Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಪರಾತ್ರಿಯ ಕನವರಿಕೆಗಳಲಿ
ಅದುಮಿಡಲಾಗದ ಭಾವನೆಗಳಲಿ
ಅಗಣಿತ ಪ್ರೀತಿಗೆ ಬದಲಾಗಿ
ಅಂತ್ಯ ಕಾಣದ ನೋವ ಹಂಚಿ ಹೋದ
ಅಪರಿಚಿತಳಂತೆ ಹಾದು ಹೋಗುವ ನಿನಗೆ
ಅರ್ಥವಾಗದು ಸಖಿ ನನ್ನಯ ವೇದನೆ....
ಜೊತೆಯಾಗಿ ನೇಯ್ದ ಕನಸುಗಳು
ಜೊತೆಯಾಗಿ ಬದುಕುವ ಭರವಸೆಗಳು
ಜೋಪಡಿ ಫಕೀರನ ದೂರ ತಳ್ಳಿದ ನಿನಗೆ
ಜೋಡಿಯಾಗಿ ಸಾಗಿದ ಹಾದಿ ನೆನಪಿರದು...
ಮರೆತು ಬದುಕುವ ಕಲೆ ಹೇಗೆಂದು
ಮಗದೊಮ್ಮೆ ಬಂದು ಕಲಿಸಿ ಕೊಡುವೆಯ
ಮುರಿದ ಮನಸ್ಸಿನ ಮೂಕ ರೋದನೆಗಳು
ಮರೆಯದ ನೆನಪೊಂದ ಮೊಗೆದು ಕೊಟ್ಟ
ಮನಸನ್ನು ಕೊಂದ ನಿನ್ನ
ಮನಸಿಗೆ ಅರ್ಥವಾಗದು ಬಿಡು..
ಬೆಳಕಾಗಿ ಬರುವಳೆಂದು ನಂಬಿದ ನನ್ನನ್ನು
ಬೆರಳ ತುದಿ ಕೊಡವಿ ನಡೆದೆ ಮಗುವಂತೆ
ಬೆನ್ನು ತಿರುಗಿಸಿ ಬಿರುಸಾಗಿ ನಡೆದ ನಿನಗೆ
ಬೆಂದು ಹೋಗಿರುವ ಹೃದಯದ ಪಾಡು
ಬರೆದು ತಿಳಿಸುವಷ್ಟು ತೀಕ್ಷ್ಣತೆ ನನ್ನ
ಬರಹಕ್ಕಿಲ್ಲ ಬಿಡು....
- jabbu
13 Feb 2017, 05:39 pm
ಆತ್ಮವೆಂಬ ದೇವರಿಗೆ
ದೇಹವೆಂಬ ದೇಗುಲವು!!
ನಿತ್ಯ ಯೋಗದ ಪೂಜೆಗೈಯಲು
ದೇಹ ದೇಗುಲ ಪುನೀತವು!!
ಧ್ಯಾನದ ನೈವೇದ್ಯದ ಅರ್ಪಣೆ
ಆತ್ಮ ದೇವಗೆ ನಿತ್ಯವೂ!!
ಒಳ್ಳೆಯ ಆಲೋಚನಾ ಭಾವವೇ
ಆತ್ಮ ದೇವನ ಅಲಂಕಾರವು!!
ಮಾಡುವ ದಾನ ಧರ್ಮವೇ
ಆತ್ಮ ದೇವನಿಗೆ ಪ್ರಿಯವು!!
ಸತ್ಯ ಮಾರ್ಗದಿ ನಡೆದುಕೊಂಡರೆ
ಆತ್ಮ ದೇವ ಸಂತೃಪ್ತನು!!
- ಪಿ.ಜಿ.ಜ್ಯೋತಿ
13 Feb 2017, 04:39 pm
ಕನಸೆಂಬ ಕಾನನದಿ ಮನಸೆಂಬ ಮರ್ಕಟವು
ಅತ್ತಿಂದಿತ್ತ ಇತ್ತಿಂದತ್ತ ಹಾರುತ್ತಿತ್ತು
ಏನು ಆತುರವೋ ಏನು ಕಾತುರವೋ ಅದಕೆ ಜಗವ ಬೊಗಸೆ ಹೃದಯದಿ ತುಂಬಿಕೊಂಡು ನಲಿಯುತ್ತಿತ್ತು ನರಳುತ್ತಿತ್ತು
ಎಷ್ಟಿದ್ದರೂ ಎಲ್ಲವನು ಮರೆತು ಇರದುದರ ಹಿಂದೆ ಓಡುವುದು ,ಸಿಕ್ಕಾಗ ಬೆಲೆಕೋಡದೆ ಕಳೆದುಕೊಂಡು ಕೋರಗುವುದು
ಮನಸೇ ನೀನೋಂದು ಮಾಯೆ
ಮಿಂಚಿನ ವೇಗ ನಿನ್ನದು ಸರಿಯೇ?
ಆದರೂ ನಿನ್ನ ಹೃದಯದ ನೋವ ನೀನೇ ತಿಳಿಯೆ!
ನೀನೋಂದು ಮೋಹಕ ಶಕ್ತಿ
ಹಿಡಿತದಲಿದ್ದರೆ ಪರಮಾಣು ಶಕ್ತಿ
ಹಿಡಿತ ಬಿಟ್ಟರೆ ದುಶ್ಟ ಶಕ್ತಿ
ನಿನ್ನ ಲೀಲೆಯ ನೀನೇ ಅರಿಯೆ
ನಿನಗೆ ಸೋತವನಾಗುವ ಭಿಕಾರಿಯೇ
ನಿನ್ನ ಗೆದ್ದವನಿಗೆ ನೀನೇ ಅಚ್ಚುಮೆಚ್ಚಿನ ಪ್ರಿಯೆ
ಹಂಸಿನಿ
೧೩/೨/೨೦೧೭
- ವಿಸ್ಮಯ
13 Feb 2017, 04:37 pm
ಕಾಣದ ಮುಖಕೆ ನೀ ಕನ್ನಡಿ ಹಿಡಿದರೆ
ಎಲ್ಲವೂ ಶೂನ್ಯ ವೇ ಅರಿಯದೇ ನಿನಗೆ!!
ಕಣ್ಣನು ಮುಚ್ಚಿ ಬೆಳಕಲಿ ನಿಂತರೆ
ಕಾಣುವುದೇನಿದೆ ಎಲ್ಲವೂ ಇರುಳೇ!!
ಭರವಸೆ ಇಲ್ಲದೇ ಬದುಕಲಿ ನಡೆದರೆ
ನಾಳಿನ ಬದುಕಿಗೆ ಅರ್ಥವು ಎಲ್ಲಿದೆ!!
ಬೀಸುವ ಗಾಳಿಯ ಕೈ ಮುಷ್ಟಿಯಲ್ಲಿ
ಹಿಡಿದು ಬಚ್ಚಿಡಲು ನಿನಗೆ ಸಾಧ್ಯವೇ!!
ಮತಿ ಭ್ರಮಣೆಯಿಂದ ಮಂತ್ರವ ನುಡಿದರೆ
ನಿನ್ನನು ತಲುಪದೇ ದೇವರ ತಲುಪುದೇ!!
ಮಾಡುವ ಕಾರ್ಯದಿ ಶ್ರದ್ದೆಯು ಇರದೇ
ಬಯಸಿದ ಫಲವು ನಿನಗದು ದೊರೆವುದೇ!!
- ಪಿ.ಜಿ.ಜ್ಯೋತಿ
13 Feb 2017, 11:46 am
ಗುಣದಿಂದ ಗುಣಿಸಿದರೆ ಗುಣವಂತ
ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ
ಹಣದಿಂದ ಕೂಡಿಸಿದರೆ ಸಿರಿವಂತ
ಇದ್ದದ್ದನ್ನು ಕಳೆದರೆ ಸಾಲವಂತ.
ಇವರೆಲ್ಲರನ್ನೂ ಗುಣಿಸಿ ಭಾಗಿಸಿ ಕೂಡಿಸಿ ಕಳೆಯುವವನು
....." ಭಗವಂತ".......
- ರಾಜೇಶ್
13 Feb 2017, 10:51 am
ಯಾರಿವಳು ನನ್ನ ಹಿಂದೆ ಬಂದವಳು
ನನ್ನ ನೋಡಿ ಕಲಿತವಳು
ದೊಡ್ಡವನೆಂಬ ಸ್ಥಾನ ಕೊಟ್ಟಳು
ರಕ್ಷಣೆಗೆ ರಾಖಿ ಕಟ್ಟಿದಳು...
ಇವಳೆ ತಂಗಿ ಅಂತಾದಳು.
ಇವ್ಳ ಮುಗ್ದಮನಸು ಕನ್ನಡಿ
ಅದುವೆ ಬದುಕಿಗೆ ಮುನ್ನುಡಿ
ಜೊತೆ ಅಣ್ಣ ಇರುವ
ಡ್ವೊಂಟ್ವರಿ..... ನಗುತಿರು...
ತಾಯಿ ಬೇರೆ ಆದರು
ಅಣ್ಣನೆಂದು ಕರೆದಳು
ಸುಭದ್ದ್ರೆ ಬೇರೆ ಆದರೂ
ಶ್ರೀ ಕೃಷ್ಣನ ತಂಗಿ ಆದಳು...
ಈ ಭಾಂದವ್ಯಕೆ ನಲೆಯೆ
ಇವರು......
ಪಿ ಅನಿ
13-2-17
- ಪಿ ಅನಿ...
13 Feb 2017, 10:41 am
ತಣ್ಣನೆಯ ಗಾಳಿಯ
ಸ್ಪರ್ಶ ಪಡೆದ ಗಿಡದ ಮೊಗ್ಗು
ಹೂವಾಗಿ ಅರಳುವುದು.
ಪ್ರತಿ ಮುಂಜಾನೆಗೆ.
ಹೂ ಕಂಪಿಗೆಎದ್ದ
ದುಂಬಿ ಪಾತರಗಿತ್ತಿಹಾಡಿ
ಮಕರಂದ ಸವಿಯುವುದು.
ಪ್ರತಿ ಮುಂಜಾನೆಗೆ.
ಈ ಲೋಕದ ಒಡೆಯ
ಕೆಂಪು ವಸ್ತ್ರದಲಿ
ದುಟಿಗೆ ಹಾಜರು..
ಪ್ರತಿ ಮುಂಜಾನೆಗೆ.
ವಿಸ್ಮಯ ಲೋಕಗಳ
ಮುಕ್ತಾಯದ ಪಯಣಕ್ಕೆ
ನನ್ನ ವಾಸ್ತವದ ಎಚ್ಚರ!!
ಪ್ರತಿ ಮುಂಜಾನೆಗೆ.
***
•~> ಜಿ. ಕರಣ್
- ಕರಣ್ ಗಾವಡಾ
13 Feb 2017, 10:38 am
ಹುಣ್ಣಿಮೆ ಚಂದ್ರನು
ಕೊಟ್ಟ ಇರುಳಲಿ
ಬಳುವಳಿಯಾಗಿ ನಿನ್ನನು!!
ಹಗಲಲೂ ಚಂದ್ರ
ಇರುಳಲೂ ಚಂದ್ರ
ದಿನವಿಡೀ ನನ್ನ ಎದುರಲಿ!!
ಅರಳುವ ಹೂವು
ಕೊಟ್ಟಿತು ತನ್ನ ನಗುವನು
ನಿನ್ನ ಮೊಗದಲಿ!!
ನೋವಲೂ ನಗುವು
ನಲಿವಲೂ ನಗುವು
ಸಂತಸ ನಮ್ಮ ಬಾಳಲಿ!!
ಜೇನದು ಸುರಿದು
ಹೋಯಿತು ನಿನ್ನ ಅದರಕೆ
ತಂದು ಮಧುವನು!!
ಕಹಿಯನು ಮರೆಸಿ
ಸಿಹಿಯ ಮಾತಾಡೊ
ಮಧು ನೀ ನನ್ನ ಬದುಕಲಿ!!
- ಪಿ.ಜಿ.ಜ್ಯೋತಿ
13 Feb 2017, 10:08 am
ಮೌನವಾಗಿ ಇದ್ದ ಮೇಲೆ ಮಾತು
ಮನಸಿನಲ್ಲಿ ಮೂಡಿ ತಾನೇ ಸೋತು
ನಿನ್ನ ಹೆಸರ ಹೇಳೋ ನಿನ್ನ ನೆನಪ
ಹಾಡೋ ಕಾಯಕಕ್ಕೆ ಕೈ ಹಾಕಿದೆ!!
ಮೌನವಾಗಿ ಇದ್ದ ಮೇಲೆ ಮಾತು
ತನಗರಿವಿಲ್ಲದೇ ತಾನೇ
ಅದರದಿಂದ ತಡವರಿಸಿ ಹೊರಚಿಮ್ಮಿ
ನುಡಿಯಾಗ ಬಯಸಿದೆ!!
ಮೌನವಾಗಿ ಇದ್ದ ಮೇಲೆ ಮಾತು
ಸಲ್ಲದ ನೆಪ ಹೂಡಿ ತನ್ನಯ
ಮಿತಿ ಮೀರಿ ವಿಪರೀತ ಬಯಕೆಯಿಂದ
ನಿನ್ನೊಡನೆ ಮಾತಾಡ ಬಯಸಿದೆ!!
- ಪಿ.ಜಿ.ಜ್ಯೋತಿ
13 Feb 2017, 09:43 am
ಕೋಲ್ ಮಿಂಚು ಬಳಿ ಬಂದು
ಬಯಸಿತು ನನ್ನಯ ಸಲಿಗೆ!!
ಮಿನುಗಿ ಮರೆಯಾದ
ಆ ತಾರೆಗೆ ನಿನ್ನಯ ಹೋಲಿಕೆ!!
ಬಿಡದಿರುವ ಈ ಮೌನ ಗದ್ಗದಿಸಿ
ಕುಳಿತಿದೇ ನನ್ನಯ ಕೊರಳಲಿ!!
ಆಕಾಶ ಗಂಗೆ ಉಕ್ಕಿ ತಾ ಬಂದು
ಹರಿದಿದೆ ನನ್ನ ಈ ಕಣ್ಣಲಿ!!
ಇರುಳ ತಾ ಕಳೆಯ ಬರುವ
ರವಿಗಾಗಿ ಕಾದಿದೆ ಕಂಗಳು!!
ನೋವ ತಂದೆರೆದು ಹೊರಟ ನಿನ್ನ
ಒಲವ ಬಯಕೆ ಈ ಮನದೊಳು!!
ವಿರಹದ ಕಿಡಿಯು ಉರಿದು
ಧಗಧಗಿಸಿ ಸುಡುತಿದೆ ನನ್ನನು!!
ಚಲಿಸುವ ಮೋಡ ಕರಗಿ ಮಳೆಯಾಗಿ
ತೊಳೆಯಲೀ ನೆನಪ ಕೊಳೆಯನು!!
- ಪಿ.ಜಿ.ಜ್ಯೋತಿ
13 Feb 2017, 09:42 am