Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನದೇಯ ಭಾವ ವೀಣೆ...

ನನ್ನದೇಯ ಭಾವವೀಣೆ
ಹೃದಯಾಂತರದಲ್ಲಿ ಮೀಟಿದೆ.
ನನ್ನವಳ ರೂಪರಾಶಿ ಮನದಲ್ಲಿ
ಮೂಡಿದೆ.
ಆ ದೇವ ನೀಡಿದ ಪ್ರೇಮ ಕಾಣಿಕೆ
ನೀನು. ಅಳಿಸಲಾಗದ ಮೂರ್ತಿ
ಚಿತ್ರ.ಕಳೇದು ಹೋಗದಿರು ಇನ್ನಾರಿಗೂ
ಮನವೇ ನನ್ನವಳ ಹೊರತು
ಇನ್ನಾರ್ ಹತ್ರ
*ಗೌಡ್ರುಸರ್ಕಾರ್*

- ಗೌಡ್ರುಸರ್ಕಾರ್

22 Dec 2016, 07:32 pm

ಬಾಲ್ಯದ ನೆನಪು?

ಅಂದು ಬಳಪ ಕೊಡಿಸಲಿಲ್ಲ ಎಂದು ಅತ್ತ ನೆನಪು:
ಇಂದು ಮೊಬೈಲ್ ಕೊಡಿಸಲಿಲ್ಲ ಎಂದು ರೇಗಾಡಿದ ನೆನಪು!

ಚಿಕ್ಕಂದಿನಲ್ಲಿ ಸ್ಕೂಲಿಗೆ ಹೋಗಲು ಹೆದರಿ ಅಮ್ಮನ ಸೀರೆಯ ಕೊಂಗು ಸುತ್ತಿಕೊಂಡ ನೆನಪು,
ಹದಿಹರೆಯದಲ್ಲಿ ಅಮ್ಮ ಕಾಲೇಜಿಗೆ ಬಂದಾಗ ಮುಜುಗರ ಪಟ್ಟು ಅಮ್ಮನನ್ನು ಕಳುಹಿಸಿದ ನೆನಪು.

ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು ಅಪ್ಪನ ಹಿಂದೆ ಗಾಡಿ ಏರಿ ಹೊರಟ ನೆನಪು;
ಇಂದು,ಹೊಸ ವರುಷಕೆ ಹೊಸ ಬಟ್ಟೆಯ ತೊಟ್ಟು
ಗಾಡಿ ಏರಲು ಹಿಂದು-ಮುಂದು ನೋಡಿದ ನೆನಪು.

ಸಿಹಿಯಾದ ಬಾಲ್ಯದ ಬೆಳದಿಂಗಳ ನೆನಪು,
ಯೌವ್ವನದ ಅಹಂಕಾರದ ಹರುಪು.

ಸಿಹಿಯಾದ ಬಾಲ್ಯದ

- ವೇಣು ಆರ್ ಚಿನ್ನದೂರು

22 Dec 2016, 06:02 pm

ಕೊನೆಯ ಸಂದೇಶ

ನೋಡುತ ನಿನ್ನಯ ಕೊನೆಯ ಸಂದೇಶ ಸುಮ್ಮನೆ ನಾನು ಕುಳಿತಿರುವೆ
ಮುಖದೊಳಗಿದ್ದರು ಮಂದಹಾಸವು ಮನದೊಳಗೇ ನಾನಳುತಿರುವೆ...
ಪ್ರೀತಿ ಪಯಣದ ಕೊನೆಯ ನಿಲ್ದಾಣ ನೀನೆ ಇಂದು ತೋರಿರುವೆ
ನೋವಾದರು ತುಸು ಹೆಚ್ಚೇ ಪ್ರೀತಿಸಿ ನೆನಪಲೆ ನಿನ್ನಯ ಜೊತೆಗಿರುವೆ...

ಹೃದಯದೂರಿನಾ ಗೌಡತಿ ನೀನು ಎಲ್ಲಾ ನಿಂದೆ ನಿರ್ಧಾರ
ಕಣ್ಣ ನೀರಿಗೂ ಕ್ಷಾಮ ಬಂದಿದೆ ಬಂದು ನೀ ನೀಡು ಪರಿಹಾರ...
ಕೊನೆಯ ಬಾರಿ ನಾ ಕೇಳುವೆ ನಿನ್ನ ಮಾಡುವೆಯಾ ಒಂದುಪಕಾರ
ಸಾಯಿಸಿ ನನ್ನನು ದೂರ ಹೋಗು ನೀ
ಅದುವೆ ಬಹುದೊಡ್ಡ ಸಹಕಾರ...

ಕೈ ಮುಗಿದು ನಾ ಬೇಡುವೆ ಹೇಳು ನಾ ಮಾಡಿದ ಆ ತಪ್ಪೇನು
ಒಮ್ಮೆ ಕೇಳಿಕೊ ಅಂತರಾತ್ಮವ
ನೀ ಮಾಡಿದ್ದು ಸರಿಯೇನು...?
ನಿನ್ನಾಣೆಗು ನಿಜ ಆರಾಧಿಸಿದೆ ದೇವತೆಯಂತೆ ನಾ ನಿನ್ನ
ಕಂಡು ಕಾಣದ ಹಾಗೆ ಕಾಲಲಿ ಒದ್ದು ಹೋದೆಯಾ ನೀ ನನ್ನ...

ನನಗೂ ಕೂಡ ಬರುವುದು ಕೋಪ ನಿನ್ನ ನೆನೆದಾಗ ಒಮ್ಮೊಮ್ಮೆ
ಸುಮ್ಮನಾಗುವೆ ಮನಸಲೆ ನೆನೆದು ನಿನ್ನ ನಸುನಗುವ ಮತ್ತೊಮ್ಮೆ...
ಕ್ಷಮಿಸು ಎನ್ನನು ತಪ್ಪಾಗಿದ್ದರೆ ಒಮ್ಮೆ ನಾಲಿಗೆಯ ತೊದಲಿಂದ
ಸಮ್ಮತಿ ಕೊಟ್ಟರೆ ಮರಳಿ ಪ್ರೀತಿಸುವೆ ಮಗದೊಮ್ಮೆ ನಿನ ಮೊದಲಿಂದ...

- ಜೀವಿ

22 Dec 2016, 05:56 pm

ಮಣ್ಣಲ್ಲಿ ಮಣ್ಣಾಗುವ ಮುನ್ನ..

ಮರದಲ್ಲಿ ಹುಟ್ಟಿ ಬೆಳೆದ ಹಣ್ಣನ್ನು
ಮರವೇ ಸೇವಿಸಿದ್ದರೆ?
ಮೋಡದ ಉದರದಲಿ ಹುಟ್ಟಿದ ಮಳೆ ನೀರನ್ನು
ಮೋಡವೇ ಕುಡಿದಿದ್ದರೆ?
ಹಾಲು ಕೊಡುವ ಕಲ್ಪೃಕ್ಷ ತನ್ನ ಹಾಲನ್ನು
ತಾನೇ ಕುಡಿದಿದ್ದರೆ?
ಫಸಲು ಕೊಡುವ ನೆಲ ಫಸಲನ್ನು
ತಾನೇ ಉಂಡಿದ್ದರೆ?
ಗಾಳಿಯನು ಹುಟ್ಟಿಸಿದ ಗಿಡ ಗಾಳಿಯನ್ನು
ತಾನೇ ಸೇವಿಸಿದ್ದರೇ?
ಮಣ್ಣಲ್ಲಿ ಮಣ್ಣಾಗುವ ಮುನ್ನ
ಇದನ್ನರಿತು ನನ್ನದು ನನ್ನಿಂದ ಎಂಬ ಜಂಬ ಬೇಡೆಂದ
ಬಸವ ಪ್ರಿಯ ರೇವಣಸಿದ್ದ.

ರಚಣೆ: ರೇನಣಸಿದ್ದ ಗೌಡರ
ರಬಕವಿ-೫೮೭೩೧೪
ಮೊ:೯೦೦೮೦೬೦೯೧೮

- Revanasidda Goudar

22 Dec 2016, 04:49 pm

ಜೀವನದ ಲೆಕ್ಕಾಚಾರ

ಗುಣದಿಂದ ಗುಣಿಸಿ
ಭಾವನೆಯಿಂದ ಭಾಗಿಸಿ
ರ್ದುನಡತೆಯನ್ನು ಕಳೆದು
ಧರ್ಮವನ್ನು ಕೂಡಿದರೆ
ಸಿಗುವುದು ವ್ಯಕ್ತಿಯ ಲೆಕ್ಕ

ಕಳೆಯಲು ಕಷ್ಟವಾದರೆ ಭಾಗಿಸಿ
ಕೂಡಲು ಸಂಕಷ್ಟವಾದರೆ ಗುಣಿಸಿ
ಭಾಗಿಸಿ, ಗುಣಿಸಿಕೊಂಡರೆ
ಜೀವನದ ಲೆಕ್ಕ ಪಕ್ಕಾ

- ವೆಂಕಟೇಶ್ ದೈಶಿ ವೇಮಗಲ್

22 Dec 2016, 03:07 pm

"ಶ್ರೀಲಕ್ಷ್ಮೀ"

ಲಕುಮಿ ನೀನು ಚಂಚಲೆ
ಯಾರಿಗೂ ತಿಳಿಯಲಿಲ್ಲ
ನಿನ್ನ ವಿಚಿತ್ರ ಲೀಲೆ
ವ್ಯಾಮೋಹ ವಿಪರೀತ
ಸರ್ವರಿಗೂ ನಿನ್ನಮ್ಯಾಲೆ!
ಸೋಮಾರಿಗಳಿಗಿಲ್ಲ ನಿನ್ನ ಪ್ರೀತಿ
‌ಶ್ರಮಿಕರಿಗೆ ನೀನೆ ಒಡತಿ
‌‌ ಭಕ್ತಜನಗಳಿಗೆ ನೀನು ದೇವತೆ
ನಿನ್ನಲ್ಲಿವುದು ಸರ್ವದೇವತೆಗಳ
‌‌‌ ‌ ‌ ‌ ‌‌ಶಕ್ತಿ!
ನೀನಿದ್ದರೆ ಮನೆಯಲ್ಲಿ
ಸಂತಸದ ಚಿಲುಮೆ
ಮನೆಯ ಮೂಲೆ-ಮೂಲೆಯಲ್ಲಿ
ಸಂಭ್ರಮದ ಸೆಲೆ
ಮನೆಯವರ ಮನದಲ್ಲಿ!
ಸಂಪನ್ನರಿಗೆ ನೀನು ಸಂಗಾತಿ
ನಿನ್ನಿಂದಲೆ ಸರ್ವರಿಗೂ ಸಂತೃಪ್ತಿ
ನಿನ್ನವಾಸದಿಂದ ಮನ:ಶಾಂತಿ
ಸಕಲಕಾರ್ಯಕ್ಕೆ ನೀನೆ ಒಡತಿ!
___________________________
*ಬಸವಪ್ರಿಯ*
(ರಾಹುಲ್ ನಿಮ್ಮ ಕೋರಿಕೆ ಗಾಗಿ)

- ಬಲವಂತ ಮೋರಟಗಿ(ಬಸವಪ್ರಿಯ)

22 Dec 2016, 01:58 pm

ಸಖಿ....

ಸಖಿ...

ಸನಿಯ ನೀನಿರಲು ಮನವೆಲ್ಲ ಕಾವ್ಯದ ಹೂರಣ
ಮರೆಯಾದಂತೆಲ್ಲ ಮನಸ್ಸಿಗೆ ಮೌನದ ತೋರಣ.

ಸಂದೀಪ್ ಬಿ ಶೆಟ್ಟಿ(ಸ್ಯಾಂಡೀ.‌‌...)

- Sandeep B Shetty (ಸ್ಯಾಂಡೀ....)

22 Dec 2016, 12:17 pm

ಎಲ್ಲಿದೆ ಜಾತಿ.....??!

ಎಲ್ಲಿದೆ ಜಾತಿ?...

ತಿನ್ನುವ ಅನ್ನಕ್ಕಿಲ್ಲದ
ಜಾತಿ. ..
ಕುಡಿಯುವ ನೀರಿಗಿಲ್ಲದ
ಜಾತಿ. ..
ಉಸಿರು ನೀಡುವ
ಗಾಳಿಗಿಲ್ಲದ ಜಾತಿ
ಸುಡುವ ಬೆಂಕಿಗಿಲ್ಲದ
ಜಾತಿ. ..
ಉಡುವ ಬಟ್ಟೆಗಿಲ್ಲದ
ಜಾತಿ. ..
ನೀಡುವ ಕೈಗಳಿಗಿಲ್ಲದ
ಜಾತಿ....
ಪ್ರಾಣಿ ಪಕ್ಷಿಗಳಿಗಿಲ್ಲದ
ಜಾತಿ. ..

ಹುಲು ಮಾನವರಿಗೇಕೆ

ತಿನ್ನುವ ಅನ್ನವನ್ನು
ಕೇಳುವಿರಾ ನೀನು
ಯಾವ ಜಾತಿಯ ರೈತ
ಬೆಳೆದಿರುವನೆಂದು. .

ಬೀಸುವ ಗಾಳಿಗೆ
ಕೇಳುವಿರಾ ನಿನ್ನದು
ಯಾವ ಜಾತಿ ಎಂದು

ಕುಡಿವ ನೀರಿಗೆ
ಕೇಳುವಿರಾ ನೀನು
ಯಾವ ಜಾತಿಯ ರೈತನ
ಭಾವಿಯ ನೀರೆಂದು. ..

ಉಡುವ ಬಟ್ಟೆಯನು
ಕೇಳುವಿರಾ ನೀನು
ಯಾವ ಜಾತಿಯ
ಕಾರ್ಮಿಕನ ಕಲೆಯೆಂದು

ಹಸಿವು ನೀಗಿದರೇ
ಸಾಕು. ..
ದಾಹ ತೀರಿದರೇ
ಸಾಕು. ..
ಮಾನ ಮುಚ್ಚಿದರೇ
ಸಾಕು. ..
ಕಷ್ಟಕ್ಕೆ ದಾರಿ ಸಿಕ್ಕರೆ
ಸಾಕು. .
ಬೆಚ್ಚಗಿದ್ದರೆ
ಸಾಕು. ....

ಮತ್ತೇಕೆ ನಮಗೆ
ಜಾತಿಯೆಂಬ ಪದ ಬೇಕು....??!!

- Rashmi

22 Dec 2016, 12:06 pm

,,ಕರ್ಪೂರ,,


ನಾನಿಲ್ಲದೆ ನಿನಗೆ ಪೂಜೆ ಪುರಸ್ಕಾರವೂ ಇಲ್ಲ
ಉಪವಾಸದ ಬಿಡುವಿಗೂ ಆ ಭೋಜನದ ನಂಟಿರುವಂತೆ
ರಬ್ಬರಿನ ಚೀಲದಲ್ಲಿ ಬಂಧಿಯಾಗುವೆ ಒಂದಿಷ್ಟು ದಿನ
ಮತ್ಯಾರೋ ಭಕ್ತರ ಹಾದಿಯನ್ನು ಕಾಣುವಂತೆ....

ನನ್ನ ಬಾಳಲಿ ಯಾವ ಮೋಹ ಮೋಸಗಳಿಲ್ಲ ನಿಮ್ಮಂತೆ
ನಿಮ್ಮ ಕಾಮನೆಯ ಸಾಕ್ಷಿಗೆ ನನ್ನ ಸುಡುವವರು ನೀವೆಲ್ಲ
ಆದರೂ ನಲಿವಿದೆ ಆ ನೋವಿನಲೆ ತ್ಯಾಗದ ಬೆವರು ಇದೆ
ಆದರೂ ಅವರ ಕಷ್ಟಗಳ ಸುಟ್ಟೆನೆಂಬ ಸಂತಸವಿದೆ ಮನದಲ್ಲಿ....

ಸುಡುವ ಬೆಂಕಿಯಲ್ಲಿ ಸುಟ್ಟು ಧಗಧಗನೆ ಉರಿಯುತಿರೆ
ನೀವ್ ಮಾತ್ರ ಕಣ್ಮುಚ್ಚಿ ನಿಲ್ಲುವಿರಿ ಮೌನಿಯಂತೆ
ಮತ್ತೆ ನನ್ನೊಡಲ ಕಾವಿಗೆ ಕೈಯಿಟ್ಟು ಮುಗಿಯುತಿರೆ
ಮಂದಹಾಸವಿದೆ ಈ ಕರಕಲು ಘಮವೇ ನಿನ್ನ ಉಸಿರು ಎಂಬಂತೆ....

ಓ ಢಾಂಬಿಕ ಭಕ್ತನೆ ನಿನ್ನೊಳಿರುವ ದೇವನ ನೀಕಾಣೇ
ಕಲ್ಲು ಮಣ್ಣುಗಳ ಪೂಜಿಸುವ ಹುಂಬನಂತಾದೆಯೆ
ಅರಳಿದ ಹೂವುಗಳ ಕಿತ್ತು ನೀ ಸದ್ಭಕ್ತನಾಗುವೆಯೆ
ಮನದ ಅರಿಷಡ್ವರ್ಗಗಳ ಮೆಟ್ಟಿ ನಿಲ್ಲು ನೀ ನೋಡು ಎಲ್ಲವೂ ದೇವನೇ....

ಸಂದೀಪ್ ಬಿ ಶೆಟ್ಟಿ(ಸ್ಯಾಂಡೀ....).

- Sandeep B Shetty (ಸ್ಯಾಂಡೀ....)

22 Dec 2016, 10:42 am

ಕಣ್ಣು , ರೆಪ್ಪೆ

ಮೈ ಮರೆತು ಹೂವ ಚೆಲುವ
ನೋಡಿದ ಕಣ್ಣುಗಳು
ಹಾಗೆ ರೆಪ್ಪೆ ಮುಚ್ಚಿದವು
ಹೂವ ಚಿತ್ರವ ಸೆರೆಹಿಡಿಯಲು ...
ರೆಪ್ಪೆ ತೆರೆಯೆ ಅರಿಯಿತು
ಮನಸು ಕಳೆದುಹೋಗಿ
ಹೂವಲಿ ಅಡಗಿ ಕುಳಿತದು,,,,
ಅರಳಿದ ಕಣ್ಣುಗಳು
ಹೂವೊಳಗಿ ಹುದುಗಿದ ಮನಸ
ಸೊಬಗ ಸವಿಯಲು
ರೆಪ್ಪೆ ಬಡಿಯದೆ ನೋಡಿ ನಲಿಯಿತು ..

----ಭಾರತಿ .

- Bharavi

22 Dec 2016, 09:23 am