Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆಚರಣೆ ಎಂಬುದು ಆಡಂಬರದ
ಆಗರವಾಗದೆ ಅರಿವಿನ
ಅರಮನೆಯಾದರೆ ಲೇಸು
ಶೋಷಣೆಯ ನಿತೈನೆಮ,
ವ್ರತಗಳೆ ನಿತ್ಯ ಆಚರಣೆಗಳಾಗದೇ
ದಯೆ,ದ್ರರ್ಮ,ನೈಜ ನೈತಿಕತೆಯ
ವ್ರತ ನಿಯಮಗಳಾಗಬೇಕು ಎಂದಾತ
ನಮ್ಮ ಗುರು ಮಹಾದೇವ.
- kasturi pattar
19 Dec 2016, 09:25 pm
ಮಳೆ ಬಂದರೆ ಎಲೆ ನಡುಗುವುದು
ನೀ ಬಂದರೆ ಎದೆ ಗುಡುಗುವುದು
ತಪ್ಪು ಯಾರದು ಗೆಳತಿ.....???
- PSK
19 Dec 2016, 09:05 pm
ಒಂದಾಗಿರಲಿ ಎಂದೆಂದಿಗೂ ಕರ್ನಾಟಕ
ಮೂಡದಿರಲಿ ಭಿನ್ನತೆಯ ಭಾವ
ಬೆಳೆಯದಿರಲಿ ಅಂತರದ ಕಂದಕ
ನೆಲ, ಜಲ, ನಾಡು, ನುಡಿ ಒಂದಾಗಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?
ಜನ ಮನ ಒಂದಾಗಿರುವಾಗ
ರಕ್ತವು ಒಂದಾಗಿರುವಾಗ
ಕನಸುಗಳು ಒಂದಾಗಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?
ಮನು ಕುಲ ನೀತಿ ಒಂದಾಗಿರುವಾಗ
ಅನೇಕ ಹೋರಾಟಗಳಿಂದ
ರಕ್ತಪಾತಗಳಿಂದ ನಾಡನ್ನು ಕಟ್ಟಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?
ಹಲವಾರು ಸೀಮೆಗಳ ನ್ನು ದಾಟಿ
ಹಲವು ಹರಕುತನಗಳನ್ನು ಕಳೆದು
ಕರುನಾಡ ಕಟ್ಟಿರುವಾಗ
ಎಲ್ಲಿಂದ ಬಂತು ಭಿನ್ನತೆಯ ಮಾತು?
ಒಂದಾಗಿರಲಿ ಎಂದೆಂದಿಗೂ ಕರ್ನಾಟಕ
ಒಂದಾಗಿರಲಿ ಎಲ್ಲಾ ಮನಸ್ಸುಗಳು
ಬಾರಿಸಲಿ ಕನ್ನಡದ ಝೇಂಕಾರ
ಎಂದೆಂದಿಗೂ ಬೆಳಗಲಿ ಕನ್ನಡದ ದೀಪ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
19 Dec 2016, 08:06 pm
ಹೇಳದ ಮಾತೊಂದ
ಗುನುಗಿದೆ ಈ ಹೃದಯ..
ತಪ್ಪಿಯಾದರು ಸಿಗುವೆಯಾ!!
ಬರೆಯದ ಓಲೆಯು
ತಿಳಿಸಲು ಕಾದಿದೆ ಈ ನಯನ..
ಕೋಡದೆಯೇ ಓದುವೇಯಾ!!
ಮೌನವು ಆವರಿಸಿರಲು..!!?
- ಬಾನು ಅಡಿಗಾರ್
19 Dec 2016, 05:22 pm
ನನ್ನ ನಾ ಅರಿಯುವ ಮುನ್ನ
ಅರ್ಧ ಬದುಕು ಕಳೆದಾಯ್ತು
ಮನದ ಆಸೆ ನವಿಲಾಗಿ ನರ್ತಿಸೋ ಮುನ್ನ
ಸಂಸಾರಕ್ಕೆ ಕಾಲಿಟ್ಟಾಯ್ತು
ಸಂತೋಷವ ಸಂಭ್ರಮಿಸೋ ಮುನ್ನ
ಕರ್ತವ್ಯ ಪಾಲಿಸಿ ಆಯಿತು
ನಾ ಕನಸು ಕಾಣೋ ಮುನ್ನ
ಮಕ್ಕಳ ಆಸೆ ಮುಖ್ಯವಾಯ್ತು
ಮುಗಿಯಿತು ಜೀವನ ಅನ್ನೋ ಮುನ್ನ
ಮನದ ಮೂಲೆಯಲ್ಲಿದ್ದ ನಾನು
ಮತ್ತೆ ಇಣುಕಿ ಕವನ ಬರೆದಾಯ್ತು
ನನ್ನ ನಾ ಅರಿತಾಯ್ತು........
.......
ಕವಿರಾಜ
- kavita Rajesh
19 Dec 2016, 04:51 pm
ಆ ನಿನ್ನ ನೆನಪು
ಮನಕೆ ನೀಡಿತು ತಂಪು
ಮರೆಯದ ಆ ಒಣಪು
ಸುಳಿದಂಗಾಯ್ತು ತಂಗಾಳಿ ತಂಪು!
- ಅಶೋಕ ಜಿ.ಕೆ ( ಶಾಂತಿಪ್ರಿಯ)
- "ಶಾಂತಿಪ್ರಿಯ"
19 Dec 2016, 03:03 pm
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
ಹಲವು ವಸಂತಗಳನ್ನು ದಾಟಿ
ಹಲವು ಋತುಗಳನ್ನು ದಾಟಿ
ಹೊಸ ವರುಷ ವು ಬರುತಿದೆ
ಹೊಸ ಹರುಷವ ತರುತಿದೆ
ಜ್ಞಾನದ ಜ್ಯೋತಿ ಬೆಳಗಲಿ
ಆಜ್ಞಾನದ ಅಂಧಕಾರ ತೋಲಗಲಿ
ಒಡೆದ ಮನಸ್ಸುಗಳು ಒಂದಾಗಲಿ
ಅನೇಕತೆಯಲಿ ಏಕತೆಯು ಮೂಡಲಿ
ಹೊಸ ವರುಷ ವು ಬರುತಿದ
ಹೊಸ ಹರುಷವ ತರುತಿದೆ
ತಾರ್ಕಿಕತೆಯು ಮನೆ ಮಾಡಲಿ
ಮೂಢ ನಂಬಿಕೆಯು ತೊಲ ಗಲಿ
ಬಡತನ ದಾರಿದ್ರ್ಯ ಅಳಿಯಲಿ
ಸಮೃದ್ಧಿ ಸಿರಿವಂತಿಕೆ ಮನೆಮಾಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
ಮನುಕುಲದ ಕಷ್ಟಗಳು ದೂರಾಗಲಿ
ಮನೆ-ಮನಗಳಲ್ಲಿ ಶಾಂತಿ ನೆಲೆಸಲಿ
ವಿಶ್ವಾಸಹೋದರತೆಯು ಬೆಳೆಯಲಿ
ಪ್ರೀತಿ ವಿಶ್ವಾಸ ಸರ್ವ ಮನಗಳಲ್ಲಿ ನೆಲೆಸಲಿ
ವಿಶ್ವಶಾಂತಿಯು ಮೂಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
19 Dec 2016, 02:47 pm
ಇಳೆಯ ಕೊಳೆಯ ತೊಳೆಯುತಿರುವ ಮಳೆಯೇ,
ನೀ ಸುರಿಯಲು ಶುಭ್ರವೂ ಆಕಾಶವು,
ಕೊಳೆಯ ತೊಳೆದು ಕಳೆಯ ಪಡೆದು ನಲಿಯುತಿಹುದು ಪ್ರಕೃತಿಯೂ.
ನೋಡಲೋಂದು ಸೊಬಗು ನೀ ಸುರಿದು ತೊಳೆದ ಭೂಗಗನ,
ನೋಡಿ ನಲಿಯುತಿಹುದು ಈ ನನ್ನ ಮನ.
ಸುರಿದು ಮನುವಿನ ತನುವ ತೊಯ್ವ ಮಳೆಯೇ,
ಮನದ ಕೊಳೆಯನು ತೊಳೆಯಲಾರೆಯೆ!?
ರಕ್ತ ಸಂಬಂದಿಗಳೆ ದ್ವೇಷಿಗಳಿಲ್ಲಿ,
ಸ್ನೇಹಿತರೆ ಬೆನ್ನ ಹಿಂದೆ ಇರಿಯುವರಿಲ್ಲಿ,
ಕಂಡವರೇ ಹೀಗಾದರೆ ಕಾಣದವರ ಕಥೆ ಇನ್ನೆಲ್ಲಿ.
ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹಗಳೇ ಮನುಷ್ಯನ ಆಳುತಿರಲು
ನಿಜವೇ ಪ್ರೀತಿ, ಮಮತೆ, ಕರುಣೆಗಳಿಗೆ ಇನ್ನೂ ಜಾಗವಿರಲು ಜಗದಲಿ,
ಮನುಜನೇ ಮನುಜನ ಕೊಂದು ಬದುಕುತಿರಲು,
ಸಾಧ್ಯವೇ "ಬದುಕಿ ಬದುಕಲು ಬಿಡಿ " ಎನ್ನುವ ಮಾನವತವಾದವಿರಲು.
ಮನಸ್ಸೆಂಬುದೇ ಇಲ್ಲದೇ ಬದುಕುವವ ಮನಸಾಕ್ಷಿಗೆಂದಿಗೂ ತಲೆಬಾಗುವುದಿಲ್ಲವೆಂಬುದೂ ನಿಜ.
ಮಳೆಯೇ,
ಈ ಪವಿತ್ರ ಭೂತಾಯಿಯ ತೊಳೆದರೇನು ಬಂತು ಫಲ ,
ಮನುಷ್ಯನ ಕಲ್ಮಶ ಮನಸ ತೊಳೆದು ತೋರಿಸು, ನೀನು ಆಗ ಸಫಲ.
ಮನದ ಕೊಳೆಯ ತೊಳೆದು ನೋಡು ಇಳೆಯ,
ಆಗ ನೀನು ಕಾಣುವೆ ಅತಿ ಸುಂದರ ಸೊಬಗಿನ ಭೂತಾಯಿಯ.
- ಶ್ರೀಕಾವ್ಯ
19 Dec 2016, 11:02 am
ಮನದ ತೋಟದಲೊಂದು
ವಿಫಲಪ್ರೇಮದ ಗುಲಾಬಿಗಿಡ.
ಹೂವೇ ಬಿಡಲಿಲ್ಲ.
ಭಾವಝರಿಯ ಸೆಲೆ ಬತ್ತಿಹೋಗಿ,
ಹಸಿರು ಸವಿಕ್ಷಣಗಳು ಒಣಗಿ
ಉದುರಿ ಹೋದವು.
ಕಹಿನೆನಪುಗಳು ಮಾತ್ರ ಇವೆ.
ಒಣಗಿದರೂ;
ಉದುರದೇ ಉಳಿವ
ಮುಳ್ಳುಗಳಂತೆ....
ಮುಟ್ಟಿದರೆ ಚುಚ್ಚುತ.
ನೋವ ನೀಡುತ.
- Ugnil
19 Dec 2016, 10:55 am
ಮನಸ್ಸು ಮಲ್ಲಿಗೆ,
ಮಗುವಿನ ನಗು,
ಚಂದ್ರನಂತೆ ಹೊಳಪು,
ಸೂರ್ಯನಂತೆ ಪ್ರಜ್ವಲತೆ,
ವಿಧ್ಯಾದೇವತೆ,
ಕನಸಿನ ಕುವರಿ,
ಸಹೃದಯಿ ಸಂಪನ್ನೆ,
ಹೃದಯದೈಸಿರಿ,
ನನ್ನ ಮನದರಸಿ,
ನನ್ನ ಬಾಳಸಂಗಾತಿ,
ಅವಳೆ ನನ್ನ
ಧರ್ಮಪತ್ನಿ
ನನ್ನೊಡತಿ ಕಾವೇರಿ.
- ರಾಜು ಹಗ್ಗದ
19 Dec 2016, 10:51 am