Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಯಿ ...,ಭೂ..ತಾಯಿ

ಅಂಬರದಷ್ಟು ಪ್ರೀತಿ ಇದೆ,
ಚಂದಿರನಂತೆ ಮಮತೆ ಇದೆ,
ಅರಸನಷ್ಟು ಆವೇಶವೂ ಇದೆ,
ಎಲ್ಲ ಒಪ್ಪುವಳಲ್ಲ ,ಎಲ್ಲದಕ್ಕೂ
ಹಿಂದೆ ನಿಂತಿರುವವಳು
ನಮ್ಮ ಜನನಿ.

ಕಷ್ಟಕ್ಕೆ ಹೆದರಿದವಳಲ್ಲ,
ನಷ್ಟಕ್ಕೆ ಬೆದರಿದವಳಲ್ಲ,
ನೋವ ನೀರಾಗಿಸಿ ಗಡ-ಗಡನೆ ಕುಡಿದವಳು.
ಬೆಂದ ಮನಸ್ಸನ್ನು ಬಿಚ್ಚಿಡದೆ ದುಡಿದವಳು.
ಕಾಲ ಕಾಲವ ದಾಟಿ,ಊರ-ನೂರವ ನೋಡಿ
ಕಟ್ಟಿದವಳು ಮನೆಯ.
ತಾನಾಗಿ ಶಪಿಸುವುದಿಲ್ಲ,
ತಾವಾಗಿ ಪಡೆದದ್ದೇ ಪ್ರಸ್ತುತ ಪ್ರಕ್ರತಿ ವಿಕೋಪಗಳು

- śsș

30 Dec 2016, 08:09 am

ಅಮ್ಮ.

ತಾನೇ ಸೋತು ತನ್ನವರನ್ನ ಗೆಲ್ಲಿಸಿ ನಗುವ ಸೋತುಗೆಲ್ಲುವ ಆಟ ಹೇಳಿಕೊಟ್ಟವಳು ... ಅಮ್ಮ.

- Koushik

30 Dec 2016, 01:49 am

ಕೊನೇ ಸಮಯ

ನನ್ನ ಕೊನೆಯ ಸಮಯ ಬಂದಿದೆ! ಎಂದೇ
ಇಚ್ಛೆಗೊಂಡು.....
ನಿನ್ಡೊಡನಿರುವೆ!
ಏನೂ ಮಾಡದೆ ಸುಮ್ಮನಿರು.

ಈ ಸಮಯದ ನಿನ್ನ ಸಂಗ
ನಿನ್ನ ಸನಿಹತೆ
ನನಗಿದೊಂದು ಯೋಗ
ಒಲವ ಸಾನಿಧ್ಯತೆ


ಅದೊಂದು ದಿನ
ನಮ್ಮಿಬ್ಬರ ಮಾತಿತ್ತು
ಎಲ್ಲಿಗಾದರೂ ಸರಿ
ಒಟ್ಟಿಗೆ ಹೆಜ್ಜೆಗಳನಿಡುವೆವೆಂದು

ಆದರಿಂದು ನನ್ನದೊಂದು ಬಿನ್ನಹ
ಕಾಲವಶಾತ್ ನನ್ನ ಸಮಯ ಬಂದಿದೆ
ಮುಂದಕ್ಕೆ ಎನ್ನನೊಬ್ಬನನೇ
"ನಗುತ ಕಳಿಸು; ನಿನಗಿನ್ನೂ ಸಮಯವಿದೆ"

ನಿನ್ನೊಡನಿದ್ದ ಸಂಸ್ಮರಣೆ
ಆ ಒಡನಾಟ
ಮುಚ್ಚಲಿರುವ ಈ ನನ್ನ
ಕಣ್ಣುಗಳಲಿನ್ನೂ ಹಸಿ-ಹಸಿಯಾಗೇ ಇದೆಯೋ.

ಆ ಮಧುರತೆ..
ಆ ನಿನ್ನ ಆರೈಕೆ...
ನಾ ಧನ್ಯನೋ-ಇಂತಹದು
ಅತಿ ವಿರಳರಿಗೆ ಸಿಗುವುದೋ

ಬಿಟ್ಟು ಹೊರಟೆನೆಂದು
ಧೃತಿಗೆಡದಿರು,
ನಿನ್ನ ಹೃದಯದಲಿ
ನಾನೆಂದೂ ಮಿಡಿಯುತಿರುವೆನೋ

ನನ್ನ ಅಗಲಿಕೆ
ಬರೀ ದೇಹ ವಿಚಾರದಿ
ಆದರೆ ನಾ ಅಮರನು
ನಿನ್ನೊಳಿರುವೆ, ನಿತ್ಯನಾಗಿ

ಈ ನಿನ್ನ ಅಳು-ರೋದನ,
ಈ ಬಿಕ್ಕಳಿಕೆಗಳ ತಡೆಯೋ
ಉಸಿರುಗಟ್ಟದಿರು
ನಿನ್ನ ಪ್ರತಿ ಉಸಿರಲೂ ನಾನಿರುವೆನೋ

ಆರನೂ ಕರೆಯದಿರು
ನೀನೊಬ್ಬಳೇ ಸಾಕು...
ಎನ್ನ ಭಾವೋತ್ಕರ್ಷಕೆ!
ನನ್ನ ಚಿರಮೌನಕೆ....

ನಿನ್ನೀ ಹೃನ್ಮನ,ತೊಡೆಗಳೇ ಇಂದು ವೈಕುಂಠ;
ಹೋಗಿ ಮತ್ತೆ ಬರುವೆ ನಾನು
ಅನುಕ್ಷಣ, ನಿನ್ನೊಲವ ಕಾತರದಲಿ.....
ನಿನ್ನ ಸಹಯೋಗ ನಿರೀಕ್ಷೆಯಲಿ.....

.............ಗರಿಮಾಮ'

- Prasanna kumar K S

30 Dec 2016, 12:44 am

ಓ ಜಾನು

ಅಮೃತದ ಬಿಂದು
ಎದೆಗೆ ಇಳಿದಿದೆ
ಎಲ್ಲವು ಹೊಚ್ಚ ಹೊಸ
ಜೊತೆಗೆ ನೀ ಇರಲು
ಬಲು ಹರುಷ
ಗಳಿಗೆಯಾಗಿ ಸಂದುವವು
ವರುಷ ವರುಷ
ನಿಜ ಹೇಳಲೆ ನಾನು
ಓ ಜಾನು
ನನ್ನೋಳು ನೀನು
ಸದಾ
ಜಿನುಗುವ ಜೇನು.....

- bharatakumar

29 Dec 2016, 09:41 pm

"ಮಲೆನಾಡು ಮಲ್ಲಿಗೆ" _______

ನಾಡಿನ ತುಂಬೆಲ್ಲಾ ಕನ್ನಡದ ಕಂಪು
ಕಾವ್ಯಧಾರೆಯಿಂದ ಮನಕ್ಕೆ ತಂಪು
ಕೇಳುವ ಕರ್ಣಕ್ಕೆ ಬಲು ಇಂಪು
ಸಾಹಿತ್ಯಧಾರೆ ಹರಿಸಿದರು
ರಾಷ್ಟ್ರಕವಿ ಕುವೆಂಪು!
ಪಾಂಚಜನ್ಯ ಮೊಳಗಿತು
ಶೂನ್ಯಮನ ಅರಳಿತು
ಯುವಶಕ್ತಿ ಗುಡುಗಿತು
ಶತೃಪಡೆ ನಡುಗಿತು!
ಮಲೆನಾಡಿನ ಮಣಿನಲ್ಲಿ
ಸಹಾದ್ರಿಯ ಶ್ರೇಣಿಯಲ್ಲಿ
ಜನ್ಮವೆತ್ತಿದ ಕುವರ
ಭಕ್ತಿಯಿಂದ ಎಳೆದರು
ಕನ್ನಡಾಂಬೆಯ ಥೇರ!
ರಾಷ್ಟ್ರಕವಿಯ ಸಾಹಿತ್ಯದ ರೀತಿ
ವಿಶ್ವಕ್ಕೆ ನೀಡಿತು
ಮಾನವ ಪ್ರೀತಿ
ಅಡಗಿದೆಯಲ್ಲಿ ಕನ್ನಡ ಸಂಸ್ಕ್ರತಿ
ಹೊಳೆಯಿತು ಬೆಳೆಗಿತು
ಕನ್ನಡದ‌ ಜ್ಯೋತಿ!
ನಾಡಿನಲ್ಲಿ ಕಟ್ಟಿದ್ದೀರಿ
ಕನ್ನಡ ಸಾಹಿತ್ಯ ಕೂಟ
ಹುಡುಕಿ ಬಂತು ಕನ್ನಡಕ್ಕೆ
ಪ್ರಥಮ ಜ್ಞಾನಪೀಠ!
ಮಲೆನಾಡು ಕಾನನದಲ್ಲಿ
ಮಲ್ಲಿಗೆಯ ಕುಸುಮವಾಗಿ
‌ಹೊಳಪನಿತ್ತೀರಿ ಸಾಹಿತ್ಯ ಶಿಖರಕ್ಕೆ
ಹೊನ್ನಿನ ಕಳಸವಾಗಿ!
_____________________________
(ಕುವೆಂಪು ಜನ್ಮ ದಿನಾಚರಣೆಯ ಶುಭಾಶಯಗಳು)"ಬಸವಪ್ರಿಯ"

- ಬಲವಂತ ಮೋರಟಗಿ(ಬಸವಪ್ರಿಯ)

29 Dec 2016, 09:28 pm

ಪ್ರೀತಿಯ ಸೆಳೆತ

ಕೆಣಕುತ್ತಿದೆ ನಿನ್ನ ಹ್ರದಯ
ಸೆಳೆಯುತ್ತಿದೆ ನನ್ನ. ನಿನ್ನ ಸನಿಹ!

ಬರೆಯಲಾರಂಭಿಸಿದೆ ನಿನ್ನ ಮೇಲೆ ಕವಿತೆ
ಪದಪುಂಜಗಳು ಸಿಗದೆ ನಾನು ಸೋತೆ!

ಧರ್ಮ

- Dharma

29 Dec 2016, 08:58 pm

ನವಂಬರ್ ೮

ರದ್ದಾಯಿತು ಸಾವಿರ ನೋಟು
ಕಾಳಧನಿಕರಿಗೆ ಧಾಳಿ ಏಟು
ನೋಟು ಬದಲಿಸಲು ಬ್ಯಾಂಕಿನ ಗೇಟು
ಸಹಕರಿಸಿದ ಶ್ರೀಸಾಮಾನ್ಯನೇ ನೀನೇ ಗ್ರೇಟು
ವಿರೋಧಿಗಳದ್ದು ಬರೀ ಡೌಟು
ಬಿದ್ದೋಯ್ತು ಸೈಟಿನ ರೇಟು
ಭ್ರಷ್ಟರಿಗೆ ಭಾರೀ ಪೆಟ್ಟು
ಮೋದೀಜಿ ನಿಮ್ಮದು ಸಾತ್ವಿಕ ಫೈಟು
ಒಳ್ಳೇ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಉಂಟು.

- Thimmaraja. h

29 Dec 2016, 08:55 pm

ಚೆಲುವಿನ ಹೂ

ಬಂಗಾರ ಸಿಂಗಾರವೇತಕ್ಕೆ ನನ್ನ
ಮೂಗ್ಗಿನ ಮಲ್ಲಿಗೆ!

ಸುಗಂಧ ದ್ರವ್ಯ ಪನ್ನೀರು ಯಾತಕ್ಕೆ
ಓ ನನ್ನ ಕೆಂಡ ಸಂಪಿಗೆ!

ಸ್ವರ್ಗದಿಂದ ಜಾರಿಬಂದ ಸುಕನ್ಯೆ
ಈ ಸುಂದರವಾದ ಭೂಮಿಗೆ!

ಧರ್ಮ

- Dharma

29 Dec 2016, 08:21 pm

ಪ್ರೀತಿಯ ಸಂಕೇತ

ಬರೆದಿರುವೆ ಬಾನಲ್ಲಿ
ನೀನ್ನ ಹೆಸರು

ಬೆರೆತಿರುವೆ ಹಗಳು ಇರಳು
ನೀನ್ನ ಉಸಿರು

ಸದಾಕಾಲ ಮಾಸದಿರಲ್ಲಿ
ನಮ್ಮ ಪ್ರೀತಿಯ ಹಸಿರು

ಧರ್ಮ

- Dharma

29 Dec 2016, 07:59 pm

ನಕ್ಷತ್ರಗಳು-೩

ನಕ್ಷತ್ರಗಳು ಸದಾ
ನನ್ನನ್ನು ಕಾಡುತ್ತಲೇ
ಇವೆ.
ಹಗಲಿರುಳೆನ್ನದೆ!
ಹಗಲಲ್ಲಿ ಕಣ್ಣಾಗಿ
ಇರುಳಲ್ಲಿ ಹೆಣ್ಣಾಗಿ
ಬದುಕಲ್ಲಿ
ಮೌನವಾಗಿ!!

***ಪದ್ಯಾಣ.

- padyana

29 Dec 2016, 07:38 pm