Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಇನಿಯ

ಕಪ್ಪು ಮೋಡ ಕವಿದಿದೆ
ಮನಸು ಈಗ ದಣಿದಿದೆ
ನಿನ್ನ ಬರುವಿಕೆಗೆ ಕಾದಿದೆ
ಬೇಗ ಬಂದು ನನ್ನ ಸೇರಿಕೋ
ಓ ಇನಿಯ
ಕತ್ತಲನು ಬಗೆದು ಶಾಂತಿ ಶಶಿಯಾಗಿ
ಮೆಲ್ಲಗೆ ಹೃದಯದ ಕದವನು ತೆರೆಯೋ
ಓ ಇನಿಯ

- ಮಾಧುರಿ

11 Mar 2017, 03:24 pm

ಮರೆಯಲಿ ಹೇಗೆ

ಮರೆತೆನೆಂದರೂ ನಿನ್ನ
ಮರೆಯಲಾರೆನು ಚಿನ್ನ!!
ಮನಸಿನಲ್ಲಿಯೇ ಉಳಿವೆ
ಮರೆತು ಹೋಗುವ ಮುನ್ನ!!

ಮರೆತು ಹೋದರೆ ನಿನ್ನ
ಬದುಕಲಿ ಯಾವುದು ಚೆನ್ನ!!
ನೆನೆಯಲಿ ಹೇಗೆ ನಿನ್ನ
ಮರೆತು ಹೋಗದೇ ಚಿನ್ನ!!

ಚಿತ್ತದಿ ಉಳಿಯುವ ನಿನ್ನ
ಮರೆಯಲಿ ಹೇಗೆ ಚಿನ್ನ!!
ಬದುಕ ಹಣತೆಯೇ ನಿನ್ನ
ಬೆಳಕ ಜೀವನ ಚೆನ್ನ!!

ಮರೆತು ಹೋಗುವ ಮುನ್ನ
ಮತ್ತೆ ಮರಳುವೆ ಚಿನ್ನ!!
ಮರಣದಲ್ಲಿಯೂ ನಿನ್ನ
ನೆರಳಿನಂತೆಯೇ ಚಿನ್ನ!!

- ಪಿ.ಜಿ.ಜ್ಯೋತಿ

11 Mar 2017, 11:08 am

ಕೆಸರ ಕಮಲ

ಕೆಸರಿನಲ್ಲಿ ಕಮಲದಂತೆ
ಅರಳಿ ಬಂದೆ ಬದುಕಲಿ!!
ವೇಶ್ಯೆ ನಾನು ಆದರೇನು
ನೀನು ಬೆಳಗೋ ಹಣತೆಯು!!

ನನ್ನ ಕನಸು ಕರಗಿದಂತೆ
ನಸುಕಿನಲ್ಲಿ ಚದುರಿ ಹೋಯ್ತು!!
ಅಳುತ ಕುಳಿತೆ ಒಂಟಿಯಾಗಿ
ಆಸರೆಯಾಗೋ ಬಂಧುಗಾಗಿ!!

ಬೆರಳ ತೋರೋ ಕಡೆಗೆ ಚಲಿಸಿ
ಕಳೆದುಕೊಂಡೆ ಬದುಕನು!!
ಇರುಳ ಕಳೆವ ಬೆಳಕಿನಂತೆ
ನೀನು ಬಂದೆ ಮಡಿಲಲಿ!!

ನಿನ್ನ ನಗುವ ಮೊಗವ ಕಂಡು
ಮರೆತೆ ನನ್ನ ನೋವನು!!
ನಾನು ಸೊರಗಿ‌ ಹೋದರೂನು
ನೀನು ಎಂದೂ ನಗುತಿರು!!

ಕಣ್ಣ ತುಂಬ ನಿನ್ನ ಬಿಂಬ
ಸಾವಿರಾರು ಬಯಕೆಯು!!
ನನ್ನ ನೆರಳೂ ಸೋಕದಂತೆ
ಬಾಳ ಹೋಗೂ ದೂರಕೆ!!

ಬಣ್ಣ ಬಣ್ಣ ಬದುಕಿನಲ್ಲಿ
ನಿನ್ನ ಪಯಣ ಸಾಗಲಿ!!
ಮರಳಿ ಕೆಸರ ಸೇರದಂತೆ
ದೇವರ ಮುಡಿಯ ಸೇರಿಕೊ!!

- ಪಿ.ಜಿ.ಜ್ಯೋತಿ

11 Mar 2017, 10:48 am

ನನ್ನ ಹುಡುಗಿ ..!!

ಮುಗಿಲ ನಡುವಿನ

ಬೆಳ್ಳಿ ಮಿಂಚು ,

ನಕ್ಕರೆ ಮಲ್ಲಿಗೆಯ

ಹೂವಂತೆ ನನ್ನ ಹುಡುಗಿ 


ಚಿಗುರೆಲೆಯ ಮೇಲಿನ

ಇಬ್ಬನಿ ,

ಮುಂಜಾನೆ ಮಂಜಿನ

ಹಿಮಾಬಿಂದು ನನ್ನ ಹುಡುಗಿ


ಮೈ ಮನವ 

ಮುತ್ತುವ ತಂಗಾಳಿ ,

ಮಳೆಯಲಿ ನೆಂದಾಗ 

ಸಿಕ್ಕ ಸಿಹಿಮುತ್ತಂತೆ ನನ್ನ ಹುಡುಗಿ


ಎಳೆಗರುವಿನ ತುಟಿಯ

ನೊರೆಹಾಲು ,

ನಿದ್ದೆಯ ಮಗುವಿನ

ನಗು ನನ್ನ ಹುಡುಗಿ 

      -ಮನು

- ಮನು

11 Mar 2017, 10:46 am

ನನ್ನಾಕೆ

ನನ್ನಾಕೆ, ಬರೀ ಒಂದು ಹೆಣ್ಣಲ್ಲ,
ಗಂಡನಿಗೆ ಬರೀ ತನ್ನ ತನು-ಮನವನು ಅರ್ಪಿಸಿಕೊಂಡ ದಾನಿಯಲ್ಲ,
ಬಾವ- ಭಾವನೆ ಇಲ್ಲದ ಕಲ್ಲು ಬಂಡೆಯಲ್ಲ,
ಸಂಸ್ಕೃತಿ - ವಿಕೃತಿ ತಿಳಿಯದ ಜಾಡಲ್ಲ,
ಸಂಸಾರದೊಳಗಣ ಸಾರ ತಿಳಿಯದಿರುವ ಗೂಡಲ್ಲ,

ನನ್ನಾಕೆಯು ಹೊಸ ಮನೆ, ಹೊಸ ಜನರ,
ಹೊಸ ಜೀವನ ಆರಿಸಿ ಅನುಸರಿಸ ಹೊರಟವಳು. ಕಾಲ, ಪ್ರಕೃತಿ, ತನ್ನ್ಮನೆಯವರ ಆದ್ಯತೆ-ಆಶಯಗಳಿಗೆ ತನ್ನನ್ನೇ ತಾನು ಪುನರ್ ರೂಪಿಸ ಹೊರಟವಳು,
ಗಂಡನ ಮನೆ ಕಪ್ಪು ಬಿಳುಪಿನ ಬಣ್ಣದ ಮನಗಳಿಗೆ ವೈವಿದ್ಯಮಯ ರಂಗು ಕೊಡಲೊರಟವಳು, ಗಂಡನ ಹುಸಿ ಮುನಿಸಿಗೆ ಸಿಹಿ ಮುತ್ತು ನೀಡಿ ತನಿಸುವವಳು,
ತಾನು ಸೋತು ಗಂಡನನ್ನ ಜಯಿಸಿದವಳು,
ಹೊಟ್ಟೆಯಲಿ ಪುಟ್ಟ ಮಗುವಿನ ಆಕೃತಿ ಮೂಡಿದಾಗ ಹೆಣ್ತನದ ವೈಶಿಷ್ಟ್ಯತೆ ಸಾರಿದವಳು,
ಕೂಸು ಹೆರುವ ಘಳಿಗೆಯಲಿ ಸತ್ತು ಹುಟ್ಟಿದವಳು,
ಗಂಡ - ಮಗುವಿನ ಏಳಿಗೆಯಲಿ ಮನಸಾರೆ ನಕ್ಕವಳು.
ನನ್ನಾಕೆ ಸೋತು ಗೆದ್ದವಳು..

ಬಾ.ಸಂ.ಪಾ..

- ಅಭಿರಾಮ್

11 Mar 2017, 09:52 am

ಮುತ್ತುಗಳನ್ನು ಆಯ್ದುಕೊಡಲೆ

ಮೋಹಿಸಿದಳಾ ಭಾನುಮತಿ ಕರ್ಣನನ್ನು .
ಪತಿಯ ಕೇಳಿದಳು ಕರ್ಣನ ಜೊತೆ
ಪಗಡೆಯಾಡಲು ಇಛ್ಛೆಯಾಗಿದೆ ಎಂದು .

ಸತಿಯು ಕೇಳಿದ ಕೂಡಲೆ ಆ ಕೌರವೇಂದ್ರನು
ಸಿದ್ದ ಮಾಡಿದನು ಪಗಡೆಯಾಟವ
ಪ್ರಾಣಸತಿ ,ಪ್ರಾಣ ಸ್ನೆಹಿತನ ನಡೆವೆ .

ಕೇಳಿದನಾ ಕರ್ಣ ನಾನು ಗೆದ್ದರೆ
ಬಹುಮಾನ ಏನು ಕೊಡುವೆ ಎಂದು .
ಭಾನುಮತಿ ನಸು ನಕ್ಕಿ ನನ್ನ ಕತ್ತಲ್ಲಿನ
ಮುತ್ತಿನ ಹಾರವೇ ನಿನ್ನದಾಗುತ್ತದೆOದು.

ಪಗಡೆಯಾಟ ಮನರಂಜಕವಾಗಿ ನಡೆಯಿತು
ಕೊನೆಗೂ ಸೋತಳಾ ಭಾನುಮತಿಯೂ
ಕರ್ಣ ಕೇಳಿದನು ತನ್ನ ಬಹುಮತಿಯ
ಅವಳು ಕೊಡಲು ಓಪ್ಪಲಿಲ್ಲ .

ಆದರೂ ಕರ್ಣ ಬಿಡದೆ ಅವಳ ಕೊರಳಿಗೆ
ಕೈ ಹಾಕಿ ಮುತ್ತಿನ ಹಾರವನ್ನು ಕಿತ್ತುಕೊOಡನು.
ಇದರಿಂದ ಮುತ್ತುಗಳೆಲ್ಲಾ ನೆಲದಲ್ಲಿ ನಗುತ್ತಾ ಜಾರಿಬಿದ್ದವು .

ಇದನ್ನು ಕಂಡ ದುರ್ಯೋಧನ ಕೇಳಿದನು
ಸ್ನೆಹಿತನನ್ನು ಮುತ್ತುಗಳನ್ನು ಆಯ್ದು ಕೂಡಲೇ
.........................? ಎಂದು .
ಎಂತಹ ಸ್ನೇಹವಿದು ಕೇಳಿದ ಕ್ಷಣವೇ
ಅಚ್ಚರಿಯಾಯಿತು.

- ಚುಕ್ಕಿ

10 Mar 2017, 08:04 pm

ನಾಯಿಪಾಡು

ಧನವಿರುವಾಗ ಬರುವರು ಎಲ್ಲರು,
ಧನಹೀನರಾಗಲು ದೂರ ಸರಿವರು,
ವಯಸ್ಸು ಮಾಗಲು, ಹಾಸಿಗೆ ಹಿಡಿಯಲು,
ತಿರುಗಿ ನೋಡುವರಿಲ್ಲ ನಿನ್ನೆಡೆಗೆ,
ಈ ಜೀವನವು ನಾಯಿಪಾಡು ಕಟ್ಟಕಡೆಗೆ,

ದೇಹದಲ್ಲಿ ಯೌವನವಿರಲು,
ತೋಳಿನಲ್ಲಿ ಬಲವಿರಲು,
ಖಜಾನೆಯಲ್ಲಿ ಧನವಿರಲು,
ಮುತ್ತುವರು ಎಲ್ಲ ನಿನ್ನ,
ಹಾಡಿ ಹೊಗಳುವರು ಪ್ರತಿ ಕ್ಷಣ.

ಒಡಹುಟ್ಟಿದವರರೊಂದಿಗೆ ವಾತ್ಸಲ್ಯ ಬೆಳಸಿದೆ,
ಬಂಧು ಬಾಂಧವರನ್ನು ನನ್ನ ವರೆಂದೆ,
ಮಿತ್ರ ರೊಂದಿಗೆ ಕೂಡಿ ಆಡಿ ನಲಿದೆ,
ಅಂದು ನಿನ್ನನ್ನು ಎಲ್ಲರೂ ಬೆರೆತರು,
ಹೀಗೇಕೆ ಇಂದು ದೂರಾಗುತಿಹರು.

ದೇಹ ಮುಪ್ಪಾಗುವುದು ಕಳೆದಂತೆ ವರುಷಗಳು,
ಸಾಲಾಗಿ ಬರುವವು ನಿರಂತರ ರೋಗಗಳು,
ಅರಿತರೂ ಹತ್ತಿರ ಸುಳಿಯುವುದಿಲ್ಲ ಬಂಧಗಳು,
ನೋವಿನಲಿ ದಿನಗಳು ಕಳೆಯುವವು ನಿರಂತರ,
ಸಾವು ಕೂಡ ತಕ್ಷಣದಲಿ ಬರುವುದಿಲ್ಲ ಹತ್ತಿರ.

- ರವೀಂದ್ರಬಾಪೂರ(GNL)

10 Mar 2017, 07:07 pm

ಕಾಲದ ಒಲವು

ಬಳ್ಳಿ ಮರಕ್ಕೆ ಹಬ್ಬಿ
ಮರವು ಒಲವಿಂದ ಅಪ್ಪಿ
ಎರಡೂ ಪ್ರೀತಿಲಿ ಹಿಗ್ಗಿ
ಬೆರೆತ ಕಾಲವೇ ಸುಗ್ಗಿ!!

ಬೆವರ‌ ಹನಿಗಳ ಅಳಿಸಿ
ಬಿಸಿಲ‌ ಬೇಗೆಯ ಮರೆಸಿ
ಬೆಚ್ಚಗಿನ ಸುಖಕಾಗಿ ತನು
ಬಯಸೋ ಕಾಲವೇ ಮಾಗಿ!!

ಸುಗ್ಗಿ ಮಾಗಿಯ ನಡುವೆ
ಹಿಗ್ಗಿ ತೇಲುತ ತನುವು
ಬಯಸಿ ಬಂದಿದೆ ನಿನ್ನ
ಒಲವ ಬಯಕೆಯ ಹೊತ್ತು!!

ನೆತ್ತಿ ಸುಡುತಿಹ ಬಿಸಿಲ
ಬೇಗೆ ತಡೆಯಲು ಇರುಳ
ಇರುಳ ತಿರುವಲೂ ನೆರಳ
ಅರಸಿ ಬಂದಿದೆ ಮನವು!!

ತನುವ ಕಂಪನಗೊಳಿಸ
ಮಳೆಯ ಸಿಂಚನವಿರಿಸಿ
ಬಾ ಬಂದು ಸೇರಿಕೋ ನೀ
ಎಂದೆನ್ನ ಒಲವು ಕರೆದಿದೆ ನಿನ್ನ!!

- ಪಿ.ಜಿ.ಜ್ಯೋತಿ

10 Mar 2017, 05:58 pm

ಚಟ....

ಚಟವಿಲ್ಲ ನನಗೆ
ಹೀರಲು ಶೇಂಧಿ,
ಸೆದಲು ಬೀಡಿ,
ಹಾಕಲು ಎಲೆ ಅಡಿಕೆಯ.
ಆದರೆ,
ಆಡುವೆ ಮಾತುಗಳ,
ಕಟ್ಟುತ ನೂರಾರು ಕಥೆಗಳ,
ಚಟವೊಂದು ಬೇಕೇ ಇದಕ್ಕಿಂತ.

#ಮುಚ್ಚುಬಾಯ್ ಮಾನವ...

- MK Reddy

10 Mar 2017, 02:02 pm

ಎಲ್ಲದಕ್ಕೂ ಕಾರಣ ನೀನೇ

ನೀ ಬರುವ ಮೊದಲು
ನಾನು ನಾನಾಗಿದ್ದೆ

ನೀ ಬಂದ ಮೇಲೆ
ನಿನಗಾಗಿ ನಾನಿದ್ದೆ

ನೀ ಹೋದ ಮೇಲೆ
ಯಾರಿಗಿಲ್ಲ ಯಾರು.

- ಪ್ರತಾಪ ರಡ್ಡಿ

10 Mar 2017, 01:12 pm