Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಳು ನೀನು

ಒಮ್ಮೆ ಹೇಳು ನೀನು ನನಗೆ
ಏಕೆ ಹೀಗೆ ಮಾಡಿದೆ!!
ಪ್ರೀತಿಯಲ್ಲಿ ತುಂಬಿದ ನಗೆ
ಇಂದು ಯೇಕೆ ಮಾಸಿದೆ!!

ಮನದಿ ಮೂಡೋ ಸಾಲು ಪ್ರಶ್ನೆಗೆ
ಕೊಡಲಿ ಯಾವ ಉತ್ತರ!!
ಮೌನ ಮುರಿದು ಮಾತನಾಡಲು
ಬರುವುದಿಲ್ಲ‌ ಈ ಸ್ವರ!!

ನಿನ್ನ ಮರೆತು ಬಾಳಲಾರದೇ
ಚಡಪಡಿಸುತ್ತಿದೆ ಈ ಮನ!!
ನಿನ್ನ ಒಲವಿಗಾಗಿ ತಾನೇ
ಕಾದಿರುವುದು ಜೀವನ!!

ಒಂದು ಬಾರಿ ಬಂದು ಹೇಳು
ಹುಸಿಯಲ್ಲ ಈ ದಿನ!!
ನೀನು ನನ್ನ ಜೊತೆಯಲೇ ಇರು
ಮುಂದೆ ಬರುವ ಅನುದಿನ!!

- ಪಿ.ಜಿ.ಜ್ಯೋತಿ

21 Mar 2017, 10:46 am

ನವ ವಸಂತ

ಕಾಲದ ಕಡಲಲ್ಲಿ
ಹರುಷದ ಅಲೆಯಾಗಿ
ವರುಷವು ಮರಳುವೆ
ಹೊಸ ಹುರುಪಿನಲ್ಲಿ

ಸಿಹಿ-ಕಹಿಯ ದೋಣಿಯಲ್ಲಿ
ಕಳೆಯುವೆವು ಭಾಗಿಯಾಗಿದ್ದ
ನಾ-ನಿಂತರು,ನೀ-ನಿಲ್ಲದೆ
ನಡೆಸುವೆ ನಾವಿಕನಾಗಿ

ಹೊಸ ವಷ್ರವೆಂದು
ಮೂಡಣದಲ್ಲಿ ಮೂಡಲಿಲ್ಲ
ನವ ರವಿ,ಇದರ ಪರಿವೆ ಇಲ್ಲ
ಜೀವರಾಶಿಗಳ ಬದುಕಲ್ಲಿ

ದಿನ-ನಿತ್ಯದ ಬದುಕಲ್ಲಿ ಹೊಸತಿಲ್ಲ
ಹುಡುಕಲು ಅದು ಸಿಗುತಿಲ್ಲ
ಎಲ್ಲಿಗೊದರು?ಮನಸ್ಸಿಗೆ ಮುದವಿಲ್ಲ
ಹಳೆಯ ನೆನಪುಗಳು ನನ್ನ ಬಿಡುತಿಲ್ಲ

ಎಲ್ಲವು ಬಳಿಯಲ್ಲಿದ್ದರು
ಏನೋ, ಬೇಕೆಂದಿದೆ ಮನ
ಕಂಡ ಕನಸುಗಳು ಲೆಕ್ಕವಿಲ್ಲ
ಆದರು ಬಯಸಿದ ಹಾದಿ ಬಳಿಯಿಲ್ಲ

ಸಾದಕರ ಹಾದಿಯಲ್ಲಿ
ನಾನಾಗಿ ಸಾಗುವಾಸೆ
ಜಗದ ಅಕ್ಷಿಯಲ್ಲಿ
ನಾ,ಮೆರೆಯುವಾಸೆ
ನೀ, ನನ್ನೋಂದಿಲ್ಲದ ನಿರಾಸೆ

ಸಾಧಿಸಿ ಸಾಲಾಗಿ ನಡೆದರು
ಹಲವರು, ಪರ ಯಾತ್ರೆಯಲ್ಲಿ
ಅವರ ಹೆಜ್ಜೆಯ ಗೆಜ್ಜೆನಾದ
ಸದಾ ಮೊಳಗುತಲಿದೆ ಮನದಗುಡಿಯಲ್ಲಿ

ಗೆದ್ದ ನಾಯಕರೊಂದೆಡೆ
ಗೆದ್ದು ಸೊತವರು ಇನ್ನೊಂದೆಡೆ
ಗೆಲ್ಲದೆ ನಿನ್ನ ಶಪಿಸುವರು, ದಿಟ್ಟಿಸಿ
ನೋಡುತ್ತ ನಿನ್ನ ಕಡೆ

ಯಾರಿಗೂ ನೀ ಬಂದುವಲ್ಲ
ಎಂದಿಗೂ ನೀ ಸ್ತಿರವಲ್ಲ
ಎಲ್ಳರಿಗು ನೀ ನೀಡುತಿರು
ಹೊಸ-ವಸಂತದ ಸಿಹಿ ಜೇನ
ಇಂದಿಗೂ .... ಮುಂದಿಗೂ....ಎಂದೆಂದಿಗೂ....


ಶಾರದ

- ಶಕುಂತಲಾ

20 Mar 2017, 09:53 pm

ನಾಡ ದೇವಿಯ ಸೇವೆಗೆ ಬನ್ನಿ

||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||

ಜಾತಿ ಪಂಥದ ಬೇಲಿಯ ನೀಗಿ
ಬಂಧು ಭಾವದ ತೊಟ್ಟಿಲ ತೂಗಿ
ಕಟ್ಟುವ ನಾವು ಭಾರತವ
‌‌‍ ||ನವ ಭಾರತ ನವ ಭಾರತ||
ಸೇವೆಯೆಂಬ ತೈಲವನೆರೆದು
ಸ್ವಾಭಿಮಾನದ ದೀಪವ ಉರಿದು
ಬೆಳಗುವ ನಾವು ಭಾರತವ
||ನವ ಭಾರತ ನವ ಭಾರತ||
ತ್ಯಾಗ ಭಾವದಸುಧೆಯನು ಹರಿಯುವ
ನಿಸ್ವಾರ್ಥ ಭಾವದ ಕಡಲನು ಸೇರುವ
ನಮಿಸುವ ನಾವು ಭಾರತವ
||ನವ ಭಾರತ ನವ ಭಾರತ||
ಸಾಧುಸಂತರ ತಪೋಭೂಮಿಯಿದು
ಮನುಜ ಜನ್ಮದ ಮೋಕ್ಷ ದ ಮಣ್ಣಿದು
ಸಂಘ ಮಂತ್ರವ ಮನದಲಿ ನನೆದು
ತರುಣರ ಹೃದಯದ ಗುಡಿಯನು ಬೆಳಗಿ
ಸಾರುವ ಐಕ್ಯದ ನವ ಸಂದೇಶ
||ನವ ಭಾರತ ನವ ಭಾರತ|| ||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||

- ಅರುಣ್. ಕೆ. ಗಟ್ಟಿ. ಕಾಪಿಕಾಡ್

20 Mar 2017, 09:12 pm

ಜನುಮ ದಿನದ ಶುಭಾಶಯ

ಕರಗಿಸು ಬಾನ್ನೇತ್ತರದಿ ಬಣ್ಣಗಳ  ಬಳಿದು 
ಕಪಟ ಕನಸುಗಳಾ ಕತ್ತಲೇಯ ಕಡೇಗಣೀಸು ಕಂಡ ಕಣ್ಣಗಳಾಚೆ 

ಕಾಣು ಕಾಮನಬಿಲ್ಲಿನ ಸ್ವಪ್ನವ ಬಿಡಿಸುನಿ ಬದುಕಿನ ರಂಗಿನ ರಂಗೋಲಿಯ ಜಿಟಿ ಮಳೆಯ ಮಳೆಯಂತೆ

ಮೆರಗಿಸು ಬದುಕಿನ
ಕಲೇಯಾ ಕಲ್ಪನೇಗೇ ಮಿರಿ
ಮೀನುಗು ನೀ ಮಿಂಚಿನಾರ್ಭಟದಿ
ಮನದ ಮನಸಿನ ಕನಸಿನಾಚೆ

ಸೂರ್ಯ ಉದಯಿಸಿದ ಪೂರ್ವದಿ
ಚಂದ್ರ ಜನಿಸಿದ ಪಶ್ಚಿಮದಿ
ಕಿರಣನ ಸಹೋದರ ಕಿಶನ ಜನಿಸಿದ
ಭೂಮಿಯಲ್ಲಿ

ಇದೋ ಇಗೋ ಇದೆ ನಿನ್ನಿ ಜನುಮ ದಿನದಿ
ನನ್ನಿ ನಲುಮೆಯ ಕವನದ ಕಾಣಿಕೆ

✍✍✍ಇಂತಿ ನಿಮ್ಮ್ ಪ್ರದೀಪ✍✍✍✍

- ಪ್ರದೀಪ.ಮ.ಪಾಡಮುಖೆ

20 Mar 2017, 09:10 pm

ಗಿಡವಾದಳಾ ಪ್ರೇಯಸಿ

ನನ್ನ ಮುದ್ದಾದ ಪ್ರೇಯಸಿ
ಬಂದಿಯಾದಳು ಆ ರಾಕ್ಷಸನ ಕೈಯಲ್ಲಿ.
ನೋಡಲಾಗಲಿಲ್ಲ ಅವಳ ನೋವು ನನ್ನಿಂದ.

ಆ ರಾಕ್ಷಸ ನಾಶವಾದ ನನ್ನ ಕೈಯಲ್ಲಿ
ಆದರೂ ಗಾಯಗೊಂಡೆನೆ ನಾನು.
ನನ್ನ ನೋಡಿ ಅತ್ತಳು ನನ್ನವಳು
ಅವಳ ರೋಧನೆ ಮುಗಿಲು ಮುಟ್ಟಿತು.

ಅವಳ ದುಃಖ ನೋಡಿ ಇಳಿದು
ಬಂದಳಾ ಪ್ರೇಮ ದೇವತೆಯು.
ಹೇಳಿದಳು ನಿನ್ನ ದುಃಖ ಪರಿಹಾರವಾಗಲು
ಒಂದು ಮಾರ್ಗವಿದೆ ಎಂದು.

ಹಾಗ ನನ್ನ ಪ್ರಿಯತಮೆಯು
ನನ್ನ ಜೀವಕ್ಕಿಂತ ಹೆಚ್ಚಾದ ಇವನು
ಬದುಕಿದರೆ ಸಾಕೆಂದಳು.
ಅದಕ್ಕಾಗಿ ನಾ ಸಾಯಲು ಸಿದ್ದವೆಂದಳು.

ಪ್ರೇಮ ದೇವತೆಯು ಹೇಳಿದಳು ನೀನೇ
ಆ ಔಷದಿ ನೀನು ನಿನ್ನ ಪ್ರೀತಿಯಲ್ಲಾ
ಸೇರಿಸಿ ಒಂದು ಗಿಡವಾಗು ಅದರಲ್ಲಿನ
ನಿನ್ನ ಪ್ರೀತಿ ಅವನನ್ನು ಬದುಕಿಸುತ್ತೆ ಎಂದಳು.

ಕ್ಷಣಮಾತ್ರ ಯೋಚಿಸದೆ ಗಿಡವಾದಲಾವಳು
ನಾನು ಮತ್ತೆ ಜೀವ ಪಡೆದನು.
ನನ್ನ ಉಸಿರಿನ ಪರಿಸ್ಥಿತಿ ನೋಡಿ
ಕಣ್ಣೀರಿನ ಮಳೆಯಲ್ಲಿ ಮಾಯವಾದೇನು.

ಅಂದಿನಿಂದ ಅವಳಿಗೆ ನಾ ಪ್ರೀತಿಯ
ಮಾಲೀಕನಾದೇನು ಅವಳು ನನ್ನ
ಜೀವವಾದಳು.......

ನನಗಾಗಿ ಗಿಡವಾದಳಾ ಪ್ರೇಯಸಿ............

- ಚುಕ್ಕಿ

20 Mar 2017, 08:35 pm

ನೀ ಬಂದಾಗ

ಕಲ್ಪನೆಯ ಕಡಲಲ್ಲಿ
ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ

ರಾತ್ರಿಯ ಸೊಬಗಿನ ಆಕಾಶದ
ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸದ್ದು ಗದ್ದಲಧ ಕೋಲಾಹಲ ಎಬ್ಬಿಸಿದೆ

ಓ ನನ್ನ ಕಂದಮ್ಮ ನಿನ್ನ ಚೆಲುವ ನಾ
ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸದ್ದಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ

ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿದೆ
ಕೂಸೆ ನೀ ನನ್ನ ಕನಸು...!

ನಗುತಲಿರು ನೀ ಎಂದೂ ,
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂದೂ...

- basavarajsirnayakpreethu

20 Mar 2017, 02:35 pm

ಪ್ರೀತಿಯ ಪಾಠ

ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ ,
ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ ,
ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ ,
ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ? ....
ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ , ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ , ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ ,
ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಠವ ಕಲಿತಿದ್ದೆ .

- basavarajsirnayakpreethu

20 Mar 2017, 02:02 pm

ಪ್ರೀತಿ...❤

ಮನದಾಳದ ಮಾತಿಗೆ,
ಹೃದಯದಾಳದ ಬಡಿತವಾಗಿ,
ಉದಯಿಸಿತು ಈ ಪ್ರೀತಿ.....

ಅವಳ ಕಣ್ಣೋಟಕೆ ಸಿಲುಕಿ,
ಕನಸಿನ ಲೋಕದಲಿ ಅಲೆದಾಗ,
ಎದುರಾದ ಮಧುರ ಕನಸು ಈ ಪ್ರೀತಿ.....

ಅವಳ ಅಂದಕೆ ಶರಣಾಗಿ,
ನನ್ನ ಮಾತೆಲ್ಲ ಮೌನವಾದಾಗ,
ಮೂಡಿದ ಸವಿ ಭಾವ ಈ ಪ್ರೀತಿ.....

ಅವಳ ತುಂಟ ನಗುವಿನಲ್ಲಿ,
ನಾ ಮರೆಯಾದ ಕ್ಷಣಗಳ ನೆನೆಯುತ,
ಮುಂದೆ ಸಾಗುವ ಪರಿಯೇ ಈ ಪ್ರೀತಿ.....

Raju❤

- Raju.

20 Mar 2017, 01:58 pm

ಸುಮ್ಮನೇ ಸತ್ತು ಬಿಡಿ.

ಸುಮ್ಮನೆ ಸತ್ತು ಬಿಡಿ
ಏಕಾಂತದೆ ಮನದೊಳಗೆ ಬಂದ ಕನಸನ್ನು
ನನಸಾಗಿಸುವ ನವ್ಯ ಚಿಂತನೆಗಳೇ...
ಜಾತಿಗಳು ಮತವಾಗತೊಡಗಿದೆ
ನೀತಿ ನಿಯಮ ತಪ್ಪಿದೆ.
ಬೆಳಕನ್ನೂ ಕ್ಷಣದಲ್ಲಿ ಕತ್ತಲಾಗಿಸುವ
ಕಂಡೂ ಕಾಣದ ಕೈಗಳು
ಕಾಣದಂತೆ ವ್ಯವಸ್ಥೆಯ
ತಮ್ಮ ಕಪಿಮುಷ್ಠಿಯಲ್ಲಿ ಹಿಡಿದು
ಕೊಂಡಿದೆ... ಅಯ್ಯೋ ಗಟ್ಟಿಯಾಗಿ
ಹೇಳದಿರಿ ಸಮತಟ್ಟವಾದ ಭುವಿಯಲ್ಲಿ
ಗುಂಡಿಗಳು ಬಿದ್ದಿವೆ. ..
ನಿಜ ಸುಳ್ಳು ಎಲ್ಲರಿಗೂ ಗೊತ್ತಿಲ್ಲವೆಂದೇನಲ್ಲ
ಕರ್ತವ್ಯದ ಚುಕ್ಕಾಣಿ ಹಿಡಿದಿರುವ
ಕೈಗೆ ಸಂಕೋಲೆ ತೊಡಿಸಿ ಅಧಿಕಾರ
ನೀಡಲಾಗಿದೆ...
ಅಂದ್ಯಾರೋ ಹೇಳಿದ ಮಾತು
ಇಂದು ನಿಜವೆನಿಸತೊಡಗಿದೆ
ಬದುಕಬೇಕೆಂದರೆ ಜಗದ
ಜನರೊಳಗೆ ಮಾತು ಬೆಳ್ಳಿ ಅಲ್ಲ ( ತಳ್ಳಿ)
ಮೌನ ಬಂಗಾರವಾಗಿದೆ...!!
ಅನು..

- Anu...

20 Mar 2017, 11:49 am

ಸ್ನೇಹದ ನೆನಪು..

ಆ ದಿನಗಳನ್ನು ನೆನೆಸಿ...
*******************

ನಾನಾಗ ಚಿಕ್ಕವನಾಗಿದ್ದೆ
ಆಳವಾಗ ಸ್ನೇಹವಿರುತ್ತಿತ್ತು
ಹೊಡೆದಾಟ ಬಡಿದಾಟ ದೂರು ಚಾಡಿ
ಇಂದಿನಂತೆ ಅಂದೂ ಇರುತ್ತಿತ್ತು
ಆದರೆಂದೂ ಸ್ನೇಹ ಕುಂದುತ್ತಿರಲಿಲ್ಲ
ಪ್ರೀತಿಗೀತರ ಬರವಿರಲಿಲ್ಲ
ಗೆಳೆಯರನೇಕ ಈಗಲೂ ಇದ್ದಾರೆ
ಆದರೆಲ್ಲೂ ಸ್ನೇಹದ ಸುಳಿವಿಲ್ಲ
ಎಲ್ಲಾದರೂ ಮಿತ್ರರ ಮಿಲನವಾದರೆ
“ಹಾಯ್ ಬಾಯ್” ಹೇಳಿ ಮುನ್ನಡೆಯುತ್ತಾರೆ
ಸಭೆ ಸಂಭ್ರಮ ನಡೆದರೆ
ಹಬ್ಬ ಪರ್ವದ ದಿನ ಬಂದರೆ
ಹುಟ್ಟು ಸಾವಿನ ಸಂದರ್ಭಗಳಲಿ
ಅಥವಾ ಯಾವುದೇ ಭಾನುವಾರ
ರಿಂಗಣಿಸುತ ಒಂದು ‘ಕರೆ’ ಬರುತ್ತದೆ
ಇಲ್ಲವೆಂದರೆ ಒಂದು ಎಸ್ಎಂಎಸ್
ಬಹುಶಃ ನೆಂಟಸ್ತಿಕೆಗಳೀಗ ಬದಲಾಗುತ್ತಿದೆ
ಅನು..

- Anu...

20 Mar 2017, 11:48 am