Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಡಲ ತೀರದಲಿ ಅವಳ ರಂಗು

ಅಲೆಯೇ ತಾಳು ಸ್ವಲ್ಪ ಹೊತ್ತು
ನನ್ನ ಮುದ್ದು ಹುಡುಗಿ ನಡೆದು
ಹೃದಯಕಡಲ ಒಳಗೆ ಇಳಿದು
ಸಂಗ್ರಹಿಸಿಕೊಳ್ಳಲಿ ಕೊಂಚ ಪ್ರೇಮ ಭಾವವ..

ಸೆಳೆತವು ಎಲ್ಲೆ ಮೀರಿ,
ನದಿಯು ಕಡಲ ಅರಸಿ ಬಂದು ಜಾರಿ,
ಭಾಸವಾಗಿದೆ ಅವಳ ಗೆಜ್ಜೆ ಪಿಸುಗುಟ್ಟಿದಂತೆ,
ಕೆಂಪು ಸಂಜೆಯ ಹೊತ್ತಿಗೆ ಕೆನ್ನೆ ಕೆಂಪಾದಂತೆ..

ಹೊಂಚು ಹಾಕಿ ಕಾದಿರುವೆ ನಿನ್ನ ಜೊತೆಯ,
ಹಂಚಿ ಒಮ್ಮೆ ಹಾಡಿಬಿಡು ಪ್ರೀತಿಕಾವ್ಯವ,
ಸಂಜೆ ರಂಗು ಮಾಯವಾಗುವ ಮೊದಲು,
ಕೂಡಿಟ್ಟುಕೊಡು ಒಂದಷ್ಟು ನಿನ್ನ ಭವ್ಯವ..

ಅನುಮೋದನೆಯು ಒದಗಿ
ಹೆಚ್ಚು ಪ್ರೀತಿ ಸಂಭಾವನೆಯ ನಿರೀಕ್ಷೆಯು ಕಾಡಿ
ಇಬ್ಬರ ಹೆಜ್ಜೆಯು ಸಮನಾಗಿ
ಮೂಕಸಂವೇದನೆಯು ರವಾನೆಯಾಗಿ..

-ಕನ್ನಡದ ಭಕ್ತ

- ಕನ್ನಡದ ಭಕ್ತ

20 Mar 2017, 08:09 am

ಪ್ರೀತಿ

ಇಬ್ಬರು ಪ್ರೇಮಿಗಳು ಅವರ
ವಯಸ್ಸು ಆಗಿತ್ತು ಅರವತ್ತು.
ತಾತ ಇದ್ದರು ಊರಿನಲ್ಲಿ
ಅಜ್ಜಿ ಇದ್ದರು ಮಗನ ಮನೆಯಲ್ಲಿ.

ತಾತ ದಿನ ಕರೆ ಮಾಡುತ್ತಿದ್ದರು ಅಜ್ಜಿಗೆ
ಅಜ್ಜಿ ದಿನಾಲು ತಾತ ಕರೆ ಬರುವ ಸಮಯಕ್ಕೆ
ಸರಿಯಾಗಿ ಚನ್ನಾಗಿ ರೆಡಿಯಾಗಿ ಕೂರುತ್ತಿದ್ದಳು
ಫೋನ್ ನಲ್ಲಿ ಮಾತಾಡಲು.

ಇದನ್ನು ದಿನಾ ಗಮನಿಸುತ್ತಿದ್ದ ಮಮ್ಮಗಳು
ಕೇಳಿದಳು ಅಜ್ಜಿಯಾಕೆ ನೀನು ದಿನ ಕರೆಬರುವ
ಸಮಯಕ್ಕೆ ರೆಡಿಯಾಗಿ ,ಹೂ ಮುಡಿದು ,ಬೊಟ್ಟಿಟ್ಟು,ಬಳೆ ತೊಟ್ಟು
ಕೂರುತ್ತಿಯಾ ಎಂದು.

ಅಜ್ಜಿ ಹೇಳಿದಳು ಮಗು ನಿಮ್ಮ ತಾತ
ನನ್ನನು ಮದುವೆಯಲ್ಲಿ ಈ ರೀತಿಯೆ
ನೋಡಿದರು ಅವಗಿಂದ ದಿನಾಲು ಈಗೆ
ಅವರಿಗಾಗಿ ರೆಡಿಯಾಗೋದು ನನಗಿಷ್ಟ ಎಂದು.

ಆಗ ಮಮ್ಮಗಳು ಆದ್ರೂ ಅಜ್ಜಿ ನೀನು
ತಾತನಿಗೆ ಕಾನಲ್ವಲ್ಲ ಅದ್ರಲ್ಲೂ ಅವ್ರಿಗೆ
ಈಗ ಕಣ್ಣು ಸಹ ಕಾಣಲ್ಲ ಎಂದಳು.

ಹಾಗ ಅಜ್ಜಿ ನಗುತ್ತ ಮಗು ನಂಗೂ ಗೊತ್ತಮ್ಮ
ತಾತನಿಗೆ ನಾನು ಕಾಣಲ್ಲ, ಕಣ್ಣು ಕಾಣಲ್ಲ ಅಂತ ಅವ್ರು ನನ್ನಕಣ್ಣಿಂದ ನೋಡಿ ಇಷ್ಟ ಪಟ್ಟಿಲ್ಲ ಮನಸ್ಸಿನಿಂದನೋಡಿ ಇಷ್ಟ ಪಟ್ರು
ಈಗ್ಲೂ ಹಾಗೇ ನೋಡ್ತಾರೆ.

ಅವ್ರು ನೋಡಿದ್ರು ನೋಡಿಲ್ಲ ಅಂದ್ರು ನಾನು
ಅವರಿಗಾಗಿ ರೆಡಿ ಆಗ್ತೀನಿ ಅವ್ರು ನನಗಾಗಿ
ಕರೆ ಮಾಡ್ತಾರೆ ಫೋನ್ ನಿಂದ ಅಲ್ಲ
ಪ್ರೀತಿಯಿಂದ ಎಂದಳು.

ಅಷ್ಟರಲ್ಲಿ ತಾತನ ಕರೆ ಬಂತು ಅಜ್ಜಿ
ಓಡಿ ಹೋದಳು ಮಾತಾಡಲು.
ಪ್ರೀತಿ ಇಬ್ಬರು ವ್ಯಕ್ತಿಗಳ ಮಧ್ಯೆ ಅಲ್ಲ
ಎರಡು ಹೃದಯಗಳ ಮಧ್ಯೆ.........

ಇಂತಿ ನಿಮ್ಮ ಅಂಚಲ........

- ಚುಕ್ಕಿ

19 Mar 2017, 08:30 pm

ಸಾವು

ಎಲ್ಲಾ ಇಹಲೋಕ ಕಷ್ಟಗಳಿಗೂ
ಬಹುದೂರ ಸಾವು.
ಪರಮಾತ್ಮನ ಸೇವೆಗಾಗಿ ಪರಲೋಕ
ಪಯಣ ಸಾವು.

ಭವ ಬಂದಗಳಿಗೆಲ್ಲಾ ಅಂತಿಮ
ನಮನ ಸಾವು.
ಎಲ್ಲಾ ನೋವುಗಳನ್ನು ಹರಿಸುವ
ಯಮನ ಪಾದಗಳಿಗೆ ಅರ್ಪಿಸುವ
ಹೂವು ಸಾವು.

ಸತ್ತ ಮೇಲಾದರೂ ನನ್ನ ಕಣ್ಣೀರಿಗೆ
ಅಂತ್ಯವಿದೆಯ.
ನೆಮ್ಮದಿ ನೀನು ನನ್ನ ಹುಡುಕಿ
ಬರುವೆಯ............................?

- ಚುಕ್ಕಿ

19 Mar 2017, 07:10 pm

ಓ ಮಿನುಗುತಾರಾಮಣಿ

ನಕ್ಕರೆ ಸುಕುಮಾರಿ
ಅತ್ತರೆ ಮಯೂರಿ
ನಾಚಿದರೆ ಸುರಸುಂದರಿ
ಮಾತಾಡಿದರೆ ವಾಗ್ದೇವಿ ಕುವರಿ
ಸಿಡುಕಿದರೆ ಸಿಂಗಾರಿ
ಬಳುಕಿದರೆ ಬಂಗಾರಿ
ನನ್ನವಳು ಕನ್ಯಾಕುಮಾರಿ...

- Irayya Mathad

19 Mar 2017, 06:40 pm

ಕಮರಿದ ಕನಸು

ತಾರೆಯಾಗುವಾಸೆ
ಚಂದ್ರನಾಲಯದಲ್ಲಿ
ಮೀನಾಗುವಾಸೆ
ಕಡಲ ಮಡಿಲಲ್ಲಿ
ಝರಿಯಾಗುವಾಸೆ
ಜೋಗದ ಸಿರಿಯಲ್ಲಿ
ಕಡೆಗೆ,ನಾನಾದೆ ಪಾತ್ರದಾರಿ
ವಿಧಿಯ ಸೂತ್ರದಲ್ಲಿ


ಬಾಳ-ಬಟ್ಟೆಯಲ್ಲಿ
ಗುರಿಯ-ಅರಿವಿನಲ್ಲಿ
ಗುರು-ಸ್ಪೂತ್ರಿಯ
ಅಲೆ-ಅಲೆಯಲ್ಲಿ
ನಲಿ-ನಲಿಯುತ್ತ
ತೇಲಿ-ತೇಲಿ ಸಾಗಲು
ಬಟ್ಟೆಗೆಟ್ಟಿತು ಬಾಳು


ಕೈ ತುತ್ತ ತಿಂದ ಶ್ವಾನವು
ಯಜಮಾನನ ಕಾಲೇ ಕಡಿವಂತೆ
ಬೆವರೆ- ನೀರಾಗಿ ಹರಿದು
ಬೆಳೆದ ಮರವು,ಒಡೆಯನ
ಶಿರದ ಮೇಲೆರಗುವಂತೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಹಿಂಡಿನಿಂದ ಕುರಿ ಕದ್ದ ತೊಳದಂತೆ
ಮನೆಯಿಂದ ಅಗಲಿಸಿತು ಮನವ

ತಾಯ ಒಡಲಿಗೆ
ಬರಸಿಡಿಲು ಬಡಿಯಿತು
ನಳನಳಿಸುವ ಶಶಿಗೆ
ಕಾಮ್ರೋಡ ಕವಿಯಿತು
ಚಿಗರಿಯೊಂದು ವ್ಯಾಘ್ರನ
ಬಲೆಗೆ ಬಿದ್ದಾಗ

ಹಿತವಂಚಕರ ಹಿಂಡಿನಲ್ಲಿ
ಹಿತಚಿಂತಕರ ಹುಡುಕಾಟ
ನಡೆದಿದೆ ಬದುಕಿನಲ್ಲಿ
ಸವಾಲುಗಳ ಓಟ
ನಿಲ್ಲುವುದೆ ಇದರ ಆಟ
ಇದೆ ಬಾಳಿಗೊಂದು ಪಾಠ.


-ಶಾರದ

- ಶಕುಂತಲಾ

19 Mar 2017, 06:19 pm

ಯಾರು.....?

ಪ್ರಪಂಚದಲ್ಲಿ ಯಾವುದೇ ನೋವಿರಲಿ
ತಾಯಿಯ ಮಡಿಲಲ್ಲಿ ಮಲಗಿ ಮರೆಯಬಹುದು.
ಆದರೆ ಆ ತಾಯಿಯೇ ಕಷ್ಟ ಕೊಟ್ಟರೆ
ಪ್ರಪಂಚವೆಲ್ಲಾ ಸಮಾಧಾನ ಪಡಿಸಿದರೂ ಸಾಲದು.

ಜೀವನ ಪೂರ್ತಿ ಜೊತೆಗಿದ್ದು ಕಾಯಬೇಕಾದ
ಧೈರ್ಯವೇ ಮಧ್ಯದಲ್ಲಿ ಬಿಟ್ಟು ಹೋದರೆ
ಕೈ ಹಿಡಿದು ನಡೆಸುವವರ್ಯಾರು
ನಿನ್ನ ಪ್ರೀತಿ ಮರಳಿ ಕೊಡುವವರರು......

ಒಳ್ಳೆಯ ಮಕ್ಕಳಿಗೆ ಒಳ್ಳೆಯ ತಂದೆ-ತಾಯಿ ಸಿಗಲ್ಲ.
ಒಳ್ಳೆಯ ತಂದೆ-ತಾಯಿಗೆ ಒಳ್ಳೆಯ ಮಕ್ಕಳು ಸಿಗಲ್ಲ.
ದೇವರಿಗಂತು ಇವರ ನೋವು ತಿಳಿಯಲ್ಲ
ಯಾಕೆಂದರೆ ಅವನಿಗೂ ಯಾರು ಇಲ್ಲ.......

- ಚುಕ್ಕಿ

19 Mar 2017, 06:09 pm

ಅಪಮೌಲ್ಯ

ಗಾಂಧಿತಾತ! ಗಾಂಧಿತಾತ!
ನಿಂತುಬಿಟ್ಟೆಯೇ ನಗುತ! ನಗುತ!
ಆಳುವವರಿಂದಲೆ ನಿನಗೆ ಮೌಲ್ಯ
ಅಧಿಕಾರ ಉಳ್ಳವರಿಂದಲೆ ನಿನ್ನ ಅಪಮೌಲ್ಯ
ಮೆರೆಯುತಿದ್ದೆ ಆರ್ಥಿಕತೆಯ ಅರಸನಾಗಿ
ಸದ್ದಿಲ್ಲದೆ, ಸಮಾದಿಯಾದೆ ಮೌನವಾಗಿ


ನಿನಗಾಗಿ ಅಲೆಯುವವರು ಒಂದುಕಡೆ
ನಿಂತಲ್ಲಿಯೆ ನಿಂತು ಕೊಳೆಯುವೆ ಇನ್ನೊಂದುಕಡೆ
ಉಳ್ಳವರ ಬಾಳಲ್ಲಿ
ಇಲ್ಲದವರ ಮನದಲ್ಲಿ
ಇಳೆಯಲ್ಲ ನೆರಳಾಗಿ
ನಿನಗೆಲ್ಲ ಮರುಳಾಗಿ
ಬೆಳಗಿದೆ ಎಲ್ಲರ ಬೆಳಕಾಗಿ
ಕ್ಷಣಹೊತ್ತಿನ ಆಣಿಮಾತಿನಲ್ಲಿ
ಕರಗಿದೆ ಮಸುಕಾಗಿ
ಎಲ್ಲಿ ಸೇರಿವೆ? ಏಕಾಂಗಿಯಾಗಿ!

ಬಹುಜನರ ಹವಣಿಸುತ್ತಿದ್ದ ನೀಗಿಸಲು
ಹಲವರ ಅಡಗಿಡು ಮಾಡಲು
ಕಪ್ಪನ್ನು - ಬಿಳಿಯಾಗಿಸಿ
ದೇಶವ ಮುನ್ನುಗ್ಗಿಸಿ
ವಿಜಯದ ಕಹಳೆ ಮೊಳಗಿಸಲೆಂದು
ನಿನ್ನ ಬಣ್ಣವ ಬದಲು ಮಾಡಿ
ನಿನಗೊಂದು ಆಕಾರ ನೀಡಿ
ಹಲವು ನಿಯಮಗಳ ಮಾಡಿ
ಕರೆದರು, ಕರೆಮಾಡಿ
ಇದೇ ಜನನಾಕನ ನುಡಿ.


-ಶಾರದೆ

- ಶಕುಂತಲಾ

19 Mar 2017, 05:16 pm

ಮಣ್ಣಲ್ಲಿ ಮುಚ್ಚಿಟ್ಟು

ಮುದ್ದಾದ ಮಗುವನ್ನು ಮಣ್ಣಲ್ಲಿ ಮುಚ್ಚಿಟ್ಟು
ಆ ಮಣ್ಣಮೇಲೆ ನೀನೆಗೆ ನಿಂತಿರುವೆ
ಕ್ರೂರವಾದ ತಂದೆಯೇ......

ಅಮ್ಮನ ಗರ್ಭದಲ್ಲಿ ನವಮಾಸಗಳು ಅಡಗಿದ್ದು
ರೂಪುಗೊಂಡ ಗೊಂಬೆಯನ್ನು ಆ ತಾಯಿ ನೋಡುವ ಮುನ್ನವೇ ಭೂ ತಾಯಿಯ ಮಡಿಲು
ಹೇಗೆ ನೀ ಸೇರಿಸಿದೆ..........?

ಪಾಪ ಆ ಮಗುವಿಗೆ ಸತ್ತಮೇಲೂ ತಿಳಿದಿಲ್ಲ
ಅದು ಒಂದು ಹೆಣ್ಣು ಮಗುವೆಂದು.
ಅದರ ಜನನವೇ ಮರಣಕ್ಕೆ ದಾರಿಯಾಯಿತೆಂದು.

ಹೇಗೆ ನೀನು ಸಾಯಿಸಿದೆ ಆ ಕಣ್ಣು ತೆರಿಯದ
ಮಗುವನ್ನು...............
ಎಂದಿಗೂ ಮರೆಯದಿರು ನೀನು....!!!
ನಿನ್ನ ಹೆತ್ತ ತಾಯಿಯು ಒಂದು ಹೆಣ್ಣೆಂದು.

ಪುರುಷ ಪ್ರಧಾನ ಪ್ರಪಂಚದಲ್ಲಿ ನೀನೊಂದು
ಮರೆತಿರುವರೆ.
ಈ ಸೃಷ್ಠಿಗೆ ಮೂಲ ಆಧಾರ ಸ್ತ್ರೀ ಮಾತ್ರವೆಂದು.

- ಚುಕ್ಕಿ

19 Mar 2017, 03:50 pm

ಸುತ್ತೋಣ

ಪ್ರಪಂಚವೇಲ್ಲಾ ಸುತ್ತಿ ನೋಡೊಣ ಸುಸ್ತಾಗೋವೆರೆಗೂ .
ಆ ಆಕಾಶಕ್ಕೆ ಹಾರಿ ಹೋಗೋಣ ಸ್ವತಂತ್ರದ ಹಕ್ಕಿಗಳಾಗಿ .

ಈ ಚಿಕ್ಕ ಲೋಕವನ್ನೇ ನೋಡಿಬರೋನ ಒಂದು ಅಂಗುಲವು ಮರಿಯದಹಾಗೆ .
ಅಂದವಾದ ಪ್ರಕೃತಿಯ ಆಸ್ವದೀಸೋನ ಅರ ಗಳಿಗೆಯೂ ಕಣ್ಣು ಮುಚ್ಚದೆ .

ನಿಲ್ಲದ ಕಾಲದ ಜೊತೆ ಹೋಡೋನ
ಗಾಳಿಗೆ ಪರಿಚಯವಾಗುವ ಹಾಗೆ .
ಮುಗುಳ್ನಗೆಯಿಂದ ಸಾಗೋಣ ಸ್ನೆಹವೇಂಬ ಜಗತ್ತಿನಲ್ಲಿ .

- ಚುಕ್ಕಿ

19 Mar 2017, 03:18 pm

ಅಂಚಲೆ

ಸೀಮಿತ ಪ್ರಪಂಚದಲ್ಲಿ ಬೆಂದು ..
ಪಂಜರದ ಪಕ್ಷಿಯಾಗಿ ಬೆಳೆದು ..
ಕೋಮಲ ಹೃದಯಕ್ಕೇ ಗಾಸಿಮಾಡಿ ..
ಅರಿಯಲಾರದ ಮನಸ್ಸುಗಳೊಂದಿಗೆ ಬೆಳೆದು ..
ಗಡಿಯ ನೆರಳಲ್ಲಿ ಅಂಚಲೆಯಾಗಿ ಬೆಳೆದು..
ಎತ್ತರಕ್ಕೆ ಮೆರೆಯುವ ಬಾಣಗಲದವಳು..
ಬರಿ ಸೀಮಿತ, ಗಡಿಯವಳಲ್ಲ ಅವಳು ಅಂಚಲೆ ಬಾನೆತ್ತರದ ಅಂಚಲೆ..

- ಚುಕ್ಕಿ

19 Mar 2017, 03:12 pm