Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು

ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು
ಬಣ್ಣ ಬಣ್ಣದ ಆಸೆಗೆ
ಜೀವ ಕೊಡುವ ಕಾತುರ
ಬಾನಾಚೆಯ ಜಗತ್ತಿಗೆ
ಏಣಿ ಹಾಕುವ ಹಂಬಲ
ಮುಸ್ಸಂಜೆಯ ತಂಗಾಳಿಗೆ
ಮನವೊಡ್ಡುವ ತುಡಿತ
ಇರುಳಿನ ನಿಶ್ಚಲತೆಗೆ
ಮಾರುಹೋಗುವ ಆಶಯ
ಅಲ್ಲೊಂದು ಹುಚ್ಚು ಮನಸ್ಸು
ಕಾಣುತ್ತಿದೆ ನೂರು ಕನಸು

                                   -  ವರ್ಷಿಣಿ

- Varshini Hebbar

06 Feb 2024, 12:02 pm

ಸತಿ.

ಕಷ್ಟ ಅರ್ಥ ಮಾಡಿಕೊಳ್ಳುವ ಹೆಂಡತಿ
ಸಿಕ್ಕರೆ ಅದೆ ಸ್ವರ್ಗ,
ಕಷ್ಟದ ಅರ್ಥ ತಿಳಿಯದ ಹೆಂಡತಿ
ಸಿಕ್ಕರೆ ಅದೆ ನರಕ,
ಇಲ್ಲೆ ಸ್ವರ್ಗ ಇಲ್ಲೆ ನರಕ.




- Shivayya C G

06 Feb 2024, 06:32 am

ಮತದಾನದ ಮಹತ್ವ

ನಾಡಿಗಾಗಿ ಒಂದು ಮತ
ನಡೆಯಿತರಲಿ ಅವಿರತ
ಅದರಲಿದೆ ನಮ್ಮ ಹಿತ
ಅದುವೇ ನಮ್ಮ ಬಾಳ ರಥ.

ಒಂದು ಒಂದು ಕೂಡಿದರೆ ಆಗುವುದು ಶತ
ಶತ ಶತಮಾನಗಳಿಂದಲೂ ಅದುವೇ ಪಥ
ಈ ಪಥದೊಳಗೆ ಜಯ ನಿಶ್ಚಿತ
ಅರಿತು ಚಲಾಯಿಸಿ ನಿಮ್ಮ ಮತ.

ಮತದಾನ ಎಂಬ ಹಬ್ಬ
ಮನೆಮನೆಗೆ ಬಂದ ಸಗ್ಗ
ಮತದಾರರಿಗೆ ಬಲು ಹಿಗ್ಗ
ಯಾವ ಮತವು ಅಲ್ಲ ಅಗ್ಗ

ಮತದಾನ ಬಲು ಚಂದ
ಸಾಲಾಗಿ ನಿಲ್ಲುವುದು ಇನ್ನು ಅಂದ
ವ್ಯಕ್ತಿ ಪರಿಚಯ ಸೌಗಂಧ
ಮತ ಚಲಾವಣೆಯೇ ಶ್ರೀಗಂಧ.

ರಚನೆ : ಶ್ರೀ ಎ ಆರ್ ಹಂಚಿನಾಳ
ಶಿಕ್ಷಕರು ಕೆ ಪಿ ಎಸ್ ಮುಗಳೊಳ್ಳಿ


- Arjunraddi Hanchinal

03 Feb 2024, 02:24 pm

ಪ್ರೀತಿ

ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ ಸಾಫಲ್ಯ ಕಂಡುಕೊಳ್ಳಲು ಸಾಧ್ಯ. ಪ್ರೀತಿ -ಪ್ರೇಮಕ್ಕೆ ಒಳ್ಳೆಯ ನಿದರ್ಶನವೆಂದರೆ ಅದುವೇ ರಾಧಾ-ಕೃಷ್ಣ.

- Subhas Subhas

03 Feb 2024, 12:32 pm

ನಿಮಗೆ ಪ್ರೀತಿ ಅನ್ನೋದು ಆಟ ಆಗಿರಬಹುದು.
But.. ನನಗೆ ಪ್ರೀತಿ ಅನ್ನೋದು ನನ್ನ ಸರ್ವಸ್ವ,
ನನ್ನ ಉಸಿರು - ಉಸಿರೇ ಇಲ್ಲಾ ಅಂದ್ಮೇಲೆ ಹೇಗೆ ತಾನೆ ಬದುಕೋಕಾಗುತ್ತೆ!

- Rajan Dodmani

01 Feb 2024, 10:39 pm

ಹೇಳಿ ಹೋಗು ಕಾರಣ

ನೀನಿಲ್ಲದ ನೋವು ನನ್ನ ಕಾಡಿದೆ..
ಕಾರಣವಾದರೂ ತಿಳಿದರೆ ನನಗೊಂದಷ್ಟು ಸಮಾಧಾನವಾಗುವುದಿದೆ..
ಏನನು ಅಪೇಕ್ಷಿಸಿದೆ ನಿನ್ನ ಬಳಿ ನಾನು..
ಏನೂ ಹೇಳದಿದದ್ದೆ ತಪ್ಪಾಯಿತೇನು..
ಬರಡಾದ ಬದುಕಲ್ಲಿ ಮಳೆಯಂತೆ ಬಂದೆ ನೀನು..
ಕನಸುಗಳ ರಾಶಿ ಹೊತ್ತು ಕಾದಿದ್ದೆ ನಿನಗಾಗಿ ನಾನು..
ಕಾರ್ಮೋಡದ ಕತ್ತಲು ತುಂಬಿದೆ ಮನಸು
ಅಳುವು ಕೂಡ ಬಾರದು, ಅದಕು ನನ ಮೇಲೆ ಮುನಿಸು..
ದೂರಾದ ಪ್ರೀತಿಗೆ ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ...

ತನುಮನಸು, ✍️

- Tanuja.K

28 Jan 2024, 05:58 pm

ಮಗನಿಗೆ

ನೀ ಹುಟ್ಟಿದಾಗ ನಾ ಪಟ್ಟೆ ಆನಂದ
ಬೆಳೆಯುತ್ತಾ ಬೆಳೆಯುತ್ತಾ ನಿನ್ನ ಮಾತುಗಳೇ ಚಂದ
ಶಾಲೆಗೆ ಹೋಗುವಾಗ ನಿನ್ನ ನೋಟ ನನಗೆ ಚಂದ
ನೀನು ಚನ್ನಾಗಿ ಓದಿದ್ರೆ ಬಲು ಆನಂದ
ನಿನ್ನ ಆಟಗಳನ್ನು ನೋಡಲು ಮಹದಾನಂದ
ನೀನು ಹೀಗೆ ನಡೆದುಕೊಂಡರೆ ನನ್ನ ಮನಸ್ಸಿಗೆ ತುಂಬಾ ಆನಂದ
ಇಂತಿ ನಿನ್ನ ಅಪ್ಪ

- ಚಂದ್ರಶೇಖರ

24 Jan 2024, 08:27 am

ಕವನ ಶ್ರೀರಾಮ.

ಕಮಲ ನಯನನ ಪ್ರತಿರೂಪವೇ ಅಯೋಧ್ಯೆಗೆ ಬೆಳಕು, 

ಕೌಸಲ್ಯಳ  ಗರ್ಭದಿ ಅರಳಿದ  ಹೂ ಬಲು ಚುರುಕು. 

ಸಂಭ್ರಮ   ತಂದ ಗಿನಿಯೇ ಅರಮನೆಗೆ ಮುದ್ದು, 

ವರ್ಣಿಸಲಾಗದ ಬಾಲ್ಯ ಶ್ರೀ  ರಾಮನದ್ದು. 

ಜ್ಞಾನದ ಗಣಿಯಾಗಿ ವಶಿಷ್ಠರ ಶಿಷ್ಯ, 

ಅಘೋಚರ ವಿಸ್ಮಯಗಳ ವೀಕ್ಷಿಸಿ ಅರಿಯುವ ರಹಸ್ಯ. 

ಅಹಲ್ಯ ಶಾಪಕ್ಕೆ ಮುಕ್ತಿ ನೀಡಿತು ಯುವರಾಜನ ಸ್ಪರ್ಶ, ಪದ್ಮನಾಭನ ದರ್ಶನ ತಂದಿತು ಶಬರಿಗೆ ಹರ್ಷ. 

ಜನಕನಿಗೆ ಭೂಮಿ ಕೊಟ್ಟ ಸೊಬಗೆ ಸೀತಾ, 

ಪರಾಕ್ರಮಿ ಪತಿಗಾಗಿ ಹಿಡಿದಳು ಗೌರಿ ವ್ರತ. 

ಶಿವ ಧನುಷ್ ಎತ್ತಿಲಿಸಿದ ಮಹಾರಾಜಗೆ, 

ಜಾನಕಿಯ ಹಾರ ಸೇರಿತು ಲೋಕವನ್ನಾಳುವ ಸಿರಿಗೆ. 

ತಂದೆಯ ಮಾತನು  ಪಾಲಿಪ ನಾಗಿ, 

ರಾಜ್ಯವ ತೊರೆದ ತಮ್ಮನಿಗಾಗಿ. 

ರಾಮ ನಾಮ ಮಂತ್ರದಲ್ಲಿ ಮೋರೆಯುತಿದೆ ಮಾರುತಿಯ ಮಹಿಮೆ, 

ಮನದ  ಕಣ  ಕಣ ದೊಳ್ ಹರಿಸುತ್ತಿದೆ ಭಕ್ತಿಯ ಚಿಲುಮೆ. 

ಸರ್ವ ತ್ಯಾಗಕ್ಕೂ ಸಿದ್ಧ ಶ್ರೀ ರಾಮ, 

ಭೂಮಂಡಲದ ಹೃದಯಗಳು ಜಪಿಸುತ್ತಿವೆ ಸದಾ ರಾಮ ನಾಮ.

- nagamani Kanaka

23 Jan 2024, 07:47 am

ಒಂದೊಮ್ಮೆ

ಹೊರಗೆ ಕೋಗಿಲೆಯ ಕುಹೂ ಕುಹೂ
ಒಳಗೆ ಮೆಲ್ಲನೆ ತಿರುಗುವ ಫ್ಯಾನೂ
ಎರಡೇ ಕೂದಲನ್ನು ಕುಣಿಸುವ ತಂಗಾಳಿ
ಕೋಣೆಯಲ್ಲಿ ಅಡಗಿದೆ ನೀರವ ಮೌನ
ಆ ಮೌನಕ್ಕೆ ಮೂಡಿದೆ ಮನಸಲ್ಲಿ
ನೂರೆಂಟು ಯೋಚನೆಗಳ ಸಂಚಲನ
ಮೂಡುವ ಯೋಚನೆಗಳಿಗೆ ನೀಡಬೇಕಾಗಿದೆ ವಿರಾಮ
ಏನೂ ಅರ್ಥವಾಗದೆ ಎತ್ತಲೋ ಸಾಗುತಿದೆ ನನ್ನ ಜೀವನ
ನನ್ನದಲ್ಲದ ಊರಿನಲ್ಲಿ ಬದುಕತಲಿರುವೆ ಪ್ರತಿ ದಿನ..

-pkay

- Pruthvi

17 Jan 2024, 04:34 pm

ಶಾಲಾ ದಿನ

ನೆನಪಾಗುತ್ತಿದೆ ಆ ಸುಂದರ ಕ್ಷಣಗಳು,
ಶಾಲೆಯಲ್ಲಿ ಕಳೆದ ಸಿಹಿ - ಕಹಿಗಳ ನೆನಪುಗಳು.
ಈಗಲು ನೆನಪಾಗುತ್ತದೆ ಅಂದಿನ ಸುವರ್ಣ ಅವಧಿಗಳು,
ಅಲ್ಲಿ ಗೆಳೆಯ - ಗೆಳತಿಯರೊಂದಿಗೆ ಮಾಡಿದ ಮೋಜು ಮಸ್ತಿಗಳು.
ನನ್ನ ಕಣ್ಣ ಮುಂದೆ ಬರುತ್ತದೆ ಅಲ್ಲಿ ಕಳೆದ ನೆನಪಿನ ಚಿತ್ರದ ಪುಟಗಳು.
ಬೇಕೆಂದರೂ ಬಾರದು ಶಾಲೆಯ ಸುಂದರ ನೆನಪುಗಳು!!!
ನನ್ನ ಹೃದಯದಲ್ಲಿ ಇಂದಿಗೂ ಅಮರ ನನಗೆ ತಿದ್ದಿ ಬುದ್ಧಿ ಹೇಳಿದ ಗುರುಗಳು,
ನನಗೆ ಈಗಲೂ ನೆನಪಿದೆ ಅವರು ಹೇಳಿದ ಆ ಹಿತನುಡಿಗಳು.
ಮಧುರ ಮಧುರಗಳು ಆ ದಿನಗಳು!!!
ಮಧುರ ಮಧುರಗಳು ಆ ದಿನಗಳು!!!
- ಇತ ✍️

- itha

13 Jan 2024, 12:45 pm