Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸೆಂಬ ಮಾಯೆ

ಮನವೆ ತನುವನಾಳುವ ಧನಿಕ
ಮೀರಿದೆಯಾದರೆ ಬಾಳು ಕ್ಷಣಿಕ
ದೇವನೊಲುಮೆಯ ಕಲ್ಪನೆ ಚಿತ್ರ
ಮನದ ಚಿತ್ತದಿ ನಲುಮೆಯ ಗಾತ್ರ

ಉರಗದ ಹುತ್ತದಿ ಕಾಣುವೆಯಾದರೆ
ದರ್ಪದ ಅಹಂ ವಿಷದ ಆಸರೆ
ಕೋರಿಕೆ ವಿನಃ ಅತಿಯ ದಾಹ
ಬಿಟ್ಟರು ಬಿಡದೀ ಮತಿಯ ಮೋಹ

ಮನವೇ ಸ್ವತಃ ವಾನರನ ಸಮ
ಕೇಂದ್ರೀಕೃತ ಸ್ಥಿರವಿಲ್ಲದ ಮರ್ಮ
ಕಾಣದ ಕಡಲಿಗೆ ಕರೆಯುವ ಮನವೆ
ಶಾಂತಿಯಿದ್ದರು ಕೆದಕುತಲಿರುವೆ

ನಾನಾ ವಿಧದ ಸ್ವಪ್ನ ಸಂಗತಿ
ಅವಸರ ವಿಘ್ನ ಅಸುರ ಸಂಗಾತಿ
ಸುಳ್ಳದು ಎಂದರೂ ಕೇಳದ ಆತ್ಮ
ಕ್ಷಮಿಸನು ಎಂದಿಗೂ ಆ ಪರಮಾತ್ಮ

ಕಾಂತಿಯ ತರಹದಿ ಬೆಳಗುವ ಮನವೇ
ಮಣ್ಣಿನ ಮಡಿಲಿಗೆ ಬೆರೆಸಲು ತರವೇ
-ದೇವ ಕಜ್ಜೇರ.

- Deva Kajjera

10 Dec 2016, 03:28 pm

ಕವಣಿಯ ಕಲ್ಲು

ಕವಣಿಗೆ ಕಲ್ಲಾದೆವು
ಬಿಲ್ಲಿಗೆ ಬಾಣವಾದೆವು
ತೋಪಿಗೆ ಸಿಡಿಗುಂಡಾದೆವು
ಬೆಂಕಿ ಕಡ್ಡಿಗೆ ಉರಿಮದ್ದಾದೆವು
ಗುಲಾಬಿ ಹೂ ಗಿಡಮರಕೆ ಮುಳ್ಳಾದೆವು
ನಿಮ್ಮ ಕಾಲಿಗೆ ಚಪ್ಪಲಿಯಾದೆವು
ಯಾಕೆಂದರೆ.....
ನಾವು ಮುಗ್ಧರು.... ಮುಗ್ಧರು....

ರಚನೆ: ರೇವಣಸಿದ್ದ ಗೌಡರ.
ಸಾ: ರಬಕವಿ-587314
Mobile: 9008060918

- Revanasidda Goudar

10 Dec 2016, 03:13 pm

ಮದುವೆ

ಬಂಧನವದಲ್ಲವದು ಒಂದಾದ ಎರೆಡು
ಪರಿಧಿಯಿರೆ ಬಂಧನವು ಇಲ್ಲದಿರನಂತವು
ಅಂತ್ಯವಿಲ್ಲದನಂತ ಮಧುರ ಸಮ್ಮಿಲನವು
ಟಿಸಿಲೊಡೆದು ಹರಡಲೊಂದಾದ ದ್ವಂದ್ವವು

ತಿಳಿದಿತ್ತೆ ಮೊದಲೇನು ಹೊಂದುವುದು ಎಲ್ಲೆಂದು
ಯಾರೆಂದು ಹೇಗೆಂದು ಎಂದೆಂದು ಎಷ್ಟೆಂದು
ಕಲೆಸಿ ಬೆಸೆಯುವುದದುವೇ ಬೇರ್ಪಟ್ಟ ಬೆಸುಗೆಗಳು
ದೈವಮಾಡಿದ ಜೋಡು ಪ್ರೇಮವನುಭವಿಸಲು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

10 Dec 2016, 02:54 pm

ದುರಂತ

ಓ..ಸೂರ್ಯ,
ನೀ ಬಂದು ನಮ್ಮ ಮನೆಯ ಒಲೆಯೊಳಗೆ ಕುಳಿತುಬಿಡು,
ನನ್ನ ಅವ್ವ ರೊಟ್ಟಿ ಬೇಯಿಸಿ ಬಿಡುವಳು ನಿನ್ನ ನೆತ್ತಿಯ ಮೇಲಿಟ್ಟು.

ಓ..ಸೂರ್ಯ,
ನೀ ಬಂದು ಸ್ಮಶಾನದಲಿ ಚಿತೆಯಾಗು
ನಮ್ಮವರು ಹೆಣ ಸುಟ್ಟು ಬಿಡು
ಅವರ ಮೈಯೊಳಗಿನ ರಕ್ತಗಾಯ ಅಳಿಸಿಬಿಡು.

ಓ... ನನ್ನ ಜನಗಳೆ,
ಸತ್ತು ಸಮಾಧಿ ಸೇರಿದ ನಮ್ಮವರ ಹೆಣಗಳನು
ಕಿತ್ತು ಹೊರಗೆ ಎಸೆಯಿರಿ
ಹದ್ದು ಕಾಗೆಗಳು ಹಸಿದು ಕುಳಿತಿವೆ
ತಿಂದು ತೇಗಲಿ...

ಓ... ಚಂದ್ರ,
ನೀ ಬಂದು ನಮ್ಮ ಹರಕು ಮುರುಕು ಹಂಚಿನ ಗುಡಿಸಲು ಮೇಲೆ ಕುಳಿತುಬಿಡು
ನೀ... ತಂಪಿಗೆ ಹೆಸರಂತೆ...
ಕಣ್ಣು ಮುಚ್ಚಿ ಕಣಸು ಕಾಣುವೆ ನಾ,
ನನಗೆ ಉಳಿದಿರುವುದೊಂದೆ ನಾ ಬಡವ.....

ರಚನೆ: ರೇವಣಸಿದ್ದ ಗೌಡರ.
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 02:32 pm

@@ಕನ್ನಡೋತ್ಸವ@@

ಉತ್ಸವ ಉತ್ಸವ ಕನ್ನಡೋತ್ಸವ
ಕರುನಾಡಿನ ಜನ್ಮದೋತ್ಸವ
ಸಿರಿನಾಡಿನ ಸಂಭ್ರಮೋತ್ಸವ
ಕರ್ನಾಟಕದ ಉದಯದೋತ್ಸವ!
‌‌ ನಾಡು ಕಟ್ಟಿದ ವೀರಪುತ್ರರ
ಸಾಧನೆಗೈದ ಕನ್ನಡಿಗರ
‌‌‌ ಡಿಂಡಿಮವ ಬಾರಿಸಿ
ಶತೃಗಳ ಸಂಹರಿಸದ
ವೀರರೋತ್ಸವ!
ರನ್ನನ ಬೀಡಿನ
ಪಂಪನ ನಾಡಿನ
ಬಸವ ಗೂಡಿನ
ಕನ್ನಡ ಮಣ್ಣಿನ ಮಕ್ಕಳೋತ್ಸವ!
ಸಿರಿಸಂಪಿಗೆ ಸೇವಂತಿಗೆ
ಸೂಜಿ ಜಾಜೀ ಮಲ್ಲಿಗೆ
ಮಾವು-ಬೇವು,ಜೋಳ-ಬತ್ತ
ರಾಗಿ ಗೋದಿ ಬೆಳೆಗಳ
ಖಣಜದೋತ್ಸವ!
ಕದಂಬ ಕಟ್ಟಿದ ನಾಡಿನೋತ್ಸವ
ಚನ್ನಮ್ಮನ ಬೀಡಿನ ಶೌರ್ಯದೋತ್ಸವ
ಜನಪದ ಸಂಸ್ಕ್ರತಿಯ ಸಡಗರೋತ್ಸವ
ಕವಿಪುಂಗರು ಹುಟ್ಟಿದ ನಾಡಿನೋತ್ಸವ!
___________________
@ಬಲವಂತ ಮೋರಟಗಿ(ಬಸವಪ್ರಿಯ)








‌‌‌‌



‌‌‌

- ಬಲವಂತ ಮೋರಟಗಿ(ಬಸವಪ್ರಿಯ)

10 Dec 2016, 01:54 pm

ಇತಿಹಾಸದ ಬೆನ್ನೇರಿ

ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಅರಮನೆಗೆ:-
ಕಲ್ಲು ಹೊತ್ತು ನೆತ್ತಿ ನೆಗ್ಗಿಸಿಕೊಂಡವರ,
ಕಲ್ಲು ಕಟೆದವರ,ಗಾರೆ ಕಲಿಸಿದವರ,
ಗೋಡೆ ಕಟ್ಟಿದವರ, ಬೆನ್ನು ಬಾಗಿಸಿಕೊಂಡವರ...
ರಂಗು.. ರಂಗಿನ ಕಥೆಗಳು...

ಇತಿಹಾಸದ ಬೆನ್ನೇರಿ ಅರಸುತ್ತಾ ಅಲೆದರೆ,
ಒಂದಿಷ್ಟು ಸಿಗಲಿಲ್ಲ ಅವಶೇಷ...
ಯುದ್ಧದೊಳಗೆ:-
ಖಡ್ಗ ಝಳಪಿಳಿಸಿದವರ,
ಬಿಲ್ಲಿಗೆ ಬಾಣ ಹೂಡಿದವರ,
ಆನೆಗೆ ಅಂಕುಶ ಚುಚ್ಚಿದವರ,
ಕುದುರೆಗೆ ನಾಲು ಬಡೆದವರ,
ಖಡ್ಗಕ್ಕೆ ರುಂಡ ಕೊಟ್ಟವರ,
ನೆಲಕ್ಕೆ ರಕ್ತ ಕೋಡಿಯಾದವರ....
ರಂಗು ರಂಗಿನ ಕಥೆಗಳು...

ರಚನೆ:ರೇವಣಸಿದ್ದ ಗೌಡರ.
ಸಾ:ರಬಕವಿ-587314
Mobile:9008060918

- Revanasidda Goudar

10 Dec 2016, 01:30 pm

ಕನಸಿನ ನೂರು ಚೂರುಗಳು

ಒಂದು ಕಣ್ಣ ಹನಿಯ ಬಿಂದು
ಹೇಳುತಿದೆ ತೇಲಿ ಬಂದು
ತನ್ನ ಒಲುಮೆಯನ್ನು
ನೋಂದು ನೋಂದು

ಅದುಮಿಟ್ಟುಕೋಳ್ಳಲಾಗದ
ಒಂದು ನೂವಿನ ಸ್ವರ
ಹೋರಡಿಸುತಿದೆ ವಿರಹ
ಕಣ್ಣೀರಿನ ತರಹ ದರಾ ದರಾ

ಯಾರ ಹ್ರದಹದ ಧ್ವನಿಗೆ
ಯಾರ ಉಸೀರು ಬೇರತಿದೆಯೋ
ಆ ಉಸೀರಿನ ಒಡೆಯನದು
ಯಾವ ತರಹದ ನಿಲುವೋ

ಇರುಳು ಕವಿದರೆ ಮತ್ತದೆ
ಕನಸಿನ ನೂರು ಚೂರುಗಳು
ಯಾರ ಕಣ್ಣಿನಿಂದ ಜಾರಿ ಬಂದು
ಸೇರಲಿ ನಾನು ನಿನ್ನ ಎಂದು

ಮಹೇಶ ಕಾಳಿ

- ಮಹೇಶ ಕಾಳಿ

10 Dec 2016, 12:30 pm

ಆ ಚಂದಿರ

ಚೆಂದದ ಸುಂದರಿ
ಕನಸಿನ ವೈಯಾರಿ
ಭೂ ಲೋಕದ ಕುವರಿ

ಕನಸಿನ ಮದರಂಗಿ
ಮನಸಿನ ಮೃದುವಂಗಿ
ನನ್ನ ಈ ಚೆಲುವಿನ ರಂಗಿ

ನಿನ್ನದೆ ಗ್ಯಾನ
ನಿನ್ನದೆ ದ್ಯಾನ
ನಿನ್ನದೆ ಪ್ರೇಮ ಪುರಾಣ

ಕನಸ್ಸು ಹೇಳುತ್ತಿದೆ
ಮನಸ್ಸು ಕೇಳುತ್ತಿದೆ
ಹೃದಯ ಹೆದರುತ್ತಿದೆ

ಒಬ್ಬಳೆ ಒಬ್ಬಳು ಪ್ರೇಯಸಿ ಸಿಗುವಳೋ..
ಈ ಬಡಪಾಯಿ ಹೃದಯಕೆ
ಕಾಯುತ್ತಿವೆ ಕಾಯಾ ವಾಚಾ ಮನಸ್ಸುಗಳು
ಆ ಚಂದಿರನ ಮೊಗದವಳ ಬರುವಿಕೆಗೆ

- ರನ್ನ ಮಹಾದೇವ

10 Dec 2016, 12:21 pm

ತುಡಿತ

ಕವಿಯಾಗುವ ಕನಸೊoದು ಮೂಡುತಿದೆ
ಅದ ಸಾಧಿಸಲು ಮನಸ್ಸಿoದು ಮಿಡಿಯುತಿದೆ
ಸಾಧಕನಾಗಲು ಸಾವಿರಾರು ಕ್ಷಣಗಳ ಅಗತ್ಯವಿದೆ
ಆದರೆ,,,,ಆ ಕ್ಷಣಗಳ ಕೊಲ್ಲಲು ಬಾಳಲಿ,
ನೂರಾರು ನೋವುಗಳಿವೆ
ಆ ಕಾರಣ,,, ಕoಡ ಕನಸ್ಸುಗಳು ನಿಲ್ಲುತಲಿವೆ
ಪ್ರತಿಭಾ ಮನಸ್ಸು ಸಾಯುತಲಿದೆ
ಸಾಧನೆಯ ತುಡಿತವು ಚಡಪಡಿಸಿದೆ
ಬೆಳಕಿದ್ದರೂ,,,,, ಕತ್ತಲೆ ಕವಿಯುತಿದೆ
ಆದರೂ,,,,,
ಛಲಬಿಡದ ಮನಸ್ಸಿoದು ಹರಿಯುತಲಿದೆ
ಪದಗಳು ಸಾಲನು ಸೇರುತಲಿವೆ
ಕಾಣದ ಕವಿತೆಯು ಮೂಡುತಲಿದೆ
ಆ ಕವಿತೆಯು ಈ ಕವಿಯನು ಪರಿಚಯಿಸುತಿದೆ.
.....ರಘುವಿಜಯ ಕಸ್ತೂರಿ.

- ರಘುವಿಜಯ ಕಸ್ತೂರಿ

10 Dec 2016, 12:13 pm

ಹಿಂದಿನ ಭಾರತಕ್ಕೆ ಇಂದಿನ ಭಾರ

ನೆನಪಾಗುತ್ತಿದೆ ಹಿಂದಿನ ಭಾರತ ಬದುಕು
ನಸು ಬೆಳಕಾಗಿದೆ ಇಂದಿನ ಜೀವನ ತುಣುಕು
ರಾಜ-ಸೇವಕ, ಗುರು-ಶಿಷ್ಯರ ಸ್ವಾಮಿ ಭಕ್ತಿ
ಆಜ್ಞಾ ಕಾರ್ಯದಿ ಚಿತ್ತ ಭಕ್ತಿಯ ಮುಕ್ತಿ
ಇದುವೆ ಆನಾದಿ ಕಾಲದ ಶೋಭಿತ ಸೂಕ್ತಿ
ಆದರೆ ಏನಾಗಿದೆ ಇವತ್ತು?
ನೋಡು ನೋಡುತಾ ಬರುವ ಕಾಲಗಳು
ಆಯಾತಪ್ಪಿ ಮುಕ್ಕುರುಸಿ ಬೀಳುತ್ತಿವೆ
ಕಾರಣ, ಮೋಸದ ಆಡಳಿತಸೂತ್ರ ಬಳಕೆಯ ಕಾರ್ಖಾನೆ
ಉಗುಳುತಿದೆ ತನ್ನೋಳಗಿನ ವಿಷದ್ವೇಷ
ಬಲಿಯಾದವರು ಅಮಾಯಕರು! ಬಳಿಯೇ ಯಮಪಾಶ
ಕೇಳೋರು ದಿಕ್ಕಿಲ್ಲ, ಬಂದರೋ ಅವರಿಗೆ ಬದುಕಿಲ್ಲ
ಅಧಿಪತಿಯೇ ಭ್ರಷ್ಟನಾದರೆ ಅಧಿಕಾರಿಗಳು ಅದೃಷ್ಟರು!
ಅಧರ್ಮ ಕಾಲ ಬರಬಹುದೇನೋ...?
ಮಾಯಾ ಜಾಲ ಬೀಸಿ ಉಕ್ಕಿಸುವುದು ಹಾಲಹಲ
ಬರಬಹುದು ವಿಷ್ಣುವಿನ ಹನ್ನೆರಡನೇ ಅವತಾರ
ಮೊದಮೊದಲು ಹೆದರಬಹುದು ನೋಡಿ ಇವರ ಗ್ರಹಚಾರ
ಜಾತಿ ಎಂಬ ಬಲೆ, ಮತವೆಂಬ ಸೆಲೆ, ಕೋಮುವಾದದ ಅಲೆ
ಕಂಡು! ಕಂಗಾಲಾದರೂ ಸಂಶಯವಿಲ್ಲ
ಗೋಮುಖ ಧರಿಸಿದ ವ್ಯಾಘ್ರಗಳೋ ಸುತ್ತಲಿನ ಜನರು
ಸಾಥ್ ನೀಡುವ ನಾಟಕವಾಡಿ ದೂರ ಓಡಿ ಸಂತಸ ಪಡುವವರು!
ಅಶಾಂತಿ, ಕೊಲೆ, ದರೋಡೆ ಎಂಬ ಭೂತ ಮೈಗೂಡಿಸುವವರು!
ಬಲಿಯಾದವರು ಪರಿಶುದ್ಧ ಧರ್ಮಾಂಧರು!
-ದೇವ ಕಜ್ಜೇರ

- Deva Kajjera

10 Dec 2016, 12:12 pm