ಜೀವಕಿಂತ ಹೆಚ್ಚು ಪ್ರೀತಿಸಿದೆ,
ಪ್ರೀತಿ ನೆಪದಲಿ ಮನಸ ಆವರಿಸಿದೆ..
ಮನದ ತುಂಬ ಪ್ರೀತಿ ಹಂಚಿದೆ,
ಪ್ರೀತಿ ಕನಸಲಿ ಬಿಡದೆ ಕಾಡಿದೆ..
ಪ್ರೀತಿ ಮೋಹದಲಿ ಸ್ನೇಹಿತರ ದೂರ ಮಾಡಿದೆ,
ಪ್ರೀತಿ ನೀಡದೆ ನೀನೂ ಮೋಸ ಮಾಡಿದೆ..
ದೂರದೂರಿನ ದೂರವಾಣಿ ಕರೆ,
ಪ್ರೀತಿ ಹೆಸರಲಿ ಹಾಕಿದ ಬರೆ..
ಮನಸಲೀಗಲೂ ಉಳಿದಿದೆ ಆ ಕಪ್ಪು ಕಲೆ,
ಎಷ್ಟೇ ಪ್ರಯತ್ನಿಸಿದರು ಹೊರಬಿಡುತ್ತಿಲ್ಲ ನೀ ಹಾಕಿದ ಬಲೆ..
ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಎದುರಿಸಲು ನಾ ತುಂಬ ಅಶಕ್ತ
ನಿನ್ನ ಆಗಮನ ಕಂಡು ಮನಸಾಗಿದೆ ಭಯಭೀತ
ನಿನ್ನ ಈ ನಿರ್ಧಾರಕೆ ನನ್ನೊಳು ಸೃಷ್ಟಿಯಾಗಿದೆ ಉತ್ಪಾತ
ಏಕೆ ಏಕಾಂತ ನನ್ನ ಸೇರೋ ಧಾವಂತ
ದೂರ ನಿಲ್ಲು ನೀನು ನಾನಲ್ಲ ನಿನ್ನ ಸ್ವಂತ
ನಿನ್ನ ಆಕ್ರಮಣದಿಂದ ನಾನಾಗುವೆನು ಅನಾಥ
ಸಾವೇ ಸೊಗಸು ನೀ ಕೊಡುವ ನೋವಿಗಿಂತ
ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಇರುವಿಕೆಯು ಸೂತಕದ ಸಂಕೇತ
ದೂರ ನಿಂತೇ ಕೇಳು ನನ್ನ ಅಂತರಂಗದ ಸ್ವಗತ
ನೀ ತಿಳಿದಿರುವ ಹಾಗೆ ನಾನಲ್ಲ ಈಗ ಪ್ರೇಮೋನ್ಮತ್ತ
ಏಕೆ ಏಕಾಂತ ನನ್ನ ಸೇರೋ ಧಾವಂತ
ನಿಜವೇ ಅವಳು ನನ್ನನ್ನಗಲಿ ನಾನಾಗಿರುವೆ ದುಃಖತಪ್ತ
ಒಂದನ್ನು ನೆನಪಿಡು ಆ ದುಃಖ ಇರಲಾರದು ನನ್ನ ಜೀವನದಾದ್ಯಂತ
ನಂಬಿಕೆಯುಂಟು ನನ್ನಲಿ ಮತ್ತೆ ಬರುವಳವಳು ನಿನ್ನ ಹಿಮ್ಮೆಟ್ಟಿಸುತ್ತ