ನಾನ್ ಒಂದ ಕವಿತೆ ಹೇಳ್ತಿನಿ ಕೇಳ್...
ನೀನಂದ್ರ
ನನ್ನ ಬಿಕ್ಕಳಿಕೆ ನೀರಿನಂಗ್
ನಾನು ನಡೆಯುವಾಗಿನ ನನ್ನ ನೆರಳಿಂಗ್
ಅತ್ತರೆ ಕಣ್ಣೋರೆಸುವ ಕರವಸ್ತ್ರದಂಗ್
ತಪ್ಪು ಮಾಡಿದಾಗ ತಿದ್ದಿ ಹೇಳು ಸರಸ್ವತಿಯಂಗ್
ನೀನೆ ನನ್ನ ಸಹನೆ ಒಡಲು ಪ್ರೀತಿಯ ಮಡಿಲು
ಯವ್ವಾ ಬೇ....
ಪರಶುರಾಮ. ಪೇಟ್ಕರ್ ,ಲೋಕಾಪುರ
೭೪೧೧೩೪೦೫೩೧
ಸಂಜೆಯ ಹೊಂಗಿರಣದ ಸವಿಯ ಸವಿದು ವಿರಮಿಸುತ್ತ ಕುಳಿತಿರುವ ಪ್ರೇಮಿಗಳು.....
ಸುಂದರ ಕ್ಷಣಗಳ ನೆನೆಯುತ ಪ್ರೀತಿಯ ಬೆಳಕನ್ನು ಚೆಲ್ಲುತಿಹ ಮನಸುಗಳು...
ಮನಸು ಒಪ್ಪಿಸಿ ಅದಲು ಬದಲು ಮಾಡಿಕೊಂಡ ಹೃದಯಗಳು...
ಎಲ್ಲೆಲ್ಲು ತುಂಬಿದೆ ಒಲವಿನ ಕಡಲು...
ಆಕೆಯ ಕಣ್ಣಲ್ಲಿ ಆತನು..ಆತನ ಕಣ್ಣಲ್ಲಿ ಆಕೆಯು ತುಂಬಿರಲು...
ಸುಂದರ ಅನಿಸುವುದು ಸೂರ್ಯನ ಕೆಂಪಾದ ಕಿರಣಗಳು...
ಆವರಿಸಲಿ ಎಂದು ಅಪೆಕ್ಷಿಸುತ್ತಿದೆ ಮನಸು ಚಂದ್ರನ ಬೆಳದಿಂಗಳು....
ಕಲ್ಪನೆಯಲಿ ಕಂಡಳು ಕವನ...
ನೋಡಿ ಮೆಚ್ಚಿದೆ ಅವಳ ನಯನ..
ಬೇರೆಲ್ಲು ಹರಿಯಲಿಲ್ಲ ನನ್ನ ಗಮನ..
ಅವಳ ಬಳಿ ಹೋಗಲು ತುಡಿಯುತಿತ್ತು ನನ್ನ ಮನ...
ಆದರು ಒಂದು ಗೊಂದಲ ಇದು ಸ್ನೇಹಾನ ಇಲ್ಲ ಪ್ರೀತೀನ.....
ಒಬ್ಬಂಟಿಯ ಜೋಡಿ ಕಣ್ಣ ಹನಿಗಳು
ಕೆನ್ನೆಗಿಳಿದು ಬರೆದಿವೆ
ಅಕ್ಷರವಾಗದ ಆರ್ತ ಅರ್ಥದ ನೋವಿನ ಓಲೆ
ತಲುಪಲಾರದ ವಿಳಾಸಕ್ಕೆ
ರಾತ್ರಿಯ ಕತ್ತಲು ಹಗಲಿನ ಬೆಳಕು
ತಬ್ಬಿಕೊಂಡಂತಿದೆ ಒಂದನ್ನೊಂದು
ಇಳಿಸಂಜೆಯ ಹೊತ್ತಲಿ
ನೀ ಎಲ್ಲಿ ಹೋದೆಯೋ
ನೆನಪುಗಳಲ್ಲಾದರೂ ಹುಡುಕಿಕೊಳ್ಳೋಣವೆಂದರೆ
ಹೋಗುವ ಮುನ್ನ ನೆನಪುಗಳ ಕಣ್ಣು ಕಿತ್ತು ಹೋದೆ
ಹೋದವಳ ಮನಸು ಹಗುರ
ಉಳಿದವನ ಬದುಕು ಹೆಣಭಾರ
ಯಾವತ್ತೂ ಈ ಬದುಕಿಗೆ ಎದಿರಾಗಬೇಡ
ಎದಿರಾದರೂ ನಗಬೇಡ
ನಿನ್ನ ನಗುವಿನ ಅರ್ಥ ಹುಡುಕುವ ಶಬ್ಧಕೋಶ
ನನ್ನ ಬದುಕಲ್ಲಿ ಉಳಿದಿಲ್ಲ !
- ಜೀವ ಮುಳ್ಳೂರು
8970922703
ನನ್ನ ಖಾಲಿ ತಲೆಯಲ್ಲಿ,
ಹೊಟ್ಟೆ ತುಂಬಿಸದ ಕವನ
ಗಪ್ ಚಿಪ್ ಮಲಗಿದೆ
ನನ್ನ ಲಬ್-ಡಬ್ ಸೌಂಡ್ ಮಾಡುವ ಹಾರ್ಟಲ್ಲಿ,
ಜೇಬು ತುಂಬಿಸದ ಕವನ
ಉಸಿರು ಬಿಗಿ ಹಿಡಿದು ಮೌನವಾಗಿ ಮಲಗಿದೆ
ನನ್ನ ದೃಷ್ಟಿ ಹೀನ ಕಣ್ಣುಗಳಿಗೆ,
ದಾರಿ ತೋರಿಸದ ಕವನ
ಕತ್ತಲೆ ಜೊತೆ ಕೈ ಕೈ ಜೋಡಿಸಿದೆ.
ವಸಂತರಾಜನಿಗೆ ಕೈ ಕೊಟ್ಟ ಕೋಗಿಲೆಯಂತೆ
ಹುಣ್ಣಿಮೆ ರಾತ್ರಿಗೆ ಕೈ ಕೊಟ್ಟ ಚಂದಿರನಂತೆ
ನನ್ನ ಕವನ....ನನ್ನ ಕವನ....ಕವನ...ಕವನ..ಕ.....