||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||
ಜಾತಿ ಪಂಥದ ಬೇಲಿಯ ನೀಗಿ
ಬಂಧು ಭಾವದ ತೊಟ್ಟಿಲ ತೂಗಿ
ಕಟ್ಟುವ ನಾವು ಭಾರತವ
||ನವ ಭಾರತ ನವ ಭಾರತ||
ಸೇವೆಯೆಂಬ ತೈಲವನೆರೆದು
ಸ್ವಾಭಿಮಾನದ ದೀಪವ ಉರಿದು
ಬೆಳಗುವ ನಾವು ಭಾರತವ
||ನವ ಭಾರತ ನವ ಭಾರತ||
ತ್ಯಾಗ ಭಾವದಸುಧೆಯನು ಹರಿಯುವ
ನಿಸ್ವಾರ್ಥ ಭಾವದ ಕಡಲನು ಸೇರುವ
ನಮಿಸುವ ನಾವು ಭಾರತವ
||ನವ ಭಾರತ ನವ ಭಾರತ||
ಸಾಧುಸಂತರ ತಪೋಭೂಮಿಯಿದು
ಮನುಜ ಜನ್ಮದ ಮೋಕ್ಷ ದ ಮಣ್ಣಿದು
ಸಂಘ ಮಂತ್ರವ ಮನದಲಿ ನನೆದು
ತರುಣರ ಹೃದಯದ ಗುಡಿಯನು ಬೆಳಗಿ
ಸಾರುವ ಐಕ್ಯದ ನವ ಸಂದೇಶ
||ನವ ಭಾರತ ನವ ಭಾರತ|| ||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||
ಸುಮ್ಮನೆ ಸತ್ತು ಬಿಡಿ
ಏಕಾಂತದೆ ಮನದೊಳಗೆ ಬಂದ ಕನಸನ್ನು
ನನಸಾಗಿಸುವ ನವ್ಯ ಚಿಂತನೆಗಳೇ...
ಜಾತಿಗಳು ಮತವಾಗತೊಡಗಿದೆ
ನೀತಿ ನಿಯಮ ತಪ್ಪಿದೆ.
ಬೆಳಕನ್ನೂ ಕ್ಷಣದಲ್ಲಿ ಕತ್ತಲಾಗಿಸುವ
ಕಂಡೂ ಕಾಣದ ಕೈಗಳು
ಕಾಣದಂತೆ ವ್ಯವಸ್ಥೆಯ
ತಮ್ಮ ಕಪಿಮುಷ್ಠಿಯಲ್ಲಿ ಹಿಡಿದು
ಕೊಂಡಿದೆ... ಅಯ್ಯೋ ಗಟ್ಟಿಯಾಗಿ
ಹೇಳದಿರಿ ಸಮತಟ್ಟವಾದ ಭುವಿಯಲ್ಲಿ
ಗುಂಡಿಗಳು ಬಿದ್ದಿವೆ. ..
ನಿಜ ಸುಳ್ಳು ಎಲ್ಲರಿಗೂ ಗೊತ್ತಿಲ್ಲವೆಂದೇನಲ್ಲ
ಕರ್ತವ್ಯದ ಚುಕ್ಕಾಣಿ ಹಿಡಿದಿರುವ
ಕೈಗೆ ಸಂಕೋಲೆ ತೊಡಿಸಿ ಅಧಿಕಾರ
ನೀಡಲಾಗಿದೆ...
ಅಂದ್ಯಾರೋ ಹೇಳಿದ ಮಾತು
ಇಂದು ನಿಜವೆನಿಸತೊಡಗಿದೆ
ಬದುಕಬೇಕೆಂದರೆ ಜಗದ
ಜನರೊಳಗೆ ಮಾತು ಬೆಳ್ಳಿ ಅಲ್ಲ ( ತಳ್ಳಿ)
ಮೌನ ಬಂಗಾರವಾಗಿದೆ...!!
ಅನು..
ನಾನಾಗ ಚಿಕ್ಕವನಾಗಿದ್ದೆ
ಆಳವಾಗ ಸ್ನೇಹವಿರುತ್ತಿತ್ತು
ಹೊಡೆದಾಟ ಬಡಿದಾಟ ದೂರು ಚಾಡಿ
ಇಂದಿನಂತೆ ಅಂದೂ ಇರುತ್ತಿತ್ತು
ಆದರೆಂದೂ ಸ್ನೇಹ ಕುಂದುತ್ತಿರಲಿಲ್ಲ
ಪ್ರೀತಿಗೀತರ ಬರವಿರಲಿಲ್ಲ
ಗೆಳೆಯರನೇಕ ಈಗಲೂ ಇದ್ದಾರೆ
ಆದರೆಲ್ಲೂ ಸ್ನೇಹದ ಸುಳಿವಿಲ್ಲ
ಎಲ್ಲಾದರೂ ಮಿತ್ರರ ಮಿಲನವಾದರೆ
“ಹಾಯ್ ಬಾಯ್” ಹೇಳಿ ಮುನ್ನಡೆಯುತ್ತಾರೆ
ಸಭೆ ಸಂಭ್ರಮ ನಡೆದರೆ
ಹಬ್ಬ ಪರ್ವದ ದಿನ ಬಂದರೆ
ಹುಟ್ಟು ಸಾವಿನ ಸಂದರ್ಭಗಳಲಿ
ಅಥವಾ ಯಾವುದೇ ಭಾನುವಾರ
ರಿಂಗಣಿಸುತ ಒಂದು ‘ಕರೆ’ ಬರುತ್ತದೆ
ಇಲ್ಲವೆಂದರೆ ಒಂದು ಎಸ್ಎಂಎಸ್
ಬಹುಶಃ ನೆಂಟಸ್ತಿಕೆಗಳೀಗ ಬದಲಾಗುತ್ತಿದೆ
ಅನು..