ಗುಡಿಯ ಮೇಲೆ ಗೋಪುರ ಕಟ್ಟಿ,
ಒಳಗೆ ದೇವರನಿಟ್ಟು ಮತ್ತೇನು ಹುಡುಕತ್ತಲಿರುವೆ...
ತೆರೆದು ನೀ ಒಳಗಣ್ಣ ನೋಡುವ ಮನಮಾಡಿದೊಡೆ, ತಾಯಿಗಿಂತ ಮಿಗಿಲಾದ ದೇವರ ಕಾಣಲು ಸಾಧ್ಯವೇ...
ಎಲ್ಲುಂಟು ಎಲ್ಲಿಲ್ಲ ಎಂದೇಕೆ ಹುಡುಕುವೆ
ಹಡೆದವ್ವನಿಲ್ಲವೇ ಕಣ್ಣೆದುರೇ....
ಸಕಲವು ಅವಳಲ್ಲೆ ನೆಲೆಯಾಗಿ ಇರುವಾಗ
ಮತ್ತೂ ತಡಕಾಡುವುದೇಕೆ...
ಅರಿವಿನ ಗುರುವಾಗಿ ಬದುಕಿಗೆ ನೆರವಾಗಿ ದಾರಿಯ ತೋರುವ ತಾಯಿಯ ಮರೆಯುವುದು ಸರಿಯೇ...
ಸಾಗರದ ಆಳದಲಿ ಸಿಗುವ ಮುತ್ತಿನಂತೆ..
ಮನಸ್ಸಿನಾಳದಲಿ ಭಾವನೆಗಳನು ಬೆಳೆಸಿಕೊಂಡೆ..
ಸಾಗುತಿರುವ ಜೀವನದಲಿ ಕಲ್ಲೆಷ್ಟೊ..ಮುಳ್ಳೆಷ್ಟೊ
ಬೆಳಕನು ಬಯಸಿ ಹೊರಟ ಹಾದಿಯಲಿ..
ನೋವೆಷ್ಟೊ.........ನಲಿವೆಷ್ಟೊ......
ಕಾಣದ ಕತ್ತಲಿನ ದಾರಿಯಲಿ ಕಾಲಿಟ್ಟಿರುವೆ..
ಹೊರಟಿಹೆ ನಾ ಬದುಕಲಿ ಬೆಳಕಿನ ಜಾಲ ಅರಸುತ್ತ
ಹುಡುಕಿ ಹುಡುಕಿ ಸೋತು ..
ಹುಡುಕಿ ಹುಡುಕಿ ಸೋತು ..
ಸಿಲುಕಿರುವೆ ಮೋಸದ ಜಾಲದಲಿ..
ಮರಳಿ ಬಾರದೆ ಇರುವೆನು ಈ ಬದುಕಿಗೆ..
ಸುಂದರ ಬದುಕನು ಹುಡುಕಲು ಹೋಗಿ..
ಮಸಣದ ದಾರಿಗೆ ಸಿಲುಕಿಕೊಂಡೆನೇ....?
ನನ್ನನ್ನು ಈ ನರಕಕ್ಕೆ ತಳ್ಳಿ ನಲಿವ ಮನಸ್ಸುಗಳಿಗೆ..
ನಾನೊಂದು ಹೆಣ್ಣೆಂಬುದು ತಿಳಿಯದಾಗಿದೆ..
ಸತ್ತ ಮೇಲೆ ಮಣ್ಣಾಗೊ ಈ ದೇಹಕ್ಕೆ ..
ನರ ರಾಕ್ಷಸರಂತೆ ಕಾದಿವೆ ಕಾಮುಕ ಕಣ್ಣುಗಳು..
ಬೇಕೇ.....ಹೆಣ್ಣಿನ ಜನ್ಮ ...?
ಬೇಕೆಂದು ಬಯಸಿದರು ಬಾರದಿರಲಿ ಈ ಕಷ್ಟ..
ಬಯಸಿದ ಹೆಣ್ಣು ತಾಯಾಗಲಿ, ತಂಗಿಯಾಗಲಿ..
ಅಕ್ಕಾಗಲಿ, ಮಗಳಾಗಲಿ...........ಆದರೆ......
ಕಿತ್ತು ತಿನ್ನುವ ಹಣ್ಣಾಗದಿರಲಿ.......
ದೂರವಾದರೂ ನೆನಪು ಮಾಸುತ್ತಿಲ್ಲ
ಕಂಡರೂ ಮಾತನಾಡುವ ಹಾಗಿಲ್ಲ ..
ಭಾವನೆಗಳಿಗೆ ಇಲ್ಲಿ ಯಾವ ಸಂಬಂಧನೂ ಇಲ್ಲ ...
ದಾರಿ ಕಾಯುವುದು ಮರೆತಿಲ್ಲ ...
ಮತ್ತೆ ಬರುವ ಭರವಸೆ ಇಲ್ಲ ...
ನಿತ್ಯ ನಿನ್ನ ನೆನೆಯುದು ತಪ್ಪಿಲ್ಲ ...