Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನ್ನೆ

ನೆನ್ನೆ ನೆನಪಾಗಿ ಹೋಗಲಿ
ನಾಳೆ ಕನಸಾಗಿ ಬರಲಿ
ನಿನ್ನ ಪ್ರೀತಿ ನನಲ್ಲಿ ಅಡಗಿ
ಕುಳಿತಿರಲಿ.

- ಚುಕ್ಕಿ

28 Dec 2016, 09:07 am

ಆಕಾಶದಲ್ಲಿ...

ಹುಣ್ಣಿಮೆ.

ತಾರೆಗಳ ಹಿಂಡನ್ನು
ಮೇಯಿಸುತ್ತ ಹೊರಟ ಚಂದ್ರ.

***
ಅಮವಾಸೆ.

ಕಾಯುವವ ಇಲ್ಲದೇ
ಚದುರಿದ ತಾರೆಗಳ ಹಿಂಡು.

- ಶ್ರೀಗೋ.

28 Dec 2016, 07:04 am

ನನ್ನನಿಸಿಕೆ...

ಚಳಿಗಾಲದ ಕುಳಿರ್ಗಾಳಿ,ಮುಂಜಾವಿನ ಚಿಲಿಪಿಲಿ
ಇಬ್ಬನಿಯ ಬಿಂಬ,ತುಂತುರು ನಿನಾದ
ಚುರುಕು ಬಿಸಿಲು,ತಂಪು ವರ್ಷಧಾರೆ
ಮುಸ್ಸಂಜೆಯ ತಂಗಾಳಿ,ಚಿಗುರೊಡೆದ ಹಸಿರು
ನೀಲಾಕಾಶದ ಬಾನಾಡಿಗಳು,
ರಂಗುರಂಗಿನ ಕಾಮನಬಿಲ್ಲಿನ ನಿಸರ್ಗ ಸಹಜ,ಸ್ವಾಭಾವಿಕ..

ಆದರೆ ..................ಮನುಷ್ಯ...?
☠ಆಸೆಬುರುಕ☠.!!!

~: special ಸುಬ್ಬು :~

- SUBRAMANYA N

27 Dec 2016, 10:54 pm

ಸ್ನೇಹಿತರು

ಮನುಕುಲದಿ ಭೇದವಿರದ ಬಂಧವಿದು
ಕುಲದ ಹೆಸರ ಈ ಸ್ನೇಹ ಬಯಸದು
ಬದುಕ ಬಂಧನವ ಬಿಡಿಸಿ ಮನಕೆ ಬಂಧವ ಬೆಸೆಯುತಿಹುದು

ದೂರಾಗಲು ಬಾಳ ಪಯಣಕೆ ದಾರಿ ತೋರುವ ರವಿಯು
ಕತ್ತಲ ಸರಿಸಿ ಬೆಳಕ ಚೆಲ್ಲುತ ಕೈ ಹಿಡಿದು ನಡೆಸುವ ಚಂದಿರರಿವರು

ಗಾಳಿ ಗೋಪುರಗಳಂತೆ ಕನಸು ಹೊತ್ತು ನಿಂತ ಮನಕೆ
ಸ್ತಂಭರಿವರು ಕನಸುಗಳು ನನಸಿನ ಗೋಪುರವಾಗಲು

ಬದುಕ ಹಾದಿಯಲಿ ಸೋತು ನಿಂತ ಜೀವಕೆ
ಸ್ಥೈರ್ಯ ತುಂಬಿ ಕನಸ ಚಿಲುಮೆಯ ಅರಳಿಸುವವರು

ನೊಂದು ನಿಂತಿರಲು ಮನವು ಜೀವನದ ಏಳು ಬೀಳುಗಳ ನಡುವೆ
ಸಂತೈಸಿ ಕೈ ಹಿಡಿದು ಹರ್ಷದ ಹೊನಲ ಹರಿಸುವವರು

ಸೋತಿರಲು ಜಗದೊಳು, ಕೈ ಬಿಡಲು ಬಂದು ಬಳಗವು
ಬದುಕ ಪ್ರತಿ ಹೆಜ್ಜೆಯ ಜೊತೆಗಿನ ಪಯಣಿಗರಿವರು

ನಗುತಿರಲು ಕಾಲೆಳೆದು ಅಳಿಸಿ ನಗಿಸಿ, ಅಳುತಿರಲು ಕಣ್ಣೀರು ಒರೆಸಿ
ಮೂಡಿರಲು ತುಂಟತನವು ಮನದಲಿ, ಹಾರುತಿರಲು ಮನವು ರೆಕ್ಕೆ ಬಿಚ್ಚಿ
ಒಡಗೂಡಿ ಬರುವವರು ಈ ಒಡನಾಡಿ ಸ್ನೇಹಿತರಿವವರು

- ಶ್ರೀಕಾವ್ಯ

27 Dec 2016, 10:08 pm

ಸಂತೋಷ

ನನ್ನಂತರಂಗದಲಿ ಪುಟಿದಾಗ
ಆತ್ಮ ವಿಶ್ವಾಸ ...

ನನ್ನ ನಾನು ಪ್ರೀತಿಸಲಾರಂಭಿಸಿದಾಗ
ನವೋಲ್ಲಾಸ...

ಸಂತಸದ ಕಂಬನಿ ಸುರಿಸಿದಾಗ
ಸುಖದಾಭಾಸ...

ಬಂದ ಕಷ್ಟವನೆದುರಿಸಿದಾಗ
ಏರಿದಂತೆ ಆಗಸ...

ಸಂಭ್ರಮ ನನ್ನಲಿ ಇರುವಾಗ
ಬೇರೆಲ್ಲಿ ಅರಸಲಿ ಸಂತೋಷ
ಬೇರೆಲ್ಲಿ ಅರಸಲಿ ಸಂತೋಷ...

ಕವಿ ರಾಜ

- kavita Rajesh

27 Dec 2016, 07:57 pm

ಇಂದು

ಕಣ್ಣಲ್ಲಿ ಕಂಡು
ಕನಸಲ್ಲಿ ನಿಂದು
ಮನದಾಳದ ಮೌನವ ತೊರೆದು
ಬರುವೆಯ ನನ್ನ ಹೃದಯಕೆ ಇಂದು
... ವೀರು

- ವೀರು

27 Dec 2016, 06:44 pm

ಕನ್ನಡಿಗ

ಅಚ್ಚ ಕನ್ನಡಿಗನ
ಸ್ವಚ್ಚ ಮನಸ್ಸನ್ನು
ಹುಚ್ಚಾಗಿ ಪೀತಿಸಿ
ಬಚ್ಚಿಟ್ಟಳು ಹೃದಯದಲಿ
... ವೀರು

- ವೀರು

27 Dec 2016, 06:33 pm

ಆತ್ಮವಿಶ್ವಾಸ

ಮನೆ ಸಣ್ಣದಾದರೂ ಮನಸ್ಸು
ದೊಡ್ಡದಿರಲಿ.
ಹೃದಯ ಮುಷ್ಠಿಯಷ್ಟಿದ್ದರೂ ಪ್ರೀತಿ,
ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ
ಗುಣದಲ್ಲಿ ಶ್ರೀಮಂತಿಕೆ ಇರಲಿ.

ದಾರಿಗಳಲ್ಲಿ ಸಾವಿರಾರು ಅಡೆತಡೆಗಳಿದ್ದರೂ
ಚಿಮ್ಮುವ ಆತ್ಮವಿಶ್ವಾಸ ಇರಲಿ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

27 Dec 2016, 03:34 pm

ನಿನದೇ ನೆನಪು

ಎಷ್ಟು ದೂರ ಇದ್ದರೇನು...
ನೀನಿರುವ ಊರು...??? ✈
ನನ್ನ ಜೊತೆಯಿಲ್ಲವೇನು
ನಿನ್ನ ನೆನಪುಗಳು ನೂರು...!!!!

ನಿದ್ರೆಗೆ ಜಾರಿದರೆ ನಿನ್ನ ಕನಸುಗಳದೇ
ಜಾತ್ರೆ ಬಲು ಜೋರು..
ಮನದ ಬೀದಿಯುದ್ದಕೂ ಸಾಗಿದೆ
ನಿನ್ನ ನೆನಪಿನದೇ ತೇರು..

- Ugnil

27 Dec 2016, 02:04 pm

ವಾಸ್ತವ

ಬಿರುಕು ಬಿಡುತಿದೆ ಮಡಿಲಿಗೆ,
ಕೊಡಲಿ ತಗಲುತಿದೆ ಒಡಲಿಗೆ,
ದುಃಖ ದುಮ್ಮಾಲೆಗಳು ಬಡವರಿಗೆ,
ಸವಿಜೇನ ಸಿಹಿ ಸಿರಿವಂತರಿಗೆ..

ಕೊರಗುವಾ ದನಿಯೆಲ್ಲಾ
ನರಳಿ ನರಳಿ ನಶಿಸುತಿದೆ..
ಕುಣಿದು ಕುಪ್ಪಳಿಸುವವರ
ಅಹಂ ಇನ್ನು ಹೆಚ್ಚುತಿದೆ..

ಮನಸಿನ ಸಿರಿ ಹೊಂದವರ ಮನ
ಕುಸಿ ಕುಸಿದು ಬೀಳುತಿದೆ..
ಹಣವಂತರ ತುಳಿದಾಟಕೆ
ಮನ ಚೂರು ಚೂರಾಗುತಿದೆ..

ಬಡತನ-ಸಿರಿತನದ ಬೇಧ
ದಿನ ದಿನವೂ ಬೆಳೆಯುತಿದೆ..
ಎರಡು ತನದ ತೂಕದಲಿ
ಬಡತನವೇ ನೋಯುತಿದೆ..

ಬದುಕಿನುದ್ದ ಹಣೆಬರಹ
ಬಡವರ ಕಿತ್ತು ತಿನ್ನುತಿದೆ..
ಅನ್ನ ನೀಡೊ ರೈತರ ಬದುಕು
ಸುಟ್ಟು ಕರಕಲಾಗುತಿದೆ..

ಭಾಷಣವಾ ಬಿಗಿಯುವ
ಭಂಡರಿಗೆ ಜಯ ದೊರಕುತಿದೆ..
ಜಯವ ದೊರೆತ ಕ್ರಿಮಿಗಳೆಲ್ಲ
ಬಡವರ ಬಲಿ ಹಾಕುತಿದೆ.
ಬಡವರ ರಕ್ತ ಹೀರುತಿದೆ..

ಇದೇ ದಾರಿ ಹಿಡಿ ಹಿಡಿದು,
ರಾಜಕೀಯ ಬೆಳೆಯುತಿದೆ..
ಕೀಚಕ ಜನರ ಕೈ ಕೆಳಗೆ,
ಬಡವರ ಬದುಕಿದು
ಬಲಿಯಾಗುತಿದೆ...

ಪ್ರಶ್ನೆಗಳ ಸರಪಳಿಯು
ಎಳೆದೆಳೆದು ಸಾಗುತಿದೆ..
ಗೊತ್ತಿದ್ದೂ ಗೊತ್ತಿಲ್ಲದ ಹಾಗೆ
ಉತ್ತರವು ಸಾಯುತಿದೆ..

ನ್ಯಾಯ ಕರಗಿ ನೀರಾಗುತಿದೆ..
ಅನ್ಯಾಯ ಮೆರೆದು ಬೀಗುತಿದೆ..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

27 Dec 2016, 01:53 pm