Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಣ್ಣದ ಬಯಲಾಟ

ಬದುಕೆ ಬಣ್ಣದೋಟ ಪ್ರೀತಿ ಹೋಳಿಗೆ ಊಟ
ಸಹಿಸಬೇಕು ಜೀವನದಲ್ಲಿ ದುಃಖದ ಕ್ಷಣಗಳ ಕಾಟ
ಕಲಿಯಬೇಕು ಪ್ರತಿದಿನವು ಜೀವನದ ಪಾಠ
ಹಂಚಬೇಕು ಪ್ರೀತಿ ಸ್ನೇಹದ ಹೂದೋಟ
ತೊರೆಯಬೇಕು ಜಾತಿ ಮತಗಳ ಪರಿಪಾಠ
ಸಾಕಾರವಾಗಬೇಕು ಈ ಜೀವನದ ಆಟ....

- Irayya Mathad

13 Mar 2017, 06:07 pm

ಬದುಕೆ ಬಣ್ಣದಾಟ

ನೋಡು ಸಪ್ತ ವರ್ಣ ನೀಲ ಬಾನಲಿ
ಏನೋ ಮಾಯೆ ಅರಿಯೆ ಮನದ ಖಗದಲಿ..
ಬದುಕ ಬಣ್ಣ ಬಳಿದುಕೊಂಡು
ಒಲವ ರಂಗು ತುಂಬಿಕೊಂಡು
ನಗುತ್ತಿದ್ದರೇನೆ ಸುಖದ ರಂಗು ಬಾಳಲಿ.

ಎಲ್ಲವಿದ್ದು ಎಲ್ಲರಿಲ್ಲ
ಎಲ್ಲ ಕಾಲ ನಮ್ಮದಲ್ಲ
ಎಲ್ಲಕ್ಕಾಗಿ ಏನೇ ಹಂಬಳಿಸಿದರು
ಉಳಿಯಲಾರದು ಎಲ್ಲ ಬಣ್ಣ...
ತೆರುದು ನೋಡು ಒಳಗಿನ ಕಣ್ಣ
ಪ್ರೀತಿಯೊಂದೇ ಜಯದ ಬಣ್ಣ..

ಯಾರೇ ಹೋಗಲಿ ಏನೇ ಬರಲಿ
ನಟಿಸಲೇಬೇಕು ಹಚ್ಚಿಕೊಂಡು ಬದುಕ ಬಣ್ಣ
ಮನಸಿಗೆ ಜೊತೆಯಾಗೋ ಮನಸುಗಳು
ಕನಸಿಗೆ ಕಣ್ಣಾಗೋ ಕಣ್ಣುಗಳು
ಕಾಮನಬಿಲ್ಲಿನಾಟದ ರಂಗಿನ ಸಪ್ತ ವರ್ಣಗಳು...
ಬಯಸಿದರೋ ಜೊತೆ ಇರವು ಸದಾ...
ಮಾಸದಂತೆ ಉಳಿಸಿಕೊಳ್ಳಿ ಪ್ರೀತಿಯ ಬಣ್ಣ.


ರಂಗಿನ ಜಗದಲ್ಲಿ ರಂಗನು ಚೆಲ್ಲಲು
ಬಾಳ ರಂಗಮಂಚದಲಿ ನಟಿಸಲೇಬೇಕು...
ಬಣ್ಣ ಎರಚಲೇಬೇಕು ಖುಷಿ ಖುಷಿಯಾಗಿ
ಕೆಸರನ್ನಲ್ಲ ನೆನಪಿರಲಿ..

- sharanu

13 Mar 2017, 09:00 am

ಮೂಡೀದ ಕಂಬನಿ

ಸೀಳೀದ ಎದೆಯಲಿ ಮೂಡೀದ ಕಂಬನಿ
ಕಣ್ಣ ಕಾಡೀಗೆ ಜಾರಿ ನಲಿದಾಡಿ
ಹೊಮ್ಮದ ನಾಧದಿ ಚಿಮ್ಮೀದ ದುಃಖವು
ವೀಣೇಯ ಹಿಡೀದೂ ನಡೆದೇನ

ತೊರೆದಾನ ನನ್ನನ್ನ ತೊರೆದಾನ ಚಂದೀರ
ಬಾನಲ್ಲು ಮೂಡದೆ ಮರೆಯಾದ
ಮನದಲ್ಲಿ ಮೂಡೀಸಿ ಭಾವನೆ ಮೆರೆದಾನ




ಕತ್ತಲ ಮೋಡವ ತೋರೀಸಿ ನಡೆದಾನ

ತಪ್ಪೀನ ಹಾದೀಯ ಕಪ್ಪೀನ ಮೋಡದಿ
ಕತ್ತಲ ಜೀವನ ಹಾದಿ ತಪ್ಪಂತೆ
ವೀಣೆಯ ತಂತೀಯು ಚುಚ್ಚೀತು ಮನವನ್ನು
ಚುಚ್ಚೂವ ನೆನಪೊಂದು ಕಾಡೀತು

ಹದಮಾಡಿ ನಡೆದೇನ ಮಸಣದ ಹಾದೀಯ
ಜಗವ ತಣೀಸಿ ತಣಿದು ನಡೆದೇನ
ಚಂದೀರ ಬಾನಲ್ಲಿ ಧರೇಯ ಮಣ್ಣಲ್ಲಿ ನಾ
ಮಣ್ಣಾಗಿ ಕಾಣೂವೆ ನಿನ್ನ ಬಾನಲ್ಲೀ.........

- Sujay

13 Mar 2017, 08:27 am

ಮರೆಯಬೇಡ ನನ್ನ ಹೇಸರು

ನಿನ್ನ ಹೇಸರು
ಮರೇತ ಮೇಲೆ
ನನ್ನ ಹೇಸರು
ಗೊರಿ ಮೇಲೆ.''.....
ಅರ್ಥ ಮಾಡ್ಕೊ.....
.. ಅನಿ

- anil

13 Mar 2017, 07:42 am

ನಾಚಿಕೆ ಇಲವೇ ನನಗೆ?

ನಾಚಿಕೆ ಇಲ್ಲವೇ ನನಗೆ?
ಬರೆಯುತ್ತಿರುವೆ ಈ ಕವನಗಳ
ಗೊತ್ತಿದು ಸಿಹಿ ಸುಳ್ಳುಗಳ ಬೆರಸಿ
ಪ್ರಾಸ ಪದಗಳ ಬಳಸಿ

ಬರೆದೆ ಕವನಗಳ ಬರಿ ಊಹೆಯಲಿ
ಚಪಾಳೆ ಗಿಟ್ಟಸಿಕೊಳ್ಳುವ ಯೋಚನೆ ತಲೆಯಲ್ಲಿ
ಪದಗಳವು ಎಷ್ಟು ಸಾಚಾ...ಎಷ್ಟು ಸುಂದರ...
ಏನು ಖುಷಿಯೊ ಇನ್ನೊಬರ ದಾರಿ ತಪ್ಪಿಸಲು.
ಮರೆತೇನಾ ನಾ ಎಲ್ಲಾ ಮೌಲ್ಯಗಳನ್ನು....?

ಹುಚ್ಚಿದು...
ಕವನ ಬರೆಯಬೇಕೆಂದೋ?
ಚಪಾಳೆ ಗಿಟ್ಟಿಸಿಕೊಳಲೆಂದೋ?
ಏಕೆ ಈ ವೇಷ? ಏಕೆ ಈ ದುರ್ಬುದ್ಧಿ?
ಏನು ನನ್ನ ಉದ್ದೇಶ? ಏನಾಗಿದೆ ನನಗೆ?
ಈಗಲಾದರೂ ಮಾಡುತಿರುವುದೇನು ,ಕವನವಿದು
ಸ್ವ -ವಿಮರ್ಶೆಗೊ?...... ಚಪಾಳೆಗೊ ?

#ಸಾಚಾ ನಾನಲ್ಲ

- MK Reddy

12 Mar 2017, 10:57 pm

ಜೀವ-ಭಾವ

ಜೀವದಿಂದ ಜೀವ ಹುಟ್ಟಿದರೆ
ಭಾವದಿಂದ ಭಾಷೆ ಹುಟ್ಟುವುದು
ಜೀವಿಗೆ ಅಳಿವುಂಟೆ ವಿನಃ ಜೀವಕ್ಕೆ ಅಳಿವಿಲ್ಲ
ಭಾಷೆಗೆ ಅಳಿವುಂಟೆ ವಿನಃ ಭಾವಕೆ ಅಳಿವಿಲ್ಲ.(೧)

ಜೀವಿಯ ಅಭಿವ್ಯಕ್ತಿ ಜೀವನ
ಭಾಷೆಯ ಅಭಿವ್ಯಕ್ತಿ ಸಂವಹನ
ಜೀವಿಯ ಅರಿಯಬೇಕೆಂದರೆ ಜೀವನ ಅರಿತರೆ ಸಾಲದು ಜೀವವನ್ನು ಅರಿಯಬೇಕು
ಭಾಷೆಯ ಅರಿಯಬೇಕಾದರೆ ಸಂವಹನ ಅರಿತರೆ ಸಾಲದು ಭಾವವನ್ನು ಅರಿಯಬೇಕು.(೨)

ಭಾವಕೆ ಜಾವದ ಹಂಗಿಲ್ಲ
ಜೀವಕೆ ಭವದ ಹಂಗಿಲ್ಲ
ಭಾವವು ನಿರ್ಜೀವವಾದರೆ ಜಗತ್ತೇ ನಿರ್ವಾತವು
ಜೀವವು ನಿರ್ಭಾವವಾದರೆ ಜಗತ್ತೇ ನಿರ್ನಾನಮವು.(೩)

ಜೀವದ ಭಾವ ಕಡಲ ಒಡಲು
ಭಾವದ ಜೀವ ಮನದ ಮುಗಿಲು
ಭಾವದ ಅಸ್ತಿತ್ವ ಭಾವನಾತ್ಮಕತೆ
ಜೀವದ ಅಸ್ತಿತ್ವ ಆಧ್ಯಾತ್ಮಿಕತೆ.(೪)

ಭಾವದ ಮಿತಿ ನಿಯಮಿತ
ಜೀವದ ಮಿತಿ ಅನಂತ
ಜೀವ-ಭಾವ ಅರಿತವನು ಜೀವಾತ್ಮ
ಜೀವ-ಭಾವ ಮೀರಿದವನು ಮಹಾತ್ಮ
ಜೀವ-ಭಾವದ ಹಂಗಿಲ್ಲದವನು ಪರಮಾತ್ಮ.(೫)

- ಅಕವಿ

12 Mar 2017, 10:24 pm

ನನ್ನ ಕಥೆಯಿದು

ಹರಿದ ಹಾಳೆಯಲಿ ಬರೆಯದ ಕವಿತೆಯೊಂದು
ಅಕ್ಷರಗಳಿಲ್ಲದೇ ಹಾಡಾದ ಕಥೆಯಿದು.

ಕರಗಿದ ಬಾನಿನಲಿ ಕವಿಯದ ಮೇಘವೊಂದು
ಮಳೆ ಸುರಿಸದೆಯೇ ಇಳೆ ನೆನೆಸಿದ ಕಥೆಯಿದು.

ಮುರಿದ ಕನ್ನಡಿಯಲಿ ಮೂಡದ ಮುಖವೊಂದು
ಪ್ರತಿಫಲಿಸದೇ ಪ್ರತಿಬಿಂಬವಾದ ಕಥೆಯಿದು.

ಉರುಳಿದ ಮುಂಜಾನೆಯಲಿ ಅರಳದ ಹೂವೊಂದು
ಮಕರಂದ ಬೀರದೇ ಸಾರಿದ ಕಂಪಿನ ಕಥೆಯಿದು.

ಮರದಂಚಿನ ಗೂಡಿನಲಿ ರೆಕ್ಕೆಯಿರದ ಹಕ್ಕಿಯೊಂದು
ಹಾರದೆಯೇ ಮುಗಿಲಿಗೆ ಮುತ್ತಿಕ್ಕಿದ ಕಥೆಯಿದು.

ಆಳದ ಸಾಗರದಿ ಹುಟ್ಟಿಲ್ಲದ ದೋಣಿಯೊಂದು
ಮೂಡದ ಸುಳಿಗೆ ಸಿಕ್ಕು ದಡ ಸೇರಿದ ಕಥೆಯಿದು.

ಕಗ್ಗತ್ತಲ ರಾತ್ರಿಯಲಿ ಕಾಣದ ತಾರೆಯೊಂದು
ಕಾರ್ಮೋಡ ಕವಿದರೂ ಮಿನುಗಿದ ಕಥೆಯಿದು.

ನಿದಿರೆಯ ಜೋಂಪಿನಲ್ಲಿ ಕಾಣದ ಕನಸೊಂದು
ಸುಳಿವಿಲ್ಲದೇ ನನಸಾದ ಕಥೆಯಿದು.

ಬಾಡಿದ ಬದುಕಲಿ ನೊಂದ ಹೃದಯವೊಂದು
ಸಾಂತ್ವಾನ ಬೇಡದೇ ಸೆಟೆದು ನಿಂತ ಕಥೆಯಿದು.

ಮುದುಡಿದ ಮನದಲಿ ಮರೆತ ನೆನಪೊಂದು
ನೆನೆಯದೇ ನೆನಪಾದ ಕಥೆಯಿದು.

ಮೌನದ ಅಂಗಳದಲಿ ಕೇಳದ ಧನಿಯೊಂದು
ಹೇಳದ ಮಾತಿಗೆ ಸ್ಪಂದಿಸಿದ ಹೃದಯದ ಕಥೆಯಿದು.

ಬತ್ತಿದ ಬೂಮಿಯಲಿ ಬಿತ್ತದ ಬೀಜವೊಂದು
ಬೆಳಕು ಸೋಕದೆಯೇ ಬೆಳೆಯಾದ ಕಥೆಯಿದು.

ನಿಲ್ಲದ ಇರುಳಲಿ ಇಲ್ಲದ ಕಿರಣವೊಂದು
ಹೊತ್ತದ ದೀಪದ ನಂಟಿಗಾಗಿ ಬೆಳಕ ಚೆಲ್ಲಿದ ಕಥೆಯಿದು.

ಕತ್ತಲ ಕಾನನದಿ ಬೆತ್ತಲ ಮುಗಿಲಿನಲಿ
ಕಾಣದ ಮಿಂಚೊಂದು ದಾರಿ ತೆರೆದು ತಿರುವ ತೋರಿದ ಕಥೆಯಿದು.

-- ಈ ಕಥೆಯ ಪಾತ್ರದಾರಿ ಶಶಿಕಿರಣ

- ಅಕವಿ

12 Mar 2017, 10:10 pm

ಕಾಣಿಸದ ಬದುಕೊಲು...

ಕಣ್ಣುಗಳು ನೆನೆಯುತ್ತವೆ ನಿನ್ನ ನೆನೆದಾಗ
ಹೃದಯ ಭಾರವಾಗುತ್ತೆ ನೀ ದೂರವಾದಾಗ..
ಮಿಂಚಿ ಮರೆಯಾದ ಆ ಸುಂದರ ನೆನಪುಗಳು
ಬೇಡವಾದ ಬದುಕಿನ ಆ ಸುಂದರ ಕನಸುಗಳು..
ನೀ ಬಾರದ ದಾರಿ ನಾ ಕಾಯುತ್ತಿರಲು
ನಿನ್ನ ನೆನಪಲ್ಲೇ ನನ್ನೀ ಮನ ಸೋಲುತ್ತಿರಲು..

- ನಮಿತ ಗಟ್ಟಿ

12 Mar 2017, 10:05 pm

ಬದುಕು ಬಣ್ಣದೋಕುಳಿ

ಬರದ ಬಾಗಿಲುಕೋಟೆಯಲ್ಲಿ
ಭಾರಿಸು ಮನದ ಬಯಕೆಯ
ಹಲಿಗೆ
ಭರತ್ ಭೂಮಿಯಲ್ಲಿ ಹಲಿಗೆ ಮೇಳದ ನಾದದಿ ಪ್ರಶಸ್ತಿ ಗಳಿಸಿದ
ಹಿರಿಮೆ
ಬರದ ನಡುವೆ ಬಯಸಿ ಬಾರಿಸಿದೆ
ನಮ್ಮೂರಿನ ಹಲಿಗೆ

ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

ಬಣ್ಣದ ಉತ್ಸವದೊಳು
ಕನ್ನಡ ನಾಡಿಗೆ ನಾವೇ ಮೆಲ್ಲೆಂಬ ಹಿರಿಮೆ
ಜಂಬದಿಂದೇಳುವೆ ರಂಗಿನಾಟಕೆ ಬಾಗಿಲುಕೋಟೆ ಭಾರತಕ್ಕೆ ಮೇಲುಕೋಟೆ


ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

ಬಯಲು ಭವನದಲ್ಲಿ
ಚದುರಿಸು ರಂಗು ದಂಗು
ನಮ್ಮೂರ ಬಣ್ಣ ಬರಿ ರಂಗಲ್ಲಾ
ಸಂಬಂದಗಳ ಬೆಸೆಯುವ ಒಂದೊಳ್ಳೆ ಹಬ್ಬ


ಬದುಕು ಬಣ್ಣದೋಕುಳಿ
ಜೀವನಾ ರಂಗಿನೊಕುಳಿ

- ಪ್ರದೀಪ.ಮ.ಪಾಡಮುಖೆ

12 Mar 2017, 09:13 pm

ಕಲಹ

ಮನಸಿಗು ಮಾತಿಗು ಕಲಹ
ನೋಟಕೂ ನಗುವಿಗೂ ಕಲಹ
ಪ್ರಾಯಕೂ ಪ್ರೇಮಕೂ ಕಲಹ
ನೆಮ್ಮದಿಗೂ ನಂಬಿಕೆಗೂ ಕಲಹ
ಆಸೆಗೂ ಅಂತಸ್ತಿಗೂ ಕಲಹ
ಇವೆಲ್ಲ ಒಂದೇ ನಾಣ್ಯದ ಎರಡು ಮುಖಗಳು

- shree

12 Mar 2017, 06:56 pm