Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿತೆ ಹಳೆಯದಾದರೇನು?

ನಾನು ಬರೆಯುವೆ ಒಂದು ಕವಿತೆ
ಹಳೆಯದೇರಡು ಸಾಲು ಸಾಲ ಪಡೆದು
ನವ ಭಾವನೆಯ ಎರಕಹೋಯ್ದು
ಹಳೆತು ಹೊಸತು ಕಲೆತು ಬೆರೆತು
ಸೃಜಿಸುತಿಹುದು ಹೊಸ ಚೈತನ್ಯದ ಕವಿತೆ
ವಸಂತಾಗಮನದ ನವ ಚಿಗುರಿನಂತೆ

ಹಳೆತು ಮುಖಕೆ ನವತು ಬಣ್ಣದಿ ಶೃಂಗರಿ
ಎಣೆಯುವೆ ನನ್ನೆದೆಯ ಹೃದಯದೊಲೆ
ಹಳೆಯ ಹಾಡು ಆದರೇನು? ಹೊಸತು ಪಾಡು ಬೇಡವೇನು?
ನವೂದಯದೊಂಬಣ್ಣ ಬದಲಾಗಲಾರದೆಂದು
ಕವಿಯ ಮನವು ಅಷ್ಟೆ, ಭಾವದ್ವೇತ್ಯಾಸವನ್ನು ನೋಡು
ಅಂದು ಇಂದು ಕವಿತೆಯೊಂದೆ ಭಾವ ಬೇರೆ ಅಲ್ಲವೇನು?

ಯಾರು ಏನೆಂದರು ನನಗೇನು ಮನವೇ
ಓದುವವರಿಹರಲ್ಲ ಸಾಕು ಇಂದೇನಗೇ
ನವತು ಕವಿತೆ ಬರೆಯಲಿಲ್ಲಿ ಬಿಡದೆ ಬರೆದು
ಮುಗಿಸಿದರೆಲ್ಲ ನಮ್ಮ ಹಿರಿಯ ಕವಿಗಳು
ನಾನೆನೆಂದು ಬರೆಯಲಿ? ಅದನೆ ಮತ್ತೆ ಬರೆಯುವೆನು
ನಗುವವರು ನಗಲಿ, ಮುಖ ತಿರುಗಿಸುವವರು ತಿರುಗಿಸಲಿ;

ಹಳೆಯ, ನಡು, ನವೂದಯವನೊಮ್ಮೆ ನೋಡು
ಎಲ್ಲರು ಅದನೆ ಬರೆದರು ಅವರದೇ ಮೋಡಿಯಲ್ಲಿ
ಕನ್ನಡ ಸಾಹಿತ್ಯ ವೀಣೆಯು ಒಂದೆ ಇರಬಹುದು
ವೈಣಿಕರ ಬೆರಳುಗಳು ಒಂದೆ ಅಲ್ಲ ಕೇಳು
ನುಡಿಸುವವನ ಮನವು ಭಾವ ತುಂಬಿ ಹಾಡಲು
ಕೇಳುಗನೆದೆಯಲಿ ನೋವು ತುಂಬಿದರೇಗೆ ಹೇಳು?

ಹಿರಿಯ-ಕಿರಿಯ ಎನ್ನಲೇಕೆ ತಾಯಿ ಒಬ್ಬಳಲ್ಲವೇನು?
ಮಾಡುವೆನು ಸೇವೆಯನು ಹಿರಿಯರು ಮಾಡಿದಂತೆ
ಬೇಡವೇನೆಗೆ ಬಿರುದು ಸನ್ಮಾನಗಳ ಹಿರಿಮೆ
ಬಡವ ನಾನು ದುಡಿದಷ್ಟು ಊಣಬಡಿಸುವೇ
ವಲ್ಲದ ಭೋಜನದಲಿ ಕಲ್ಲು ಹುಡುಕಬೇಡಿರಿ
ಕನ್ನಡಮ್ಮನ ಪಾದದಲ್ಲಿ ನನದೊಂದು ಹೂ ಇರಲಿ ಬೀಡಿ....,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:37 pm

ಮಾಗಿಯ ಚಳಿ

ಮಾಗಿಯ ಚಳಿಯು ಮೈದಡವುತಿರಲು
ಸೋನೆ ಮಳೆಯು ಜೊತೆಗೂಡಿರಲು
ಧರಣಿಯ ಒಡಲಲಿ ಕಂಪನದಾವಳಿ
ನನ್ನದೇ ಗೂಡಿಲಿ ವಿರಹದ ಕರಾವಳಿ

ನಲ್ಲೆಯ ಚುಂಭನ ಬಯಸಿದ ಮನಸಿದು
ಆಲಿಂಗನದ ಬಿಸಿಗಂಬಲಿಸಿದ ತನಿವಿದು
ನಿನ್ನೆದೆ ತನುವಲಿ ಉದುಗಲೆಂದೆನೋ
ನನ್ನೆದೆಯ ಕಡಲು ಅಬ್ಬರಿಸುತಿದೆ

ಜಿಟಿಜಿಟಿ ಹನಿಹನಿ ಕಲರವದಲ್ಲು
ಬಿಸಿಲನು ಮರೆಸುತ ಸಾಗಿದೆ ಈ ಮಳೆ
ಭುವಿಯನು ತಾಕಿ ಚಿಮ್ಮುವ ಹನಿಯಲಿ
ಕಂಡೆನು ನಲ್ಲೆ ನಿನ್ನಯ ಕಾಲ್ಗೆಜ್ಜೆಯನು

ಮಳೆ ಹನಿ ಚಿಮ್ಮುವ ಚೆಲುವಲಿ
ನಿನ್ನಯ ಪಾದದ ನರ್ತನದಾವಳಿ
ಚುಮುಚುಮು ಚಳಿಯು ನಗೆ ಬಿರುತಿದೆ
ನನ್ನೊಳಗದು ಮೈದೋರಿ ನಿಲ್ಲುತಿದೆ

ಬಿಡದೆ ಸೋ ಎಂದು ಸುರಿಯುವ ಸೋನೆಗೆ
ತಿಳಿಯಿತೇನೊ ನೀ ಬಳಿ ಇರದ ಸುಳಿವು
ಕಾಡುತಿರುವಿಬ್ಬರು ನಲ್ಲೆ ಭಲ್ಲೆಯ ನೀನು
ಬಳಿ ಇರಬೇಕಿತ್ತು ನೀ ಈ ಸಮುದಲ್ಲಿ

ನಡುಗುವ ಮೈ ಮನ ಸೀತದ ಗಾಳಿಗೆ
ನಿನ್ನಯ ನೆನಪಿನ ಚಿತ್ರಾವಳಿಯಲು
ಚುಂಭನದಬ್ಬಲ ಬಯಸಿದೆ ಬಯಲು
ನಡುಗುವ ತುಟಿಯು ಕಾಡಿದೆ ಅಸಲು

ಸೋನೆಯು ಮಾಗಿಯು ಜೊತೆ ಸಾಗಿರಲು
ಮಿಲನದ ಸಂಭ್ರಮ ನನ ಕಾಡುತಿರಲು
ತಪ್ಪು ಎನಬೇಡವೇ ಸಖಿ ಇದು ಮಾಗಿಯ ಕಾಲ
ಬಂದು ಬಿಡು ಒಮ್ಮೆ ಮುಖಾಮುಖಿ
ಇಬ್ಬರು ಒಂದಾಗಬೇಕಿದೆ ಸಖಾಸಖಿ...

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:34 pm

ಬದುಕು

ಒಬ್ಬಂಟಿಯಾಗಿ ಇಲ್ಲಿಯವರೆಗು ಬಂದಿರುವೆ
ಹಿಂತಿರುಗಿ ನೋಡಿದರೆ ಹೆಜ್ಜೆ ಗುರುತುಗಳು
ಬೀರುಗಾಳಿಯಲಿ ಮಾಸುತಿವೆ
ನಶಿಸುವ ಮನುಜನಿಗೆ ಹೆಜ್ಜೆಯ ಗುರುತುಗಳೆ ಆಧಾರ
ಅವೆ ಇಲ್ಲವಾಗುತಿವೆ ನನ್ನ ಬದುಕಿನಲಿ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

15 Dec 2016, 06:33 pm

ಬರಗಾಲ

ನೇಸರನು ತನ್ನ ಸುಡುವ ನಾಲಿಗೆಯಿಂದ
ನೆಲವ ನೆಕ್ಕಿ ನಕ್ಕಾನ
ಹಸಿರು ಫಸಲ ನುಂಗಿ ತೇಗ್ಯಾನ
ಝುಳು ಝುಳು ಹರಿಯುವ ಜಲವನ್ನೆಲ್ಲ
ಹಿಂಗಿಸಿ ಕಿಸಿ ಕಿಸಿ ನಕ್ಕಾನ
ಚಿಲಿ ಪಿಲಿ ಗುಟ್ಟುವ ಹಕ್ಕಿಗಳ
ಕತ್ತು ಹಿಚಕ್ಯಾನ
ಮೂಕ ಪ್ರಾಣಿಗಳ ಒಡಲು ಬಗಿದಾನ
ಗಿಡ ಮರ ಬಳ್ಳಿಗಳ ಒಣಗಿಸಿ
ವಿಕೃತ ನಗಿ ಬೀರಾನ

ರಚಣೆ:ರೇವಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ.೯೦೦೮೦೬೦೯೧೮

- Revanasidda Goudar

15 Dec 2016, 06:14 pm

ಮೌನ..

ಮಸಿ ಕಾಣದ ಲೇಖನಿಯಲಿ
ಗೀಚಿದೆ ನೀ ಮೂಕಭಾವದಿ...
ಕಂಡೂಕಾಣದ ಪದಗಳ ಅರಸುತಾ
ಅಲೆದಿರುವೆ ನಾ
ಬದುಕ ಪುಟಗಳಲಿ...

- Indushekar Chinivar

15 Dec 2016, 04:41 pm

"ಏಕೆ ಹೀಗೆ....?" ---------

ಬತ್ತಿದ ಭಾವದಲ್ಲಿ
ಚಿತ್ತಾರ ಬಿಟ್ಟವಳೆ
ಎತ್ತ ಹೋದಯಾ...ನೀನು
ನನ್ನ ತೊರೆದೆಯಾ!
ಕಷ್ಟ ಕಾಲದಲ್ಲಿ
ಜೊತೆಯಲ್ಲಿ ಇರುವೆನೆಂದು
ಭಾಷೆಯನ್ನು ಕೊಟ್ಟ ನೀನು
ಬಿಟ್ಟು ಹೊರಟೆಯಾ....ಗೆಳತಿ!
ಏಳೇಳು ಜನ್ಮದಲ್ಲಿ
ನನ್ನಲ್ಲಿ ಇರುವೆನೆಂದು
ಭರವಸೆಯ ಭವನಕಟ್ಟಿ
ಒಂಟಿಯಾಗಿ ನನ್ನ ಬಿಟ್ಟು
ಹೊರಟು ಹೋದೆಯಾ...ಗೆಳತಿ!
ಏಕೆ ಹೀಗೆ ಮಾಡಿದೆ ನನಗೆ
ಮನಸ್ಸು ಹೇಗೆ ಬಂತು ನಿನಗೆ
ಘಾಸಿಗೊಳಿಸಿದೆ ನನ್ನ ಮನಸ್ಸಿಗೆ
ನಲಿವಾಗಿರಲಿ ನಿನ್ನ ಜೀವನ ಗಳಿಗೆ!
---------------------------------------------*ಬಸವಪ್ರಿಯ*
(ಬಲವಂತ ಮೋರಟಗಿ)

- ಬಲವಂತ ಮೋರಟಗಿ(ಬಸವಪ್ರಿಯ)

15 Dec 2016, 03:13 pm

ಮಳೆ ಬಂತು ಮಳೆ

"ಮಳೆ ಬಂತು ಮಳೆ
==============
ಮಳೆ ಬಂತು ಮಳೆ
ಬಿರಿ ಬಿಸಿಲಿನ ನಾಡಿಗೆ
ಬರಡು ಬರಿದಾದ ಬಯಲಿಗೆ

ಮಳೆ ಬಂತು ಮಳೆ
ಬಿರಕು ಬಿಟ್ಟ ಭೂಮಿಗೆ
ರಣಗುಡವ ರಣಾಂಗಣಕ್ಕೆ

ಮಳೆ ಬಂತು ಮಳೆ
ಉತ್ತಿ ಬತ್ತಿಹೋಗವ ನೆಲಕ್ಕೆ
ಕೈ ಹೊತ್ತು ಕುಳಿತ ಜನರ ಮನಕ್ಕೆ

ಮಳೆ ಬಂತು ಮಳೆ
ಧಗಧಗ ದಗಿಸುವ ಧರೆಗೆ
ಬಿಸಿಲು ಜಳ ಇರುವ ಇಳೆಗೆ

ಮಳೆ ಬಂತು ಮಳೆ
ಹಸಿವಿನಿಂದ ಬಳಲಿದ ಜನರಿಗೆ
ಬಿಸಿಲಿನಿಂದ ಕಂಗೆಟ್ಟ ದಾರಿಗೆ

ರಚನೆ* ಆನಂದ ಎಸ್ ಪೂಜಾರಿ
ರನ್ನ ಮುಧೋಳ
Ph. 8904215983

- ಆನಂದ ಪೂಜಾರಿ

15 Dec 2016, 03:08 pm

ನಾನು? ಅದೇನು?

ಹುಡುಕ ಹೊರಟೆ
ನನಾರೆಂದು
ಎಲ್ಲಿಹೆನೆಂದು!

ಶರೀರವೇ ನಾನೇನು?
ಒಳದನಿ ಹೇಳಿತು
ಶರೀರ ನನ್ನದೆಂದು

ಯಾರದು ಹೇಳಿದ್ದು
ಮನವೇ? ಬುದ್ಧಿಯೆ?
ಭ್ರಮೆಯೆ?

ಒಳಗಿರುವ ದಿವ್ಯ
ಚೇತನವೇ? ಹೇಳು
ನೀನಾರೆಂದು?

ನಾನು ನಾನೇ ಎಂದು
ಬಡಬಡಿಪನಾರೆಂದು?

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

15 Dec 2016, 10:17 am

ನೀನ ಜೀವನ

ಜೀವ ಹೋದ ಮೇಲೆ ದೇಹ ಮ‌‌‌‌ಣ್ಣು ಪಾಲು,
ಅಸ್ಥಿಗಳು ಗಂಗೆ ಪಾಲು, ವಸ್ತ್ರಗಳು ಅಗಸನ ಪಾಲು, ಆಸ್ಥಿಗಳು-ಮುಂದೆ ಕೂತು ಅಳುವವರ ಪಾಲು, ಮಗನು ಹಾಕುವ ಪಿಂಡ ಕಾಗೆಯ ಪಾಲು, ಅರಿಯದ ಈ ಜೀವ ಯಮನ ಪಾಲು,ನೀ ಮಾಡಿದ ಸೇವೆ ದಾನ-ಧರ್ಮ ಮಾತ್ರ ನಿನ್ನ ಪಾಲು.

- kiran

15 Dec 2016, 09:59 am

ಪ್ರೇಮಶರಧಿ

ಮಾತುಮಾತಿನಲ್ಲೂ ಮೇಳೈಸಿದೆ ಮೌನದ ಮೆರವಣಿಗೆ
ನಡೆದಿದೆ ಪಯಣವು ಕೋರೈಸುವ ನಿನ್ನ ಪ್ರಕಾಶದೆಡೆಗೆ
ಒಲಿದುಬಂದಿರುವೆ ನಾನೆ ನಿನ್ನೆಡೆಗೆ

ನಿನ್ನ ಮೌನವೆ ಹೇಳಿದೆ ಮಿಡಿಯಲಾರದ ಆ ಮಿಡಿತವನು,
ಹೂ ಅರಳಿದಂತ ಸದ್ದನು, ಪ್ರತಿ ಹೆಜ್ಜೆಯಲ್ಲಿ ನಿನ್ನದೇ ಗುಂಗಲಿ

ಪ್ರತಿಯೊಂದು ಮಾತಿನಲ್ಲಿ ಅನುರಣಿಸಿದೆ ಸೋಜಿಗದ ಶೃಂಗಾರ
ಶೃತಿಗೂಡಿದ ಹಾಡಿನಲಿ ಕರಣಗಳು ಆಲಿಸಿದ ಧನಿ ಗಂಭೀರ,

ಕಣ್ಣೋಟಕೆ ಕಾಣದಾಯಿತು ಮನದ ದಾರಿ,ಮರಣಿಸಲೆ ಒಂದು ಅವಧಿ
ಮುಳುಗಿಹೋಗೋಣ ಒಲವ ಜೀವನದಿ,ತೇಲುತ ಹರಿಯುವ ಪ್ರೇಮಶರಧಿ

- veerabhadra

15 Dec 2016, 09:40 am