Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೂರಾದ ಮನ

ಭಾವನೆಯೆ ಬರಿದಾದ ಮೇಲೆ,
ಏಕೆ ಗೆಳೆಯ ಈ ಪ್ರೀತಿಯ ಅಲೆ.
ನಿನಗಾಗಿ ಕಾದು ಸೋತಿರುವೆನು,
ಇನ್ನೆಂದೂ ನಾ ನಿನ್ನ ಬಳಿ ಬರಲಾರೆನು.....

- shwetashri naik

13 Dec 2016, 12:01 pm

ಹೆತ್ತವಳು

ಅಮ್ಮ,
ಬಂದಿರುವುದು ಕಳೆಯಲು ಒಂದಿಷ್ಟು ದಿನ
ಬಂಧನಗಳ ನಡುವೆ ಏಕೆ ಕಟ್ಟಿ ಹೋಗಿದೆ ಈ ಮನ

ನನ್ನದಿಲ್ಲಿ ಎನ್ನಿಲ್ಲ ಎಂಬ ಅರಿವಿದೆ
ಆದರು ಮಹಾದಾಸೆಗಳ ಹೊತ್ತು ಈ ಜೀವ ಸಾಗಿದೆ

ಪುಟ್ಟ ಪುಟ್ಟ ಕನಸು ಬೆಳೆದು ದೊಡ್ಡದಾಗುವುದೇಕೆ?
ಚಿಗುರುವ ಮುನ್ನವೆ ಬಾಡಿ ಹೋಗುವುದೇಕೆ..

ಅರ್ಥವಾಗದ ಈ ಜೀವನಕ್ಕೆ ಉತ್ತರವೆಲ್ಲಿ ಹುಡುಕಲಿ..
ಕೈ ಹಿಡಿದು ನೆಡೆಸೆನನ್ನು ಬಾ ಬೇಗ ನಿನ್ನಿಂದು.

ರವೀಂದ್ರ ಬಿ.ಆರ್.

- ರವೀಂದ್ರ

13 Dec 2016, 11:41 am

ಬಿಸಿಲು

ಮುಂಜಾನೆಯ ರವಿತೇಜನ ಕಿರಣ ಅಪ್ಪುವುದು ಇಳೆಯನು,
ಎಳೆಬಿಸಿಲು ಚಾಚುವುದು ಸಾವಿರಾರು ಜೀವಸಂಕುಲಗಳನು,
ಬಿಸಿಲು ಹೆಚ್ಚಿಸುವುದು ಜಗದ ಸೌಂದರ್ಯವನು,
ಸಂತಸದಲಿ ಮುದಗೊಳಿಸುವುದು ಕಣ್ಣುಗಳನು.

- Shilpa dhruva

13 Dec 2016, 11:22 am

ಅವಲಂಬನೆ

ಅವಲಂಬಿಸುವರು ಇತರರನು,
ಮಾಡುವರು ಸಸಾರವನು,
ಬರುವುದು ಸಂಕಷ್ಟ ನಿರೀಕ್ಷಿಸದೆ,
ಅನುಭವಿಸುವರು ತಾವೇ ಅಪೇಕ್ಷಿಸದೆ,
ಬೇಕಾ ಈ ಅವಲಂಬನೆ?
ಏತಕ್ಕಾಗಿ ಈ ಪರಾವಲಂಬನೆ?
ಎಲ್ಲರೂ ಬದುಕುವುದು ವಿಶಾಲವಾದ ಈ ಪ್ರಪಂಚದಲಿ,
ಇರುವುದು ಎಲ್ಲರಿಗೂ ಅವಕಾಶ ಈ ಜಗದಲಿ,
ತೋರಿಸಿ ಬದುಕಿ ಯೋಚಿಸದೆ,
ಸಾದಿಸಿ ಬದುಕಲಿ ಚಿಂತಿಸದೆ.

- Shilpa dhruva

13 Dec 2016, 11:14 am

"ನನ್ನೆದೆಯ ಹಾಡು" ---------

ನನ್ನೆದೆಯ ಹೊಂಗಾಡಿನಲ್ಲಿ
ನಿನ್ನದೆ ನೆನಪು ಗೆಳತಿ
ಮತ್ತೆ ಮತ್ತೆ ಬರುತೈತಿ
ನೋವನ್ನು ತರತೈತಿ!
ನಿನ್ನ ಮನದ ಮೌನದಲ್ಲಿ
ನನ್ನ ಜೀವ ತುಂಬೈತಿ
ನಿನ್ನ ಮಾತಿನಾಂತರ್ಯದಲ್ಲಿ
ನನ್ನೆದೆಯ ಹಾಡೈತಿ!
ನಿನ್ನ ಕಣ್ ನೋಟದಲ್ಲಿ
ಅದಮ್ಯ ಪ್ರೇಮ ಅರಳೈತಿ
ನಿನ್ನ ಪ್ರೇಮ ಸೆಳೆತದಲ್ಲಿ
ನನ್ನೆದೆಯ ಹಾಡೈತಿ!
ಕಾರಣವಾಯಿತು ನನ್ನ ಬಾಳಿಗೆ
ನಿನ್ನಯ ಪ್ರೀತಿಯ ಬೆಸುಗೆ
ಚಿಗುರೊಡಿಯಿತು ನನ್ನದೆಯಲ್ಲಿ
‌‌‌ ‌‌‌ಮಾಗಿದ ಕನಸ್ಸು
ಪ್ರೇರಣಯಲ್ಲವೇ ಅದಕ್ಕೆ
ನಿನ್ನ ಮೊಗ್ಗಿನ ಮನಸ್ಸು!

---------------------------------------------
@ ಬಸವಪ್ರಿಯ
(ಬಲವಂತ ಮೋರಟಗಿ)

- ಬಲವಂತ ಮೋರಟಗಿ(ಬಸವಪ್ರಿಯ)

13 Dec 2016, 10:50 am

ಶಾOತಿ ಹುಡುಕಿದ ಮನ

ಬದುಕಲಾರೆನು ನಾನು ಬರೀ ಭ್ರಮೆಯೊಳಗೆ.
ಹಿOಸೆ ನೀಡುತ ಕಾಡುವ ಪ್ರಶ್ನೆಗಳೆಷ್ಟೋ ಎದೆಯೊಳಗೆ.
ಹೊರಬOದಾಗ ಸಿಡಿಯುವುದು ಜ್ವಾಲಾಮುಖಿ.
ಮನದ ಮೌನ ಭಾವನೆಯ ಅOತರ್ಮುಖಿ.

ನನ್ನ ಉಸಿರು ಪ್ರೀತಿಸಿದ್ದು ಬರೀ ಹಸಿರನ್ನು.
ಅದು ಸಮ್ರದ್ಧ ನಾಡಿನ ಗOಧದ ಕಾಡು.
ಉತ್ಸಾಹ ಚಿಲುಮೆಯಾದ ಮನದ ಹಾಡು.
ಚಿಮ್ಮುತ್ತಿದೆ ರೋಷ ತಡೆಯಲಾಗುತ್ತಿಲ್ಲ.
ಬೆಳಕು ಕಾಣದಾಗಿದೆ ಕತ್ತಲೆಯ ಜಗದಲ್ಲೆಲ್ಲ.

ನುಡಿಯಲಾಗದ ನುಡಿ ಬರಹಕ್ಕೆ ಇಳಿದಿದೆ.
ಆಕಾಶದಲ್ಲಿನ ಮೋಡದ ವರ್ಷಧಾರೆ ಭುವಿಗಿಳಿದOತೆ.
ಬುದ್ದನ ಶಾOತಿ ಬೇಕೆOದು ಮನ ಬಯಸಿದೆ.
ಆದರೆ ಬುದ್ದನೊOದಿಗೆ ಆತನ ಶಾOತಿಯೂ ಹೊರಟು ಹೋಗಿದೆ.

- rukmini

13 Dec 2016, 10:21 am

*ನೀನೆ*

ಹೃದಯ ಮಿಡಿಯುತ್ತು ಅಂದು,
ನಿನ್ನೆ ಬಯಸಿದೆ ಎಂದು |
ಕನವರಿಕೆಯಲ್ಲು ನೀನೆ,
ಬಿಸಿ ಉಸಿರಲು ನೀನೆ |
ಕಾಣೋ ಕನಸಲು ನೀನೆ,
ಕಳೆದ ಸ್ವಪ್ನದಲ್ಲು ನೀನೆ |
ಕೇಳೆ ನನ್ನ ಮಿಡಿಯುವ ಹೃದಯವು ನೀನೆ !!

*ನೀನೆ*

- ಬಾಲಕೃಷ್ಣ

13 Dec 2016, 09:09 am

ಕಾದಿಟ್ಟ ಕನಸಲಿ ನಿನ್ನ ಅರಸುವ

ಕಾದಿಟ್ಟ ಕನಸಲಿ ನಿನ್ನ ಅರಸುವೆ
ಕಾಣದೆ ಕರೆವೆ,ತಪಿಸುವೆ
ಸರಿದಾಡುವೆ ಸನಿಹದಿ ನೀ ಚಿಟ್ಟೆಯಂತೆ
ಅರಳಿರುವೆ ಘಮದಿ ಸಂಪಿಗೆಯಂತೆ
ನೋಟದಲ್ಲೇ ನನ್ನ ಸೋಕುವೆ
ಹುಸಿಮುನಿಸ ಸೂಸುವೆ
ಸನಿಹ ನಿಂತು ಕೆಣಕುವೆ
ಬಂದಾಗ ದೂರ ಓಡುವೆ
ಬೆವೆತು ಲಜ್ಜೆಯಲಿ ಇಣುಕುವೆ..

‌‍ಕಾಡಿ ನಲಿದಾಡುವೆ
ಬೇಡಿ ಶರಣಾಗುವೆ
ಬಳಿಸರಿದು ಪಿಸುಗುಡುವೆ
ಬಳಸಿ ಪರವಶತೆ ತೊರುವೆ
ಬೆರಗಿನಲಿ ಬೆರೆಯುತಾ
ನನ್ನಲ್ಲಿ ನಿನ್ನ ಹುಡುಕುವೆ
ನಿನ್ನಲ್ಲಿ ನನ್ನ ಬೆಸೆಯುವೆ...

- Indushekar Chinivar

13 Dec 2016, 07:32 am

ಪೆಡಂಭೂತ...

ಭ್ರಷ್ಟ ದುಡ್ಡು ,
ದಂಡಿ ದಂಡಿಯಾಗಿ ಬೆಳೆದು
ಕಪ್ಪು ಧನವಾಗಿ ಮುಚ್ಚಿಟ್ಟು ಬಿಟ್ಟರೋ

ಜಾಣನೆಂಬ ವೀರನೊಬ್ಬ
ಕಠಾರಿಯನ್ನಿಡಿದು ಅಗೆದು ಬಗೆದು
ತೋಡಿ ಬಯಲಿಗಿಟ್ಟನೋ

ನೋಡು ಬಡವ , ಕಾಳಧನಿಕನ ಪರದಾಟವ
ವಿಲವಿಲನೆ ಬಡಿದು ಕೊಳ್ಳುವ
ಅವನ ಜೀವವ

ಗರಿಗರಿ ನೋಟಿಗೆ ಕಡ್ಡಿ ಗೀರಿ
ಬೆಂಕಿಯಿಟ್ಟ ಕಾಳಧನಿಕನು,
ಭ್ರಮಣೆಗೊಂಡು ಹರಿದುಕೊಂಡ
ತೊಟ್ಟ ಬಟ್ಟೆಯ ,

ಬೀದಿ ಎಂಬ ಬಯಲಲ್ಲಿ
ದಿಗಂಬರನಾಗಿ ಹೋದನು
ಕೆಟ್ಟ ಹೃದಯವು ಅಯ್ಯೋ ಎಂದಿದೆ
ಜಾಣನೆದುರು ಮಂಡಿಯೂರಿದೆ.


--ಭಾಮಿನಿ ಡಿ,ಕೆ ,ಎಸ್

- bhamini. chitradurga

12 Dec 2016, 10:34 pm

ಹನಿ..

ನೊಂದ‌ ಮನಸ
ಬಿಗಿದಪ್ಪಿ ನಿಶೆ ,
ಜೋಗುಳ ಹಾಡಿದ
ಇರುಳು...

- Indushekar Chinivar

12 Dec 2016, 10:14 pm