Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

...ವಸುಂಧರೆ...

ವಸುಂಧರೆಗೂ ದುಃಖ
ಕಾರಣ... ಅವಳೊಡಲಿಗೆ ನಾವು ಸುರಿಯುತ್ತಿರುವ ವಿಷದ ನೋವಿಗಲ್ಲ
ಬದಲಾಗಿ
ಅದರ ಪರಿಣಾಮ
ಅದೇಷ್ಟೊ ಜೀವ ಸಂಕುಲಕ್ಕೆ ಇನ್ನು
ತನ್ನ ಮಡಿಲು ಸುರಕ್ಷಿತವಲ್ಲ ಎಂದು...

ಅಂದು ರತ್ನಗರ್ಭಿತ ವಸುಂಧರೆ.....
ಇಂದು ದುಃಖತಪ್ತ ವಸುಂಧರೆ.....!!!

..... ಪಿ ಅನಿ.....

- ಪಿ ಅನಿ...

27 Mar 2017, 01:12 pm

ಚಡಪಡಿಕೆ

ಮನಸು ಮುರಿಯೋರಿಗೆನು ಗೊತ್ತು ಹ್ರದಯದ ನೋವು
ಜಗತಿನ ಜನರಿಗೆನು ಗೊತ್ತು ಪ್ರೀತಿಯ ನಿಯಮ

ಗೋರಿಯ ಮೇಲೆ ಹೂವು ಇಡುವವರಿಗೆನು ಗೊತ್ತು
ಒಳಗಿನ ಜೀವದ ಚಡಪಡಿಕೆ...ಆದಿಲ್

- adilsha

27 Mar 2017, 12:22 pm

ಈ ಪ್ರೇಮವೊ...

ಈ ಪ್ರೇಮವೋ ದೇವರಾ ಹಾಗೆ....
ನನ್ನೊಳ ಮನಸು ಪರಿಶುಧ್ದ ಗಂಗೆ....
ಉಸಿ ಮಾಡದೇ ನಾನಿಟ್ಟ ನಂಬಿಕೆ...
ಉಸಿರಾಗುತಾಳೇ ಈ ನನ್ನ ಜೀವಕೇ...........
ಅನು..

- Anu...

27 Mar 2017, 12:15 pm

ವಿರಹದ ಇರುಳು

ಬೆಳಗುತಿರುವ ಹಣತೆ ನೀನೆ ನನ್ನ ಗೆಳತಿ
ಅರಳುತಿರುವ ಕಮಲ ನಿನ್ನ ಕಡೆಗೆ ನನ್ನ ಗಮನ!!
ನೀ ದಾರದಲ್ಲಿ ಪೋಣಿಸಿರುವ ಮುತ್ತ ಮಾಲೆ
ನಾ ಧರಿಸಿಕೊಳ್ಳಲು ಬಳಸ ಬಾ ನೀ ನನ್ನ ಕೊರಳ!!

ನೀ ಗಗನದಲ್ಲಿ ಮಿನುಗುವ ತಾರೆಯೇನು
ನಾ ಬಳಿಗೆ ಬರಲು ಹೇಳು ನೀ ದಾರಿಯನ್ನು!!
ತಿಳಿಯದೇ ನಿನ್ನನು ನಾನು ಪ್ರೀತಿಸಿ ಬಿಟ್ಟೆನು
ವಿರಹದ ಬಾಗಿಲ ಎದುರು ಕಾಯುತ್ತ ನಿಂತೆನು!!

ನನ್ನ ಬಾಳ ಬಂಗಾರದ ಅರಮನೆಗೆ ರಾಣಿ ನೀನು
ಬರಬೇಕು ಬಲಗಾಲನ್ನಿಟ್ಟು ಒಮ್ಮೆ ನೀನು!!
ನೀ ಕಳೆಯ ಬಾರೇ ಇಂದು ಈ ಏಕಾಂಗಿಯ ಬದುಕಲಿ ಕವಿದಿರೋ ಈ ವಿರಹದ ಇರುಳ !!

- ಪಿ.ಜಿ.ಜ್ಯೋತಿ

27 Mar 2017, 09:36 am

ಸಿಹಿ ವಿಷ

ಪ್ರೀತಿಯ ನೋವಿಗೆ ವಿಷ ಕಾರುತಿದೆ ಮನಸು
ಅಶ್ರುಧಾರೆ ತುಂಬಿ ಕತ್ತಲು ಅವರಿಸಿದೆ ಜಗವು
ಹ್ರದಯದ ನರಳಾಟಕ್ಕೆ ಹೇತ್ತಬೆಯ ಮಡಿಲು ಬರಿದಾಗಿದೆ.

ಹ಼ಲವು ವರುಶ ಮಮತೆಯ ಮಳೆಯಲ್ಲಿ ಮಿಂದ ಜೀವವ
ಕೆಲವು ಕ್ಷಣದ ಪ್ರೇಮದ ಸುಳಿಗೆ ಸಿಲುಕಿಸಿ ಕೋಂದಿದೆ...ಆದಿಲ್

- adilsha

27 Mar 2017, 08:41 am

ಪಶ್ಯತಾಪ

ಪ್ರೀತಿಯ ನಶೆಯಲ್ಲಿ ಜೀವನವೆ ನಿನಗೆ ಕೊಟ್ಟುಬಿಟ್ಟೆ ನೀನಂಗಳದಲ್ಲಿ ದಾಸಿಯಾಗಿ ಇದ್ದುಬಿಟ್ಟೆ.
ಎರಡು ರೊಟ್ಟಿ ಕೊಟ್ಟು ನೀ ದೇವರಾಗಿಬಿಟ್ಟೆ...ಆದಿಲ್

- adilsha

27 Mar 2017, 08:36 am

ಪ್ರೇಮಿಗಳು...

ಆ ಬೆಟ್ಟದ ತುದಿಯ ಬೋಳು ಮರದ ಕೆಳಗೆ
ಸದಾ ಭೇಟಿ ಆಗುವ ಆ ಪ್ರೇಮಿಗಳು...
ಐನ್ ಸ್ಟೈನ್ ನ ವಿಶೇಷ ಸಮಯದ ನಿಯಮ
ಬಹುಶಃ ಇವರಿಗೂ ಅನ್ವಯ ಆಗಿತ್ತೋ ಏನೋ
ನಮ್ಮ ಇಡೀ ಒಂದು ದಿನ ಇವರ ಪಾಲಿಗೆ
ಒಂದು ಗಳಿಗೆಯಷ್ಟೂ ಆಗಿರಲಿಲ್ಲ.

ಬೋಳು ಮರ ನೆರಳು ಕೊಡದಿದ್ದರೂ
ಬಿಸಿಲು ಅವರಿಗೆ ತಾಕಲಿಲ್ಲ
ಬೀಸುವ ಗಾಳಿಗೆ ತೂರಿದ
ಆ ಸುಂದರಿಯ ಕೂದಲ ಕಾರಣಕ್ಕೆ
ಆಕೆಯ ಮುಖ ಸರಿಯಾಗಿ ತೋರಲಿಲ್ಲ.

ಏನೋ ಮಾತು,
ನಡು ನಡುವೆ ಮುದ್ದು
ಮತ್ತೇನನ್ನೂ ನಾನು ಕದ್ದು ನೋಡಲಿಲ್ಲ.
ಅವರ ಈ ಮುಗಿಯದ ಮಾತಿನ ಸಂತೆಯಲ್ಲಿ
ಕಳೆದು ಹೋಗಿರಬಹುದಾದ ಚಿಂತೆ
ಇತ್ತೋ ಇಲ್ಲವೋ ತಿಳಿಯಲಿಲ್ಲ.

ವಸಂತನಾಗಮನ ಹತ್ತಿರವಾದಂತೆ..
ಪ್ರೇಮಿಗಳೆದೆಯಲ್ಲಿ ಹೊಸ ಕಾವ್ಯ
ಹುಟ್ಟಿರಬಹುದೇನೋ ಎಂಬ ನನ್ನ ಕಲ್ಪನೆ..
ಸುಳ್ಳಾಗುತ್ತ ಸಾಗಿದ್ದು ಚಿಗುರೆಲೆಯಷ್ಟೇ ಸತ್ಯ.
ಮುಂಗಾರು ಮೋಡ ಅಂಬರವ ಮುಸುಕಿದಂತೆ
ತೆರೆ ತೆರೆಯಾಗಿ ಮುಸುಕುತಿತ್ತು
ಪ್ರೇಮಿಗಳ ಮೊಗದಲ್ಲಿ ಚಿಂತೆ.

ಕೊನೆಗೊಂದು ದಿನ..
ಪ್ರೇಮಿಗಳ ಬೋಳು ಮರದ ಕೆಳಗೆ
ಜನವೋ ಜನ...
ಬಿದ್ದೋಡಿ ಹೋಗಿ ನೋಡಿದರೆ
ಅಲ್ಲೆರಡು ಹೆಣ.
ಮರದೆಲೆಗಳು ಚಿಗಿಯುತ್ತಿದ್ದವು...
ವಸಂತ ಬರುತ್ತಿದ್ದ ಭೂಮಿಗೆ...
ಪ್ರೇಮ ಪಕ್ಷಿಗಳು ಹಾರಿದ್ದವು ಬಾನಿಗೆ.

- ಶ್ರೀಗೋ.

27 Mar 2017, 08:23 am

ಕಣ್ಮನಸು...

ಕಣ್ಣು ನೋಡಿದ ನೋಟವನ್ನು ಮರೆಯಬಹುದು ಆದರೆ ಮನಸ್ಸು ಇಷ್ಟ ಪಟ್ಟಿದ್ದನ್ನು ಮಾರೆಯಲಸಾಧ್ಯ ಏಕೆಂದರೆ ಕಣ್ಣು ತನ್ನ ನೋವನ್ನು ಕಣ್ಣೀರಿಂದ ಹೊರಹಾಕುತ್ತದೆ ಆದರೆ ಮನಸ್ಸು ನೋವನ್ನು ತಡೆದುಕೊಳ್ಳಲಾರದೆ ಕೊರಗುತ್ತದೆ....

- Irayya Mathad

26 Mar 2017, 03:11 pm

ನೆನಪಿಡಲೇ

ನಗುತ್ತವೆ ನನ್ನ ನಯನಗಳು
ನಿನ್ನ ನೋಡಿದ ತಕ್ಷಣ.

ನಗುವ ಚೆಲ್ಲಿ ನೀರಾಗಿ ನನ್ನನ್ನೇ
ಮುದ್ದಾಡಿಹೋಗುತ್ತವೆ ನೀನಾಗಿ............

ನೆಲಕ್ಕೆ ಜಾರದೆ ನನ್ನ ಹೃದಯವನ್ನು
ಸ್ಪರ್ಶಿಸಿ ಚಿಪ್ಪಿಲ್ಲದ ಸ್ವಾತಿ
ಮುತ್ತಾಗುತ್ತವೆ .
ನಿನ್ನ ಎದೆಯ ಸೇರುತ್ತವೆ.

ಕಂಬನಿ ಎಂದು ಹೆಸರಿಡಲೇ
ನನ್ನ ಸಂತಸದ ಚೆಲುವಾಗಿ
ನೆನಪಿಡಲೇ............

- ಚುಕ್ಕಿ

26 Mar 2017, 01:04 pm

ದೂರವಾಣಿ(ಮೊಬೈಲ್)

ನೀ-ನಿಲ್ಲದ ಮನೆಯಿಲ್ಲ
ನಿನಗೊಲಿಯದ ಮನವಿಲ್ಲ
ಜಗವೆ ಇರುವುದು ನಿನ್ನಲ್ಲಿ
ನೀ-ಇರುವೆ ಎಲ್ಲರ ಅಂಗೈಯಲ್ಲಿ

ರವಿ ಕಿರಣ ಧರೆ ತಾಗುವ ಮುನ್ನ
ನೀ-ತೆರೆಸುವೆ ಎಲ್ಲರ ಕಣ್ಣ
ಹಿಂದೆ ಎದ್ದಾಗ ದೈವ ಧಶ್ರನ
ಇದೀಗ ಎಲ್ಲರಿಗು ನಿನ್ನದೆ ಆಲಿಂಗನ

ಒಳಿತು-ಕೆಡಕುಗಳ ಆಗರ ನೀನು
ಜೀವನದ ಪಾಠ ಕಲಿಸುವೆ ನೀನು
ದಾರಿ-ತಪ್ಪಿದರೆ ಮಣ್ಣಾಗುವೆ ನಾನು
ಅಭಿವೃದ್ದಿಯ ಜೀವಾಳ ನೀನು

ದೂರದವರನ್ನು ಹತ್ತಿರವಾಗಿಸುವೆ
ನಮ್ಮನ್ನೆ -ನಮ್ಮವರಿಂದ ದೂರಗೊಳಿಸುವೆ
ವಾಸ್ತವತೆಗೆ ನಮ್ಮನ್ನು ದೂರವಿರಿಸುವೆ
ನಿನ್ನ ಮಹಿಮೆಯ ತೋರಿ ,ಜಗವನಾಡಿಸುವೆ


ಶಾರದ

- ಶಕುಂತಲಾ

26 Mar 2017, 10:48 am