Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*ರೋಮಾಂಚನ*

ೱೱೱೱೱೱೱೱೱೱೱೱೱೱೱೱೱೱೱ
ಬಾಲಭಾನು ಕಿರಣ ಸೋಕಿ
ಇಳೆಯು ಪುಳಕಗೊಂಡು ತನ್ನ
ನಗೆಯನೆಲ್ಲ ಸುಮದಿ ತಂದು
ಮುಗಿಲನೊಮ್ಮೆ ನೋಡಲು,
ಇದನು ಕಂಡ ಹಕ್ಕಿಹಿಂಡು
ಹರ್ಷಗೊಂಡು ಗಗನಕೆರಗಿ
ಚಿಲಿಪಿಲಿಯುಲಿ ಮಾಡಲು,
ದೂರದ ಮಾಮರದೊಳಗಣ
ಕೋಗಿಲೆ ತಾ ಹಾಡುತಿರಲು,
ಚಂಗನೆಂದು ಜಿಗಿದ ಕರುವು
ಅಂಬಾ ಎಂದೆನ್ನುತಿರಲು,
ಅಪರೂಪಕೆ ಬೇಗನೆದ್ದ
ಮಲ್ಲಿಭಾಗವತನಿವನಿಗೆ
ರೋಮಾಂಚನವಾಯಿತು,
ಕವನವೊಂದು ಮಿಂಚಿತು.
ೱೱೱೱೱೱೱೱೱೱೱೱೱೱೱೱೱೱೱ
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

03 Dec 2016, 08:45 pm

ಅನಾಮಿಕ

ಪರಿಚಯವೇತಕೆ
ನನ್ನ ಭಾವನೆಗಳ  ಬಿಂಬಿಸಲು....
ಪದಗಳು ಸಾಕಲ್ಲವೇ
ನಿಮ್ಮ ಸ್ನೇಹವ ಗೆಲ್ಲಲು....
ಈ ಹೆಸರಲ್ಲಿ ಅಡಗಿದೆ
ಕನಸುಗಳ ಕನ್ನಡಿ....
ನಿಮ್ಮೆಲ್ಲರ ಹೃದಯದಲ್ಲಿ
ಬರೆಯುವೆ ಪ್ರೀತಿಯ ಮುನ್ನುಡಿ...

- ಆರ್.ವಿಶ್ವನಾಥ್

03 Dec 2016, 06:35 pm

ಚೆಲುವೆ

ಮುತ್ತಿನಂಥಹ ಒಡವೆ
ಮುತ್ತುಹಳ್ಳಿಯ ಚೆಲುವೆ
ಬಾಳ ಸುಗ್ಗಿಯಲಿ
ಹಿಗ್ಗಿ ಮಿಂಚುತಾಳೆ
ಮುತ್ತುಹಳ್ಳಿಯ ಚೆಲುವೆ.

ಮುಗಿಲಂಥ ಬದುಕಿಗೆ
ತುಂಬು ಚಂದಿರನಂತೆ

ನಲುಮೆ ನಂಬುಗೆಯ
ಬೆಳಕ ಬೀರುತಾಳೆ
ಮುತ್ತುಹಳ್ಳಿಯ ಚೆಲುವೆ.

ಹೆಸರು ಸಿರಿಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ.

ಹತ್ತು ಕಟ್ಟುವ ಕಡೆ
ಮುತ್ತು ಕಟ್ಟುವ ಬಾರಾ
ಎನುತ ನನಗೊಂದು
ಕವನವೇ ಆಗುತಾಳೆ
ಮುತ್ತುಹಳ್ಳಿಯ ಚೆಲುವೆ.

- harsha

02 Dec 2016, 07:04 am

ಪ್ರೀತಿ

ನಮ್ಮನ್ನ ಇಷ್ಟಪಡುವವರ ಚಿಕ್ಕ ಪುಟ್ಟ
ಆಸೆಗಳನ್ನ ಪೂರೈಸಿದರೆ ಸಾಕು
ಅವರು ಬೆಟ್ಟದಷ್ಟು ಪ್ರೀತಿಸುತ್ತಾರೆ
ಆ ಪ್ರೀತಿಯ ಭಾರವನ್ನ ಹೊರುವ
ತಾಕತ್ತು ಯೋಗ್ಯತೆ ನಮಗಿರಬೇಕಷ್ಟೇ.

- keshavappu

01 Dec 2016, 06:22 pm

♡ನಿನಗಾಗೆ ನಾನು♡

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನನಗಾಗೆ ನಿನ್ನನ್ನು ಆ ಬ್ರಹ್ಮನು ಭೂಮಿಗೆ ತಂದದ್ದು
ನಮ್ಮಿಬ್ಬರ ಜೋಡಿಯ ನೋಡಿಯೇ
ಈ ಭೂಮಿ ಮೇಲೆ ಪ್ರೀತಿಗೆ ಅರ್ಥವು ಬಂದದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ಇಂಪಾದ ದನಿಯ ಕೇಳಿದ ಮೇಲೆ
ಕೋಗಿಲೆ ಹಾಡಲು ಕಲಿತದ್ದು
ನಿನ್ನ ಕಾಲ ಗೆಜ್ಜೆಯ ನಾದವ ಕೇಳಿದ ಮೇಲೆ
ಈ ಭೂಮಿ ಮೇಲೆ ಸಂಗೀತದ
ಸಪ್ತಸ್ವರಗಳು ಜನಿಸಿದ್ದು,
ನಿನ್ನ ನಡಿಗೆಯನ್ನು ನೋಡಿಯೇ
ಶಾಂತಲೆಯು ನಾಟ್ಯವ ಕಲಿತದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೃಷ್ಟಿ ಅದ್ಭುತವೆನಿಸಿದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.

ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೌಂದರ್ಯ ಎಂದರೆ ಏನೆಂಬುದು ತಿಳಿದದ್ದು,
ಕವಿಪುಂಗವರು ಕವನಗಳ ರಚಿಸಲು
ಕಲಿತದ್ದು, ಶಿಲ್ಪ ಕಲಾಕೃತಿಗಳು ಕೆತ್ತಲುಪಟ್ಟಿದ್ದು,
ಇದೆನೆಲ್ಲಾ ಕಂಡ ಇಂದ್ರನು ನಿನ್ನನ್ನು ತನಗೆ ನೀಡಬೇಕೆಂದು ಬ್ರಹ್ಮನನ್ನು ಕಾಡಿಸಿ ಬೇಡಿದ್ದು,
ನಿನ್ನ ಬದಲಾಗಿ ರಂಬೆ, ಊವ೯ಷಿ, ಮೇನಕೆ
ಚಿಲೋತ್ತಮೆಯರನ್ನು ಆ ಬ್ರಹ್ಮನು ಇಂದ್ರನಿಗಾಗಿ ಸೃಷ್ಟಿಸಿದ್ದು, ನಿನ್ನನ್ನು ನನಗೆ ವರವಾಗಿ ನೀಡಿದ್ದು
ಆ ವರಕ್ಕಾಗಿಯೇ ನಾನು ಇಷ್ಟು ಜನ್ಮ ಪಡೆದಿದ್ದು.

ನಿನಗಾಗೆ ನಾನು, ಇಷ್ಟು ಜನುಮ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನಗುವಿನ ಮೋಡಿಗೆ ಮುದುಡಿದ
ತಾವರೆಯೇ ಅರಳಿದ್ದು, ನಿನ್ನ ಧ್ವನಿಯ ಕೇಳಿ
ಒಂದು ಕ್ಷಣ ನನ್ನನ್ನೇ ನಾ ಮರೆತದ್ದು
ನಿನ್ನ Sparshaದಿಂದಲೇ ತರುಲತೆಗಳು
ಫಲಬರಿತವಾಗಿ ತೊನೆದದ್ದು,
ನದಿಗಳು ಮೈದುಂಬಿ ಹರಿದದ್ದು
ನಿನಗಾಗೆ ನಾನು, ಸಾವಿರ ಜನುಮವೇ ಬರಲಿ
ಆ ದೇವರನ್ನು ಬೇಡುವುದೊಂದೆ ನನ್ನವಳಾಗಿರು ನೀನು ಎನ್ನುವುದೊಂದೆ.
ನಿನಗಾಗೆ ನಾನು, ನನಗಾಗಿಯೇ ನೀನು.

- ಕೃಷ್ಣ

30 Nov 2016, 05:58 pm

ಕನ್ನಡ ಕವಿ ಕವನ

ಕನ್ನಡ ಕವಿಗಳ ಮನ
ಹರುಷದಿ ನುಯಡಿದಿಹ ಗಾನ
ಬರೆದಿಹ ಕವನ ನವೀನ
ಬಣ್ಣಿಸುತಿಹರು ಈ ಜನ!!

ಕಲಿತಿರೊ ಅಕ್ಷರ ಮಾಲೆ
ಕೂಡಿದರೆ ಪದ ಮಾಲೆ
ಬರೆದರೆ ಮನದ ಭಾವನ
ದೊರೆಯುವುದು ನವ ಕವನ!!

ಕನ್ನಡ ಪದಗಳ ಸಾಲು
ಬರೆಯುವ ಬಗೆ ನೀ ಕೇಳು
ಬರೆದರೆ ಮನಸಿನ ಮನನ
ಆಗುವುದು ಕನ್ನಡ ಕವಿ ಕವನ!!

- ಪಿ.ಜಿ.ಜ್ಯೋತಿ

30 Nov 2016, 02:38 pm

ನನ್ನಾಕೆ ಚಂದುಳ್ಳಿ ತಾರೆ

ನನ್ನಾಕೆ ಚೆಂದುಳ್ಳಿ ತಾರೆ
ನೆನಪಿಸುತಾಳೆ ನೆಲತಾವರೆ
ಬೆಳಗ್ಗೆ ನಾ ಕಚೇರಿಗೆ ಹೋಗುವಾಗ
ಅವಳು ಬೇಜಾರಾಗಿ ಬಿಳಿಚಿ ಬೆಳ್ಳಗೆ
ಸಂಜೆ ಮನೆಗೆ ಹೋದಾಗ
ನಾಚಿ ಆಗುವಳು ಕೆಂಪಗೆ

- keshavappu

29 Nov 2016, 11:34 pm

ಸ್ವಾರ್ಥ

ಬೇಡ ಸ್ಪರ್ಧೆ, ಬೇಡ ಜಾಣತನ,
ಇಂಥ ಸ್ವಾರ್ಥಿ ಮತ್ತು ಮೋಸ ಜಗತ್ತಿನಲ್ಲಿ
ತನ್ನನ್ನು ತಾನೇ ಗೊರೀತಿಸವುದಿಲ್ಲ,
ಜನರು ಬಗ್ಗಿಸಿದೊ ಸ್ವಾರ್ಥಿಗಳ ಕೈಯಲ್ಲಿ

ಬಂಢೂಪಂತ ಕುಲಕರ್ಣಿ

- Bandopant Kulkarni Solapur

29 Nov 2016, 06:33 am

ಜಾತಿ ಎಲ್ಲಿಹುದಯ್ಯ..!

ಮಾತಿನ ಸುರಿಮಳೆಯಲ್ಲಿ
ಜಾತಿಯ ಅಂಗನ್ನು ತೊರೆವ
ಮನುಜ..
ಬಿಡನು ಅದನ್ನು ಏಳಿಗೆಯ
ಏಣಿ ಹತ್ತುವ ಸಮಯದಿ..

ಅದರಲಿ ಅಂತಹದೇನು
ಮುಚ್ಚಿಟ್ಟಿಹನೋ ಏನೋ..
ನಾನೇ ಎಂದು ಬೀಗುತ
ಮರೆತೆ ಬೀಡುವನು
ಸ್ನೇಹದ ಭಾವನೆಗಳನ್ನು..
ಕರುಣೆಯ ಬದಿಗಿಟ್ಟು
ಆದರತೆಯ ಮರೆತು
ತಾ ಏರ ಬಯಸುವ
ಇಲ್ಲದ ಜಾತಿ ಪಲ್ಲಕ್ಕಿಯ..

ಎಲ್ಲಾರೊಳಗೂಡಿ ಸ್ನೇಹದಿ
ಆಧರಿಸಿ ಬದುಕುವುದೇ
ನೀಜ ಸುಖವಲ್ಲವೇ...

- ಬಾನು ಅಡಿಗಾರ್

28 Nov 2016, 10:20 pm

ಹುಚ್ಚು ನವಿಲು

ಹುಚ್ಚು ನವಿಲು ಕುಣಿದೈತೆ ನೋಡಾ
ಹಾಳ್ ಮನದ ಮೂಲೆಯಾಗೆ
ಗರಿ ಬಿಚ್ಚಿ ಬಿಚ್ಚಿ ಹಳೆ ಗಾಯ ಚುಚ್ಚಿ
ಬೋಳ್ ಮರದ ಕೊಂಬೆ ಮ್ಯಾಗೆ||

ಒಣ ಹೃದಯ ಕಿತ್ತು ಬಾಣಲೆಗೆ ಬಿತ್ತು
ಹನಿ ಪ್ರೀತಿ ಕಾಣದಾದಾಗ
ಗಾಣಕ್ಕೆ ಹಾಕಿ ತಿರು ತಿರುವಿ ಹಿಂಡಿದರೂ
ಪಸೆ ಚೂರು ಇಲ್ಲ ನೋಡ ||

ಕುಣಿವ ನವಿಲ ಆ ರೆಕ್ಕೆ ಪುಕ್ಕ ಎಲ್ಲ
ಕಿತ್ತು ಕೊಡವಿದಾಗ
ಸೌಂದರ್ಯವಿಲ್ಲ, ಸಂಗಾತಿಯಿಲ್ಲ
ಈ ಬದುಕು ವ್ಯರ್ಥ ಕೊರಡ ||

- ಶ್ರೀಗೋ.

27 Nov 2016, 07:49 pm