Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಸ್ಸಂಜೆ ಮೌನ

ರಂಗೇರಿದ ರವಿಯ ಕೆಂಪು
ಸಂಜೆಯ ಭುವಿಯಲ್ಲಿ ತಂಪು
ಹಕ್ಕಿ ಪಿಕ್ಕಿಗಳ ಕಲರವ ಗಾನ
ಕೇಳಿ ತಿಳಿಯಿತು ಮುಸ್ಸಂಜೆ ಮೌನ

- ವೆಂಕಟೇಶ್ ದೈಶಿ ವೇಮಗಲ್

09 Dec 2016, 05:25 pm

ನೋಡಬ್ಯಾಡ ಹಂಗ.....

ನೋಡಬ್ಯಾಡ ಹುಡಗಿ ಹಂಗ ನೀ ಭಾಳ ಚೆಂದ..
ಕಾಡಬ್ಯಾಡ ಸುಮ್ಮ್.. ನನ್ನ ಬುದ್ದಿ ಭಾಳ ಮಂದ
ನಕ್ಕು ನಕ್ಕು ಸೆಳಿತಿಯಲ್ಲೇ ನನ್ನ ದ್ಯಾಸ
ನೋಡಿ ನೋಡಿ ಎದಿಯಾಗ ಏನೋ ಒಂಥರದ ತ್ರಾಸ
ಹುಚ್ಚು ಮನಸ್ಸು ಹದಕ್ಕ ಬಂದದ
ನನ್ನ ರೇಷನ್ ಕಾರ್ಡಗೆ ನಿನ್ನ ಹೆಸರು ಕೇಳ್ತದ
ಬತ್ತಿದ ಕನಸು ಮತ್ತ ಎದ್ದ ಕುಂತಾವು
ಚೆಂದದ ಜೀವನಕ್ಕೆ ನೀನಾ ಬೇಕ ಅಂತಾವು
ಕೈ ಹಿಡಿ ಒಮ್ಮೆ ಹೆಂಗಾರ
ಕೂಡಿ ಹೊರುವಾ ಈ ಜೀವನದ ಭಾರ
ಪ್ರೀತಿಲಿ ನಡಸೋನು ಅಂದದ ಸಂಸಾರ..

- Goudru

09 Dec 2016, 04:06 pm

ಮಳೆಯೇ ನೀ ಸೇರಲು ಬರುವೆಯ

ಮಳೆಯೇ ನಾನು ಸೇರಲೇ ನಿನ್ನೊಟ್ಟಿಗೆ
ನೀನಾದರು ಇರುವೆಯ ನನ್ನೊಂದಿಗೆ
ಜಗಕೆ ಕಾಣದ ನೋವ ನೀನಾದರೂ ಕಾಣುವೆಯ
ಈ ಮನುಜ ಕಾಣದ ಕಣ್ಣ ನೀರ ನೀನಾದರು ಒರೆಸುವೆಯ
ತೋರಲಾರೆನು ಕಣ್ಣೀರು ಜಗದೊಳು
ತಡೆದು ಇರಲಾರೆನು, ತೋರಿ ಸೋಲಲಾರೆನು
ಮನದೊಳಗಿನ ನೋವು ಕಾಡುತಿರಲು
ಕಣ್ಣಂಚಿನ ನೀರು ಜಾರಲು ಕಾಯುತಿರಲು
ಸೋಲಲಾರೆನು ಈ ಜಗದೊಳು
ಸೇರಿಸಿಕೊಳ್ಳುವೆಯ ನನ್ನ ಕಣ್ಣೀರ ನಿನ್ನ ಜೊತೆಯಲಿ
ನಿಂತಿರುವೆ ನಾನು ನಿನ್ನ ಪ್ರೀತಿಯ ಅಲೆಯಲಿ
ಜಾರಲು ಕಾಯುತಿಹ ಕಣ್ಣೀರ ತೊಳೆದು ನೀಡು ನೆಮ್ಮದಿಯನು
ಮಳೆಯೇ ನೀ ಸೇರಲು ಬರುವೆಯ ನನ್ನ ಕಣ್ಣ ಅಂಚಿನ ನೀರನು.


ಅರ್ಪಣೆ:
ನೋವು ಕಣ್ಣೀರನ್ನು ಮನಸೊಳಗೆ ಬಚ್ಚಿಟ್ಟು ಬದುಕುತಿರುವವರಿಗೆ

- ಶ್ರೀಕಾವ್ಯ

09 Dec 2016, 03:47 pm

ಅವ್ವ

ಏನೆಲ್ಲಾ ಇಹುದು ಈ ಜಗತ್ತಿನಲ್ಲಿ
ಇನ್ಯಾರು ಸರಿಸಾಟಿ ನಿನ್ನಲ್ಲಿ
ನೀ ಕೊಟ್ಟ ಉಸಿರು ನನ್ನಲ್ಲಿ
ನನ್ನ ಜೀವನ ನಿನ್ನ ಪಾದದ ಅಡಿಯಲ್ಲಿ
-ಅಪ್ಪಣ್ಣಗೌಡ ಇಡಕನಹಳ್ಳಿ

- ಅಪ್ಪಣ್ಣಗೌಡ.ಐ.ಜೆ.

09 Dec 2016, 03:33 pm

ಕ್ರೌರ್ಯ

ಕಾಶ್ಮೀರ ಆಕ್ರಮಿಸಿದರೂ
ಬಳೆತೊಟ್ಟು ಕೂತಿದ್ದೀರಿ

ಉಗ್ರರ ಉಪಟಳಕ್ಕೆ
ಸೀರೆಯುಟ್ಟು ಒಳಗಿದ್ದೀರಿ

ನಕ್ಸಲರ ಅಟ್ಟಹಾಸಕ್ಕೆ
ತಲೆಬಾಗಿ ನಿಂತಿದ್ದೀರಿ

ಮಹದಾಯಿ ನೀರು ಕೇಳಿದ್ದಕ್ಕೆ
ಮಹಿಳೆ,ಮಕ್ಕಳು,ಮುದುಕರೆನ್ನದೆ
ಮನೆನುಗ್ಗಿ ಹೊಡೆದಿದ್ದೀರಿ

ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?

ಸಂಸತ್ತಿಗೆ ನುಗ್ಗಿದರೂ
ಪರವಾಗಿಲ್ಲ ಕ್ಷಮಾದಾನ

ಗುಂಡಿಟ್ಟು ಕೊಂದರೂ
ಪರವಾಗಿಲ್ಲ ಕ್ಷಮಾದಾನ

ಕೋಟಿ ಕಬಳಿಸಿದರೂ
ಪರವಾಗಿಲ್ಲ ಕ್ಷಮಾದಾನ

ಮಹದಾಯಿ ನೀರು ಕೇಳಿದ್ದಕ್ಕೆ
ದರ್ಪ,ದೌರ್ಜನ್ಯ ಎಸಗುವ
ಆ ರಕ್ಷಕರಿಗೆ ಇಲ್ಲ ಸಮಾದಾನ

ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?

ಕಣ್ಮುಚ್ಚಿ ಕುಳಿತ ನಾಯಕರೆ
ಜಾಣತನದ ಅಧಿಕಾರಿಗಳೆ
ಲಾಠಿ ಎತ್ತುವ ಆರಕ್ಷಕರೆ

ಮಣ್ಣಮಕ್ಕಳ ಮೇಲೆ ಕೈಮಾಡುವ
ಮುನ್ನ ಸ್ವಲ್ಪ ಯೋಚಿಸಿ....

ಮುರಿದರೆ ರೈತರ ಬೆನ್ನು
ತಿನಬೇಕಾದೀತು ಮಣ್ಣು!

-ಬಸುತನಯ, ಧಾರವಾಡ

- ಬಸುತನಯ

09 Dec 2016, 03:19 pm

ವಿಧಿ

ಬರುವವು ಹಳೆ ನೆನಪುಗಳು
ಕಾಡುವವು ಆ ನೆನಪಿನ ಕ್ಷಣಗಳು
ಹಸಿಯಾಗುವವು ಕಣ್ಣುಗಳು
ಹುಸಿಯಾದವು ನಿರಿಕ್ಷೆಗಳು...
:- ಪರಮಾತ್ಮ ಸೋಂ

- ಪರಮಾತ್ಮ ಸೋಂ

09 Dec 2016, 02:02 pm

ನನ್ನವಳು

ಮಸ್ತಿಷ್ಕದಲ್ಲಿರುವ
ನಿನ್ನ ನೆನಪುಗಳನ್ನು ಬಸಿದು
ಪುಸ್ತಕದಲ್ಲಿ ಮಸಿಯಿಳಿಸಿದಾಗ,
ರೂಪುಗೊಂಡ ಅದ್ಭುತರೂಪ
ನಿನ್ನದೇ ತದ್ರೂಪ...
- ಸ.Kha.

- ಸ.Kha.

09 Dec 2016, 01:30 pm

ನೀ ಬಿಟ್ಟುಹೋದ ಮೇಲೆ

ಮರೆಯೋಣವೆಂದರೂ
ಮರೆಯಾಗುತ್ತಿಲ್ಲ ಆ ನಿನ್ನ
ನೆನಪುಗಳು..

ಕಳೆದುಹೋದ ಆ ದಿನಗಳು
ಬಾರದೇ ಹೋದರೂ ಕಳೆಯಲಾಗದು
ನೀ ತೊರೆದ ದಿನಗಳು..

ಮಣ್ಣಲಿ ಮಣ್ಣಾದರೂ
ಮಾಸುತ್ತಿಲ್ಲ ಮನದಲಿ ನೀ
ಗೀಚಿಹೋದ ನಿನ್ನ ನೆನಪುಗಳು..

ಸತ್ತರೂ ಸುಡುತ್ತಿಲ್ಲ ನೀ
ನೀಡಿಹೋದ ನೆನಪುಗಳೆಂಬ
ಅಳಿಸಲಾಗದ ಗಾಯವ.


ಚೌಡಪ್ಪ ಎನ್ ಆನೇಕಲ್.

- ಚೌಡಪ್ಪ ಎನ್

09 Dec 2016, 12:57 pm

ವಧುವಾಗಿ ನನ್ನವಳು

ಮದುವೆ ಮಂಟಪದಲ್ಲಿ
ನವ ವಧುವಾಗಿ ನನ್ನವಳು
ವರನ ಕೈ ಹಿಡಿದು
ಸತಿಯಾಗ ಹೊರಟಿಹಳು!!

ಅಗ್ನಿ ಕುಂಡವ ಸುತ್ತಿ
ಸಪ್ತಪದಿ ತುಳಿವಾಗ
ಹಿಂದಿರುಗಿ ನನ್ನ ಒಮ್ಮೆ
ನೋಡುವುದ ಮರೆತಿಹಳು!!

ಹಗಲಲ್ಲಿ‌ ಇರುಳಲ್ಲಿ
ನನ್ನನ್ನೇ ನೆನೆದವಳು
ಸಂಗಾತಿ ನೀನೇನೆ
ನನ್ನ ಜೀವ ಎಂದವಳು!!

ಕೈ ಹಿಡಿದು ಊರೂರು
ಸುತ್ತಿ ನಡೆದವಳು
ಹೆಜ್ಜೆಯ ಗುರುತನ್ನು
ತಾ ಮರೆಯ ಹೊರಟಿಹಳು!!

ಕಂಬನಿಯು ತುಂಬಿರುವ
ಈ ನನ್ನ ಕಣ್ಣುಗಳ
ಭಾವನೆ ಅರಿಯದ
ಪ್ರಿಯತಮೆ ನನ್ನವಳು!!

ಕಾಯುತ್ತ ನಿಂತಿಹುದು
ಈ ಮನ ಮೌನದಲಿ
ಬಂದುಬಿಡು ಗೆಳತಿ
ಹಿಂದಿರುಗಿ ಎನ್ನುತಲಿ!!

- ಪಿ.ಜಿ.ಜ್ಯೋತಿ

09 Dec 2016, 12:41 pm

ಹೃದಯದಲ್ಲಿ ಪ್ರೀತಿಯೇ ತುಂಬಿದ

ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ
ವೈರಿಗಳೂ ಪ್ರೇಮಿಗಳಾಗುತ್ತಾರೆ
ಮನದಲ್ಲಿ ದ್ವೇಷವೇ ತುಂಬಿದ್ದರೆ
ಪ್ರೇಮಿಗಳೂ ವೈರಿಯಾಗುತ್ತಾರೆ

- RAjESH D

09 Dec 2016, 12:28 pm