ನೀನಿದ್ದರೆ ಕಣ್ಮುಂದೆ...
ಸಂತೋಷಕ್ಕೆ ಪಾರವೇ ಇಲ್ಪದಂತೆ,
ಆ ಮರದಲ್ಲಿರುವ ಕೋಗಿಲೆ ಹಾಡುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಎಲ್ಲ ಹಕ್ಕಿಗಳು ನಿನ್ನ ಜೊತೆ ಮಾತನಾಡಲೆಂದು ನಾ ಮುಂದು ತಾ ಮುಂದು ಎನ್ನುತ್ತ ಚಿಲಿಪಿಲಿಯ ಧ್ವನಿಯೊಂದಿಗೆ ಜಗಳವಾಡುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಕಡಲದಲ್ಲಿನ ಅಲೆಗಳು ಕುಣಿದು ಕುಪ್ಪಳಿಸಿ,
ತೀರಕ್ಕೆ ಬಂದು ನಿನ್ನ ಹೆಜ್ಜೆಯನ್ನು ಸ್ಪರ್ಶಿಸಿ
ಹೋಗುವುದಿಲ್ಲವೆ?,
ನೀನಿದ್ದರೆ ಕಣ್ಮುಂದೆ...
ಆ ಹೂವುಗಳು ನಾಚಿ ತಲೆದೂಗುವುದಿಲ್ಲವೆ?,
ಗೆಲ್ಲಲಾಗದ ನಗರದ ಹತ್ತು ತೇರಿನ ಗಾಲಿಗಳ
ಏಳು ಹೊರಳಿನಲಿ ಭೂಮಿಗಿಳಿದ ಮರ್ಯಾದೆ ಪುರುಷ
ಜೊತೆಗೆ ಭೂಮಿಯ ಭಾರ ಹೊತ್ತವನ ಶೇಷಾಂಶ !
ಮತ್ತೊಂದು ಮಂಥನದ ಸುತ್ತಿನುರುಳಿಗೆ ಅರಸೊತ್ತಿಗೆ ಬಿಟ್ಟು-
ಕೊಟ್ಟು ನಡೆದ,ಕಾಡಿನತ್ತ....ಸಂತೋಷದಿಂದಲೇ. ಜೊತೆಗೆ
ಹಿಡಿದ ಉತ್ತ ಮಣ್ಣಗೆರೆಯಂಥ ದಾರಿ!
ಕಾಡಿನೆಡೆಗಿನ ನಡೆಯಲ್ಲಿ ಕಾಡಿತ್ತು,-ಋಷಿ ಮುನಿಗಳ
ಜಾಡಿತ್ತು-ಹಾಡಿತ್ತು.ಐದು ಮರಗಳ ತೋಪಲ್ಲಿ
ಬೇಡಿತ್ತು.ಅಗಲ ಉದ್ದದುಗುರ ಹೆಣ್ಣು.ಕಾಮದ ಕಣ್ಣು,
ಮೂಗ ಹುಣ್ಣು-ಎದೆಯ ಬೆನ್ನು!
*
ಮಣ್ಣಮಗಳಿಗೆ ಚಿನ್ನ ಮೃಗದ ಆಸೆ
ಚಿನ್ನದೂರವಗೆ ಮಣ್ಣ ಸೇರುವಾಸೆ!
ಮಾಯಾಮೃಗದ ಓಟದ ದಾರಿ ಉತ್ತರದ
ದಿಕ್ಕ ಬದಲಿಸಿತು.ಹೊರಳಿಸಿತು-ಉರುಳಿಸಿತು.
ದಕ್ಷಿಣದ ಹತ್ತುತಲೆ ಹುಳ ಉತ್ತರಕೆ ಹತ್ತುತಲೆ ಇತ್ತು
ಮಣ್ಣು ತಿನ್ನಲು ಕಾತರಿಸುತ್ತಲೆ ಇತ್ತು.
ಉತ್ತ ಮಣ್ಣಿನ ಗೆರೆ ದಾರಿ-ತಪ್ಪಿ ಶೇಷ ಗೆರೆ ದಾಟಿ...ದಾಟಿ...
ಪ್ರಕೃತಿ,ಪುರುಷನ ದಾಟಿ...ಪಕ್ಷಿ ಹೃದಯವ ಮೀಟಿ...
ಮಣ್ಣಿನ ಧೂಳನು ಹೊಕ್ಕಿಸಿತು-ಹತ್ತು ತಲೆ ಹುಳ
ಚಿನ್ನದೂರಿಗೆ ಮುಸುಕಿಸಿತು-ಸಂಕಟದ ಜಾಲ.
...
ಪ್ರಕೃತಿಹೀನಗೆ ಗಾಳಿ-ಬೆಳಕುಗಳ ಅಂಶ ಸಾಂಗತ್ಯ
ಹಣ್ಣು ಹಣ್ಣು ಮುದುಕಿಯ ಎಂಜಲ ಹಣ್ಣ ಆತಿಥ್ಯ!
ಬಾಲ ಬಲಿಗೆ ವನಧರ್ಮದ ಪಾಠ-ಅನುಗ್ರಹದ ಶಿಕ್ಷೆ!
ಬೆಳಕ ಅಂಶಕ್ಕೆ ಸುವಚನದ ಕಂಠಕ್ಕೆ ಗೆಳೆತನದ ದೀಕ್ಷೆ!
ದುಃಖವಿಲ್ಲದ ಕಾಡಲ್ಲಿ ಕಾಡಲೆಳಸಿದ
ಹತ್ತುತಲೆಹುಳದಬ್ಬರಕೆ-ಶೃಂಗಾರದಾಭಾಸಕ್ಕೆ
ಒಮ್ಮೆ ಕಂಪಿಸಿದ ಭೂಮಿ,ಬಾನಂತೆ ಗುಡುಗಿತ್ತು ಮತ್ತೊಮ್ಮೆ!
ಗಾಳಿ-ನೀರನು ದಾಟಿ,ಭೂಮಿಯನು ಸಂತೈಸಿ
ಪುರುಷ ವೃತ್ತಾಂತವನು ಅಗ್ನಿ ಸಾಕ್ಷೀಕರಿಸಿತು.
ಗೆಲ್ಲಲಾಗದ ನಗರದ ಮರ್ಯಾದೆ ಪುರುಷನಿಗೆ ಸಿದ್ಧವಾಗಿತ್ತು
ಯುದ್ಧಭೂಮಿ,ಚಿನ್ನದೂರಿನಲ್ಲಿ!ಮಣ್ಣಿಗಾಗಿ!
ಹೆಣ್ಣಿಗಾಗಿ!ಸ್ತ್ರೀಕುಲದ ಕಣ್ಣಿಗಾಗಿ!ಪ್ರಕೃತಿಗಾಗಿ!
ಮಣ್ಣ ತಿನ್ನಲೆಳಸಿದ ಹುಳ ತಾನೆ ಮಣ್ಣಲ್ಲಿ ಮಣ್ಣಾಯಿತು!
ಗಾಳಿ ದಾರಿಯಲಿ ಹೂವ ತೇರನು ಏರಿ
ಪ್ರಕೃತಿ-ಪುರುಷರ-ಗೆಲ್ಲಲಾಗದ ನಗರದತ್ತಣ ಪಯಣ
ಇದು ರಾಮನ ದಾರಿ! ಇದುಪುರುಷನ ದಾರಿ!ಹೆಸರಿದಕೆ ರಾಮಾಯಣ!
ಇನ್ನೆಲ್ಲ ಪ್ರಶ್ನೆಗಳೆ ಹುಟ್ಟಿಕೊಂಡ
ಪ್ರಕೃತಿಯ ಉತ್ತರಕಾಂಡ!
ರಾಜ್ಯಸುಖದನುಭೂತಿ ಪ್ರಕೃತಿ- ಪುರುಷರಿಗೆ
ಪ್ರಜಾವರ್ಗಕ್ಕೆ, ತಳದಿಂದ ಉಪ್ಪರಿಗೆ.
ರಾಜಧರ್ಮದ ಕ್ಷಿತಿಜ ವಿಸ್ತರಿಸೆ--ಯಶದ ಖಜಾನೆ ತುಂಬಿ
ತುಂಬಿ ತುಳುಕಾಡಿತು.
ಇಂತೆಲ್ಲ ಸುಖದಿ ಮುಗಿಯಿತೆಂಬ ಕಾಲಕ್ಕೆ.....
ಚಿಗುರೆರಡು ಮೊಳೆತು ಪ್ರಕೃತಿ ತುಂಬಿದ ಕಾಲಕ್ಕೆ-
ಸುಖದ ರಾಜ್ಯದ ತಳದ ಬದುಕಿನ ತಳಮಳ
ಉಪ್ಪರಿಗೆಯ ಹಂತಕ್ಕೆ ದಾಂಪತ್ಯ ಜಗಳ
ಅರಸ-ಅಗಸರಿಲ್ಲಿ ನಿರಾಕರಣದಲ್ಲಿ ಸಮಬಲ, ನಿರಾಕರಣ ಕಾರಣ ಒಂದಕ್ಕೊಂದು ತಳುಕು
ಪ್ರಕೃತಿ-ಪುರುಷರ ದಾರಿಯಲಿ ಬಿರುಕು,
ಪುನಃ ಪ್ರಕೃತಿ ದಾರಿಯಲಿ ಶೇಷ ಸಹಕಾರ ಪಯಣ
ತುಂಬು ಪ್ರಕೃತಿಯ ಮೇಲು ಶೂನ್ಯ ಪುರುಷಕರುಣ!
ಇಲ್ಲಿ ಶೇಷಾಂಶ ಗೆರೆ ಎಳೆಯಲೆ ಇಲ್ಲ,,!ಎಲ್ಲ ಮುಕ್ತ..ಮುಕ್ತ....
***** *****
ಹುತ್ತ ಕಟ್ಟಿದ ಮಣ್ಣ ಒಳಗಣ್ಣ ಕವಿಋಷಿಗೆ
ಉತ್ತ ಮಣ್ಣ ಗೆರೆಯ ಹೆಣ್ಣ ನೋವಿನಲು ಖುಷಿಗೆ
ಆಸರೆಯಾಗುವ ಕಾರುಣ್ಯಮನಸು,
ಸಾಕಾರ ಕ್ರೌಂಚ ವಿಯೋಗದ ಕನಸು.
ಬದುಕ ದ್ವಂದ್ವಕೆ ಸ್ಪಂದ-ಕುಶಲವಾದ ಫಲಸಿದ್ಧಿ
ಪುತ್ರಕಾಮೇಷ್ಟಿಯಿಲ್ಲದೆ ರವಿಕುಲದ ವೃದ್ಧಿ...ವೃದ್ಧಿ.
ಬದುಕಿದು ಕಗ್ಗತ್ತಲ ನೀರವ ಮೌನ
ಯಾರಿಗೂ ಕಾಣದ ಕತ್ತಲಲ್ಲಿ ಕಣ್ಣೀರದೇ ಧ್ಯಾನ
ನಗುವಾಗಲು ಅನುಭವಕೆ ಬಾರದು ಸಂತಸ
ಅತ್ತಾಗಲು ದೂರಾಗವು ಕಂಡ ನೋವುಗಳು, ವಿಪರ್ಯಾಸ
ಕತ್ತಲಲಿ ಕಣ್ಣ ನೀರು ಜಾರುತಿದೆ ಕೆನ್ನೆಯ ಸವರಿ
ಅದು ಕೂಡ ಉಳಿಸುತಿದೆ ಮತ್ತಷ್ಟು ನೆನಪುಗಳ
ಕೆನ್ನೆಯ ಮೇಲೆ ತಾ ಜಾರಿದ ಕುರುಹ ಉಳಿಸಿ
ತಲೆದಿಂಬಿಗೂ ಭಯವೇನೋ ಸುರಿವ ಮಹಾಪೂರ ಮಳೆಗೆ ಹೆದರಿ
ನಗುವಾಗಲು ಕಾಡುವುದು ಮನಸೆಂಬ ಮಾಯೆ
ಕಣ್ಣಂಚಲಿ ತಂದು ನಿಲ್ಲಿಸುವುದು ನೋವಿನ ಛಾಯೆ
ಬಾಗಿ ನಗುತಿರಲು ತುಟಿಗಳು, ತುಂಬಿ ಬಂದಿವೆ ಕಣ್ಣುಗಳು
ಒರೆಸಲು ಚಾಚಿ ಬಂದರು ಕೈಗಳು,
ಏನೋ ಬಿತ್ತು ಕಣ್ಣಿಗೆ ಎಂದು ನುಡಿದಿವೆ ನಗುವ ತುಟಿಗಳು.
ಮನಸ್ಸಿದು ಅಳುಕಿ ಅಳುತಿದೆ ಕ್ಷಣಕ್ಷಣವೂ
ಮತ್ತೆ ಮತ್ತೆ ಕಾಣುತ್ತಿರುವ ಸೋಲುಗಳ ನೆನೆದು
ಸಾವಿಗೂ ದೂರ ನೋವು ಕಂಡ ಮನಸುಗಳು
ಕಾಣದೆ ದಾರಿ ಮತ್ತೆ ಮತ್ತೆ ಬದುಕುತಿವೆ ನಂಬಿ ನಾಳೆಗಳಲಿ ಕಾಣಬಹುದು ಬಾಳ ಬೆಳಗುವ ಕಿರಣಗಳು.
ನಾ ಒಡಲಲ್ಲೆ ಇದ್ದೇನೆ ಎಂದಾಗ ಖುಷಿಪಟ್ಟಳು..ಒಡಲಲ್ಲೆ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ತಿನಿಸಿದಳು..
ತಾನು ಈಗ ಎರಡು ಹೃದಯದ ಒಂದೇ ದೇಹ ಎಂದು ಸಂತೋಷಪಟ್ಟಳು...
ನಾ ಉದರದಲ್ಲೆ ಒದ್ದರೂ,ಹೊಡೆದು-ಒದ್ದಾಡಿದರು ಸಹಿಸಿಕೊಂಡಳು..
ಭೂಮಿಗೆ ನಾ ಬರುವ ಮುಂಚೆಯೇ ಪ್ರೀತಿಸುತ್ತಿದ್ದಳು..
ಭೂಮಿಗೆ ಬಂದ ಮೇಲೆಯೂ ಪ್ರೀತಿಸುತ್ತಿರುವಳು..
ಭೂಮಿ ಬಿಟ್ಟು ಹೋದ ಮೇಲೆಯೂ ಪ್ರೀತಿಸುವಳು...
ಅವಳೇ ಅವ್ವ. ..ಅವ್ವನೇ ಎಲ್ಲಾ. .
ಅವಳಿಲ್ಪದಿದ್ದರೆ ಏನೂ ಇಲ್ಲಾ..
ಅರಳಲಿ ಕನ್ನಡ
ಜನಮನ ವನದಲಿ
ಗೀತೆಯಾಗಲಿ ಕನ್ನಡ
ಗಾಯಕರ ಕೊರಳಲಿ
ಮಂತ್ರವಾಗಲಿ ಕನ್ನಡ
ಮಕ್ಕಳ ನಾಲಿಗೆಯಲಿ
ಮಾತೆಯಾಗಲಿ ಕನ್ನಡ
ನಾಡಿವಾಸಿಗಳ ಮನದಲಿ
ಬೆಳಗಲಿ ಕನ್ನಡ
ಸರ್ವರ ಹೃದಯ ದೇಗುಲದಲಿ!
_________________________
ಬಸವಪ್ರಿಯ