ಚಂದ್ರನ ಅಧ್ಯಕ್ಷತೆಯಲ್ಲಿ
ನಕ್ಷತ್ರಗಳು
ಸಭೆ ಸೇರಿದ್ದಾವೆ.
ಅಧ್ಯಕ್ಷನ ಹಾಲಿನಂತಹ
ನಗುಮುಖದ ಮೋಡಿಗೆ
ಮೌನವಾಗಿದ್ದಾವೆ.
ಸಭಿಕರ ದೀರ್ಘ ಮೌನಕ್ಕೆ
ಅಧ್ಯಕ್ಷ ಬೆರಗಾಗುತ್ತಲೆ
ಬೆಳಗಾಯಿತು.
******ಪದ್ಯಾಣ.
ದೊಡ್ದ ದೊಡ್ದ ಕನಸು ಕಂಡ ಕನಸುಗಾರ ನಾನು,
ಕಂಡ ಕನಸು ಕನಸಾಗಿರುವಂತೇ ಜೀವಿಸುತಿರುವ ಪಾಪಿ ನಾನು..
ಕನಸಲೇ ಖುಷಿ ಕಾಣುತಿರುವೆ,
ಏನೂ ಮಾಡದೆ ಕೈಕಟ್ಟಿ ಕುಳಿತಿರುವೆ..
ಜವಾಬ್ದಾರಿಯಿರದ ದಡ್ಡನಂತೆ ಬದುಕುತಿರುವೆ,
ಹುಟ್ಟಿರುವುದೇಕೆ ಎಂಬ ಪ್ರಶ್ನೆಯನ್ನೇ ಹುಟ್ಟುಹಾಕಿರುವೆ..
ಸಾಧಿಸದೆ ಸಾಯಲು ಮನಸಾಗುತಿಲ್ಲ,
ಸಾಧನೆ ಎಂಬುದು ಕೈಗೆಟುಕುತಿಲ್ಲ..
ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು
ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ
ನೀ ತುಂಬಿದೆ
ಬೆಳಕೊಂದೆ ನಿನ್ನಿಂದ
ನಾ ಬಯಸಿದೆ
ಎಲ್ಲಾ ಕಳೆದುಕೊಂಡರು
ಇನ್ನೂ ಏನೋ
ನನ್ನ ಜೊತೆ ಇರುವಂತೆ
ಕಣ್ಣುಗಳ ಮುಚ್ಚಿ ಕೇಳಲು
ಬಡಿತವು ಪಿಸುಗುಟ್ಟಿತು
ಅದು ನಿನ್ನ ಉಸಿರೆಂದು
ಹಸಿರಾಗಿ ಇನ್ನೂ ಈ ಕಣ್ಣೊಳಗೆ
ಕಾರಂಜಿಯಾಗಿ ಕಂಡಿದೆ ಇಂದು....
ನೂರಾರು ಭಾರಿ
ಸಾವಿರ ದಾರಿ ಹುಡುಕಿದರೂ
ಮತ್ತೆ ಕಂಡಿಲ್ಲ ನಿನ್ನನು
ನೀನು ಬರುವೆ ಎಂಬ
ಸಣ್ಣ ಆಸೆಯಿಂದ
ಬಡಿಯುವ ಈ ಹೃದಯದ ಜೊತೆ
ದಾರಿ ಕಾಯುತ ಕುಳಿತಿರುವೆ
ನಿನ್ನ ಸವಿಗನಸಲ್ಲಿ ಇಂದು....
ಹೇಳಬೇಕಾಗಿದ್ದ ಮಾತು
ಮನದಲ್ಲೇ ಉಳಿದಿತ್ತು ...
ಈಗ ತಾನೇ ಅರಳಿದ ಪ್ರೀತಿ
ಮೊಳಕೆಯೊಡೆಯುವ ಮುಂಚೆ
ಸತ್ತು ಹೋಗಿತ್ತು ....
ಮಾತು ಮೌನಕ್ಕೆ ತಿರುಗಿತ್ತು
ಅರಿವೇ ಇಲ್ಲದಂತೆ
ಮನದಲಿ ಏನೊ ದುಗುಡ
ಹೇಳಲಾಗದ ತಳಮಳ ... !!!
ಕೈಗೆ ಸಿಗುವ ಮೊದಲೇ
ಹಾರಿ ಹೋದ ಗಿಣಿಮರಿಯಂತೆ
ಕಂಡೆ ನೀನು......
ಬರಿದಾದಂತೆ ತೋರುತಿದೆ
ನನ್ನ ಕೈಗಳು
ಖಾಲಿ ಕೈಯನ್ನೇ
ನೋಡುತ್ತಾ ಕುಳಿತೆ ...
ಅದು ನಿನಗಾಗಿ ಬರೆದಿತ್ತು
ಈ ಕೊನೆಯ ಕವನ .........