Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇಳಿಸಂಜೆ ಕಳೆದಮೇಲೆ ಇನ್ನೇನು ಉಳಿದಿದೆ
ಹಸಿದ ಹಕ್ಕಿ ಸೇರೋ ಮುನ್ನ ಗೂಡು ಏನನೋ ಉಸುರಿದೆ
ದಿನವೆಲ್ಲಾ ಅರಳಿ ನಿಂದ ಹೂವ ಬೇಸರ ಕಾಡಿದೆ....
ದಿನವಿಡೀ ರಮಿಸಿ ಜೇನ ಹೀರಿದ ದುಂಬಿಯ ಹುಡುಕಾಡಿದೆ...
ಬಿಟ್ಟೂಬಿಡದೇ ಮತ್ತೆ ಜಡಿಮಳೆ ಧಾರೆಯಾಗಿಯೇ ಸುರಿದಿದೆ...
ಬಿಟ್ಟುಹೋದ ಅವನ ನೆನಪಲಿ ಕಣ್ಣೀರು ಗಲ್ಲವ ಸೋಕಿದೆ...
ಸಂಜೆ ಕಳೆದಿದೆ ಮಬ್ಬು ಹಬ್ಬುತಿದೆ ಎಣ್ಣೆಮುಗಿದ ದೀಪ ನಕ್ಕಿದೆ...
ಒಡೆದ ಹಂಚಿಂದಿಳಿವ ಮಳೆಹನಿ ಒಳಗೂ ಶಾಂತಿಯ ಕದಡಿದೆ...
ಮುಗಿದ ಸಂಜೆಗೆ ಉತ್ತರವಿಲ್ಲ ಹಳೆಯ ಕನಸು ಕನವರಿಸುತ್ತದೆ
ಬರುವ ನಾಳೆಗೆ ಭರವಸೆಯಿಲ್ಲ ಕಲ್ಪನೆ ಚಳಿಗೆ ಮುದುರಿದೆ...
ಸದಾ ನಾ ಸೋಲೋ ಹುಡುಗಿ ಈ ಬೇಸರ ಮುಗಿಯೊಲ್ಲ
ಸದಾ ಗೆಲುವ ಕಾಲೆಳೆಯೋ ನನಗೆ ಈ ಸಂಜೆಯೇನು ಕೊನೆಯಲ್ಲ...
ಮುಟ್ಟಲಾಗದ ನಕ್ಷತ್ರಗಳ ಹಾಗೇ ಚಿತ್ರಿಸಿ ಮುತ್ತಿಕ್ಕುವೆ
ಕಟ್ಟಲಾಗದ ಮಹಲಿನ ಸುಖವನು ಹಂಚಿನ ಮನೆಯಲೇ ಕಲ್ಪಿಸುವೆ...
ಯಾರೂಕೇಳದ ಹಾಡ ನಾ ಗುನುಗುವುದಿಲ್ಲ
ಹಾಗೆಂದು ಬೋರ್ಗರೆದು ಅಳುತ್ತಾ ಕೂರೋದಿಲ್ಲಾ
ದೀಪವಿಲ್ಲದ ಕತ್ತಲೆಗೆ ಬಣ್ಣ ಹಚ್ಚುತ್ತೇನೆ... ಚುಚ್ಚುವ ನೋವುಗಳ ಹಿತವಾಗಿ ಕಿತ್ತು ಕವನ ಬರೆಯುತ್ತೇನೆ...
ಮತ್ತೆ ಗೆಲುವನ್ನು ಅಣಕಿಸುತ್ತಾ ನಾಳೆಯ ಸೋಲಿಗೆ ಕಾಯುತ್ತೇನೆ...
............................................................... ... ಮಧುಕುಮಾರ್.ಕೆ.ಆರ್.
- ಮಧುಕುಮಾರ್.ಕೆ.ಆರ್
26 Nov 2016, 05:13 pm
ಕೀ ಪ್ಯಾಡು ಮೇಲೆ ಬೆರಳಲೆ ನರ್ತಿಸುವ
ಉದ್ದ ಉಗುರಿನ ಸುಂದರಿಗೆ
ನೆಲಕಾಣದ ವಯಸಲೊಂದು
ಮಾಡರ್ನೈಸ್ ಥಿಂಕಿಂಗು…
ಮೂದೇವಿ……!
ಊರ ಅಜ್ಜಿ ಜರಿದಾಳು
ನಿನ್ನ ಹರಿದ ಜೀನ್ಸುಕಂಡು………
ಮುಖದ ಮೊಡವೆಗೊಂದು ಕ್ರೀಮು,
ಗುಡಿಸಲು ಕಟ್ಟಲು ಒದ್ದಾಡುವರ ಮಧ್ಯೆ
ಬೇಕೇನು ನಿನ್ನ ಮೊಗಕೆ ಫೌಂಡೇಶನ್ನು…
ಲಿವೈ ಸ್ಟ್ರಾಸು …!ಆಡಿಡಾಸು…!
ತನಗೂ ಬೇಕೆನ್ನುತಿದೆ ಆಡುವ ಕೂಸು……
ಅಜ್ಜಿಗೇನು ಗೊತ್ತು ಹೊಸ ಜನರೇಷನ್ನು………!!!
ಲ್ಯಾಕ್ಮೆ ಕೆಮಿಕಲ್ಲು ಕಣ್ಗಪ್ಪು
ತಂಪಲ್ಲ ರೆಪ್ಪೆಗೆ,
ಹುಬ್ಬು ಕತ್ತರಿಸುವ ಅಂಗಡಿಯಲ್ಲಿ
ಕಾಡಿಗೆ ಡಬ್ಬಿ ಕಳೆದೋಗಿ
ವರುಷವಾಯ್ತು………
ಡವ್ ಸೋಪು - ಶಾಂಪು ಬಂದಮೇಲೆ
ಬೆನ್ನುಬಾಗಿದ ಮುದುಕಿಯ ಶೀಗೇಕಾಯಿ
ಹೆಕ್ಕುವರಿಲ್ಲದೆ ಬಾಡೋಯ್ತು……
ಮೈನೆರೆದ ಮೊಮ್ಮಗಳ ಮೀಯಿಸಲು
ಅರಿಶಿನ ಕೊಂಬು ತೇಯ್ದ ನೆನಪು ಅಜ್ಜಿಗೆ…
ಓಡುವ ಕಾಲದ ತೆಕ್ಕೆಗಿಳಿದ ಹೆಣ್ಣೊಬ್ಬಳ
ಬ್ಯಾಗಲೊಂದಿಷ್ಟು ಕೆಂಪು ಗುಳಿಗೆ…
ಕಾಲ ಬದಲಾಗಿದೆ ಅಜ್ಜಿ…!
ಮುಟ್ಟು ಮಡಿ ಮೈಲಿಗೆಗಳನು ಗಂಟುಕಟ್ಟಿ
ನೀನಿನ್ನು ಹೊರಡಬೇಕು ಕಾಶಿಗೆ…
- ಪರಮೇಶ್ವರ
- ಒಂಟಿತೋಳ
26 Nov 2016, 01:50 pm
ಪ್ರೀತಿ ಎಂಬುದು ಮಾಯೆ!
ಮನಸ್ಸಿಗೆ ಕಪ್ಪು ಶಾಯಿಯ ಕಲೆಯೆ.
ಪುಸ್ತಕದ ಮೇಲೆ ಬರೆದ ಛಾಯೆ,
ವಿನಾಷದ ಅಂಚಿನ ಬಲೆಯೆ,
ಹೃದಯ ಹಿಂಡುವ ಕಬ್ಬಿನ ಜಲ್ಲೆಯೆ:
ನಾಗರ ಹಾವಿನ ವಿಷದ ನಲ್ಲೆಯೆ,
- ವೇಣು ಆರ್ ಚಿನ್ನದೂರು
26 Nov 2016, 01:25 pm
ಮರೆಯಲಾಗದ ನೆನಪುಗಳ
ಹಿಂದೆ ಸಾಗಿದೆ ಮುಗ್ದ ಮನಸು..
ಮಾತು ಮರೆತ ಮೂಕ ಮನವ
ವಿವರಿಸಲು ಆಗುವುದೆ ಮನದ
ಭಾವನೆ ಅವಳೆದುರಲಿ...
ನೂರಾರು ಬಾರಿ ಹೊರಬಂದ ಮಾತದು
ತುಟಿ ಅಂಚಲಿ ಪದ ಮರೆತು ಹೊಗಲು
ನಾ ಹೇಗೆ ಸಮಜಾಯಿಸಿ ನೀಡಲಿ
ಅವಳೊಂಮ್ಮೆ ಎದುರಾಗಲು..!
ಎಲ್ಲಾ ತಳಮಳವ ತೊರೆದು
ನಾ ಹೇಳಲಿ ಹೇಗೆ
ನನ್ನೀ ಪ್ರೀತಿಯ ಅವಳೆದುರಲಿ..!!
- ಬಾನು ಅಡಿಗಾರ್
26 Nov 2016, 08:41 am
ಸಂತೆಯಲ್ಲಿ ನಿಂತ ಸುಂದರಿ
ರೂಪದಲ್ಲಿ ಎಂತ ಚೆಂದ ರೀ!!
ನೋಟದಲ್ಲಿ ನನ್ನ ಸೆಳೆಯುತ
ಕರೆದಳೊಮ್ಮೆ ಇಲ್ಲಿ ಬನ್ನಿರಿ!!
ಅವಳ ಆ ಮಾತಿಗೆ
ನಾನು ಸಹಚಾರಿ ಎಂಬಂತೆ!!
ಮರು ಮಾತಾಡದೇ
ತಲೆದೂಗಿ ಸಾಗಿ ನಿಂತೆ!!
ಅವಳ ವಯ್ಯಾರ ಕಂಡು
ನನ್ನ ಹೃದಯ ಜಾರಿ ಬಿತ್ತು!!
ಅವಳ ಪಿಸು ಮಾತಿಗೆ ನನ್ನ
ಉಸಿರೊಮ್ಮೆ ನಿಂತಂತಾಯ್ತು!!
ಅಯ್ಯೋ ತಪ್ಪಾಯ್ತು ರೀ
ನೀವು ದಯಮಾಡಿ ನನ್ನ ಕ್ಷಮಿಸಿ!!
ನನ್ನ ಪತಿರಾಯರು
ನಿಮ್ಮ ಮುಂದೆ ಹಾದು ಹೋದರು!!
- ಪಿ.ಜಿ.ಜ್ಯೋತಿ
25 Nov 2016, 04:43 pm
ರಂಗವಲ್ಲಿಯ ನಡುವೆ
ರಂಗ ನಿನ್ನ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!
ಲಾಲಿಸಿದಾ ತಾಯಿ
ಪೋಷಿಸಿದಾ ತಾಯಿ
ಕಂದಾ ಎಂದಾಗ
ನೀನೋಡಿ ಬರುವಾಗ
ನೀನಿಟ್ಟ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!
ನಿನ್ನ ಪಾದ ಸ್ಪರ್ಷದಿಂದ
ಭೂ ತಾಯ ಆನಂದ
ಹೇಳಲಾಗದು ಕೃಷ್ಣ
ಹೇಳಲಾಗದು!!
ಪಾದದ ರೇಖೆಯೇ
ಪಾಪ ಕಳೆವ ಮೋಕ್ಷದಂತೆ
ಪಾದದಡಿಯ ಧೂಳೆಲ್ಲ
ಮುಕ್ತಿ ಕೊಡುವ ಭಸ್ಮದಂತೆ!!
ರಂಗವಲ್ಲಿಯ ನಡುವೆ
ರಂಗ ನಿನ್ನ ಹೆಜ್ಜೆ ಗುರುತು
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ
ರಂಗಾಗಿ ಕಂಡಿತಯ್ಯ ನನ್ನ ಕಣ್ಣಿಗೆ!!
- ಪಿ.ಜಿ.ಜ್ಯೋತಿ
25 Nov 2016, 03:53 pm
ಹರಿ ಕೃಷ್ಣ ನಿನ್ನ
ಮನಗೆದ್ದ ಅರಸಿಯ
ಕದ್ದೋಡಿ ನೀನು
ಬಂದೆಯೇನು!!
ಸುಕುಮಾರಿ ಚೆಲುವೆಯ
ಮುದ್ದಾದ ಮೊಗದಲ್ಲಿ
ಸುಕುಮಾರ ನಿನ್ನ
ಲೀಲೆಯೇನು!!
ಮನಗೆದ್ದ ಅರಸಿಯು
ಸುಂದರಿಯು ರುಕ್ಮಿಣಿಯು
ಸತಿಯಾದಳೇನು
ನಿನಗೀಗ!!
ಲೋಕವ ಕಾಯುವ
ಲೋಕನಾಥನು ನೀನು
ಶ್ರೀ ಮಹಾಲಕ್ಷ್ಮಿ
ನಿನ್ನ ಸತಿಯಲ್ಲವೇನು!!
ನೀಲನು ಮೇಘನು
ಶ್ಯಾಮ ಸುಂದರ ನೀನು
ಚೆಂದೊಳ್ಳಿ ಚೆಲುವೆಯ
ಕೈ ಹಿಡಿದೆಯೇನು!!
- ಪಿ.ಜಿ.ಜ್ಯೋತಿ
25 Nov 2016, 03:33 pm
ಕಣ್ಣು ಕೊಡುವ ಮೊದಲು
ನೀನು ತಪ್ಪು ಮಾಡಿದೆ!!
ಯೋಚನೆಯನು ಮಾಡದೇ
ನೀ ಕಣ್ಣು ನೀಡಿದೆ!!
ಲೋಕದ ಪಾಪವೆಲ್ಲ
ಕಣ್ಣಿಗೆ ಕಾಣುವಂತೆ!!
ಕಂಡ ನನ್ನ ಈ ಕಣ್ಣು ಪಾಪ ಮಾಡಿದೆ
ನನ್ನ ಪಾಪಿ ಮಾಡಿದೆ!!
ಕಣ್ಣಿನಲ್ಲಿ ನಾನು ಕಂಡ
ನಿನ್ನ ಭಾವ ಮೆಚ್ಚಿಕೊಂಡೆ!!
ಕಣ್ಣಿನಲ್ಲೇ ನಾನು ಇಂದು
ಜಗದಿ ನಡೆವ ಭಾವ ಕಂಡೆ!!
ಕಣ್ಣಿನಲ್ಲೇ ನೋಡಬೇಕು
ನೋಟದಿಂದ ಅರಿಯಬೇಕು!!
ಅರಿತ ಜಗದ ವೇದನೆಗಳು
ಮನದಿ ಮೂಡಿ ಮರುಗಬೇಕು!!
- ಪಿ.ಜಿ.ಜ್ಯೋತಿ
25 Nov 2016, 03:20 pm
ಆಕಾಶದಲ್ಲೊಮ್ಮೆ ಮಿಂಚು ಗುಡುಗುಗಳಿತ್ತು ಸೋನೆ ಮಳೆ ಹಾಗೇ...ತಾ ಸುರಿಯುತಿತ್ತು ಸುತ್ತ ಮುದತರುವಂತೆ ಪ್ರಕೃತಿಯ ಸೊಬಗಿತ್ತು ಜೊತೆಗೆ ಬಕುಲವೃಕ್ಷದ ಹೊವ ಕಂಪೂ ಕೂಡ .......................................................................
ತಿಳಿ ನೀಲಿ ಆಕಾಶ ಕಾಮರ್ೋಡ ಹೊದ್ದಿತ್ತು ಮತ್ತೆ ಮರಿಗುಡುಗು ತಾ ಮೊಳಗುತ್ತಿತ್ತು ಆ ದನಿಗೆ ತೊಟ್ಟಿಲಲಿ ಮಗುವೊಂದು ಅಳುತಿತ್ತು; ಮತ್ತೊಂದು ಮನದೊಗಿ ಕೇಳುತಿತ್ತು .........................................................................
ಒಂದೇ ಗುಡುಗಿನ ದನಿಗೆ ಎಷ್ಟೆಲ್ಲಾ ಆಕಾರ ಹೆದರುವವರದೊಂದಷ್ಟು ಹಾಹಾಕಾರ ಯಾರೋ ಕಿವಿ ಮುಚ್ಚುವರು ಇನ್ಯಾರೋ ಮನ ಬಿಚ್ಚುವರು ಗುಡುಗಿಗಂತೂ ಇಲ್ಲ ಯಾರದೂ ಋಣಭಾರ .......................................................................
ಒಬ್ಬ ಕವಿ ಹೊಗಳುವನು ಮತ್ತೊಬ್ಬ ತೆಗಳುವನು ಇನ್ನೊಬ್ಬ ನದನು ಏನೇನಕೋ ಹೋಲಿಪನು ಮಗದೊಬ್ಬನದಕೆ ಹೊಸಬಾಲ ಸೇರಿಪನು ...........................................................................
ಯಾರು ಏನೇ ಅನಲಿ ಗುಡುಗು ಗುಡುಗುತಿತ್ತು ಮತ್ತೆ ಹೊಸ ಮುಂಗಾರಿನ ಮುನ್ಸೂಚನೆಯಂತೆ ಹೀಗೆಲ್ಲಾ ನಡೆದಿರಲು ಗುಡುಗು ತುಸು ನೊಂದಿರಲು ಹೀಗೆಲ್ಲೋ ಮಿಂಚಂತೆ ಹೊಳೆಯಿತಾ ದೃಷ್ಯ ...............................................................................
ಗುಡುಗಿನ ಕಡುದನಿಗೆ ಕುಣಿಯುತಿಹ ನವಿಲೊಂದು ನಕ್ಕಿತು ಗುಡುಗಿಗೆ ಧನ್ಯತೆಯ ಕೋರಿ ಚಕಿತಗೊಂಡಿತು ಗುಡುಗು ಬೇಸರವ ತೂರಿ ..............................................................................
ನವಿಲು ಹೀಗೆಂದಿತ್ತು ನಿನ್ನ ದನಿಯೇ ಚಂದ ಮನತುಂಬಿ ಬೇಡಿತ್ತು ಇರಲಿ ಹೀಗೆಯೇ ಬಂಧ ..............................................................................
ನಿನ್ನ ದನಿಯಿಂದಲೇ ಇಳೆಗೆಮಳೆಯೂ ನಿನ್ನಿಂದಲೇ ನನ್ನ ನಾಟ್ಯ ಸೊಬಗು ಮೊಳಗುತಿರು ಎಂದಿಗೂ ಅನಂತವಾಗಿ ನೀ ಕುನಿಯುತಿರುವೆ ನಾ ನಿನ್ನ ದನಿಗೆ ..............................................................................
ಗುಡುಗು ನಕ್ಕಿತು. ಮುಗ್ದೆ, ನಾಟ್ಯ ನಿನ್ನದೆ ನಾನು ಬರಿಯ ಶಬ್ಧವಾಗಿಹೆನು ಅಷ್ಟೇ ಗೆಳತಿ ನಿನ್ನ ಕುಷಿ ನನ್ನ ದನಿಯಲ್ಲಿ ಹನಿಸಿದರೆ ಮೊಳಗುತಿರುವೆ ಅನತ ನಾಟ್ಯವಾಡು .................................................................................
ನಗುತಲಿರು ಮನವೆ ನೀ ನನ್ನ ಮುದ್ದಿನಶಿಶುವೆ ನನ್ನ ದನಿಯೆ ನಿನ್ನ ಕಾವಲಾಗಿ ಚಿರಕಾಲ ಕಾಯಲಿ, ಕುಣಿಯುತಿರು ಕುಷಿಯಿಂದ ನೂಕರ್ಾಲ ನಗುನಗುತಾ ಮಗುವಿನಂತೆ ................................................................................. ......................................... ಮಧುಕುಮಾರ್.ಕೆ.ಆರ್
- ಮಧುಕುಮಾರ್.ಕೆ.ಆರ್
25 Nov 2016, 09:04 am
ಒಂಟಿ ಜೀವಕೆ
ಕವಲು ದಾರಿ ಪಯಣ!!
ದೇವ ತೋರಿದ
ದಾರಿಯೆಡೆಗೆ ಚರಣ!!
ನಡೆವ ದಾರಿಯಲ್ಲಿ
ಕಲ್ಲು ಮುಳ್ಳ ಕತನ!!
ಗುರಿಯ ಸೇರಲೆಂದು
ಸಾಗುತಿರುವ ಚಲನ!!
ವನವಾಸದಲ್ಲಿ
ನವ ಆಸೆ ಚೆಲ್ಲಿ
ದೊರೆತಿರುವ ಕಾಲು ದಾರಿ!!
ಬಲು ಆಸೆಯಿಂದ
ಸಾಗಿ ಬರುತಿರಲು
ಆಗಿಹುದು ಕವಲುದಾರಿ!!
ಒಂಟಿ ಜೀವಕೆ
ಕವಲು ದಾರಿ ಪಯಣ!!
ನಿಂತು ಮರುಗಿದೆ ಸಾಗಿ
ನಡೆಯದೆ ಚರಣ!!
ಆಗುವುದು ಎಂದೂ
ಗೊಂದಲದ ಗೂಡ ಪತನ!!
ಕವಲು ದಾತಿಯಲಿ ಸಾಗಿ
ಮುಗಿಯುವುದೇ ಪಯಣ
- ಪಿ.ಜಿ.ಜ್ಯೋತಿ
24 Nov 2016, 10:32 pm