ಕೈಯಲ್ಲಿ ಕೋಟಿ ಇದ್ದರು ಹಿರಿಯರ
ಕಂಡೊಡನೆ ಕಾಲಿಗೆ ಬೀಳೋದ ಸಂಸ್ಕಾರ
ಎಷ್ಟೇ ಆಧುನಿಕತೆ ಬಂದರು ಹಣೆಯ
ಮೇಲಿನ ಬೊಟ್ಟು ಸಂಸ್ಕಾರ
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರುಗಳು
ಕಂಡಾಗ ತೋರುವ ಭಯ ಭಕ್ತಿ ಸಂಸ್ಕಾರ......
ಮೊದಲ ಪ್ರಯತ್ನದಲ್ಲಿ
ಗೆಲ್ಲುವವರು ಬದುಕಿನಲ್ಲಿ
ಗೆಲ್ಲಬಲ್ಲರು. ಆದರೆ
ಮೊದಲ ಪ್ರಯತ್ನದಲ್ಲಿ
ಸೋತವರು ಜಗತ್ತನ್ನೆ
ಗೆಲ್ಲಬಲ್ಲರು.ಯಾಕೆಂದರೆ
ಸಂಕಟದೊಂದಿಗೆ ಸೇಣೆಸಾಡುವ
ಮನಸ್ಸಿಗೇ ಛಲ ಹೆಚ್ಚು...................
ಕನ್ನಡದ ಹುಡುಗಿ ನಮ್ಮ ಸೌಪರ್ಣಿಕ
ಇವರಾಡುವ ಕನ್ನಡ ಮನಮೋಹಕ
ಇವಳ ಹಣೆಯ ಮೇಲಿದೆ ಕನ್ನಡದ ತಿಲಕ
ಇವಳೊಂದು ಅಪ್ಪಟ ಕನಕ
ಇವಳ ಸೌಂದರ್ಯ ನೋಡಿ ನಾನಾದೆ ಪುಳಕ
ಇವಳಿಗೆ ನನ್ನ ಈ ಕವಿತೆ ಸಮರ್ಪಕ.
.................................................
ನಾ ಬರೆದೆನು ನಿನಗಾಗಿ ಸುಂದರ ಕವನ
ಬರೆದ ಕವನಗಳಿಗೆ ಆದೆ ನೀ ಸಂಕಲನ
ನನ್ನ ಪ್ರತಿ ಪದಗಳ ಸಾಲಿನಲ್ಲಿ ನೀನೆ ತುಂಬಿ ಕಾಂಚನ
ನನ್ನ ಹೃದಯ , ಮನಸ್ಸಿಗೆ ನೀನೆ ಆಗಿರುವೆ ಸಿಹಿ ಸಿಂಚನ
ಇರಲಾರೆನು ನಿನ್ನ ಬಗ್ಗೆ ಕನಸು ಕಾಣದೆ ಪ್ರತಿದಿನ
ನಿನ್ನ ನೆನೆದು ನನ್ನ ಪ್ರೀತಿಗೆ ಕಾಯುವೆನು ಈ ಜೀವನ
ನಗುವ ಹೂವು ಕಂಡೆ ನಾನೊಂದು
ಆ ನಗುವಿಗೆ ಶರಣಾದೆ ಹುಣ್ಣಿಮೆಯ ಚಂದಿರನೆಂದು
ಹೂ ನಗುವಿನ ಪ್ರಭಾವಕ್ಕೆ ಹೃದಯವೇ ಹಣ್ಣಾಗಿದೆ ಇಂದು
ಚೆಲುವೆಯೇ ನಿನ್ನ ನೋಡಿದೆ ಪರಿಪರಿಯಾಗಿ ಹೂವೆಂದು
ಪರಿಮಳ ಬೀರುವ ಹೂವು ನೀನೆಂದು
ನಗುವೆ ನಿನ್ನ ಚಿನ್ನಾಭರಣ
ನಗುತಿರಲು ನೀನು ನನ್ನ ಬಾಳ ಬೆಳಗುವ ಹೊಂಗಿರಣ…