Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೃದಯದೋಲ್ಲೊಂದು ಗಾಯ
ಕಾರಣ ಅನ್ಯಾಯ
ಇದರ ವಿರುದ್ದ ನೂರಾರು ನ್ಯಾಯಲಯ
ಆದರೆ
ಮಾನವ ಅರಿತಿಲ್ಲ ಮನದಾಳದ ದೇವಾಲಯ
- muneendra
21 Mar 2017, 08:44 pm
ನೋಡು ಗೆಳತಿ ನನ್ನ ಈ
ಕಣ್ಣರೆಪ್ಪಯು ಸ್ವಾಗತಿಸುತದೆ.
ನಿನ್ನ ಹೃದಯವನ್ನು ನೀನು ಒಮ್ಮೆ
ಬಂದು ಸೇರಿಕೊ ನನ್ನ ಇ ಹೃದಯದ
ಗೂಡನ್ನು ಆಗ ನಾನು
ಕಾಯುವೆ ನನ್ನ ಇ ಕಣ್ಣುಂತೆ ನಿನ್ನನ್ನು..
ಅನು..
- Anu...
21 Mar 2017, 07:46 pm
ಹೆಣ್ಣಿಗೆ ಯಾಕೆ ಈ ಚಿತ್ರಹಿಂಸೆ
ಅವಳು ನಮ್ಮ ಹಡೆದ ತಾಯಿ ಅಲ್ಲವೇ
ಜನ್ಮ ಪಡೆಯಲು ಬೇಕು ಹೆಣ್ಣು
ಬಾಳು ಬೆಳಗಿಸಲು ಬೇಕು ಹೆಣ್ಣು
ಅಕ್ಕರೆ ತೋರಲು ಅಕ್ಕ-ತಂಗಿಯಾಗಿ ಬೇಕು
ಆದರೆ ನೀ ಜನ್ಮ ನೀಡಲು ಬೇಡವೆ?
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
21 Mar 2017, 07:23 pm
ಪ್ರೀತಿಸು ಎಲ್ಲವನು
ಆಸಿಸ ಬೇಡ
ನಂಬು ಬಲ್ಲವರನು
ಸಂಶಯ ಬೇಡ
ಕತ೯ವ್ಯ ನಿರತನಾಗು
ನಿರೀಕ್ಷೆ ಬೇಡ
ನಾಡು ನುಡಿಗಾಗಿ ದುಡಿ
ಗರಿಮೆ ಬೇಡ
ಗುರಿ ಸರಿ ಇರಲಿ
ದ್ವಂದ್ವ ಬೇಡ ವಲ್ಲವೆ
ಕಸ್ತೂರಿ ಡಿ ಪತ್ತಾರ
- kasturi pattar
21 Mar 2017, 07:14 pm
ನನ್ನ ಕೈಯಂದ ಬರೆಯುವ
ಸುಂದರ ಪದವೊಂದು ನೀನಾದರೆ
ಎಷ್ಟು ಚಂದ.
ನಿನ್ನ ಬಾಯಿಂದ ಹೊರಡುವ
ಮೊದಲ ಹೆಸರು ನನ್ನದಾದರೆ
ಮನಸ್ಸಿಗೆ ಆನಂದ.
ನಿನ್ನ ಹೆಸರು ನೆನೆದಾಗ
ನನ್ನ ತುಟಿಯಲ್ಲಿ ಕಾಣುವ ನಗುವೆಂದರೆ ನನಗಿಷ್ಟ.
ನಿನ್ನ ಧ್ವನಿಯು ಕೇಳಿದಾಗ ಮನದಲ್ಲಿ
ಮೂಡುವ ಸಂತೋಷವೆಂದರೆ ನನಗಿಷ್ಟ.
- ಚುಕ್ಕಿ
21 Mar 2017, 04:20 pm
ಲಾಲಿ.... ಲಾಲಿ.... ಕಂದ
ಲಾಲಿ.... ಲಾಲಿ.... ಕಂದ
ನಿನ್ನ ಮುದ್ದು ಮಾತು
ಕೆಳಲೆಂತ ಚಂದ
||ಲಾಲಿ||
ಬರಿದಾದ ಬಾಳಿಗೆ
ಬೆಳಕಾಗಿ ಬಂದೆ
ತಾಯಿಯ ಮಡಿಲಿಗೆ
ಹರುಷವ ತಂದೆ
ಬರಿದಾದ ಮನೆಯು
ನಿನ್ನಿಂದ ಬೆಳಗಿತು
ಮನದ ತವಕವು
ಮಂಜಂತೆ ಕರಗಿತು
ನಿನ್ನ ಒಂದೊಂದು ಹೆಜ್ಜೆಯು
ಮುತ್ತಿನ ಹಚ್ಚೆಯು
ನೀನಿದ್ದ ಮನೆಯು
ತುಂಟರ ಸಂತೆಯು
ಬಂಧು-ಬಳಗವು
ಬೆನ್ನಟ್ಟಿ ಬರುವರು
ಮನೆಯ ಅಂಗಳಲಿ
ಮಂಗಳ ಕಾಯ್ರಗಳು
ಹತ್ತಾರು ಉಡುಗೊರೆಯ
ಹೊತ್ತು ತರುವರು
ಮುತ್ತಿನ ಸುರಿಮಳೆಯ
ಸುರಿಸುತ್ತ ಹರಸುವರು
-ಶಾರದ
- ಶಕುಂತಲಾ
21 Mar 2017, 04:13 pm
ಓಬ್ರನ್ನೂ ಜೀವಕಿನ್ತ ಜಾಸ್ತಿಯಾಗಿ ಇಷ್ಟಪಟ್ರೆ ಅವರಲ್ಲೀನ ಹೆಚ್ಚು ಕಡಿಮೆ ನೋಡಬಾರದು
ಪ್ರೀತಿ ಮಾತ್ರನೇ ಕಾಣಬೇಕು.
ಅವಾಗ ಮಾತ್ರ ಅದು ಪ್ರೀತಿ.
ಯಾರೊಬ್ಬರೂ ಪರಿಪೂರ್ಣರಲ್ಲ
ಸಾವಿರಾರು ಹೊಡೆತಗಳ ನಂತರವೇ
ಒಂದು ಶಿಲೆಯು ಶಿಲ್ಪವಾಗುವುದು.
ನೀವು ನಿಜವಾಗಿಯೂ ಪ್ರೀತಿಸಿದ್ದರೆ
ಆ ಗಗನ ತಾರೆಗಾಗಿ ಕಾಯಿರಿ
ಅದು ಒಂದು ದಿನ ನಿಮಗಾಗಿ ಭುವಿ ಸೇರುತ್ತದ್ದೆ.
- ಚುಕ್ಕಿ
21 Mar 2017, 01:21 pm
ಮೇಲೆ ನೀನು
ಕೆಳಗೆ ನಾನು
ನಡುವೆ ಉಗುಳೊ ಬೆಂಕಿಯು
ಧರಣಿ ಕೆಂಪು
ಮಾಡು ತಂಪು
ಮಳೆರಾಯ ನೀ ಬಂದು
-ಶಾರದ
- ಶಕುಂತಲಾ
21 Mar 2017, 12:39 pm
ಜರಿಯ ಸೀರೆಯಲಿ
ಕಟ್ಟಿಟ್ಟ ಸೌಂದರ್ಯ ಲಹರಿ
ರೇಷ್ಮೆಯಂಥಹ ನೀರೆಗೆ ಭಾವಗಳು ಜಾರಿ
ಹೂ ಅರಳಿದ ಸೊಬಗು
ಕಣ್ಣು ಮಿಂಚಿನ ಮೆರಗು
ಸಣ್ಣನೆಯ ಅದರಗಳು ಸೆಳೆದು
ಸೆರಗ ಸುಕ್ಕು ಮಾತಾಡಿ ಹಲವು
ನೆರಿಗೆಯು ನಲಿದಿತ್ತು ಮಡಿಕೆಯ ಒಲವು
ಕುಚ್ಚು ಬೀಸಿತ್ತು ತೋರಿ ಗೆಲುವು
-ಕನ್ನಡದ ಭಕ್ತ
- ಕನ್ನಡದ ಭಕ್ತ
21 Mar 2017, 12:05 pm
ಮನಸಿನ ಪುಟದಲ್ಲಿ
ನೀ ಬರೆದ ಒಲವಿನ ಸಾಲು
ಮರುಕಳಿಸುತ್ತಿದೆ ಇಂದು
ಮರೆಯದ ನೆನಪಾಗಿ!!
ಬದುಕಿನ ಹಾದಿಯಲ್ಲಿ
ನೀ ನಡೆದ ಹೆಜ್ಜೆ ಗುರುತು
ಹಿಂಬಾಲಿಸಿ ಬರುತಿದೆ ನನ್ನ
ಈ ಏಕಾಂತದ ಪಯಣದಲ್ಲಿ!!
ಹೃದಯದಲಿ ನೀ ಇಟ್ಟ
ದರ್ಪಣವು ಚೂರಾಗಿ
ನೋವಲ್ಲೂ ತೋರುವುದು
ನಿನ್ನಯ ಸಾವಿರ ಮುಖವ!!
ಇರುಳಲ್ಲಿ ಕನಸಿನ ವರದಿ
ಹಗಲಲ್ಲಿ ನೆನಪಿನ ಸರದಿ
ದಿನವೆಲ್ಲ ಹೀಗೆಯೇ ಇರಲು
ಬೇರೆ ಏನಿಲ್ಲ ನಿನ್ನಯ ವಿನಹ!!
- ಪಿ.ಜಿ.ಜ್ಯೋತಿ
21 Mar 2017, 11:05 am