Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಶೂನ್ಯದ ಸುತ್ತ ಸುತ್ತಬಾರದು ಮನಸ್ಸು
ಸುತ್ತಿದರೆ,! ಶೂನ್ಯದಿಂದಲೆ ಸಂಪದಿಸಬೇಕು
ಹೊಸತೊಂದರ ಸೃಷ್ಟಿಗೆ....
- ಈಶ
21 Dec 2016, 02:53 pm
ಪದೆ ಪದೆ ಕಾಡುತ್ತಿರುವುದು
ನೀನಲ್ಲ,ನಿನ್ನ ಪ್ರೀತಿ ಅಲ್ಲವೇ ಅಲ್ಲ
ನೀ ನುಣುಚಿಕೊಂಡು ಹೋದ ರೀತಿ ಅಷ್ಟೇ
- prajna
21 Dec 2016, 02:48 pm
ನನ್ನ ನೀ ಬಿಟ್ಟು ಹೋದ ಆ ರಾತ್ರಿ
ಚೂರಾದ ಹೃದಯವನು
ಎಲ್ಲಿ ಬಚ್ಚಿಡುವುದು ತಿಳಿಯದೆ
ಕಣ್ಣ ಚೀಲದಡಿಗೆ ಅಡಗಿಸಿಟ್ಟೆ
- prajna
21 Dec 2016, 12:44 pm
ಮಂದಾರ ಸುಮದಂಥ,
ಮಂದಹಾಸವ ಬೀರಿ,
ಮಂದಗಾಮಿನಿ ಎನ್ನ
ಮುಂದೆ ಬರಲು.....
ಮುದದಿಂದ ನಾ ತಂದ,
ಕುಂದ ಪುಷ್ಪದ ಮಾಲೆ,
ಕಂದಿ ಹೋಯಿತು, ಪಾಪ!
ಕೀಳರಿಮೆಯೋಳ್!!
✍ಮಲ್ಲಿಭಾಗವತ✍
- ಮಲ್ಲಿಭಾಗವತ್ ಗುಡಿಬಂಡೆ
21 Dec 2016, 11:10 am
ಮೌನರಾಗದಿ ನನ್ನದೇಯ
ಪುಟ್ಟ ಗೂಡಿನಲ್ಲಿ
ಚಿಲಿಪಿಲಿ ಗುಟ್ಟುತ್ತ .ಮುಂಗಾರು ಮಳೆಯಂತೆ
ಹನಿ ಜೇನಿನಂತೆ.ಮುಂಜಾನೆ ಮಂಜಿನಂತೆ
ನನ್ನವಳು.
ನಾಚಿ ನೀರಾದಾಗ
* ಗೌಡ್ರುಸರ್ಕಾರ್ *
- ಗೌಡ್ರುಸರ್ಕಾರ್
21 Dec 2016, 10:53 am
ಇಳೆಯ ಹಾಳೆಯ ಮೇಲೆ,ಎಳೆಯ ಕಿರಣಗಳಿಂದ,
ನಿತ್ಯ ಬರೆಯುತಲಿಹನು,
ರವಿಯೊಂದು ಕವನ!
೧.ತರುಲತೆಗಳಿಬ್ಬನಿಯ,
ಬಿಂದುಮಾಲೆಗಳಿಂದ,
ಸಂತಸವ ಸೂಸುತಿವೆ,
ಮೆಚ್ಚಿ ರವಿಯ!
೨.ಕಮಲ ನಗೆ ಬೀರುತಿದೆ,
ಕೋಗಿಲೆಯು ಹಾಡುತಿದೆ,
ಕೋಳಿಯೂ ಕೂಗುತಿದೆ,
ಹರುಷ ಮೀರಿ!
೩.ಹಕ್ಕಿ ಪಿಕ್ಕಿಗಳೆಲ್ಲ,
ರೆಕ್ಕೆ ಪುಕ್ಕವ ಕೆದರಿ,
ಉಕ್ಕಿದುತ್ಸಾಹದೊಳು,
ಮುಗಿಲಿಗೆಗರಿ,
ಚಿಲಿಪಿಲಿಯ ಉಲಿಯಿಂದ,
ಕಿಲಕಿಲನೆ ನಗುನಗುತ,
ತಿರೆಗೆ ಹಿಂತಿರುಗುತಿವೆ,
ಸೊಬಗ ತೋರಿ!
೪.ಉದಯ ಗೀತೆಗೆ ತನ್ನ,
ಝೇಂಕಾರ ಶೃತಿ ಬೆರೆಸಿ,
ದುಂಬಿ ನಲಿದಿದೆ ಸುಮದ,
ಮಧುವ ಹೀರಿ!
೫.ರವಿಯೆಂಬ ಕವಿ ಬರೆವ,
ರಮಣೀಯ ಕವನಕ್ಕೆ,
ಇಂತು ಗೈದಿದೆ ಸೃಷ್ಟಿ,ತನ್ನ ನಮನ!
೬.ನಾನೆಂಬ ಭ್ರಮೆ ಸುಳಿಗೆ,
ಸಿಕ್ಕಿರುವ ಮನುಜನಿಗೋ,
ಶೂನ್ಯವಾಗಿಹುದಿಂದು,
ಸ್ಪಂದಿಸುವ ಸುಗುಣ.....
ಉದಯಾಸ್ತದಲೂ ಇವನ
ಹೃದಯಹಾಡುವುದೊಂದೇ
"ನಾನು-ನನ್ನದು" ಎಂಬ ಸವಿಯ ಗಾನ!!
✍ಮಲ್ಲಿಭಾಗವತ ✍
- ಮಲ್ಲಿಭಾಗವತ್ ಗುಡಿಬಂಡೆ
21 Dec 2016, 10:26 am
ವರ್ಣಿಸಲಾಗದ ಪದ
ಪೂಜೆಗೆ ನಿಲುಕದ ದೇವತೆ
ಕಣ್ಣಿಗೆ ಕಾಣುವ ದೇವತೆ
ಸಹನಾಮಯಿ
ತ್ಯಾಗಮಯಿ
ಎಲ್ಲರ ಕಣ್ಮಯಿ
ಅಮ್ಮ.…………
ನನ್ನಮ್ಮ …………
- ರಾಜು ಹಗ್ಗದ
21 Dec 2016, 10:25 am
ಕಾದಿರುವೇ ನಾ
ಮನದ ಆಸೆಗಳಿಲ್ಲದೇ
ಹೃದಯದಲ್ಲಿ ನಿನ್ನ ತುಂಬದೇ
ನೀ ಬಂದೇ ಬರುವೆ ಎಂದು
ಮೂರ್ನಾಲ್ಕು ದಿನವಾಯಿತು
ಯಾರು ಬರದೇ ಅಲ್ಲಲ್ಲ ನೀ ಬರದೇ
ಯಾರೋ ದೂಡಿದ ಮೋಹ ಕೂಟಕೆ
ಒಬ್ಬಂಟಿ ರಾಣಿ ನಾ
ಎನ್ನ ರೂಪ ಮಾಸಿಹುದೇ
ಕಣ್ ಕಾಂತಿ ಇಲ್ಲವೇ
ಎದೆ ಉಬ್ಬಿಲ್ಲವೇ
ನಿನಗೆ ನಾ ಹಿಡಿಸಿಲ್ಲವೇ
ಮನೆಯಲ್ಲಿ ಮುದಿ ಅಮ್ಮ
ಬುದ್ಧಿಮಾಂದ್ಯ ತಮ್ಮ
ಯಾರೋ ಕೊಟ್ಟ ಕಂದಮ್ಮ
ಕಾದಿರುವರು ಎನ್ನ ಕೈ ಆಸರೆಗಾಗಿ
ವೆಂಕಿ 9141611112
- ವೆಂಕಟೇಶ್ ದೈಶಿ ವೇಮಗಲ್
21 Dec 2016, 09:05 am
ನನ್ನ ಇಂದು ವೇಶ್ಯೆ ಎಂದವರೆಲ್ಲರೂ
ರಾತ್ರಿಯ ಕತ್ತೆಯಲೆಯಲ್ಲಿ ಬೆತ್ತಲಾದವರೆ
ಬಿರಿದು ದಕ್ಕಿದ್ದು ಮಾತ್ರ ನನಗೊಬ್ಬಳಿಗೆ
ಪಟ್ಟಕಟ್ಟಿದವರೆಲ್ಲಾ ವ್ಯೆಶ್ಯೆಯ ತೆಕ್ಕೆಯಲಿ
ಮಗ್ಗಲು ಬದಲಿಸಿ ಹೋದವರೇ...,
-ಸಿದ್ದುಯಾದವ್ ಚಿರಿಬಿ...,
- ಸಿದ್ದುಯಾದವ್ ಚಿರಿಬಿ
20 Dec 2016, 09:56 pm
ಸಾವಿರ ಗುಡುಗು ಬರಲಿ
ಸಾವಿರ ಮಿಂಚು ಬರಲಿ
ಕಾರ್ಮೋಡವೇ ಕವಿಯಲಿ
ಅರಳುವ ಹೂವು ಅರಳಿಯೇ ತೀರುವವು
ಸಾವಿರ ಕಷ್ಟಗಳು ಬರಲಿ
ಸಾವಿರ ಅಡೆ ತಡೆ ಬರಲಿ
ಪ್ರಳಯವೇ ಬರಲಿ
ನಮ್ಮ ಪ್ರೇಮ ಅಮರವಾಗಿರುವುದು
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
20 Dec 2016, 09:40 pm