗುತ್ತಿದೆ
ಪ್ರೀತಿ ಪರದೆಯ ಇಣುಕು ನೋಟ
ಮುಚ್ಚಿಟ್ಟುಕೊಳ್ಳದೇ ಹೇಳಿಬಿಡು
ಅಚ್ಚು ಮೆಚ್ಚಿನ ಹುಡುಗ ನಾನೆಂದು
ಸಚ್ಚ ಪ್ರೀತಿಯ ನೀಡುವೆಯೆಂದು
ನಿನ್ನೊಡನೆ ಕೊನೆಯವರೆಗೂ ಇರುವೆನೆಂದು
ಹೇಳಿ ಬಿಡು ಬಾಲೆ! ಇದು ನನ್ನ ಕರೆಯೋಲೆ!!!
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
05 Nov 2016, 08:33 pm
ತಂಪಾದ ಗಾಳಿಯಲೊಂದು ತೆಲಿ ಬಂದಿದೆ ಕನಸು,
ನೆನಪುಗಳ ನೆಪದಿ ಕುಳಿತಿದೆ ಮನಸು..!
ಕಚಗುಳಿ ಇಟ್ಟಾಂತ ,ಹಸಿಬಿಸಿ ಅನುಭವವ
ತಿಳಿಸಲಿ ಹೇಗೆ ಅವಳೆದುರಲಿ..
ಅವಳೆದುರ ನಡುಕವನು, ಸನಿಹದ ಪುಳಕವನು
ವಿವರಿಸಲಿ ಹೇಗೆ ನನ್ನವಳೆದುರಲಿ...
ಅವಳು ಎದುರಾದರೇ,
ಮರೆತೆ ಬಿಡುವೇನು ನಾನು
ಹೇಳಲೆ ಬೇಕಾದ ವಿಶಯ..
ತಿಳಿಸಿ ಹೇಳಾಲೆ ಬೇಕಾಗಿದೆ ಇಂದು,
ಈ ಮನಸಿನ ಗೊಂದಲವೆಲ್ಲಾ..
ಪಡೆಯಲೆ ಬೇಕಾಗಿದೆ ನಿನ್ನನ್ನು...
- ಬಾನು ಅಡಿಗಾರ್
05 Nov 2016, 05:15 pm
ಬಾಳಿನಾ ಯಾನದಲಿ ಬಣ್ಣವದು ನೂರು..
ಕೈ ಚಾಚಿ ಹಿಡಿದರೆ ಸಿಗುತಿಲ್ಲ ಚೂರು..
ಮನಸಿನಾ ಗೊಂದಲವ ಕೇಳುವವರಾರು..
ಗೊಂದಲಕೆ ಉತ್ತರವ ನೀಡುವವರಾರು..
ಭರವಸೆಯ ಮಾತುಗಳಿಗಿಲ್ಲ ಕೊನೆಯಿಲ್ಲಿ..
ಭರವಸೆಯು ಉಳಿಯುವುದೆ ಬರಿಯ ಮಾತುಗಳಲ್ಲಿ..
ಸಂತಸದಿ ನಲಿವಾಗ ಎಲ್ಲ ಬಂಧುಗಳಿಲ್ಲಿ..
ನೋವಿನಾ ದಿನ ಬರಲಿ ಬಂಧ ಕಳಚುವುದಲ್ಲಿ..
ಮುತ್ತಿದಾ ಕಾರ್ಮೋಡ ಮಳೆಯ ಸುರಿಸಲೆಬೇಕು..
ನೋವಿನಾ ಹಾದಿಯನು ನಗುತ ಜಯಿಸಲೆಬೇಕು..
ಗೆದ್ದಾಗ ಬರುವರು ಹೇಳಿ ಸಂಬಂಧ..
ಮತ್ತೆ ಕೂಡುವುದೇನು ಕಡಿದಿರುವ ಬಂಧ..??
©CRB
- ಭಾವ ಮೃದಂಗ
05 Nov 2016, 02:35 pm
ಮನದ ಭಾವಲೋಕದೊಳಿಳಿದು
ಮನದ ಮನೀಷೆಯನು
ಮರ್ಮದಿಂದಲೆ ಮಣಿಸಿ
ಮನವನು ಮಯಣದಂತೆ
ಕರಗಿಸುವ ಶಕ್ತಿ ನೀನು..
ಮನದ ಕಡಲೊಳಗಿಳಿದು
ಎಲ್ಲ ಭಾವವ ಸ್ಪುರಿಸಿ
ಮನದಿಂಗಿತವನರಿಯೊ ಮನಸ್ವಿ ನೀನು
ನಿನ್ನ ಓಜಸ್ಸಿನ ಪಥದ
ಪಯಣ ಚಲಿಸಿದೆ ಗಾವುದ..
ನಿನ್ನ ಮಾರ್ಮಿಕ ಹಸ್ತ
ಮನದ ಮನೋಗತವನೇ
ಉದ್ವೃಿತ್ತಗೊಳಿಸುತಿದೆ
ಮನದ ಶರಧಿಯನು
ಮಥನಗೊಳಿಸಿಹೆ ನೀನು
ಇನ್ನು ಬರಬಹುದೇನು ಮನ್ವಂತರ..
ಮಬ್ಬು ಕವಿದಿಹಮನಕೆ
ಮಯೂಖದ ಹೊಸ ಸ್ಪರ್ಶ
ಹೊಸಜೀವಕಳೆಯ ನಿಮಿತ್ತವನರಿವ
ಸ್ವಾಧ್ಯಾಯದೊಳು ಚಿತ್ತ
ಈ ತಥ್ಯ ಮಿತ್ಯದೊಳಗೆ
ಮನವು ಮರ್ದನವಾಗದಿರಲಿ ಮತ್ತೆ..
ಮನದ ಔದ್ಧತ್ಯಕೆ
ಉಪೋದ್ಧಾತವ ಬರೆದವನೆ ನೀನು
ಮನದ ಮಾಧುರ್ಯವಾ
ಮಾರ್ಗಣದಿ ವಧಿಸದೆಯೆ
ಹೃದಯ ಮಿಡಿತಕೆ
ಹೊಸ ಭಾವ ಬೆರೆಸು..
©CRB
- ಭಾವ ಮೃದಂಗ
05 Nov 2016, 02:33 pm
ನಾನು ಈ ಪ್ರಪಂಚದಲ್ಲಿ ಹೆಣ್ಣಾಗಿ
ಹುಟ್ಟುದಕ್ಕಿಂತ ನಿನ್ನ ತರ ಒಂದು
ಗೊಂಬೆಯಾಗಿ ಜನ್ಮ ತಾಳಿದ್ದರೆ
ನಿನಗಿಂತ ಎಷ್ಟೋ ಖುಷಿ ಆಗಿರುತ್ತಿದ್ದೆ...
ಒಡಹುಟ್ಟಿದ ಸಹೋದರಿ ಎಂದು
ನೆನೆಸದೆ ನರ ರಾಕ್ಷಸರ ತರ ತಮ್ಮ
ಕಾಮ ಕ್ರೋಧವನ್ನು ತೋರ್ಪಡಿಸಿ
ಇಲ್ಲಿ ಜೀವಂತವಾಗಿಯೆ ಭಕ್ಷಿಸುವರು...
ತಮ್ಮ ಕಾಮದಾಹದ ತೀಟೆ ತೀರಿಸಲು
ಪ್ರೀತಿ ಎಂಬ ನಾಟಕವಾಡುವರು
ಅಮೂಲ್ಯವಾದ ಜೀವದ ಬೆಲೆ
ಅರಿಯದೆ ಜೀವಂತವಾಗಿ ಹೂಳುವರು...
ವರದಕ್ಷಿಣೆ ಎಂಬ ಮಹಾಮಾರಿಯು
ಇದಕ್ಕಿಂತ ಭಿನ್ನವಾಗಿಯೇನು ಇಲ್ಲ
ಅಲ್ಲಿ ಒಂದೇ ಕ್ಷಣ ಸಾಯಿಸುವರು
ಇಲ್ಲಿ ಅಣು ಅಣುವಾಗಿ ಸಾಯಿಸುವರು...
ಹೆಣ್ಣುಹೆತ್ತವರು ಎಂಬ ಒಂದೇ ಕಾರಣಕ್ಕೆ
ಪತ್ರ ಹಿಡಿದು ಬೀದಿ-ಬೀದಿ ಅಲೆಯುವರು...
ಲಕ್ಷ ಲಕ್ಷ ಸೇರಿಸುವ ಚಿಂತೆಯಲೇ
ಭಗವಂತನ ಪಾದ ಸೇರುವರು ನನ್ನ ಹೆತ್ತವರು...
ಹೆಣ್ಣು ನೋಡಲು ಬರುವರು ಹತ್ತಾರು
ವಾಹನಗಳಲ್ಲಿ ಸಾಲು ಸಾಲಾಗಿ
ಕಪ್ಪು ಬಣ್ಣದ ಹುಡುಗಿಯೆಂದು ಗುನುಗಿ
ತಿಂದುಂಡು ಹೋಗುವರು ಮೌನವಾಗಿ...
ನಿಜವಾಗಲೂ ನಾನು ಕಪ್ಪೇ??
ಅಥವಾ ಅವರ ನೋಟವೇ??
ಅಷ್ಟಕ್ಕೂ ನಾನು ಕಪ್ಪಗಿದ್ದದ್ದು
ನಿಜವಾಗಲೂ ನನ್ನದೇ ತಪ್ಪೇ??
ತಪ್ಪು-ಒಪ್ಪುಗಳ ತುಲನೆಯಲ್ಲಿ
ನಾನಂತೂ ಒಂಟಿಯೀಗ...
ಕಪ್ಪು-ತಪ್ಪುಗಳನು ಮೇಲಿರುವ
ಅವನೊಬ್ಬನೇ ತಿದ್ದಬೇಕೀಗ...
*~~~~~~~~~~~~~~~~~~~~~~~~~~~~~~~*
✍
- ಸಲ್ಮಾನ್ ಸಜೀಪ
05 Nov 2016, 01:10 pm
ಬದಲಾಗದಿರಲಿ ನಡೆಯಲ್ಲಿ ಎಂದು ನಿನ್ನ ಹಾ-ಭಾವ,||
ಮನದೊಳಿದ್ದರೂ ಅದೆಷ್ಟೇ ನೋವುಗಳ ಕಾವ,||
ನಿಡುತ್ತಿರು ನೀನವಕೆ ದಿನನಿತ್ಯ ನಿನ್ನದೆಯಾದ ಕಾವ,||
ಅದರಿಂದ ಪಡೆದುಕೋಳ್ಳುವವು ನೋವಲ್ಲು ನಲಿಯಲು ಜೀವ.
- ಶೇಕರ ಬಂಡಿ
05 Nov 2016, 07:20 am
ಭವ್ಯಭಾರತದ ಕನಸು ಕಂಡು ನಮ್ಮಿಂದ ಕಣ್ಮರೆಯಾದ ಓ ಕಲಾಂ ||
ಭಾರತದ ಶಕ್ತಿಪ್ರದಶ೯ನಕ್ಕೆಂದ ಇಹಲೊಕವ ತೊರೆದು ಚಂದ್ರನಡೆಗೆ ನಡೆದ ನಿನಗೊಂದು ಸಲಾಂ ||
ಮತ್ತೊಮ್ಮೆ ನಿಬರುವ ಸಮಯಕ್ಕಾಗಿಟ್ಟುಕ್ಕೊಂಡು ಕಾಯುತ್ತಿದೆ ಇಡಿ ಭರತ ಖಂಡ ಅಲರಾಂ ||
ಅದೆಷ್ಟು ಬಿಟ್ಟಿರುವೆ ನಿನಿಲ್ಲಿರುವಾಗ ಇಲ್ಲಿಂದಲ್ಲಿಗೆ ರಾಕೆಟ್ ||
ಈಗಲೇ ಯಾವುದಾದರೊಂದಕ್ಕೆ ತೆಗೆದುಕೊಂಡುಬಿಡು ಅಲ್ಲಿಂದಲ್ಲಿಗೊಂದು ಟಿಕೆಟ್.
- ಶೇಕರ ಬಂಡಿ
05 Nov 2016, 06:24 am