ಹ್ರದಯದ ಹೆಬ್ಬಾಗಿಲಿಗೆ ನಾ ಬಂದು ನಿಂತೆ
ಏನು ಅರಿಯದ ಮಳ್ಳಿಹಾಗೆ ನೀ ನಿಂತೆ
ಕಟ್ಟಿಕೊಂಡಿರುವೆ ನಿನಗಾಗಿ ಅಸೆಗಳ ಕಂತೆ
ಹ್ರದಯ ಬಾಗಿಲು ನೀ ತರೆಯದಿರೆ ನನ್ನ ಜೀವನ
ಕನಸ್ಸಿಲದಿರುವ ಹಾಳು ಸಂತೆ
ಒಂದೊಂದು ಸಾರಿ ನಾನು ಬೇಡ ಅಂದ್ರು
ಅವಳಾಗೆ ನನ್ನ ಬಳಿ ಬರುತ್ತಾಳೆ
ಕೆಲವೊಮ್ಮೆ ನಾನೆ ಕರೆದ್ರು ಅವಳು
ಬರೋಕೆ ಹಿಂದೆ ಮುಂದೆ ನೋಡುತ್ತಾಳೆ
ಅವಳನ್ನ ಹೆಂಗೆ ಅರ್ಥಮಾಡ್ಕೊ ಬೇಕು
ಅನ್ನೋದು ಇನ್ನು ತಿಳಿದಿಲ್ಲ ಈ ಮುಗ್ಧ ಜೀವಿಗೆ
ಹೇಳಿಬಿಡು ನಿದ್ರಾದೇವಿ ನಿನ್ಯಾರು ಅಂತ
ಕೆಲವೊಂದು ಬಾರಿ ನನಗೆ ಅನ್ಸಿದ್ದು ಉಂಟು
ನಿ ಮಾಯಾವಿ ಎಂದು............
ಮರಳುಗಾಡಿನಂತೆ ಜೀವನ
ಮರಳುಗಾಡು ದಾಟಿ ಹೋಗಲೇ ಬೇಕೆಂಬ ಹಂಬಲ.
ಕನಸೆಂಬ ಬಾಯಾರಿಕೆಯ ತಣಿಸಲು
ನೀರಿಗಾಗಿ ಹುಡುಕಾಡುವುದೇ ನಿಜ ಕಾಯಕವಿಲ್ಲಿ
ಸಿಕ್ಕೇ ಬಿಟ್ಟಿದೆ ನೀರು ಸಮೀಪಿಸೆ ಬಿಟ್ಟಿರುವೆ ನೀರಾಡಿಕೆಯ ತನಿಸಿಕೊಳ್ಳುವ ಕ್ಷಣವ ಎಂದುಕೊಳ್ಳುತ್ತಲೇ ನೀರ ಸಮೀಪಕೆ ಓಡುತ್ತಲೇ ಇರಲು
ಅರಿವಾಗುವುದು, ಓಡಿ ಬಂದಿರುವೆನು ನಾನು ಮರಿಚಿಕೆಯೇ ನೀರೆಂದು ಹರಸಿ
ಮತ್ತೆ ಮತ್ತೆ ಮರಳುಗಾಡು ದಾಟಿ ಗೆಲ್ಲಲೇ ಬೇಕೆಂಬ ಬಯಕೆ
ಮತ್ತದೇ ಪಯಣದ ಮುಂದುವರಿದ ಭಾಗ
ಮತ್ತದೇ ನೀರಿಗಾಗಿ ಹುಡುಕಾಟ
ಮತ್ತೆಷ್ಟೋ ಮರೀಚಿಕೆಯ ಭೇಟಿ
ಮತ್ತೆಷ್ಟೋ ಕಾಲ ಬಾಯಾರಿಕೆಯ ಸಂಕಟ
ಸಿಕ್ಕ ನೀರು ಕೂಡ ಮರೀಚಿಕೆಯೇನೋ ಎನ್ನುವ ಆತಂಕ
ಮೊಗೆದು ಕೊಳ್ಳಲು ಹೆಜ್ಜೆ ಹಾಕಲು ಹಿಂಜರಿಯುವ ಮನಸು
ಎಲ್ಲವ ದಾಟಿ ನೀರು ಹುಡುಕಾಡಿ, ಮೊಗೆದು ಕುಡಿದು ಬಾಯಾರಿಕೆಯ ತಣಿಸಿ ಮರಳುಗಾಡು ದಾಟಿ
ಗೆದ್ದ ಕ್ಷಣವ ಸಂಭ್ರಮಿಸಿದಾಗಲೇ ನಿಜವಾದ ಸಂತಸ
ಕಣ್ಣೊಳಗಿನ ಕನಸನ್ನು ಕದಿಯಬೇಡ
ಮನದೊಳಗಿನ ಮನಸ್ಸಿನ ಮಾತನ್ನು ಮರೆಯಬೇಡ .
ಹೃದಯದ ಭಾವನೆಗಳನ್ನು ನಾ ಹೇಳಲು ಬಂದಾಗ
ಮರೆಯಾಗಿ ಹೋದೆಯಾ ಈ ನನ್ನ ಪುಟ್ಟ ಹೃದಯದ ಮೌನವನ್ನು ಅರಿಯದೆ ...
(ಅಮ್ಮು ಎಸ್)...