ಅಮ್ಮನುದರದಿಂ ಭುವಿಯ ಸೇರಿದೆ
ಕಣ್ಣು ತೆರೆಯುವ ಮುನ್ನ ,
ಆಸೆ ಗಂಟ ಹೊತ್ತು ಮುಂದೆ ಸಾಗಿದೆ
ದಾರಿ ಸಿಗದ ಮುನ್ನ ,
ಅರಿತು ಬಾಳದೆ ಹಗೆಯ ಸಾಧಿಸಿದೆ ಅರಿತರೂ ಅರಿಯದೆ ನಿನ್ನ ,
ಸಾಗಿ ಸಾಗಿ ಬೆಸವಳಿದು ಕುಳಿತೆ
ಕಂಡು ಕಾಣದೆ ನಿನ್ನ ,
ಅದನರಿತೇ ಇದನರಿತೇ ಎಂದೆ
ಏನೂ ಅರಿಯದ ಮುನ್ನ ,
ಬಂದ ಮೂರು ದಿನದಿ ಏನು ಸಾಧಿಸಿದೆ
ಸೇರುವ ಮೊದಲು ಮಣ್ಣ ,
ಬಂದ ದಾರೀಲೇ ಹಿಂತಿರುಗಿ ಹೋದೆ
ನೀನೇ ಅರಿಯದೇ ನಿನ್ನ .
- ಬಿ ಸಿ.ಬಸವರಾಜ
ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು, ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ, ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ..
ಅನು..
ಕೇಳದೇನೆ ಜನ್ಮಕೊಟ್ಟೆ
ಅತ್ತಾಗ ಅಕ್ಕರೆಯ ಅಪ್ಪುಗೆಯಿಂದ ಹಾಲುಣಿಸಿದೆ
ಬಿದ್ದಾಗ ಮೇಲೆತ್ತಿ ಕಣ್ಣೀರು ಒರೆಸಿದೆ
ಅಕ್ಷರ ಜ್ಞಾನ ಮೂಡಿಸಿ ಜೀವನದ ದಾರಿ ತೋರಿಸಿದೆ...
ಜನ್ಮಕೊಟ್ಟ ನೀನೆ ಈಗ ಮರುಜನ್ಮ ಬೇಡುತಿರುವೆ
ಹಾಲುಣಿಸಿದ ನೀನೆ ಈಗ ಅನ್ನವ ಬೇಡುತಿರುವೆ
ಮೇಲೆತ್ತ ನೀನೆ ಈಗ ಮೇಲೆತ್ತಲು ಬೇಡುತಿರುವೆ
ಜ್ಞಾನಕೊಟ್ಟು ದಾರಿ ತೋರಿಸಿದ ನೀನೆ ಅಕ್ಷರದ ಬಿಕ್ಷೆ ಬೇಡುತಿರುವೆ...(ಹೆಣ್ಣಿಗೆ ಶಿಕ್ಷಣ ದೇಶಕ್ಕೆ ರಕ್ಷಣ)
ಬಣ್ಣದ ಬಟ್ಟೆ ಹಾಕಿ
ಮನೆಯಾಚೆ ನೀ
ಒಮ್ಮೆ ಬಂದರೆ..
ಪ್ರೀತಿಯೆಂಬ ಮಳೆ
ಗಗನದಿಂದ ಸುರಿಯದೆ
ಬ್ಯಾಸಗೀಯ
ಯುವ ಮೇಘಗಳು
ಸುರಿದಾವೋ ಧರೆಯಿಂದ
ನಿನ್ನ ಈ ತಂಪಾದ
ಮೈ ಮ್ಯಾಲೆ ಚಲುವೆ.
ಎಚ್ಚರ ನೀ ಆಗು
ಅಥವಾ ಬಯಸು
ಜಾನಪದದ ಗೀತೆಯಲಿ
ಸೇರಿ ಹೋಗಲು.
*****