Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಟ್ಟ ಸಾಲುಗಳು

ಹಸಿವ ರೋಗಕೆ ಬೆಂಕಿ ಇಟ್ಟು ಬೂದಿ ಮಾಡಿ ಹುಳಗಳ ಮಾರಣ ಹೋಮಕ್ಕೆ ಶಾಂತಿ ಸಿಗಲಿ...!
ಹೊತ್ತಿ ಉರಿವ ಹೊಟ್ಟೆಯೊಳಗೆ ತಣ್ಣೀರಾದರೂ ಎರಚಿ ನೋಡಿ....!!
ಟಾರು ಮೆತ್ತಿದ ಮುಖಕೆ ಚಂದಿರನೇ ಚರ್ಮವಾಗಲಿ..!
ನನ್ನೊಡಲ ಉರಿಯ ಬೆವರಿಗೆ ಬೆಳಕಿನ ತುಂಡು ಬಟ್ಟೆ ಕೊಡಿ....!!

ಒಡಲ ಹುತ್ತಕ್ಕೆ ಹಾಲೆರೆಯಲು ಬಂದು ಕೆಡವುವವರ ನಡುವಲಿ ಚಿಗುರೊಡೆಯುವ ಗೆದ್ದಲು ನಾನು..!
ಚಿವುಟಿ ಹಾಕೋ ಊಸರವಳ್ಳಿಯ ಉಸಾಬರಿಗೆ ಎಳ್ಳು ನೀರು ಬಿಡಿ..!!
ಕಾಣದ್ದು ಬೊಗಳುವ ಸೀಳು ತುಟಿಗಳಿಗೆ ಬೇರಿನ ಹೊಲಿಗೆಯಾಕಿಸಿ ಬಿಚ್ಚದಿರಲಿ..!

ಅವಿಜ್ಞಾನಿ

- ಅವಿಜ್ಞಾನಿ

22 Feb 2017, 08:59 pm

ಭ್ರೂಣ

ಭ್ರೂಣ!!

ಮೂರು ತಿಂಗಳ ಮಾಂಸ ಮುದ್ದೆಯೊಂದು ಮಾಸದೆಣಿಕೆ ಶುರುವಿಟ್ಟಿದೆ..!
ಯೋನಿಯುಳ್ಳ ಪಿಂಡವೆಂದು
ಅಪ್ಪನಾದವನ ತಲೆ ಕೆಟ್ಟಿದೆ..!

ಒಳಗೆ ಹೊರ ಜಗತ್ತಿನ ಮೊದಲ
ಭೇಟಿಗೆ ಹಾತೊರೆಯುತ್ತಿದೆ.!
ಇಷ್ಟವಿಲ್ಲದ ಮುದ್ದೆಯನ್ನು ಕರಗಿಸಲೆಂಬ
ಯೋಚನೆ ಶುರುವಿಟ್ಟಿದೆ.!!

ಮೊದಲ ಕೂಗು ಅಮ್ಮನೆನಲೇ!?
ಅವ್ವನೆನೆಲೇ!?ಕೂಸು ದ್ವಂದ್ವದಲ್ಲಿದೆ!!
ಗುಳಿಗೆಯಾಗಲೇ!? ಕತ್ತರಿ ಹಾಕಿಸಲೇ!?
ಅಪ್ಪನ ಚಿಂತೆ ಇದಾಗಿದೆ..!!

ಸಹೋದರಿಯ? ಸಹೋದರನ?
ಮೊದಲು ಹೋದವರು ಯಾರಿರಬಹುದು!?ಮಾಂಸವು ಗ್ರಹಿಕೆಯಲ್ಲಿದೆ..!
ಮನೆಯಾ!? ದವಾಖಾನೆಯಾ!?
ಅಪ್ಪನ ಯೋಚನೆ ಚಾಲ್ತಿಯಲ್ಲಿದೆ!!?

ಅಂಬೆಗಾಲಿಡಲು ಮಗುವು ತಯಾರಿ
ಮಾಡಿ ಸಣ್ಣಗೆ ಒದೆಯುತ್ತಿದೆ.!
ಹೊಟ್ಟೆಯಲ್ಲಿರುವುದ ಕಿತ್ತೆಗೆಯಲು
ಸವಾರಿ ಆಗಲೇ ಉಧ್ಘಾಟನೆಯಾಗಿದೆ..!

ಕಾಣದ ಜಗದ ಕನಸು ಹಲವು
ಮಾಂಸದಲ್ಲಿ ಚಿಗುರೊಡೆಯುತ್ತಿದೆ.!
ನುಣುಪು ಕತ್ತರಿಯ ಚಿಕಿತ್ಸೆಗೆ
ಭ್ರೂಣವು ಹತ್ಯೆಯಾಗುತಿದೆ

(ಈ ಕವನಕ್ಕೆ ವಾಟ್ಸಾಪ್ ನಲ್ಲಿ ನಡೆದ ಸ್ಫರ್ಧೆಗಳಲ್ಲಿ ಆರು ಸಲ ಪ್ರಶಸ್ತಿ ಸಿಕ್ಕಿದೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಕವನ ಅನ್ನುವುದರಲ್ಲಿ ಸಂತಸವಿದೆ)
(ಅವಿಜ್ಞಾನಿ)

- ಅವಿಜ್ಞಾನಿ

22 Feb 2017, 04:50 pm

ಚಲುವೆ ನಿನ್ನ ನೊಡಲು ಹಂಬಲಿಸಿ

ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.


"" ಮಲ್ಲಿಕಾರ್ಜುನ ""

- Mallikarjun

22 Feb 2017, 03:49 pm

ಅಭಿಸಾರಿಕೆ

ಎಲ್ಲೆಡೆಯು ನಿನ್ನದೇ ಮನ್ವಂತರ
ಮೆಲ್ನಡಿಗೆಯು ಅದೇ ಸಂವತ್ಸರ
ಕಾಡುತಿವೆ ನೆನಪು ದಿನವು ನಿರಂತರ
ಬಿಂಬ ಹುಡುಕುತಿಯೇ ನಿನ್ನಂತರ

ನೀ ನಗದಿದ್ದರೆ ಎಲ್ಲವೂ ಸ್ಥಿರ
ಕಾಣಲು ಹೃದಯವದು ಭಾರ
ನನ್ನಲೆಕೆ ನಿನಗಾಗಿ ಈ ಕಾತರ
ನೀ ನುಡಿದರೇ ನನಗಾಗ ಹಗುರ

ಮನದಲ್ಲಿ ನಿನ್ನದೇ ಬರಿ ಝೆಂಕಾರ
ನನ್ನ ಕಂಡು ನಿನಗೇಕೆ ಇಷ್ಟು ಬೇಸರ
ಪ್ರೀತಿಸದೇ ಹೋದೆ ಏಕೆ ನೀ ದೂರ
ಕಿತ್ತು ಕೊಳ್ಳದಿರು ನನ್ನ ಈ ಉಸಿರ
-ಅಭಿಸಾರಿಕೆ

- ABHILASH

21 Feb 2017, 10:30 pm

ಪ್ರೀತಿಯ ನಾನಾ ದೃಷ್ಟಿಕೋನ

ಪ್ರೀತಿ ಎಂದರೆ,
ನೆನಪು
ನಗು
ಮಗು
ನೋವು
ಪುಳಕ
ಸೆಳತ
ಜೀವ
ಭಾವ
ಬದುಕು
ಮನಸು
ಕನಸು
ದೈವ
ಚೆಲುವು
ನಿರಾಸೆ
ಇನ್ನೂ ಹತ್ತು ಹಲವು ಬಗೆಗಿಳಿವೆ
ಆದರೆ ಇವೆಲ್ಲವೂ ಪ್ರೀತಿಯಲಲ್ಲಿ ವ

- shree

21 Feb 2017, 10:21 pm

ಕಂಬನಿಯ....ಕಥೆ....

ನಗುವ ಹಿಂದೆ ನೋವಿದೆ....
ನೋವಿನ ಹಿಂದೆ ಅಳುವಿದೆ....
ಆ ಕಣ್ಣೀರಿನ ಪ್ರತಿ ಹನಿಯಲ್ಲೂ..
ಮನ ಮಿಡಿಯುವ ಕಥೆಯಿದೆ...

ಈ ಕಥೆಗೆ ಅವನೇ ಸೂತ್ರಧಾರಿ...
ನಾನೇ ಪಾತ್ರಧಾರಿ...
ಈ ಕಥೆಗೆ ಕೊನೆಯಿಲ್ಲ...
ನನ್ನ ಕಂಬನಿಗೆ ಬೆಲೆಯಿಲ್ಲ...

- B.Shree

21 Feb 2017, 10:05 pm

ಕನ್ನಡ ಶಾಯರಿ

ನಾನೊಂದು ಕಣ್ಣ ಹನಿಯಾಗಿದ್ದ ರೇ
ನಿನ್ನ ಕಣ್ಣಿನಿಂದ ಜಾರಿ,
ನಿನ್ನ ಕೆನ್ನೆ ಮೇಲೆ ಸಾಯಲು ಬಯಸುವೆ.

ನೀನೊಂದು ಕಣ್ಣ ಹನಿಯಾಗಿ
ನನ್ನ ಕಣ್ಣಲ್ಲಿ ಇದ್ದರೆ ಗೆಳತಿ
ಹೃದಯ ಮಿಡಿಯುವವರೆಗೂ
ನಾ ನಗು ನಗುತ ಇರಲು ಬಯಸುವೆ.

↑^^^^^^↑^^^^^^↑^^^^^^↑^^^

- ಕುಮಾರ ಸಿದ್ದರಾಜ

21 Feb 2017, 09:01 pm

ಕನ್ನಡ ಶಾಯರಿ

ಒಂದೇ ಪ್ರಪಂಚದಲ್ಲಿ ನಾವಿದ್ದರು
ನೋಡುವುದಕ್ಕೆ ಕಾಯಬೇಕು ದಿನಗಳೂ
ನಿನಗಿಂತ ನಿನ್ನ ಕನಸುಗಳೇ ಸುಂದರ
ಕಣ್ಣು ಮುಚ್ಚುತ್ತಲೆ ಓಡಿ ಬರುವವು.

ಪ್ರೀತಿಯನ್ನು ಮುಚ್ಚಿಡಲಾಗದು ಕಣ್ಣಲ್ಲಿ
ಹೃದಯ ಕೆಳದು ಯಾರ ಮಾತ್ತನ್ನು ಪ್ರೀತಿಯಲ್ಲಿ
ಹೃದಯ ಬಡಿತವೆ ನಿಲ್ಲುವುದು ಮರೆತರೆ ನಿನ್ನ
ಬದುಕುವ ನೆಪದಲ್ಲಿ, ನೆನೆಯುವೆ ಪ್ರತಿಕ್ಷಣ ನಿನ್ನ

ನಾಲ್ಕು ದಿನದ ಬಾಳು ಇದು
ಸುಖ ದುಃಖದ ಮೇಳ ಇದು
ಸಂಗಾತಿ ನಿನ್ನ ಸಂಪ್ರಿತಿ ಬಯಸಿರುವೆ
ನಾಲ್ಕು ದಿನದ ಬಾಳು ಹಸನಾಗಿ ಕಳೆಯಲು.

ನಿನ್ನ ಕಂಡ ಮೇಲೆ ನಾ ಅರಿತೆ
ಸೌಂದರ್ಯ ಎಂದರೆ ಏನು ಎಂದು
ನಿನಗೆ ಮನಸು ಕೊಟ್ಟ ಮೇಲೆ ಅರಿತೆ
ಮನಸು ಸುಡುವುದು ಹೇಗೆ ಎಂದು.

- ಕುಮಾರ ಸಿದ್ದರಾಜ

21 Feb 2017, 08:48 pm

ನಾ ಕಾಣುವ ದೇವರು ಅಮ್ಮ....!

ಪುಟ್ಟ ಕಂದ ಕಂಗಳರಳಿಸಿ ನುಡಿವ ಮಾತು ಅಮ್ಮ....!
ಹಕ್ಕಿ ಗೂಡಿಗೆ ಮರಳಿದಾಗ ಮರಿಯ ಚಿಲಿಪಿಲಿ ಅಮ್ಮ....!
ಹಸುವ ಕರುವು ಪ್ರೀತಿಯಿಂದ ಕರೆವ ಕೂಗು ಅಮ್ಮ....!
ಕರುಣೆಯ ಸಾಗರವ ಹ್ೃದಯದಲಿ ಹಿಡಿದು ಸಹನೆಯ ನಗುವ ಚೆಲ್ಲುವಳು ಅಮ್ಮ....!
ಕಾಣದ ದೇವರು ಕರುಣಿಸಿರೋ, ನಾ ಕಾಣುವ ದೇವರು ಅಮ್ಮ....ನನ್ನಮ್ಮ...!
ರಾಜ್. ಎಸ್...

- ರಾಜ್. S

21 Feb 2017, 06:11 pm

ಅವಿಜ್ಞಾನಿ ಉವಾಚಃ

ಅಡ್ಡ ದಾರಿಗೆ ಅಡ್ಡಲಾದ ಗುಡ್ಡವನ್ನು
ಕೆಡವಲು ನೋಡುವರೇ ವಿನಾಃ
ದಿಟ್ಟ ಹಾದಿಯಲಿ ಚಿತ್ತನೆಟ್ಟು
ಹೋಗುವೆನೆಂದು ಪಟ್ಟು
ಹಿಡಿಯಲಾರರು ಅವಿಜ್ಞಾನಿಯೇ
.....
-ಅವಿಜ್ಞಾನಿ

- ಅವಿಜ್ಞಾನಿ

21 Feb 2017, 03:44 pm