Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

- Nuage Laboratoire

13 Feb 2024, 03:29 pm

- Nuage Laboratoire

13 Feb 2024, 03:29 pm

ನಲ್ಮೆಯ ಸಖಿ

ಓ ಹೊನಲೇ ದಟ್ಟನೆಯ ಕಾನನದೊಳಗೆ ನೀ ಅವಿತಿರಲು,
ನಾ ಬೆಟ್ಟವ ಸುತ್ತಿ ಬರುವೆ ನಿನ್ನ ನೋಡಲು,,
ನೀ ಎಂದರೆ ಸದಾ ನನ್ನೆದೆಯಲ್ಲಿ ಹೊಸ ಬಗೆಯ ಅಮಲು,
ನೀ ಹರಿಯುವ ಇಂಪಾದ ಶಬ್ದದ ಸ್ವರವೇ ನನ್ನೆರಡು ಕಿವಿಗೆ ಮಿಗಿಲು.....!


ನನ್ನೊಳಗೆ ಮರೆಮಾಚಿದೆ ಅವ್ಳ
ಮುಗ್ದ ನಗುವೊಂದು,
ಪುಟದ ಹಾಗೆ ತೆರೆಯಲಾಗದು ಅವಳ ಮನಸ್ಸನೆಂದು,,
ಅವಳೊಂದು ನನ್ನೊಳಗಿನ ಮಂದಿರದ ಕೇಂದ್ರ ಬಿಂದು,
ಆದರೂ ಅವಳ ಹೆಸರೇ ಕವಿದಿದೆ ನನ್ನ ಹೃದಯದಲಿ ಎಂದೆಂದೂ......!!


ನಿತ್ಯವೂ ನೆನಪಾಗಿ ಕಾಡುವುದು ಗೆಳತಿ ನಿನ್ನ ಧ್ವನಿ,
ಆದರೂ ಮಾತಾಡಲು ನೀನೇಕೆ ಆಗಿರುವೆ ಇಷ್ಟೊಂದು ಮೌನಿ,
ನನ್ನ ಸಖಿಯ ಸ್ವರ ಕೇಳದೆ ನಾನಾಗಿರುವೆ ನಿನ್ನ ಧ್ಯಾನಿ,
ಸದಾ ಗೆಳತಿ ನಾನೆಂದು ನಿನ್ನ ಪ್ರೀತಿಗೆ ಮುಗ್ದ ಅಭಿಮಾನಿ.....!!!



✍️...... ಅಭಿಷೇಕ್ ಟಿ ಎ

- Abhishek T A

11 Feb 2024, 07:55 am

ಬೆಳಕು

ನಂಬಿಕೆ ಹರಡಲಿ...
ವಿಶ್ವಾಸ ಬೆಳಗಲಿ..
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯ ಬೆಳಕು ಹರಿಯಲಿ…

ಸಹೋದರತೆ ಹರಡಲಿ…
ವಾತ್ಸಲ್ಯತೆ ಬೆಳಗಲಿ…
ಜಾತೀವಾದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ..

ಧರ್ಮ ಹರಡಲಿ..
ನ್ಯಾಯವು ಬೆಳಗಲಿ…
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃಧಿಯ ಬೆಳಕು ಹರಿಯಲಿ…

ಆತ್ಮವಿಶ್ವಾಸ ಹರಡಲಿ ..
ಆಶಾಜ್ಯೋತಿ ಬೆಳಗಲಿ ..
ಅಜ್ಞಾನವೆಂಬ ಕತ್ತಲು ಸರಿದು ,
ವಿಜ್ಞಾನದ ಬೆಳಕು ಹರಿಯಲಿ ..
ಶುಭೋದಯ....

- Arjunraddi Hanchinal

10 Feb 2024, 05:25 am

ಅಪ್ಪ - ಅಮ್ಮ ವಿಪರ್ಯಾಸ.

ಹೆತ್ತವರು ಹೊತ್ತವರು ಅಪ್ಪ-ಅಮ್ಮ
ಓದಿಸುವರು ಅಪ್ಪ-ಅಮ್ಮ
ಮದ್ವೆ ಮಾಡಿಸುವರು ಅಪ್ಪ-ಅಮ್ಮ
ಇವರನ್ನ ನಾವು ಮರಿಯೋದು
ನಾವು ಅಪ್ಪ-ಅಮ್ಮ ಆದಾಗ.
ಕಾರಣ ನಾವು ಅಪ್ಪ-ಅಮ್ಮ,
ಇದೆ ವಿಪರ್ಯಾಸ.

- Shivayya C G

09 Feb 2024, 09:35 pm

ಸ್ನೇಹದ ಮಹತ್ವ


ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚು
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು.

ಇಂದ ಶ್ರೀ ಎ ಆರ್ ಹಂಚಿನಾಳ. ಶಿಕ್ಷಕರು ,
ಸರಕಾರಿ ಕೆ ಪಿ ಎಸ್ ಮುಗಳೊಳ್ಳಿ. ತಾ/ಜಿ - ಬಾಗಲಕೋಟ.

- Arjunraddi Hanchinal

09 Feb 2024, 09:31 pm

ಮನಸ್ಸಿನ ಮಾತು

ಮನಸ್ಸು ಕಸಿವಿಸಿಯಿಂದ ಕೇಳಿತ್ತು
ನೀನು ಏನು ಮಾಡಬೇಕೆಂದಿರುವೆ ಎಂದು
ಏನೂ ತಿಳಿಯದ ನಾ ನುಡಿದೆ
ಜೀವನದಲ್ಲಿಲ್ಲದ ಗುರಿಯ ಮುಟ್ಟಬೇಕೆಂದು

ಕಿರುನಗೆಯ ಬೀರಿ ಮನಸ್ಸು ಕೇಳಿತ್ತು
ನೀನು ಏನು ಮಾಡಿರುವೆ ಇಂದು ಎಂದು
ಏನೂ ಬೇಡವೆಂದು ಕೈಚೆಲ್ಲಿ ಕುಳಿತಿದ್ದ ನಾ ನುಡಿದೆ
ನನ್ನವರಿಗಾಗಿ ಬದುಕಿರುವೆ ನಾನಿಂದು

ಭವಿಷ್ಯವ ನೆನೆದು ಮನಸ್ಸು ಹುರುಪಿನಲ್ಲಿ ಹೇಳಿತ್ತು
ನಾ ಇರುವೆ ನಿನ್ನ ಜೊತೆಯಲಿ ಎಂದೆಂದು
ಮನ ನೊಂದು ನಾ ನುಡಿದೆ
ನಿನಗೆ ಜಾಗವಿಲ್ಲ ನನ್ನಲಿಂದು

ಸೋತ ಮನಸ್ಸು ಹೇಳಿತ್ತು
ಭೂತಕಾಲದ ಭೂತ ಹೊಕ್ಕಿದೆ ನಿನ್ನಲ್ಲಿಂದು
ಅದ ಕೇಳಿದ ನಾ ನುಡಿದೆ
ಭೂತದ ಭಯಕ್ಕೆ ಅಡಗಿ ಕುಳಿತಿರುವೆ ನಾ ಇಂದು

ಪ್ರೋತ್ಸಾಹಿಸುವ ಭರದಲ್ಲಿ ಮನಸ್ಸು ನುಡಿದಿತ್ತು
ಭೂತದ ಭಯಕ್ಕೆ ಬೇದರಿದರೆ ನೀ ಇಂದು
ನನ್ನ ನೀ ಕಳೆದುಕೊಳ್ಳುವೆ ಎಂದೆಂದು

ವಾಸ್ತವಕ್ಕೆ ಮರಳಿದ ನಾ ನುಡಿದೆ
ನಿ ನನ್ನೊಂದಿಗೇ ಇರುವಾಗ ಭಯ ತಾನೇ ಏನು ಮಾಡಿತೆಂದು
ಕುತಲ್ಲಿಂದ ಎದ್ದು ನಡೆದೇ ಭವಿಸ್ಯವ ನೋಡಲೆಂದು...

- HTK

08 Feb 2024, 02:15 pm

ಈ ದಿನ



ಕಳೆದಿರುವೆ ಈ ದಿನವ ಸಮಯದ ಜೊತೆಯಲಿ
ಏನೂ ಮಾಡದೆ ಏನೂ ತೋಚದೇ
ಕುಳಿತಿರುವೆ ಒಬ್ಬಳೆ ಸುಮ್ಮನೆ ಮನೆಯಲಿ
ಖಾಲಿ ನೆನಪುಗಳ ಜೊತೆಯಲಿ

ಪ್ರತಿ ಕ್ಷಣವೂ ನೆನಪಿಸಿದೆ
ಸಮಯವು ಉರುಳುತ್ತಿದೆ ಎಂದು
ನಾ ತಾನೇ ಏನು ಮಾಡಲಿ
ಮನಸ್ಸು ಮರುಗಿದೆ ಸಮಯವ ತಡೆಯುವ ಶಕ್ತಿ ನನ್ನಲಿಲ್ಲವೆಂದು

ನನ್ನದೇ ಬಿಂಬ ನನ್ನನೆ ಪ್ರಶ್ನಿಸಿದೆ
ಕಳೆದಿರುವ ಸಮಯದಲಿ ನೀ ಏನೂ ಮಾಡಿರುವೆ ಎಂದು
ಏನು ಹೇಳಬೇಕೆಂದು ತಿಳಿಯದೆ ಕುಳಿತಿರುವೆ ನಾ ಇಂದು
ನಸುನಕ್ಕು ಮನ ನುಡಿದಿದೆ...
ನಿನಗಿನ್ನು ಸಮಯವಿದೆ, ಮಾಡು ನೀ ಇಷ್ಟಪಟ್ಟಿದ್ದಿಂದು.

- HTK

08 Feb 2024, 11:32 am

ಈ ಮನಸು

ಕಲ್ಲಗಬಾರದಿತ್ತೇಕೆ ಈ ಮನಸ್ಸು
ಭಾವನೆಗಳನ್ನು ತುಂಬಿಡುವ ಹುಂಡಿಯಾಗಬಾರದಿತ್ತೇಕೆ
ಅರ್ಥವೇ ಇಲ್ಲದ ಬಂದಗಳೊಡನೆ
ಮೌಲ್ಯ ವಿಲ್ಲದ ನಿರೀಕ್ಷಿಗಳು ವ್ಯರ್ಥವಲ್ಲವೇ
ಕಲ್ಲಗಬಾರದಿತ್ತೇಕೆ ಈ ಮನಸ್ಸು
ಭಾವನೆಗಳನ್ನು ತುಂಬಿದ ಹುಂಡಿಯಾಗಬಾರದಿತ್ತೇಕೆ

- HTK

08 Feb 2024, 11:30 am

ನನ್ನವನ ಪ್ರೇಮ

ಕಷ್ಟ ಎಂಬ ತಂಗಾಳಿಯಲ್ಲಿ
ದುಃಖ ಎಂಬ ಅಂಗಳದಲ್ಲಿ
ಮರೆಯಾಗದಿರು ಈ ನನ್ನ ಮನಸ್ಸಿನಲ್ಲಿ
ಮೊದಲ ಮಾತು ಮೊದಲ ಮುತ್ತು
ಕೊನೆಯವರೆಗೂ ಮರೆಯಾಗದು
- ನೀ ಎಂದೆಂದೂ ದೂರವಾಗದಿರು -

ಮೊದಲೇ ದಿನವೇ ತಿಳಿದೇ ನೀ ನನ್ನವನೆಂದು
ದೂರವಾಗದಿರಲು ನಿರ್ದರಿಸಿದೆ ನೀ ನನ್ನವನೆಂದು.
ಕೈ ಬಿಡದಿರು ನಿನ್ನ ಉಸಿರಿರುವರೆಗೂ
ಮೋಸ ಮಾಡಲಾರೆ ನನ್ನ ಜೀವಿರುವರೆಗೂ.
ಬಿಟ್ಟು ಹೋಗದಿರು ಓ ನನ್ನ ಪ್ರೇಮಿಯೇ
ಕೈ ಮುಗಿದು ಬೇಡುವೆ ನಿನ್ನನು.

-ನೀ ಎಂದೆಂದೂ ದೂರವಾಗದಿರು-

ಎಲ್ಲರಂತಲ್ಲಾ ನನ್ನವನು ಎಲ್ಲರಿಗಿಂತಲೂ ದೊಡ್ಡವನು.
ಎಂದಿಗೂ ಮರೆಯಲಾರೆ ಈ ನಿನ್ನ ಪ್ರೀತಿಯನ್ನು.
ಬೀಸುವ ಗಾಳಿಯಲ್ಲಿ ಹಾರಿ ಹೋಗದಿರು
ಮತ್ತೊಬ್ಬರ ಮಾತಿಗೆ ಕಿವಿ ಕೊಡದಿರು.
ಮನೆತನಕ ಬಂದವರಿಗೆ ಹಾಗೆ ಕಲಿಸಬೇಡ
ಕೊನೆಗೆ ಬರುವುದು ಪರಸ್ತಿತಿ ಎಂದು ಮರೆಯಬೇಡ.
-ನೀ ಎಂದೆಂದೂ ದೂರವಾಗದಿರು-

ನನ್ನವನು ಮನಸ್ಸಿನಲ್ಲಿ ಅಪರಂಜಿ
ಹೊರಗೆ ನಡೆಯುವನು ಎಲ್ಲರಿಗೆ ಅಂಜಿ
ಮನಸ್ಸು ಮಾತ್ರ ಶುದ್ಧ ಬಂಗಾರ.
ಕಷ್ಟವೇ ಇರಲಿ, ಸುಖವೇ ಇರಲಿ ಹಂಚಿಕೊಳ್ಳುವ ಮನಸ್ಸು.
ಅವನು ಅಂದುಕೊಂಡ ಕನಸು ಆಗಲಿ ನನಸು.
- ನೀ ಎಂದೆಂದೂ ದೂರವಾಗದಿರು-

ಕೊನೆವರೆಗೂ ನಿನ್ನ ಜೊತೆ ಬಾಳಲು ಇಷ್ಟ
ಆದರೆ ಸಮಸ್ಯಗಳಿಗೆ ಎದುರಾಗಿರುವೆ
ಇದೇ ನನಗೆ ಕಷ್ಟ.
ಕೆಟ್ಟದ್ದಕಿಂತ ಜಾಸ್ತಿ ಒಳ್ಳೆಯದನ್ನು ಬಿತ್ತಿದೆ.
ಎಲ್ಲ ಕಷ್ಟ ಸುಖ ಹಂಚಿಕೊಂಡೆ.
ಇದೇ ನನ್ನವನ ಒಳ್ಳೆಯ ಮನಸು
- ನೀ ಎಂದೆಂದೂ ದೂರವಾಗದಿರು-

ನನ್ನವನ ಮನಸ್ಸು ಅತಿ ಚಂದ
ದಸರಾ ಬೊಂಬೆಯ ಹಾಗಿದೆ ಅವನ ಅಂದ .
ಪ್ರತಿಯೊಂದು ಜೀವಿಯೂ ಕೂಡ ಕರೆದು ಹೇಳುವುದು ನಿನ್ನವನು ನಿನಗೇ ಸಿಗುವ ನೆಂದು.
ನಂಬಿಕೆ ಇಟ್ಟಿರುವೆ ಅವನು ನನ್ನವನೆಂದು.
ಕಳೆದು ಹೋಗದಿರು ನೀ ಎಂದೆಂದೂ.
-ನೀ ಎಂದೆಂದೂ ದೂರವಾಗದಿರು-

❤I LOVE YOU FOREVER ❤

- bhagyashree biradar

08 Feb 2024, 09:30 am