Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತರುಣಿ

ತಂಗಾಳಿಯಲ್ಲಿ ತೇಲಾಡುತಿಹ ತರುಣಿ
ನಮಗಾಗಿ ಸ್ವಲ್ಪ ಕೆಳಗಿಳಿದು ಬಾರೆ ಧರಣಿ .
ಕವಿ ಕರೆದ ಕರೆಗೆ ಬಾರದಿದ್ದರೂ ನಿನಗಾಗಿ
ನಿನ್ತ ರವಿಕಿರಣ ಕರೆದಿದೆ ಬಾರೆ ತರುಣಿ .

ಎಲ್ಲೆಲ್ಲೊ ಓಡುವೆ ಹೇಗೇಗೊ ಆಡುವೆ .
ನನ್ನ ಕೈಗೆ ಸಿಗದೇನೆ ಮಂಜಲ್ಲಿ ಮಾಯವಾಗುವೆ.
ಅಷ್ಟೋOದು ಬೇಡವಾದನೇ ನಾನು .

ಓ ಮೇಘಮಾಲೇ ನಿನಗಾಗಿ ಈ ರೈತ
ಆ ಭಾನ ಕಡೆಗೆ ಕಣ್ಣೀರಿನ ಅಭಿಷೇಕ
ಮಾಡುತ ಕೈ ಚಾಚಿ ನಿOತಿಹನು.
ಬಾರೇ ಭುವಿಗಿಳಿದು ಅವನ ಹೊಟ್ಟೆ ತುOಬಲು.

ಧರೆಯಲ್ಲಿ ನಿನ್ನ ಆವಾಸ ಯೇಲ್ಲಿಲ್ಲ
ನೊOದ ಕಣ್ಣಲ್ಲಿ ,ಸಾಗರದ ಒಡಲಲ್ಲಿ,
ನದಿಯ ಮಡಿಲಲ್ಲಿ .....
ಪ್ರತಿಯೊOದು ಜೀವಿಯು ನಿನಗಾಗಿ
ನಿನಗೋಸ್ಕರ ,ನಿನ್ನಲ್ಲಿ .................

- ಚುಕ್ಕಿ

17 Mar 2017, 07:39 am

ಓ ಮೋಡವೆ ಏಕೆ ಓಡುವೆ

ಓ ಮೋಡವೆ ಏಕೆ ಓಡುವೆ
ಬಾಯಾರಿ ಬಸವಳಿದ ನರ
ಮನುಜರನು ಕಂಡು ?
ಬರಲಿಲ್ಲವೇ ಕರುಣೆ
ಕಾದಿಹಳು ಧರಣಿ
ಹನಿ ನೀರ ಕಾಣದೆ ಹಸಿದಿಹುದು
ಆಕೆಯೊಡಲು.
ಸ್ವಾರ್ಥಿಗಳು ನಾವು,
ಕೊಚ್ಚಿದೆವು ಮರ ಗಿಡಗಳ
ಅವು ನಿನ್ನ ಹಳೆ ಗೆಳೆಯರೆಂಬುದ ಮರೆತು.
ಮುಚ್ಚಿದೆವು ಕೆರೆ ಕಟ್ಟೆಗಳ
ಮೂಡತನದಲಿ ನಾವೇ
ಮುಂಬರುವ ಬರಗಾಲ ಬರಲಾರದೆಂದು.
ಊರಿಗೊಂದು ಕೆರೆ ಇರುವ ಬದಲು
ಕೇರಿಗೆ ನಾಲ್ಕು ಗುಡಿಗಳನು ಕಟ್ಟಿ
ಕೇಳಿಕೊಂಡೆವು ಕಲ್ಲ ದೇವರ
ಕೊಡು ನೀರ, ಸುರಿಸು ಬಿರು ಮಳೆಯ
ಎಂದೂ ಏನೂ ಕೊಡದ ದೇವರಿಗೆ
ಸುರಿದೇವು ಹಾಲ್ಮೊಸರ ಕೊಡದ ತುಂಬ
ಮರೆತೇವು ನಿಜ ದೇವರ
ಮೆರೆಸೇವು ಕಳ್ಳ ಕಾಕರ
ಮರುಳರಾಗಿ ತಬ್ಬಿಕೊಂಡೆವೋ
ನಮ್ಮ ಅವನತಿಯ...

- ಶ್ರೀಗೋ.

17 Mar 2017, 07:33 am

ನಾನು

ಎಲ್ಲರು ಇರುವ ಓಬ್ಬೋOಟಿ ನಾನು .
ಸುಮಧುರ ಸಂಗೀತದಲ್ಲಿ
ಕಾಣದೆ ಮರೇಯದ ಮೌನ ಗೀತೆ ನಾನು .

ನೂರು ಬಣ್ಣಗಳ ಕಂಡರೂ
ಕಣ್ಣಲ್ಲೇ ಉಳಿದಿರುವ
ಕಪ್ಪು ,ಬಿಳುಪು ಬಣ್ಣ ನಾನು .

ಕಥೆಯ ಕೊನೆಯೆಲ್ಲಿ ನಿOತ
ಹೇಳಲಾಗದ ವ್ಯಥೆಯು ನಾನು .
ನಗುವ ತುOಬಿ ನರಕದಲ್ಲಿ
ನಗುತ ಕುಳಿತ ಹುಡುಗಿ ನಾನು .

ಅಂಚಲೆಯೂ.................ನಾನು !!!

- ಚುಕ್ಕಿ

16 Mar 2017, 11:20 pm

ಬಿಟ್ಟಿರಲಾರದ ನಂಟು ...!!!

ಹೆಜ್ಜೆ ಹೆಜ್ಜೆಗೂ ಹಂಬಲಿಸಿ ಕೊರಗುತಿರುವೆ
ನನ್ನ ಹೃದಯದ ಪ್ರತಿ ಮಿಡಿತವು
ಪ್ರತಿಧ್ವನಿಸುತಿದೆ ನಿನ್ನ ಹೆಸರು
ಬಿಚ್ಚಿಡದೆ ಮುಚ್ಚಿಟ್ಟ ಭಾವನೆಗಳು ಹಲವು 
ಬೆಸದಿರುವೆ ನಿನ್ನಲ್ಲಿ ಬಿಟ್ಟಿರಲಾರದ ನಂಟು 
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು 
ಮನದಲ್ಲಿ ಮಿತಿ ಮೀರಿ ಆವರಸಿ
ಪ್ರವಾಹದಂತೆ ಕಣ್ಣೀರ ಹನಿಯಾಗಿ 
ಕೊಚ್ಚಿ ಹೋಗುತಿರುವೆ
ನೀ ದೂರ ಇದ್ದರು ಪ್ರೀತಿಯ
ನೆನಪುಗಳು ಕಾಡುತಿವೆ
ನೀ ನನ್ನಲ್ಲಿದ್ದರು ನಿನ್ನ
ಕಾಣಲು ಹಂಬಲಿಸುತಿರುವೆ
ದಿನಗಳುರುಳುತಿವೆ ನೋವಿನಲಿ
ಕ್ಷಣ ಕ್ಷಣವೂ ಕುಗ್ಗುತಿದೆ ಮನಸ್ಸು
ದಿನಗಳು ಕಳೆದರು ವರ್ಷಗಳು ಉರುಳಿದರು
ನಾ ನಿನ್ನೆ ಪ್ರೀತಿಸುವೆ...!!!

- Pb

16 Mar 2017, 10:26 pm

ಮನದ ಮಾತುಗಳು

ಬರಿ ದೇಹ ನಾನು
ನನ್ನಸಿರು ನೀನು
ಬರಿ ಕಣ್ಣ ರೆಪ್ಪೆ ನಾನು
ನನ್ನ ಕಣ್ಣ ಬೆಳಕು ನೀನು

ಬರೀ ಹೃದಯ ನಾನು
ಅದರೊಳಗಿನ ಬಡಿತ ನೀನು

ಈ ಬರಡು ಬದುಕಿನಲ್ಲಿ ನಿನ್ನ
ಬಿಟ್ಟ ನಾನು ನೀರಿಲಿದ ಮೀನು

ಇಂತಿ ನಿಮ್ಮ ಗೆಳಯ

- raj

16 Mar 2017, 10:01 pm

ಮನಸು ಮನಸಿನಾ ಬೆಸುಗೆ...

ಬರೆಯಲು ಕುಳಿತಿರುವೆ ಕವನವೊಂದು
ನಿನ್ನ ನೆನಸಿ ಬರೆಯಲು
ಪದಗಳ ಸಾಲು ಸಾಲದು
ಏನೆಂದು ಬರೆಯಲಿ,
ಕನವರಿಸಿ ನಾ ಕೊರಗುತಿರುವೆ,
ನನ್ನಿಂದ ನೀ ಇರುವೆ ದೂರ
ನಾ ಬಯಸಿದರೆ ಸನಿಹ ನಿನ್ನ...
ಕ್ಷಣದಲಿ ಬರುವೆ ನೀ
ನನ್ನ ಕಣ್ಣ ಹನಿಗಳಾಲಿ..
ಹಗಲಾದರೆನು ಇರುಳಾದರೆನು
ನಿನ್ನ ನೆನಪುಗಳಿಗೆ ಕೊನೆಯಿಲ್ಲ
ನಿನ್ನ ಕನಸುಗಳಿಗೆ ಬರವಿಲ್ಲ
ಮನಸು ಮನಸಿನಾ ಬೆಸುಗೆಗೆ 
ಮೌನದ ಮಾತಗಳೆಲ್ಲ
ಕಣ್ಣ ಹನಿಗಳಾಗಿ ಜಾರಿ ಮೌನದಲಿ
ನಿನ್ನ ನೆನಪಿಸುತಿದೆ ಈ ಹೃದಯ
ಮನದಲ್ಲಿ ನೆನಪಿನಾ, ಪುಟಗಳನು
ಬಚ್ಚಿಡಲಾಗದೆ ಬಚ್ಚಿಟ್ಟ ಮಾತುಗಳು
ನನಗೆ ಅರಿವಿಲ್ಲದೆ ಪದಗಳಲ್ಲಿ
ಬೆರತು ಕವನವಾಗಿ, ಮತ್ತೆ ನೀ ಬಂದೆ
ಮನಸಿನ ಪುಟಗಳನು ತೆರೆದಿಡಲು...!!!

- Pb

16 Mar 2017, 08:01 pm

ಕನ್ನಡತಿ

ಕನ್ನಡತಿ ನನ್ನೊಡತಿ
ನೀ ಮೀಟುವ ಈ ಪ್ರೀತಿ
ಏಳೇಳು ಜನುಮಕೂ
ನನ್ನ ಬಾಳಿನ ಸಂಗಾತಿ||ಪ||

ನೀನಿರುವ ತನಕ
ನನ್ನಲಿ ಈ ಪ್ರೀತಿಯ ತವಕ|
ನಿನ್ನಯ ಶರಣ ಲೋಕಕ
ಆನಂದವೇ ಮನಕ||೧||

ಕನ್ನಡ ಭಾಷೆ
ನಮ್ಮಯ ಹೃದಯದ ಘೋಷ|
ನೀ ಸೂಸುವ ಈ ಪರಿಮಳ
ನಮ್ಮಯ ಮನದಲಿ ತಳಮಳ||೨||

ವಂದನೆ ನಿನಗೆ
ನೀ ಸಂತೋಷ ತರು ನಮಗೆ|
ಜನ್ಮ-ಜನ್ಮ ಎನಗೆ
ನೀಡು ನಿನ್ನ ಸೇವೆಗೆ||೩||

ಹಾಡುವೆ ಹಾಡೊಂದನ್ನು
ಕನ್ನಡ ನುಡಿಯಲ್ಲಿ|
ನಾ ಕುಣಿದಾಡುವೆ
ನಿನ್ನಯ ಸೇವೆಯು ನಾ ಮಾಡುವೆ||೪||

ಕುವೆಂಪುರಿಂದ ಪುಳಕಿತ ನೀ
ವಿಶ್ವೇಶ್ವರಯ್ಯರಿಂದ ಧನ್ಯವಿ ನೀ|
ಮುಡುಪಾಗಿಡುವೆ ಈ ಜೀವನ
ಮಾಡು ನನ್ನಯ ಬಾಳನು ಪಾವನ||೫||

ನಾಡಿಗೆ ನಾನು ಬೆಳಕಾಗುವೆ
ನಿನ್ನಯ ಸೇವೆಯು ನಾ ಮಾಡುವೆ|
ತೋರು ನೀ ಎನಗೆ ಮಾರ್ಗವ
ನಾ ಚರಿತ್ರೆಯ ಪುಟದಿ ಮೆರೆವ ||೬||

ಕವಿಗಳು ಬರೆದ ಕವಿತೆಯ ಸಾಲು
ನೀ ನನ್ನ ಬಾಳಲಿ ಇರುವೆ ಬಹುಪಾಲು |
ಕವಿ ಕೋಗಿಲೆಗಳು ಹಾಡಿದವು
ಕನ್ನಡ ನೆಲದಲಿ ಕುಣಿದಾಡಿದವು ||೭||

ನಿನ್ನಯ ಶರಣಕೆ
ಶ್ರಮಿಸುವೆನು ನಾನೆಂದಿಗೂ |
ನೀಡು ಬಾ ಅನುಗ್ರಹ
ನೀ ಧೈರ್ಯವ ನನ್ನಲಿ ತುಂಬು ಬಾ||೮||

ಕನ್ನಡಕ್ಕಾಗಿಯೇ ಈ ಜನುಮ
ಕನ್ನಡವೇ ನಮ್ಮಮ್ಮ|
ಕನ್ನಡ ನುಡಿಯೇ ನಾ ಹಾಡುವ ಹಾಡು
ಹಾಡುವೆನು ನನ್ನಯ ಮನ ತುಂಬಾ||೯||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Mar 2017, 06:59 pm

ಚೆಲುವೆಯ ಹಗಲು

ಚೆಲುವೆ ನಿನ್ನನು ಕಂಡ ಮೇಲೆ
ಸೂರ್ಯ ಭೂಮಿಗೆ ಬಂದ ಬಾಲೆ!!
ಹೊನ್ನಿನ ಬೆಳಕ ಮಾಲೆ
ನಿನ್ನ ಸುತ್ತಲು ದಿನವೂ ಹಗಲೇ!!

ಕಳೆಯಲು ಬಾಳ ಇರುಳ
ತಾ ಸುರಿದನು ಹೊನ್ನ ಕಿರಣ!!
ನಗುತಿರೆ ನೀನು ದಿನವು
ಈ ಹಗಲಲೂ ಬಣ್ಣದ ಒಲವು!!

ನಿನ್ನ ಗೆಜ್ಜೆಯ ದನಿಯ ಕೇಳಿ
ತಾ ನಾಚಿ ಕರಗಿದ ಮೇಘ!!
ನಿನ್ನ ಹೆಜ್ಜೆಯ ಗುರುತ ಮೋಡಿ
ಕಾಮನ ಬಿಲ್ಲ ಮೇಲೆ!!

ನಿನ್ನ ಅಂದವ ಕಂಡು ಕರಗಿ
ಆ ಚಂದ್ರನು ಬರದೇ ಹೋದ!!
ಇರುಳೇ ಇರದ ಬದುಕು
ನಿನದೆಂದು ಹರಸಿ ಹೋದ!!

- ಪಿ.ಜಿ.ಜ್ಯೋತಿ

16 Mar 2017, 05:19 pm

ಎಲೆ ಮರೆಯ ಹೂವು

ಎಲೆ ಮರೆಯಲಿ‌ ಹೂವು ಅಡಗಿರುವಂತೆ
ಅದು ಯಾರ ಕಣ್ಣಿಗೂ ಕಾಣದಂತೆ
ತನ್ನ ಕಂಪಿನ ಗಂಧ ಬೀರುವಂತೆ!!

ಮನದ ಮರೆಯಲಿ ನೀ ಅಡಗಿ ಕುಂತೆ!!
ಅದು ಯಾರ ಕಣ್ಣಗೂ ಕಾಣದಂತೆ
ಅದರ ಜೊತೆಯಲಿ ಕನಸುಗಳ ಕಂತೆ!!

ಹೃದಯದ ಊರಲಿ ಪ್ರೀತಿಯ ಸಂತೆ
ಅದ ನೋಡಲು ನೀ ಎದಿರುಬಂದು ನಿಂತೆ
ಸ್ವಾಗತಿಸಿತು ಹೃದಯ ಒಳಗೆ ಬರುವಂತೆ!!

ಹಗಲಲ್ಲೂ ಇರುಳಲ್ಲೂ ನಿನ್ನಯ ಚಿಂತೆ
ಕಾದಿರುಳು ಕಳೆದಿರಲು ಕನಸು ಕರಗಿದಂತೆ
ನಿನ್ನಿಂದ ದೂರಾದ ನಾ ಒಬ್ಬಂಟಿಯಂತೆ!!

ನೀ ಇರದೇ ಬದುಕಲ್ಲಿ ಏಕಾಂತ ಬಂತೆ
ಮನದಲ್ಲಿ ಪ್ರಶ್ನೆಗಳ ಸಾಲು ಮೂಡಿರುವಂತೆ
ಮನವು ಆಯಿತು ಎಲೆ ಮರೆಯ ಹೂವಿನಂತೆ!!

- ಪಿ.ಜಿ.ಜ್ಯೋತಿ

16 Mar 2017, 04:53 pm

ಓ ಮಳೆಯೇ

ಓ ಮಳೆಯೇ ಇಳಿದು ಬಾ ಭುವಿಗೆ
ಭೂಮಿಗೆ ಬಂದು ಅವತರಿಸಿ ಸದಾ ಹರಿಸು ಜೇನಿನಾ ಹೊಳೆ.
ಓ ಮಳೆಯೇ.........

ನೆಲದೊಳಗೆ ನೇಗಿಲಯೋಗಿಯ ಕಣ್ಣೊಳಗೆ
ಬಿತ್ತಿದ ಕನಸು ಸಾವಿರಾರು
ಕೇಳದೇ ಈ ಪ್ರಾರ್ಥನೆ ನೊಂದ ಮನದಾ ಯಾಚನೆ ಇನ್ನು ಏಕೀ ಶೋಧನೆ
ಓ ಮಳೆಯೇ.........

ಒಡಲೊಳಗೆ ಹಸಿವಿನ ಮಡಿಲೊಳಗೆ ಕಣ್ಮುಚ್ಚಿದ ಕಂದನಾ ಕಣ್ತಿರೆಸುವೆಯಾ
ಕಾರ್ಮುಗಿಲಿನ ನಡುವೆ ಕೇಳಲಿ ಗುಡುಗಿನ ಗಾನ, ತುಂಬಿಹರಿಯಲೀ ಜೀವಸೆಲೆ
ಓ ಮಳೆಯೇ........

ಮಣ್ಣೊಳಗೆ ಅನ್ನವನುಬೆಳೆಸಿ ಹಸಿದ ಜೀವಸಂಕುಲವಾ ತಣಿಸಲಿ
ಸಾಲು ಗಿಡಗಳನಡುವೆ ಸಾಗಲಿ ಕೋಗಿಲೆ ಕವನ, ಸಂತಸ ಚಿಮ್ಮಲಿ ಬಾನಿಗೆ
ಓ ಮಳೆಯೇ.........

ಹಂಸಿನಿ

- ವಿಸ್ಮಯ

16 Mar 2017, 04:28 pm