Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನ

ಬಂಧನವೆಂಬ ಸಂಕೋಲೆಯಲ್ಲಿ
ಕಣ್ಣತುಂಬಾ ಕಣ್ಣೀರು ಸುರಿಸಿದರು
ಕೊಡ(ಬಿಂದಿಗೆ ) ತುಂಬಾಲಿಲ್ಲ ಎನ್ನುವ ಜನರ ಮಧ್ಯೆ
ನಂಬಿಕೆಯೇ ನಿರೀಕ್ಷಿತಾ
ಸರಿದೂಗದಿದ್ದಾಗ
ಮೌನ ಅನಿರೀಕ್ಷಿತ.
ಎ ಜಿ ಶರಣ್

- ಎ ಜಿ ಶರಣ್

19 Nov 2016, 07:14 am

ಪ್ರೇಮ ಜೋಡಿ

ನನ್ನ ನಿನ್ನ ಜೋಡಿ
ಕೂಡಿದ ಹಕ್ಕಿಗಳಂತೇ

ನೀಲ ಬಾನಿನಲ್ಲಿ ಮುಕ್ತ
ಹಾರಾಡುತಾ ಇರಬೇಕು

ಪ್ರೇಮ ಪಕ್ಷಿಗಳ ತಾವು
ಪ್ರೇಮವೆ ಗುರಿ ತಮ್ಮನ

ಜಗ ಮಾತ ಮನದಲ್ಲಿ
ಏಕೆ ತೆಗೆದುಕೊಳ್ಳಬೇಕು

ಬಂಡೂಪಂತ ಕೂಲಕರ್ಣಿ

- Bandopant Kulkarni Solapur

19 Nov 2016, 06:37 am

ನಾನೇರಿದೆತ್ತರವನೇರಲಾರೆ

ನಾನೇರಿದೆತ್ತರವನೇರಲಾರೆ


ನೀನೇರಿದೆತ್ತರವನೇರಿದರೂ
ನಾನೇರಿದೆತ್ತರವನೇರಲಾರೆ
ನಾನೇರಿದೆತ್ತೆತ್ತರದಡಿಯನೇರು ಬಾರೋ
ಏರಿದೆತ್ತರದಾಚಾಚೆಗೂ ಕಾಣು ಬಾರೋ


ಊದುವೇನು ಕೇಳಿಲ್ಲಿ ನಾನೇ
ಕೊಳಲು
ನಿಜವಲ್ಲ ನೀನು ಬರೀ ಕೊಳಲ
ನೆಳಲು


ಹುಲ್ಲುಹಾಸಿನ ಮೇಲೆ ತೆರೆದು
ಅಂಗಾತ ಮಲಗಿರುವೆ
ಹಿಡಿದು ಸಂಭೋಗಿಸಲು ನಿನಗೂ
ನೀಗದೇನೋ ?
ಸದಾ ಈ ಕಗ್ಗು ಮೊಲೆಗಳದೇ
ಕಾರುಣ್ಯ ನಿನಗೂ
ತಿಕ್ಕಿ ಹಾಲುಕ್ಕಿಸಲು ಉಕ್ಕಿಸಿದ
ಹಾಲೇ ಮುಕ್ಕಲು


ಮೊಲೆಮುಡಿ ಮುಟ್ಟಿ ಮುತ್ತಿಡದೇ
ಸ್ವಾದ ಹುಟ್ಟುವುದೇ ನಿನ್ನಲಿ
ಸವಿ ಮನಸೇ ಕನಲಿದರೆ ಸಿಹಿ ನಾದ
ಹೊರಡುವುದೇ ನನ್ನಲಿ


ಒತ್ತಿ ಬಾಯ್ತುಂಬಿ ಮೊಲೆ ಹಿಡಿದು
ಹಸಿ ಹಾಲು ಬೇಕೆಂದರೂ ಬಂದುಣ್ಣು
ಉಣ್ಣೆಗಳ ತೆರದಿ ಹರಿದಾಡುತಿಲ್ಲೆ
ಬಿಸಿ ರುಧಿರದ ಮೇಲೂ ಕಣ್ಣೇ ?


ರಸ ಋಷಿಯ ಬುದ್ಧಿ ಭಾವಗಳು
ಕಲೆತ ಸಿದ್ಧಿ ಕಾಣಿಲ್ಲಿ
ಬಿಸಿ ರುಧಿರ ನೆದರ ಚುಕ್ಕಿಗಳಿಗೆ
ರಾಕೆ ಸುಖಿಸುವಳೊ ಇಲ್ಲಿ ?
ಬಾ ತಪಸಿ ರಸ್ಯೆ ಬಂದುಣ್ಣು
ಎಲ್ಲ ಮರೆಸುವುದು ಹರಡಿ ನನ್ನೆದೆಯ ಹೊನ್ನು
ತೆರೆಸುವುದು ನಿನ್ನೆದೆಯ ಕಣ್ಣು
ಮೊಳಕೆಯೊಡೆಸುವುದು ಊರಿ ಹೊಸ ಬೀಜವನ್ನು

- ದುರ್ಯೋಧನ್

- raveendrakatti

18 Nov 2016, 10:04 pm

ಮನಸು ಜಾರುತಿದೆ...!

ಇಳಿ ಸಂಜೆ ಕವಿದಂತೆ
ಮನಸು ಜಾರುತಿದೆ
ಅವಳ ನೆನಪುಗಳ ನೆಪದಿಂದೆ

ಭಾರವಾದ ಮನಸ್ಸು
ಕಣ್ಣೀರ ಅಗಮನದಿ
ಹಗುರಾಗಿದೆ..
ನಗು ಮೂಡಿದೆ
ಅವಳೊಂದಿಗೆ ಕಳೆದ
ಸವಿಘಳಿಗೆಯ ನೆನೆದು..

ಮರುಕ್ಷಣವೇ ಮನಸು
ಜಾರುವುದು
ಭಾವುಕ ಚಿಂತನೆಗಳೆಡೆಗೆ..
ಆದರು ಉಳಿಯಬೇಕಿದೆ
ಉಳಿಸಿಕೊಳ್ಳಲು
ಅವಳ ನೆನಪುಗಳ ಸಲುವಾಗಿ..

- ಬಾನು ಅಡಿಗಾರ್

18 Nov 2016, 09:18 pm

ಬುರುಜು

ಪೋಲಿ ಪಡ್ಡೆಗಳ ಔತಣಕೂಟಕೆ
ಇರುಳು ಚಂದ್ರನ ಬೆಳಕಿನ ವ್ಯವಸ್ತೆ…
ಕುರುಚಲು ಚಾಪೆಗೆ ಅಂಡೂರಿದ
ಯುವಕರ ಸಹಿಸಲೇ ಬೇಕು,
ಇದು ಹಳೆಯ ಬುರುಜಿನ ವ್ಯಥೆ……

ಹಿಂದೊಬ್ಬ ರಾಜ ಇದ್ದಿರಬಹುದು,
ಸುಲ್ತಾನ ಆಳಿರಬಹುದು,
ಅಳಿದ ಮೇಲೆ ಉಳಿದದ್ದು
ಅಳುವು ಬುರುಜು…
ಪಾರಿವಾಳಗಳ ತಲೆಮಾರೊಂದಕ್ಕೆ
ಬೇಗಂ ಒಬ್ಬಳು ಕಾಳುಣಿಸಿದ್ದಿರಬಹುದು…

ಶೇಂಗಾಪೊಟ್ಟಣಕೆ ಕೈಹಾಕುವ
ಹುಡುಗರ ಕೈಲೊಂದು ಸಾರಾಯಿ ಶೀಷೆ,
ದರಬಾರಿನ ಅಂಕಣದಲ್ಲಿ
ತುಂಬಿತುಳುಕುತಿದೆ ನಶೆ…

ಜಾಲಂಧ್ರದ ಕಿಡಕಿಯಲಿ
ರಾಜಕನ್ಯೆ ಇಣುಕಿ ನಕ್ಕಿದ್ದಳು,
ಈಗ ಅಲ್ಲೊಬ್ಬ ಬೀಡಿ ಸುಟ್ಟು
ಕಡ್ಡಿ ಹೊರಗೆಸೆದು ಹೊಗೆ ಬಿಟ್ಟ…
ರಾಜಭಟ ನಿಂತಿದ್ದ ಗೋಡೆಗೆ
ಎಣ್ಣೆಗುಂಗಿನಲೊಬ್ಬ ಉಚ್ಚೆ ಹಾರಿಸಿದ…

ಕಬಾಬು ಕಡಿದು ಲೋಕಾರೂಢಿ
ಮಾತನಾಡಿದವರೆಲ್ಲ
ಆಸ್ತಾನದ ಜವಾಬ್ದಾರಿಯುತ ಸತ್ಪ್ರಜೆಗಳು…
ಹಳೆ ಪ್ರೇಮಿಕೆಯ ಹೆಸರು ಕೆತ್ತುತ್ತಿದ್ದವ
ದರಬಾರಿನ ಚಿತ್ರಗಾರನಾಗಿದ್ದಿರಬೇಕು……

ಹುಚ್ಚಾಗಿ ಕುಣಿದವರೆಷ್ಟೋ…
ಹೆಚ್ಚಾಗಿ ಕಕ್ಕಿದವರೆಷ್ಟೋ…
ಬುರುಜೆಂದು ತಲೆಕೆಡಿಸಕೊಂಡಿಲ್ಲ,
ರಾಜನೂ ಉಳಿದಿಲ್ಲ
ಯುವಕರೂ ಉಳಿದುಕೊಳ್ಳಲು ಬಂದಿಲ್ಲ…
ಬುರುಜು ಒಂಟಿ…
ಅಳಲು ಕೇಳಲುಇರುವುದು
ಕೆಲವು ಗಾಜಿನ ಬಾಟಲಿಗಳು ಮಾತ್ರ……

- ಒಂಟಿತೋಳ

18 Nov 2016, 09:00 pm

ವಿಪರ್ಯಾಸ..

"ತತ್ವಜ್ಞಾನಿ ವಿಧೂಷಕನಂತೆಯೂ,
ವಿಧೂಷಕ ಮಾದರಿಯಾಗಿಯೂ,
ಈ ದೇಶದ ಮಕ್ಕಳಿಗೆ ಪರಿಚಯವಾಗುವುದು,
ಈ ದೇಶದ ಘೋರ ವಿಪರ್ಯಾಸ"




ಪ್ರವೀಣ್ ವಿಪ್ರ

- ವಿಪ್ರ

18 Nov 2016, 08:32 pm

ಇಬ್ಬನಿ

ಮುಂಜಾವಿನ ಎಲೆ ಮೇಲಿನ
ಸಂಜೀವಿನಿ ಈ ಇಬ್ಬನಿ!!
ಹೊಂಬೆಳಕಿಗೆ ಮರು ಜನ್ಮವ
ನೀಡಿರುವುದು ಈ ಇಬ್ಬನಿ!!

ಆ ಬಾನಿನ ನಕ್ಷತ್ರದಿ
ಜಾರಿದ ಮಣಿ ಈ ಇಬ್ಬನಿ!!
ಇಳೆಯಲ್ಲಿ ಕಳೆ ತಂದ
ಹಿಮ ಮಣಿ ಈ ಇಬ್ಬನಿ!!

ಹಸಿರೆಲೆಗಳ ನಡುವಲ್ಲಿ
ಹೊಳೆದಿರುವುದು ಈ ಇಬ್ಬನಿ!!
ಮುಂಜಾನೆಗೆ ಮಂದಹಾಸ
ತಂದಿರುವುದು ಈ ಇಬ್ಬನಿ!!

- ಪಿ.ಜಿ.ಜ್ಯೋತಿ

18 Nov 2016, 09:29 am

ಪಾಪದ ಹೂವು

ಪಾಪದ ಹೂವದು
ಗಿಡದಲಿ ಒಂಟಿ!!
ದೂರಕೆ ಸರಿದಿವೆ
ಎಲೆಗಳ ಗುಂಪು!!

ಮದುವನು ಹೀರಲು
ದುಂಬಿಯು ಬಾರದು!!
ಪಾಪದ ಹೂವದು
ಮುಡಿಯನು ಸೇರದು!!

ಅರಳುವ ಮುಂಚೆನೆ
ಮುದುಡಿದ ರೂಪ!!
ಬಾಡುವ ಮುಂಚೆನೆ
ಉದುರಿತು ಪಾಪ!!

ಶಾಪವ ನೀಡಿದ
ದೇವರ ದೂರದು!!
ಪಾಪದ ಹೂವದು
ಮಣ್ಣನು ಸೇರಿತು!!

- ಪಿ.ಜಿ.ಜ್ಯೋತಿ

17 Nov 2016, 11:06 pm

ಬೆಟ್ಟದಾ ಸಿರಿ

ಹಚ್ಚ ಹಸಿರಿನ ಬೆಟ್ಟದಾ ಸಿರಿ
ಸ್ವಚ್ಚ ಗಾಳಿಯ ತಂಪಿನಾ ಸಿರಿ!!
ನಿತ್ಯ ಅರಳುವ ಹೂಗಳಾ ಪರಿ
ನಿತ್ಯಹರಿದ್ವರ್ಣದಾ ಗಿರಿ!!

ಬಳುಕಿ ಹರಿಯುವ ನೀರಿನ ಜರಿ
ಜೀವರಾಶಿಗೆ ದೊರೆತ ಐಸಿರಿ!!
ದಟ್ಟ ಕಾನನ ಇರುಳ ಮಾದರಿ
ಬೆಳಕ ಸುರಿವನು ಇಣುಕಿ ಆ ರವಿ!!

ಸೃಷ್ಟಿಯಾಗಿಹ ಇಂತಹ ವೈಖರಿ
ದೇವ ನೀಡಿದ ವರವೆಂಬುದೇ ಸರಿ!!
ತಾಳ್ಮೆಯಲ್ಲಿ ಹೊತ್ತು ಸಲಹುವ
ಭೂಮಿ ತಾಯಿಗೆ ನಿತ್ಯ ನಮಿಸಿರಿ!!

- ಪಿ.ಜಿ.ಜ್ಯೋತಿ

17 Nov 2016, 11:06 pm

ಕವಿಗಾರ ಕೆತ್ತನೆ.

ಕವಿಗಾರನ ಕೆತ್ತನೆಯಲ್ಲಿ ,
ಮೂಡಿತು ಒಂದು ಕವನ;
ಅದೇ ಪ್ರೀತಿಯ ಸಂಕಲನ.

ಜೀವನ ಒಂದು ವ್ಯವಕಲನ;
ಪ್ರಪಂಚವೆಂಬುದು ಸೊಗಸಾದ ರೋಮಾಂಚನ ,
ಪ್ರೀತಿಯೆಂಬುದು ಮನಸ್ಸಿಗೆ ನೋವಿನ ಆಸನ.

- ವೇಣು ಆರ್ ಚಿನ್ನದೂರು

17 Nov 2016, 09:43 pm