Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾಂಗತ್ಯ ಮೂಡಿ

ತನುವು ಹರಿದು ನಿನ್ನೆಡೆ,
ಮನವು ಎಲ್ಲೆ ಮೀರಿ ಕಾಡಿದೆ,
ಕದಡಿ ಕಾಮನೆಯ ಜೇನನು,
ತುಮುಲ ಹೆಚ್ಚಿಸಿ ಅನುವು ನೀನು..

ಅರಳಿ ಕುಸುಮ ಬಾಲೆ,
ಮುಡಿದು ಜಾಜಿ ಮಲ್ಲೆ,
ಮರುಳು ಮಾಡಿ ಮರದ ಮನವ,
ತೋಳ ತಾಗಿ ತೂಗಿ ತನುವ..

ತಾಳದಿರು ಕೊಂಚ,
ಅವಸರದಿ ಅಪಹರಿಸಿ,
ಆಕಾಂಷೆಗಳ ಗಮಕ ಹಾಡಿ,
ಲಯವು ತಪ್ಪದೆ ಸಾಂಗತ್ಯ ಮೂಡಿ..

-ಕನ್ನಡದ ಭಕ್ತ

- ಕನ್ನಡದ ಭಕ್ತ

14 Mar 2017, 12:39 pm

ಗೆಳತಿ

ಹುಣ್ಣಿಮೆ ರಾತ್ರಿ
ಆ ಚಂದಿರನ ರೀತಿ
ಮಿನುಗುವಳು ಈಕೆ
ನನ್ನ ಪ್ರೇಮ ಸ್ವರೂಪಿ
ಹೆಸರು ಮನಸ್ವಿ
ಸುಂದರ ಸ್ವರೂಪಿ

- Chandan

14 Mar 2017, 12:14 pm

ಹೊರಟಿರುವೆ

ಯಾತಕ್ಕೆ ಈ ಜೀವನ
ಕಣ್ಣೀರಿನಲ್ಲಿ ಕರಗಿ ಹೋಗಿರುವೆ ನಾ .
ಯಾರು ಬೇಡ ನನಗೆ
ಎಂದೂ ನೋಂದಿಲ್ಲ ಈ ಮಟ್ಟಿಗೆ .

ಬರಿಯಲು ಆಗುತ್ತಿಲ್ಲ ಈ ಕವನ
ಕಣ್ಣೀರು ಕೂಡ ಅಡ್ಡಿ ಬಿದ್ದಿದೆನಾ .
ಕರಗಿ ಹೋಗುವ ಕಾಲದ ಮುಂದೇ
ತಲೆ ಬಾಗಿ ಕಣ್ಣೀರಿಡುತ್ತಿರುವೇ .

ನೂರು ಕಷ್ಟ ಬಂದರು ನಗುತಿದ್ದೇ ನಾ
ಆದರೇ ಆ ನಗುವಿಗೂ ನನ್ನ ಬಳಿ ಬರಲು
ಇಷ್ಟವಾಗುತ್ತಿಲ್ಲ .
ನನ್ನ ಕಣ್ಣಿಗೂ ಬೆಸರವಾಯಿತೆನೊ ಅತ್ತು ಅತ್ತು
ನನ್ನನ್ನೇ ಬೈಯುವಂತಿವೇ .

ಯಾರು ಇಲ್ಲದ ಮೌನದೂರಿಗೆ
ಬಂದುವಾಗಿ ಹೊರಟಿರುವೆ ............

- ಚುಕ್ಕಿ

14 Mar 2017, 10:27 am

ಪ್ರೀತಿಯ ರಂಗು

ಏಳು ರಂಗಂತೆ ನಿನ್ನ ಪ್ರೀತಿಯ ರಂಗು
ಬಾನ ಏರೋದು ಮನದ ಆಸೆಯ ಕಂಡು!!
ಕಂಡ ಕನಸೆಲ್ಲ ಗರಿಗೆದರಿ ಕುಣಿದಾಡಿದೆ
ನನ್ನ ತನುವೀಗ ರೆಕ್ಕೆ ಬಿಚ್ಚಿ ಹಾರಾಡಿದೆ!!

ನೀನು ಸನಿಹಕ್ಕೆ ಬಂದಾಗ ನಾ ಬೆವರಿದೆ
ಈ ಒಲವಲ್ಲಿ ಬಿಸಿ ಉಸಿರು ಬೆರೆತಂತಿದೆ!!
ನಿನ್ನ ಪ್ರೀತಿಯ ಹೊಂಗಿರಣಕ್ಕೆ ನಾ ಸೋತರೆ
ನನ್ನ ಒಲವಿಂದ ಹೂ ಮಳೆ ತಾ ಸುರಿವುದು!!

ದಿನ ಇರುಳಲ್ಲಿ ಕನಸಾಗಿ ನೀ ಬಂದರೆ
ಹಗಲೆಲ್ಲ ಭ್ರಮೆಯಂತೆ ನನ್ನ ಕಾಡುವೆ!!
ನನ್ನ ಏಕಾಂತಕೆ ತಂದೆ ನೀ ಕಾಂತಿಯ
ಸುರಿಸಿ ನನ್ನೊಳಗೆ ಹೊಸ ರಂಗಿನ ಪ್ರೀತಿಯ!!

- ಪಿ.ಜಿ.ಜ್ಯೋತಿ

14 Mar 2017, 08:42 am

ಹಲ್ಕಾ ಕವನ

ಈವರೆಗೆ ಅಮಾಯಕನಾಗಿದ್ದ ನನ್ನನ್ನು ಛೇದಿಸಿ ಬಿಟ್ಟ ಅಮಾನುಷ ವಾರ್ತೆ ಅವಳೊಂದಿಗೆ ಕಳೆದೊದದ್ದು ಎಂದೇಳುವಾಗ ನನ್ನ ವಯಸ್ಸಿನ ಪರಿಧಿಯು ಒಂದು ಹೆಜ್ಜೆ ಮುಂದಿಡುತ್ತದೆ

ಲೆಕ್ಕ ತಪ್ಪಿದ ಅಲೆಗಳ ಎಣಿಕೆ ಶುರು ಮಾಡಿದ ತರುವಾಯ ಅವಳೊಂದು ಕಡಲು ನನ್ನೊಳಗೆ
ಯಥಾಪ್ರಕಾರ ಕನಸಿನ ರಂಗಿನಾಟಕ್ಕೆ ಮುಹೂರ್ತವಿಟ್ಟು ಗತಿಸಿದ ಒಲವನ್ನು ಜೀವಂತವಿರಿಸುವ ಹಟಗಾತಿ..

ಗಾಳಿಗೆ ಸೋತ ಮೋಡದ ಭುಜಬಲದಂತೆ ಅವಳು ಎದೆಯೂರಿನಲ್ಲಿ
ತಾಕಲಾಟಕ್ಕೆ ಎಡೆ ಮಾಡಿಕೊಡುವಾಗ ಇನ್ನೂ ವಿಚಲಿತಗೊಳಿಸುವ ಉಮೇದಿನವಳು
ಕನಸಿಗೆ ಸೋಲಬಾರದೆಂದರೆ ನಿದ್ರಾದೇವಿಯೂ ಮುನಿಸಿಕೊಂಡಿದ್ದಾಳೆ..

ಅವಳ ನೆನಪಗಳು ವಂಚಿಸಿದ ರಾತ್ರಿಗಳೆಲ್ಲವೂ ಕನಸಿಗೆ ರಜೆ ಕೊಡುತ್ತಿತ್ತು
ಹಾಸು ಬೆನ್ನಿಗೆ ಎದೆಗೀರಿನ ಚಿತ್ರಣ ಕೊಡದ ನನ್ನ ಅಲ್ಪಾಯುಷಿ ಬಯಕೆಯೊಂದು ಸೋಲಬಾರದೆಂಬ ನಿಲುವಿನಲ್ಲಿದೆ
ಮುಗಿಲೂರಿನವಳು ಇಷ್ಟಕ್ಕೆ ಒಲವಿನ ಮಗ್ಗುಲು ಬದಲಾಯಿಸುತ್ತಾಳೆ

ಅವಳ ಒಲವೆಂದರೆ ಮರೀಚಿಕೆಯನ್ನೋದು ಪ್ರತಿಬಾರಿ ಸೋಲುವವನಿಗೆ ತಿಳಿದ ವಿಚಾರವೇ ಆಗಿದೆ
ಇಂತಿಷ್ಟು ಕಾಲಾವಧಿಯ ಪ್ರಣಯ ವಿನಿಮಯಕ್ಕೆ ಒಲವೆಂದು ಹೆಸರಿಟ್ಟಿದ್ದಾಳೆ ಅವಳು..

-ಅವಿಜ್ಞಾನಿ

- ಅವಿಜ್ಞಾನಿ

14 Mar 2017, 08:03 am

ಇಶ್ಕ್

ಮದರಂಗಿಯ ಚಿತ್ತಾರದಲ್ಲಿ
ಮುಂಗುರುಳನ್ನು ಮರೆಮಾಚಿದ
ತರುವಾಯ ಬಿಸಿಯುಸಿರ ಸೆಳೆದಿಟ್ಟ
ಅವಳ ಆಂತರ್ಯಕ್ಕೆ ಸೋಲಬೇಕಾದ
ನನ್ನ ಎದೆಯೊಳಗೊಂದು ಇಶ್ಕ್ ನ
ಮುನ್ನುಡಿ ಬರೆಯುತ್ತೇನೆ....

ಅವಳ ತಾರೀಪಿಗಾಗಿ ಎದೆಗೀರಿನ
ಚಿತ್ರವನ್ನು ಹುದುಗಿಸಿಡುವ ನನ್ನ
ಹುಂಬತನವು ಯಥಾಪ್ರಕಾರ
ನಡೆಯುತ್ತದೆ ಅವಳಂತೂ
ಕನಸುಗಳನ್ನು ಬಂಧಿಸಿಡುವ ನಿಪುಣೆ
ಎದೆಯೂರಿನವಳ ತಲಾಶೆ
ಮಾಡುವ ಅಲೆಮಾರಿ ನಾನು..!

ಅವಿಜ್ಞಾನಿ..

- ಅವಿಜ್ಞಾನಿ

14 Mar 2017, 07:27 am

ಬಯಕೆ..!

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು

ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||



ನಿನ್ನ ಜೊತೆಯಲಿ ಬರುವೆನು ನಾನು

ಕಣ್ಣ ಸನ್ನೆಯಲಿ ಕರೆಯ ಬಾರದೆ ನೀನು

ನಿನ್ನುಸಿರಿಗೆ ಉಸಿರಾಗಿರುವೆ ನಾನು 

ಏಳೇ  ಜನುಮ ಸಾಕು ಏನೇನು ನಾನು.




ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,

ನಲ್ಲೆ, ನೀನೀಗ ನೋಡಲೆಂತು ಸೊಗಸು 

ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ

ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ.



ಚಂದ್ರನಿರದ ಬಾನಿನಲ್ಲಿ ಚುಕ್ಕಿ ರಾಜ್ಯವು ನನ್ನದು

ಚಂದ್ರನ ಹಾಗೆ ನಲಿವ ಮಂದಹಾಸ ನಿನ್ನದು

ಹಗಲು ರಾತ್ರಿಗಳು ಉರುಳಿದರೇನು

ಮಾಸಲು ಬಿಡೆನು ನಿನ್ನ ಮಂದಹಾಸವನ್ನು.

                                           -ಮನು

- ಮನು

14 Mar 2017, 07:08 am

ಓ ಪ್ರೇಮಾಂಜಲಿ

ಬರಿದಾದ ಬಾಳಲ್ಲಿ ಬೆಳಕಾಗಿ ಬಂದೆ ನೀ
ನನ್ನ ಎದೆಯ ರಾಗಕೆ ನಿನ್ನ ಮಾತೆ ತಾಳವು
ಹುಸಿಯಾಗದೆ ಇನ್ನೂ ಹಸಿರಾಗಿದೆ ಜೀವವು...ಪ

ಕಾಣದಾ ದೇವತೆಯಂತೆ ಕಲ್ಪನೆಯಲೋಕ ಮೀರಿ
ಕಸಿಮಾಡಿದೆ ಪ್ರೀತಿಯ ಕರುಣೆಯ ಕಂಗಳ ತುಂಬಿ
ನಿಜವಾಯಿತೀಗ ನನ್ನ ಕನಸಿನ ಓಲೆ.

ಜಾತಿ ಮತ ಭೇದಗಳು ಬರಲಿಲ್ಲ ಪ್ರೀತಿಯ ಮಧ್ಯೆ
ನಿರ್ಮಲದ ಮನಸುಗಳಲ್ಲಿ ಕಹಿಭಾವ ಬರದಿನ್ನೂ
ಪ್ರೀತಿಯೆ ಗೆಲುವು ಇನ್ನೂ ಪ್ರೀತಿಯೆ ಜೀವವು..

ಭಾಗ್ಯದ ಸಿರಿಯಲ್ಲಿ ಬಯಸಿದಂತೆ ನೀನು ಸಿಗಲು
ತೂಗುವ ಆಸೆ ನಿನ್ನ ನನ್ನ ಪ್ರೀತಿ ತೊಟ್ಟಿಲಿನಲ್ಲಿ
ತೋಳಲ್ಲಿ ಬಳಸಿ ನಿನ್ನ ಕಾಯುವೆ ಇನ್ನೆಂದು...

- Irayya Mathad

14 Mar 2017, 06:09 am

ಕವನ

ಮನುಷ್ಯ ನಿಸರ್ಗದಲ್ಲಿ ಹೊರಟಾಗ
ಆತನ ಮನಸ್ಸಿನಲ್ಲಿ ಒಂದು
ಕೋಮಲ ಭಾವನೆ ಉದಯಿಸಿತು
ಆ ಭಾವನೆಯೇ ಕವನ
ಕವನ ಹಾಡಿದರೆ ಬರುವುದು
ಮನಸ್ಸಿಗೆ ಆಹ್ಲಾದವೂ, ಆನಂದವೂ.

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

13 Mar 2017, 08:37 pm

ಬೆಂದು ಮೂಡಿದಾ ಭರವಸೆ

ನಗುವೊಂದು ಬರಬಾರದೇ
ಕವಿಯ ಬಸಿರಿನಲಿ
ಸಾಹಿತ್ಯದಾ ತೆನೆ ವಸರಿ
ಕಾವ್ಯದಾ ಹೆರಿಗೆಯಾದಂತೆ

ಮಳೆಯೊಂದು ಬರಬಾರದೇ
ಬಿಸಿಲ ಬೇಗೆಯಲಿ ಬೆಂದು ಬಾಯಾರಿ ನಿಂತ ಧರಣಿ ಎಂಬ ತರುಣಿಯೊಡಲಲಿ
ಹಸಿರಸಿರಿ ನಳನಳಿಸುವಂತೆ

ಬೆಳಕೊಂದು ಬರಬಾರದೇ
ಕತ್ತಲು ತುಂಬಿದ ಕಂಗಳಿಗೊಮ್ಮೆ
ನೇತ್ರದಾನದಿ ದೃಷ್ಟಿಮೂಡಿ
ಬೆರಗುಗಣ್ಣಲಿ ಜಗವ ಕಾಣುವಂತೆ

ನೀ ಸಿಗಬಾರದೇ ಹೇಳು
ಮನದುಗಿಬಂಡಿಯಲಿ ಕೊತಕೊತ ಕುದಿಯುವ ಭಾವನೆಗಳ ಚುಕುಬುಕುವನು
ನಿಲ್ಲಿಸುವ ನಿಲ್ದಾಣದಂತೆ

ಕನ್ನಡಿಯ ಗಂಟಿದು ಹೇಗೆ ತೆರೆಯಲಿ
ಬದುಕೊಂದು ಒಗಟು ಹೇಗೆಬಿಡಿಸಲಿ
ಈ ಕುರುಡು ಕಂಗಳಿಗೂ ನಗುವಾಸೆ ಒಮ್ಮೆ
ಎಲ್ಲಿ ಹುಡುಕಲಿ

ಕೊರಗದಿರು ಎಲೆಮನವೆ ಜಗವು ಕೊರತೆಗಳ ಮಹಾ ಸಂತೆ
ತಮ್ಮ ಮನದೂನವ ಕಾಣದಾ ಕುರುಡರು
ದುರ್ಬೀನಿನಲ್ಲಿ ಪರರ ಊನವನು
ಹುಡುಕುವರು

ಮೂರು ಗಂಟಿಗೆ ಬೇಕು ಪ್ರೀತಿಯಾನಂಟು
ಮುಖವಾಡಕೆ ಬೇಕು ಸೌಂದರ್ಯದಾ ಒಣ ಅಂಟು
ಮುಖವಾಡಕೆ ಮನಸೋಲುವವರು ಅವರಂತೆ
ಅಂತಹವರಿಗಾಗಿ ಕಣ್ಣೀರಿಡುವುದು ಸರಿಯುಂಟೇ?

ದಾರಿಕಾಣದಾಗಿರಲು ನೀ ನಿರ್ಮಿಸಿಕೋ ನಿನ್ನದೇ ದಾರಿಯ
ಅದೆಷ್ಟು ಜನ ಹಿಡಿದುಬರುತಿಹರು ನೋಡು ನಿನ್ನ ದಾರಿಯ
ನೀನೀಗ ಅವರೆಲ್ಲರಿಗೂ ಮಾದರಿ
ಆಗಸವ ಸ್ಪರ್ಶಿಸಲೆತ್ನಿಸುತಿಹರು ನಿನ್ನ ನಿರಾಕರಿಸಿದವರು ಇಂದು ಹಾರಿ ಹಾರಿ

ಹಂಸಿನಿ

- ವಿಸ್ಮಯ

13 Mar 2017, 06:37 pm