Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹ್ರದಯ ದೂರ

" ಮರಿಬೇಕು ಅನ್ಕೋತ್ತಿನಿ ಆದರೆ ಮನಸ್ಸು
"
" ಓಪೋಲ್ಲ ದೂರ ಆಗ್ಬೇಕು ಅನ್ಕೋತಿನಿ ಆದರೆ "

" ನೆನಪುಗಳು ಕೆಳೋಲ್ಲ ಪ್ರೀತಿಸ ಬಾರದು ಅನ್ಕೋತ್ತಿನಿ "

" ಆದರೆ ಹ್ರದಯ ಬಿಡೋಲ್ಲ "


ಮಂಜು

- ಮಂಜುM

31 Jan 2017, 08:07 pm

ನೀನೆಂದರೆ .......

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಮಾಯೆಯೊಳಗೆ ಬಂದ ನನ್ನ ಕನಸು ನೀನೇ
ಜೀವಕ್ಕಿಂತ ನಿನ್ನ ಹೆಚ್ಚು ಪ್ರೀತಿಸೋನು ನಾನೇ
ಕಣ್ಣೀರ ಒರೆಸೋಳು ನೀನೇ ತಾನೇ
ಹೃದಯನ ದೋಚಿದೋಳು ನೀನೇ ತಾನೇ

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ನಿನ್ನಿಂದ ನಾನು ನನಗಾಗೆ ಹುಟ್ಟಿದವಳು ನೀನು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನಸ್ಸಿನ ಬಾಗಿಲ ತೆರೆದು
ಕಣ್ಣು ಮುಚ್ಚಿ ತೆರೆಯೋದಕ್ಕೂ ಮುಂಚೆ ಮಿಂಚಿ ಮರೆಯಾದವಳು ನೀನೇ ತಾನೇ ..

ಹಾಡಲೇ ಹಾಡು ಹಾಡಲೇ
ಗೀಚಿದ ಪದಗಳು ಮಾಯವಾಗಿದೆ..
ಎಲ್ಲಿರುವೆ ನನ್ನ ಮನದರಸಿ
ಬರಲಾರೆಯಾ ನೀ ನನ್ನ ಬಯಸಿ..
ಕಾದು ಕಾದು ಸಾಕಾಯಿತು
ನಿನ್ನ ನೆನೆದು ಈ ಹೃದಯ ಭಾರವಾಯಿತು.!!

- ನಮಿತ ಗಟ್ಟಿ

31 Jan 2017, 04:49 pm

ನನ್ನವಳ ದುರವಿದ್ದಾಗ

ಹೇ...ಗೆಳತಿ...ಹೇಗಿದ್ದೀಯಾ...?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ....? ಎಲ್ಲಿದ್ದೀಯ....? ಏನು ಮಾಡ್ತಿದ್ದೀಯಾ...?
ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ...ನಿನ್ನ ಉತ್ತರ ಕೇಳಿ....ನನಗೆ ತುಂಬಾ ಸಮಾಧಾನ ಆಯ್ತು...!
ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ...ನಿನ್ನೆದುರಿಗೆ ವ್ಯಕ್ತಪಡಿಸೋದು...?
ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ...!!
ನಮ್ಮ ಹಿಂದಿನ ಸವಿ....ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ...!!
ಅವತ್ತು ಸವಿಯಾಗಿದ್ದ ....ಪ್ರೀತಿ ಇಂದಿಗೂ ನನಗೆ ಸವಿಯೇ...!!
ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ....!!
ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ...!! ಹೋಗಲಿ ಬಿಡು..ಗೆಳತಿ...!!
ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು ನಿಜವಾಗಿಯೂ ಒಂದು ಸಾಹಸವೇ ಹೌದು...!!
ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ...ತೊದಲುತ್ತಿದೆ...!!
ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು....!!
ನಾವೇನು ಪ್ರೀತಿಗಾಗಿ ತಾಮಹಲ್ ಕಟ್ಟಬೇಕಾಗಿರಲಿಲ್ಲ...ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು..!!
ಈ... ದಿನ ನಿನ್ನ ಬದುಕು ಹಸನಾಗಿದೆ....ಪರವಾಗಿಲ್ಲ...!!
ಸಾವಿನ ಹಾದಿಯಲಿ ಉಸಿರು ಹುಡುಕುವವನು ನಾನು...!!
ನಿನ್ನ ಬದುಕು ...ಹೀಗೆ...ಸುಂದರವಾಗಿರಲೆಂದೆ ನನ್ನ ಹಾರೈಕೆ....!!

"" ಮಲ್ಲಿಕಾರ್ಜುನ ""

- Mallikarjun

31 Jan 2017, 03:09 pm

ಪ್ರೀತಿಯ ಆರಾದನೆ

ಕಣ್ಮುಚಿದರೆ ನೀ ನನ್ನ ಕನಸಿನಲ್ಲಿ 
ಕಣ್ ಬಿಟ್ಟರೆ ನೀ ನನ್ನ ನೆನಪಿನಲ್ಲಿ 
ನನ್ನೋಳಗೆ ನಾನಿಲ್ಲ ನೀನೇ ನನ್ನಲ್ಲಿ
ಕಣ್ಮುಂದೆ ಬರುವೆ ನೆನೆದಲ್ಲಿ
ಅಳಿಯದು ನಿನ್ನ ಚಿತ್ರ  ನನ್ನ ಮನದಲ್ಲಿ
ಇರುವ ಬಯಕೆ ಗೂಡು ಕಟ್ಟಿ ನಿನ್ನ ಮನಸಲ್ಲಿ

ಅನಿಸುವಾಗಲೇಲ್ಲಾ ನಾ ಮುಟ್ಟುವೆ ನನ್ನ ಹ್ರುದಯವನ್ನಾ
ನಿನ್ನ ನೆನೆದು ಮರೆಯುವೆ ನನ್ನನೆ ನಾ
ನಿನ್ನ ಪ್ರೀತಿಯ ಆರಾದನೆ ಮಾಡಿದೆ ನನ್ನ ಮನ
ಅದ ಬಿಚ್ಚಿ ಹೇಳಲಾರದೆ ಮೂಡಿದೆ ನೂರು ಕವನ

- ರಾಜೇಶ್

31 Jan 2017, 01:27 pm

ಮಮಕಾರ

ಜೋರಾಗಿ ಬೀಸುತ್ತಿರುವ ಮಳೆ...
ಹೆದರಿ ಮುದ್ದೆಯಾಗಿರುವ ಕಾಗೆ ಮರಿ ತನ್ನ ತಾಯಿಗಾಗಿ ಹಂಬಲಿಸುತ್ತಿರಲು...
ಹಸಿದ ನಾಯಿಯೊಂದು ಬಾಯಿ ಚಪ್ಪರಿಸಿಕೊಂಡು ಅತ್ತ ಕಡೆ ಧಾವಿಸುತ್ತಿದೆ..
ಗಾಳಿಯ ರಭಸಕ್ಕೆ ಮರದ ರೆಂಬೆ ತುಂಡಾಗಲು,ಮರಿಯ ಗೂಡು ಕೆಳಗೆ ಬೀಳಲು...
ಅಯ್ಯೋ!! ಕಾಗೆ ಮರಿಯ ಅರಚಾಟ ಕೇಳಲಾಗದು...
ಆ ಸಮಯದಲ್ಲಿ ತಾಯಿ ಕಾಗೆಯು ಹಾರಿಬರಲು..
ನಾಯಿಯಲ್ಲಿ ಬೇಡಿಕೊಂಡಿತು ಹೀಗೆಂದು,
ಮುಟ್ಟದಿರು ,ತಿನ್ನದಿರು ಓ ಎನ್ನ ಅಣ್ಣ..
ಕಂದಮ್ಮನಿಲ್ಲದೆ ನಾ ತಾನೇ ಹೇಗೆ ಬದುಕಲಿ..
ತನ್ನ ತಿಂದು ಎನ್ನಕಂದನ ಜೀವ ಉಳಿಸೆಂದು ಪರಿ ಪರಿಯಾಗಿ ಕೇಳಲು...
ನಾಯಿಯ ಮನಃ ಕರಗಲು ಮರಿಯನ್ನು ಮುಟ್ಟದೆ ಹೊರಟು ಹೋಯಿತು...

- ನಮಿತ ಗಟ್ಟಿ

31 Jan 2017, 11:32 am

ಮಾತು

ಮಾತು ಗತಿ ತಪ್ಪಿದರೆ
ಹೋಗುವುದು ಮಾನ
ಮಾತು ಮಿತಿಯಲ್ಲಿದ್ದರೆ
ಸಿಗುವುದು ಸನ್ಮಾನ

- ಕ್ರಿಯೆಟೀವ್ ಕೃಷ್ಣ

31 Jan 2017, 08:18 am

ನಾ ಕಂಡ ಕನಸು ನನ್ನ ವಳ ನೆನಪಲ

ಕಂಡ ಕನಸು ಕೈಗೂಡದೆಂದು.ಕನಸು ಕಾಣುವುದ ಬಿಡಲಿಲ್ಲ ನಾ.!
ನನ್ನ ಪ್ರೀತಿ ನೀನು.ನೀ ಸಿಗದೇ ಹೋದರೇನಂತೆ.?
ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ.ಈ.ಮೆದುಳಿಗೆ ಮರೆವುಂಟೆ ಹೊರತು.!
ಪ್ರತಿ ಕ್ಷಣ ಬಡಿಯುವ .ಈ .ಪುಟ್ಟ ಹೃದಯಕ್ಕಲ್ಲ.
ಒಲವೇ ನೀನೆಲ್ಲಿರುವೇ.?
ಪ್ರಾಣ ಉಳಿಸೋ ಕಾಯಿಲೆಗೆ.ಪ್ರೀತಿಯೆಂದೆನ್ನಬಹುದೇ.?

- Mallikarjun

31 Jan 2017, 07:49 am

ನನ್ನವಳ ನೆನಪಿನಲ್ಲಿ

ಚೂರಾಯ್ತು ಹೃದಯದ ಚಿಪ್ಪು.ಕಳೆದು ಹೋಯ್ತು ಪ್ರೀತಿಯ ಮುತ್ತು.
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು.
ನಾ ಬರೆದ ಕವನಗಳೆಲ್ಲಾ.ಬರೀ ನೆನಪುಗಳ ಚರಿತ್ರೆಯಾಯ್ತು !
ಕಮರಿಹೋದ ನನ್ನ ಕನಸಿನ ಹೂಗಳು.ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು.
ಪ್ರೀತಿ ನರಳಿದರೆ.ಹೃದಯ ಅರಳೊಲ್ಲ ಗೆಳೆತಿ.
ಚೂರಾದ ಚಿಪ್ಪಿನಲಿ.ಉಸಿರಾಡುವ ಪ್ರೇಮಿ ನಾನು?

"" ಮಲ್ಲಿಕಾರ್ಜುನ ""

- Mallikarjun

31 Jan 2017, 07:44 am

ನಮ್ಮೂರ ಸಂಕ್ರಾಂತಿ

ನಮ್ಮೂರ ಸಂಕ್ರಾಂತಿ
ಸಿದ್ಧರಾಮನ ಜಾತ್ರಿಗೆ ಹೋಗೋಣ ಬಾ ಗೆಳತಿ
ನಾಡೆಲ್ಲಾ ಬರುತ್ತದೆ ನೋಡಾಕ!
ಸಂಕ್ರಾಂತಿ ಹಬ್ಬಕ ಸಿದ್ಧರಾಮನ ಮದುವೆ
ಸಂಜೆ ನಂದಿಕೋಲ ಮುಗಿಲಕ್ಕ!!

ನೀನಾದರು ಬಂದರೆ ನಾನಾದರೂ ಬರತೇನ
ನಮ್ಮಿಬ್ಬರ ಹೊಸಮಾತು ಜಾತ್ರ್ಯಾಗ ನನ್ನವಳೆ
ಸಂಕ್ರಾಂತಿ ಸವಿನೆನಪು ಮನದಾಗ,!!
ಹತ್ತಿರ ಬಂದಾಗ ಮತ್ತೇನು ಹೇಳಲಿ ಕಯಿ ಹಿಡಿದು ಮುಂದೆ ನಡೆದಾಗ ! ಹಳೆನೆನಪು ಮೂಡಿತ್ತ ಮಾವಿನ ಬನದಾಗ!!
ಬೆಳದಿಂಗಳಲ್ಲಿ ಕಂಡ ಬೆಳ್ಳಕ್ಕಿಹಿಂಡಿನಂತೆ ನೀ ಬರುವ ದಾರಿ ಕಾಯ್ದೇನ! ನನ್ನ ಚಿನ್ನಾ ಬಾಳ ನೆನದೇನ ಮನದಾಗ!!
ಜಾತ್ರಿಗೆಲ್ಲರು ಬಂದು ಕಯಿ ಮಾಡಿ ನಮ್ಮವ್ವ ಕಣ್ಣಲ್ಲೇ ಕೇಳಿದಳು ಮಂದ್ಯಾಗ ! ನಿನ್ನನೋಡಿ ಅವಳ್ಯಾರೋ ನಿನ್ನ ಹತ್ತಿರದಾಗ ಅಂತ!!
ಹಕ್ಕಿಯ ಇಂಚರ ಚುಕ್ಕಿಯ ಚಿತ್ತಾರ ಮುಗಿಲ ತುಂಬಿದೆ ಸಿಂಗಾರ ! ನನ್ನ ಗೆಳತಿ ನೀ ನನ್ನ ಪ್ರೇಮದ ಸಿಂಧೂರ ನನ್ನ ದೆಯ ವಿಣೆ ನಿನು

"""" ಮಲ್ಲಿಕಾರ್ಜುನ """"""

- Mallikarjun

31 Jan 2017, 07:40 am

ಎಂದೂ ಮುಗಿಯದ ಗೋಳು

ಶೂದ್ರ ಕವಿಗಳ -ಲೇಖಕರಗಳ ಸಮಾನತೆ ಸಂದೇಶ
ಸುಟ್ಟು ಹಾಕಿರಿ
ದಾರ್ಶನಿಕರು - ಸಮಾಜ ಸುಧಾರಕರ ಭ್ರಾತತ್ವ ತತ್ವಗಳ ಮೂಲೆಗೆ ತಳ್ಳಿರಿ
ರಾಜಕೀಯವರ ಭರವಸೆಯ ಮಾತುಗಳು ಕಸದ ತೊಟ್ಟಿಗೆ ಎಸೆಯಿರಿ

ಭಾರತ ವಿಕಾಸ ಹೊಂದಿ ಏಳು ದಶ ವರ್ಷ ಬರುತ್ತಿದೆ
ನಾವು ಇನ್ನು ಕೊಳಚೆ ಸಂಸ್ಕೃತಿಯಲ್ಲಿ
ಬದುಕು ಸಾಗಿದೆ
ನರಿ ತೋಳಗಳು ಧರ್ಮದ ಹೆಸರಿನಲ್ಲಿ ದೂರ ತಳ್ಳಿದೆ
ನಮ್ಮ ಜೀವನ ಕನಸೆಂಬ ಕುದರೆ ಏರಿ ಸಾಗಿದೆ

"ಸಮಪಾಲು ಸಮಜೀವನ'"
ಹುಣ್ಣುಮೆ ಚಂದಿರನ ಆಗಮನ
ಹುಡುಕಿದನು ಬೆಳ್ಳಿಯ ಕಿರಣನ
ಮಿಂಚಿನಂತೆ ಮಾಯವಾದನು

ಆಶಾ ಭಾವನೆ ಬತ್ತಿ ಹೋಗುರಿವುದು
ಬದುಕುವ ಹಕ್ಕು ಕಿತ್ತು ಹೋಗುರಿವುದು
ಮುಕ್ತಾಯ ಎಂದು ಕೊನೆಗಾಣಸುವುದು
ಇಲ್ಲಾ ನಮ್ಮನ್ನ ಮಾರಣಹೋಮ ನಡೆಸುವುದು

- Shinan

31 Jan 2017, 07:01 am