ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!
ನಿನ್ನ ಜೊತೆ ಕುಣಿಯೋ ಆಸೆ ,
ಆದ್ರೆ ನನಗೆ ಕುಣಿಯೋದಿಕ್ಕೆ ಬರೋಲ್ಲ
ಎಂಬುದೇ ನಿರಾಸೆ ,....
ನಿನ್ನ ಅಪ್ಪಿಕೊಂಡು ಮುದ್ದಾಡೋ ಆಸೆ ,
ಆದ್ರೆ ನನ್ನ ಸತಾಯಿಸಿ
ಮಾಡ್ತಿಯಲ್ಲೇ ನಿರಾಸೆ ......
ನೀ ಮಾಡೋ ಬಿರಿಯಾನಿ ತಿನ್ನುವ ಆಸೆ
ಆದರೆ ನಿನಗೆ ಮ್ಯಾಗಿ ಬಿಟ್ಟರೆ ಬೇರೆ
ಏನು ಮಾಡೋಕೆ ಬರಲ್ಲ
ಅನ್ನೋದೇ ನಿರಾಸೆ ....
ನಿನ್ನ ಜೊತೆಗೂಡಿ ಬಾಳೋ ಆಸೆ ,
ಆದರೆ
ನಾ ಇಲ್ಲಿಯವರೆಗೂ ಕಂಡಿದ್ದು ಕನಸು ಎಂಬುದೇ ನಿರಾಸೆ .....
ಕಂಡ ಕನಸು ಕಮರಿ ಹೋಗಿದೆ
ಜತೆಗಿದ್ದ ಕ್ಷಣ ಮತ್ತೆ ಮತ್ತೆ ನೆನಪಿಸುತ್ತಿವೆ
ಆಗುತ್ತಿಲ್ಲ ಮರೆಯಲು ನಿನ್ನ
ಸಾಲುತ್ತಿಲ್ಲ ಸಾಲುಗಳು ವರ್ಣಿಸಲು ನಿನ್ನ
ಮಾಸುತ್ತಿಲ್ಲ ಮುಖವು ಕಣ್ಗಳಿಂದ ಎನ್ನ
ಯಾಕೆ ಬಂದೆ ನೀ ಎನ್ನ ಜೀವನದಿ
ಇರುತ್ತಿದ್ದೆ ಯಾರ ರಗಳೆಗೂ ಬರದೆ
ಹೋಗುತ್ತಿದ್ದೆ ತೊಂದರೆಯ ಯಾರಿಗೂ ಕೊಡದೆ
ಭರವಸೆಯ ಮೂಡಿಸಿದೆಯಾಕೆ,
ನೀ ಎನ್ನ ಬಿಟ್ಟು ತೊಲಗುವೆನೆಂದಾದರೆ....
ಯಾಕೆ ಹೀಗೆಂದು ಅರ್ಥವಾಗುತ್ತಿಲ್ಲ
ಇದೇನು ನನ್ನ ಅನಿಸಿಕೆಗಳಲ್ಲ....
ಆ ದಿನ ಎಲ್ಲೆಲ್ಲೂಸಂಜೆಗತ್ತಲು
ಯಾರೂ ಇರಲಿಲ್ಲ ಸುತ್ತ ಮುತ್ತಲೂ.
ನಿನ್ನನ್ನು ಕಂಡದ್ದುನಾ ಅದೇ ದಿನ
ಪ್ರೀತಿಗೆ ಬಿದ್ದದ್ದು ಸಹ ಅದೇ ಕ್ಷಣ.
ಚಂದ್ರನ ಮಂದ ಬೆಳಕಿನಲ್ಲಿ
ನೀ ಎದುರಿಗೆ ಬಂದೆ.
ನನ್ನ ಜೀವನವು
ಪ್ರಮುಖ ತಿರುವು ಕಂಡದ್ದೂ ಅಂದೆ.
ನನ್ನ ಹೃದಯದಲ್ಲಿ
ಆಯಿತು ಚಂದ್ರೋದಯ.
ನೀನಾದೆ ನನ್ನ
ಜೀವನದ ದೊಡ್ಡ ಅಧ್ಯಾಯ.
ನನ್ನೆದೆಯಿಂದ ಹುಕ್ಕಿತು
ಪ್ರೀತಿಯ ಜಲಪಾತ.
ನೀ ನನ್ನ ಜೊತೆಯಾದರೆ
ನನ್ನ ಬದುಕಾಗುವುದು ವರ್ಣರಂಜಿತ.
ಎನೆಲ್ಲಾ ಅಗಿದೆ ನನಗೆ ಅದು ನಿನ್ನಿಂದ
ಹಸಿವಿಲ್ಲ,ನಿದಿರೆ ಇಲ್ಲಾ ಎಲ್ಲಾ ನಿನ್ನಿಂದ
ಬದುಕು ಕಟ್ಟಿಕೊಳ್ಳುವ ಆಸೆ ಅದು ನಿನ್ನಿಂದ
ಪ್ರತಿಯೊಂದರಲ್ಲು ಪ್ರೀತಿ ಕಾಣುವ ಹಾಗೆ ಮಾಡಿದೆ
ಎಲ್ಲಾ ನಿನ್ನಿಂದ ಎಲ್ಲಾ ನಿನ್ನಿಂದ..